Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಕುಂದಾಪುರ ಯುಜಿಡಿ ಜಾಗ ಖರೀದಿಗೆ ದುಪ್ಪಟ್ಟು ಹಣ ಪಾವತಿ: ಸಾಮಾನ್ಯ ಸಭೆಯಲ್ಲಿ ಆಕ್ಷೇಪ
    ಊರ್ಮನೆ ಸಮಾಚಾರ

    ಕುಂದಾಪುರ ಯುಜಿಡಿ ಜಾಗ ಖರೀದಿಗೆ ದುಪ್ಪಟ್ಟು ಹಣ ಪಾವತಿ: ಸಾಮಾನ್ಯ ಸಭೆಯಲ್ಲಿ ಆಕ್ಷೇಪ

    Updated:28/07/2021No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    ಕುಂದಾಪ್ರ ಡಾಟ್ ಕಾಂ ಸುದ್ದಿ.
    ಕುಂದಾಪುರ:
    ಪುರಸಭೆಯ ಯುಜಿಡಿ ಕಾಮಗಾರಿ ಫಿಟ್‌ವೆಲ್ ನಿರ್ಮಿಸಲು ಅಗತ್ಯವಿರುವ ಸ್ಥಳ ಖರೀದಿಗಾಗಿ ಸರ್ಕಾರವು ದುಪ್ಪಟ್ಟು ಹಣ ಪಾವತಿಸಿದೆ. ಯಾವುದೇ ಅಭಿವೃದ್ಧಿ ಕಾರ್ಯಮಾಡದ ಹೊಳೆ ಬದಿ ಜಾಗದಲ್ಲಿ ನಷ್ಟ ಪರಿಹಾರ ಎಂದು ತೋರಿಸಿ ಒಟ್ಟು 97 ಲಕ್ಷ ಜಾಗದ ಮಾಲೀಕರಿಗೆ ಸಂದಾಯ ಮಾಡಲಾಗಿದೆ. ಪುರಸಭೆ ಸದಸ್ಯರ ಅವಗಹಣೆಗೆ ತರದೇ ದುಪ್ಪಟ್ಟು ಹಣ ನೀಡಿ ಜಾಗ ಖರೀದಿಯ ಮಾಡಿರುವ ಹಿಂದಿನ ಉದ್ದೇಶವೇನು. ಜಾಗ ಖರೀದಿಗಾಗಿ ಸಂದಾಯ ಮಾಡಿರುವ ಹಣ ಕುರಿತು ತನಿಖೆ ನಡೆಸಬೇಕು ಎಂದು ಪುರಸಭೆ ಆಡಳಿತ ಪಕ್ಷ ಸದಸ್ಯ ಗಿರೀಶ್ ದೇವಾಡಿಗ ಹೇಳಿದ್ದಾರೆ.

    Click Here

    Call us

    Click Here

    ಕುಂದಾಪುರ ಪುರಸಭೆ ಡಾ| ವಿ. ಎಸ್. ಆಚಾರ್ಯ ಸಭಾಂಗಣದಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ಆಡಳಿತ ಪಕ್ಷದ ಸದಸ್ಯರ ಮಾತಿಗೆ ಸಭೆಯಲ್ಲಿ ಸಮಮತ ವ್ಯಕ್ತವಾಗಿದ್ದು, ತನಿಕೆಗೆ ಆಗ್ರಹಿಸಿದ್ದಾರೆ.

    ಸರ್ಕಾರದ ದರಪಟ್ಟಿ ಹಾಗೂ ಭೂ ಮಾಲೀಕರಿಗೆ ಕೊಟ್ಟ ಪರಿಹಾರಕ್ಕೆ ಭಾರಿ ವ್ಯತ್ಯಾಸವಿದೆ. ಸಮಿತಿ ನಿಗದಿ ಮಾಡಿದ ದರಪಟ್ಟಿಯ ಬಗ್ಗೆ ಪುರಸಭೆ ಸಭೆಯಲ್ಲಿ ಗಮನಕ್ಕೆ ತಾರದೆ ಬರೋಬ್ಬರಿ 97 ಲಕ್ಷ ಹಣ ನೀಡಲಾಗಿದೆ. ಇದಕ್ಕೆ ಆಕ್ಷೇಪವಿದ್ದು, ಸಮಿತಿ ಮಾಡಿದ ದರಪಟ್ಟಿ ಬಗ್ಗೆ ತನಿಖೆಯಾಗಬೇಕು ಇಲ್ಲದಿದ್ದರೆ ನ್ಯಾಯಾಲದಲ್ಲಿ ದಾವೆ ಹೂಡುವುದಾಗಿ ಸದಸ್ಯ ಗಿರೀಶ್ ದೇವಾಡಿಗ ಎಚ್ಚರಿಸಿದ್ದಾರೆ.

    ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿ ಗೋಪಾಕೃಷ್ಣ ಶೆಟ್ಟಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ದರಪಟ್ಟಿ ನಿಗದಿಪಡಿಸಲಾಗಿದೆ. ಅವರು ಸೂಚಿಸಿದ ದರದಲ್ಲಿ ಹಣ ಪಾವತಿಸಲಾಗಿದೆ. ಈ ಬಗ್ಗೆ ಸದಸ್ಯರ ಆಕ್ಷೇಪ ದಾಖಲಿಸಿದರೆ ಅದರಂತೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗುವುದು ಎಂದರು. ದರಪಟ್ಟಿಯ ಬಗ್ಗೆ ಪುರಸಭೆ ಎಲ್ಲಾ ಸದಸ್ಯರು ಪ್ರತಿರೋಧ ಒಡ್ಡಿದ್ದರಿಂದ ಬಾಕಿಯಿರುವ ವೆಟ್‌ವೆಲ್ ಕಾಮಗಾರಿ ಪ್ರಕ್ರಿಯೆ ನಿಲ್ಲಿಸಲು ನಿರ್ಣಯ ಮಾಡುವಂತೆ ಸದಸ್ಯರಿಗೆ ಸೂಚಿಸಿದರು. ಮುಖ್ಯಾಧಿಕಾರಿಯ ಈ ಸಲಹೆಗೆ ತಿರುಗಿಬಿದ್ದ ಸದಸ್ಯರು ಅದು ಹೇಗೆ ಸಾಧ್ಯ? ಬಾಕಿಯಾದ ಎರಡು ಕಾಮಗಾರಿ ನಿಲ್ಲಿಸುವಂತೆ ನಿರ್ಣಯ ಮಾಡುವುದು ಸರಿಯಲ್ಲ. ಜಾಗ ಖರೀದಿಯಲ್ಲಿ ಪುರಸಭೆ ಹಣ ಪೋಲಾಗಿದೆ. ಸಾರ್ವಜನಿಕರ ಹಣ ಪೋಲಾಗಬಾರದು ಎನ್ನೋದು ಸದಸ್ಯರ ಕಳಕಳಿ. ಇನ್ನುಳಿದ ಎರಡು ಕಾಮಗಾರಿ ಜಾಗದ ವಿಕ್ರಯ ಕ್ರಮಬದ್ದವಾಗಿ ನಡೆದಿದ್ದರೆ ನಮ್ಮದೇನು ಅಭ್ಯಂತರವಿಲ್ಲ. ಉಳಿದ ಕಾಮಗಾರಿ ನಿಲ್ಲಿಸುವಂತೆ ನಿರ್ಣಯ ತೆಗೆದುಕೊಳ್ಳುವುದು ಸರಿಯಲ್ಲ ಎಂದು ಸದಸ್ಯರು ಹೇಳಿದರು.

    ಮಲೇರಿಯಾ ರೋಗ ಮುನ್ನೆಚ್ಚರಿಕೆ, ರಸ್ತೆ, ವಿದ್ಯುತ್ ಕಂಬದ ಸಮಸ್ಯೆ, ರಾಷ್ಟ್ರೀಯ ಹೆದ್ದಾರಿ ಬೊಬ್ಬರ್ಯ ಕಟ್ಟೆ ಬಳಿ ಡೈವರ್ಶನ್, ಚರಂಡಿ ಹೂಳು, ತ್ಯಾಜ್ಯ ನೀರು ಹೊಳೆಗೆ ಬಿಡುವುದು ಸೇರಿದಂತೆ ಇನ್ನಿತರ ವಿಷಯಗಳು ಸಭೆಯಲ್ಲಿ ಚರ್ಚೆಗೆ ಬಂದವು.

    Click here

    Click here

    Click here

    Call us

    Call us

    ಸಭೆ ಆರಂಭದಲ್ಲಿ ಕುಂದಾಪುರ ಪುರಸಭೆ ನಾಮನಿರ್ದೇಶಕ ಸದಸ್ಯರಾಗಿ ಆಯ್ಕೆಯಾದ ನಾಗರಾಜ ಕಾಂಚನ್, ಪುಷ್ಪಾ ಶೇಟ್, ದಿವಾಕರ ಪೂಜಾರಿ, ಪ್ರಕಾಶ್ ಖಾರ್ವಿ ಹಾಗೂ ರತ್ನಾಕರ ಶೇರೆಗಾರ್ ಅವರಿಗೆ ಪುರಸಭೆ ಅಧ್ಯಕ್ಷ ವೀಣಾ ಭಾಸ್ಕರ ಮೆಂಡನ್ ಪ್ರಮಾಣ ವಚನ ಭೋದಿಸಿದರು.

    ಕುಂದಾಪುರ ಪುರಸಭೆ ಅಧ್ಯಕ್ಷೆ ವೀಣಾ ಭಾಸ್ಕರ ಮೆಂಡನ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಸಂದೀಪ ಖಾರ್ವಿ, ಸ್ಥಾಯಿ ಸಮಿತಿ ಅಧ್ಯಕ್ಷ ಶೇಖರ ಪೂಜಾರಿ, ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಇದ್ದರು.

    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಗಂಗೊಳ್ಳಿ ಕೊಂಚಾಡಿ ರಾಧಾ ಶೆಣೈ ಸ.ಹಿ.ಪ್ರಾ ಶಾಲೆಯ ವಾರ್ಷಿಕ ಕ್ರೀಡಾಕೂಟ

    18/12/2025

    ಹಟ್ಟಿಅಂಗಡಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಗೆ ʼಸ್ಟಾರ್ ಎಜುಕೇಶನ್ ಅವಾರ್ಡ್ʼ ಗೌರವ

    18/12/2025

    ಸೇವಾ ಮನೋಭಾವದಿಂದ ಮಾಡುವ ಕೆಲಸ ಮನಸ್ಸಿಗೆ ಸಂತೋಷ ನೀಡುತ್ತದೆ: ಅನುಪಮ ಎಸ್. ಶೆಟ್ಟಿ

    18/12/2025
    Leave A Reply Cancel Reply

    Call us

    Click Here

    Call us

    Call us

    Call us
    Highest Viewed Recently
    • ಗಂಗೊಳ್ಳಿ ಕೊಂಚಾಡಿ ರಾಧಾ ಶೆಣೈ ಸ.ಹಿ.ಪ್ರಾ ಶಾಲೆಯ ವಾರ್ಷಿಕ ಕ್ರೀಡಾಕೂಟ
    • ಹಟ್ಟಿಅಂಗಡಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಗೆ ʼಸ್ಟಾರ್ ಎಜುಕೇಶನ್ ಅವಾರ್ಡ್ʼ ಗೌರವ
    • ಸೇವಾ ಮನೋಭಾವದಿಂದ ಮಾಡುವ ಕೆಲಸ ಮನಸ್ಸಿಗೆ ಸಂತೋಷ ನೀಡುತ್ತದೆ: ಅನುಪಮ ಎಸ್. ಶೆಟ್ಟಿ
    • ಸುಜ್ಞಾನ ಪಿಯು ವಿದ್ಯಾರ್ಥಿಗಳಿಂದ ಕೈಗಾರಿಕಾ ಅಧ್ಯಯನ ಪ್ರವಾಸ
    • ಮಹಿಳಾ ಅಭಿವೃದ್ಧಿ ನಿಗಮದ ವಿವಿಧ ಯೋಜನೆ: ಅರ್ಜಿ ಸಲ್ಲಿಕೆ-ಅವಧಿ ವಿಸ್ತರಣೆ

    © 2025 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.