Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ತೊರೆಗೆ ಜಾಡು ಹುಡುಕುತ್ತಾ…
    ಕಂಡದ್ ಕೇಂಡದ್

    ತೊರೆಗೆ ಜಾಡು ಹುಡುಕುತ್ತಾ…

    Updated:12/09/2017No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    ನಮ್ಮ ಸುತ್ತ ಮುತ್ತಲ ಪ್ರಪಂಚವನ್ನು ನೋಡಲು ನಮ್ಮೊಳಗೊಂದು ವಿಶೇಷವಾದ ಕಣ್ಣು ಸದಾ ಜಾಗೃತವಾಗಿರಬೇಕು. ಏನೆಲ್ಲಾ ವೈಚಿತ್ರಗಳನ್ನು ಕಾಣಬಹುದು, ಕೇಳಬಹುದು. ‘ನಾನೊಬ್ಬ ಕವಿಯು, ನನ್ನ ಕಣ್ಣೇ ಕಿವಿಯು’ ಎಂದು ಕವಿ ಬೇಂದ್ರೆಯವರು ಕವಿಕರ್ಮದ ಬಗೆಗೆ ಹೇಳಿರುವ ಮಾತು ಈ ಮನುಷ್ಯನ ಈ ಕಾಣುವ, ಕೇಳುವ ಜಾಗೃತ ಪ್ರಜ್ಞೆಯ ಕುರಿತಾಗಿದೆ. ಮನುಷ್ಯನೊಳಗಿನ ಅನುಭವ ಜಗತ್ತು ವಿಸ್ತರಿಸುವುದಕ್ಕೆ ಬದುಕು ಕಲಿಸುವ ಪಾಠ ಬಹಳ ದೊಡ್ಡದು. ನಮ್ಮ ಕಲ್ಪನೆಗೂ ಮೀರಿದ ಅನೇಕ ಸಂಗತಿಗಳು, ವಿಸ್ಮಯಗಳು ನಡೆಯುತ್ತಲೇ ಹೋಗುತ್ತದೆ. ಸೋಲು-ಗೆಲುವು, ಸುಖ-ಕಷ್ಟ, ನೋವು-ನಲಿವು ಒಟ್ಟಾಗಿ ಬೆರೆತ ಈ ಕತ್ತಲು ಬದುಕಿನ ಆಟದಲ್ಲಿ ನಮ್ಮ ಜೀವಿತದ ಒಟ್ಟು ಕಾಲದಲ್ಲಿ ನಾವು ಕಾಣುವುದು ಕೇವಲ 50% ಹಗಲು; 50% ರಾತ್ರಿ ಮಾತ್ರ. ಪೂರ್ತಿ ಹಗಲನ್ನು ಕಾಣದೆ, ಪೂರ್ತಿ ರಾತ್ರಿಯನ್ನು ನೋಡದೆ ಒಂದು ದಿನ ಇಹಕ್ಕೆ ಗುಡ್ ಬೈ ಹೇಳುವ ಈ ನಡುವೆ ಕಂಡದ್ದಕ್ಕಿಂತ ಕಾಣದೇ ಉಳಿದಿರುವ ಸಂಗತಿಗಳೆ ಹೆಚ್ಚು.

    Click Here

    Call us

    Click Here

    ವರ್ತಮಾನವೆನ್ನುವುದು ಭವಿಷ್ಯದ ತಂದೆ: ಭೂತದ ಕೂಸು. ಸದ್ಯ ನಾನೀಗ ಬದುಕಿದ್ದೇನೆ ಎಂದರೆ ಗತದ ಮುಂದುವರಿಕೆಯಾಗಿದ್ದೇನೆ ಎಂದೇ ಅರ್ಥ. ಇದು ಒಂದು ರೀತಿಯಲ್ಲಿ ಖೋ ಖೋ ಆಟ. ಕಾಲದೊಂದಿಗೆ ಮನುಷ್ಯ ನಡೆಸುವ ಪೈಪೋಟಿ ಅಂದು-ಇಂದು-ಮುಂದು ಎನ್ನುವ ಮೂರು ಅಖಂಡ ನೆಲೆಯಲ್ಲಿ ಆಡುವ ಆಟವಾಗಿ ಕಾಣಿಸುತ್ತದೆ. ತಲೆಮಾರುಗಳ ನಡುವಿನ ಈ ಅಂತರದಿಂದಾಗಿ ನಮಗೆ ಕಾಲ ಕೆಟ್ಟು ಹೋದಂತೆ ಕಾಣುತ್ತದೆ. ಅಂದಿನ ದಿನಗಳ ಹಾಗೆ ಇಂದಿನ ದಿನಗಳಿಲ್ಲ ಎಂಬ ಕೊರಗು ಅನೇಕ ಹಿರಿಯರನ್ನು ಕಾಡುತ್ತದೆ. ಯುವಜನತೆ ದಾರಿ ತಪ್ಪುತ್ತಿದೆ, ಮನುಷ್ಯ ಹೆಚ್ಚು ಸ್ವಾರ್ಥ ಪರನಾಗಿದ್ದಾನೆ ಎಂದೆಲ್ಲಾ ನಮ್ಮ ಹಿರಿಯರು ಗೊಣಗುತ್ತಾರೆ. ಕಿರಿಯರಿಗೆ ಕಾಲದ ಬಗೆಗೆ ಆತಂಕವಿಲ್ಲ. ಈ ಕಾಲವೇ ಸುಂದರವೆಂದು ಕೊಳ್ಳುತ್ತಾ ಐಷಾರಾಮಿ ಬದುಕಿನ ಕನಸು ಕಾಣುತ್ತಾರೆ. ನಮ್ಮ ಅಜ್ಜ ಅಜ್ಜಿ ಹೇಳುವ ಅನುಭವ ಕಥನಗಳು ಇಂದಿನ ಮಕ್ಕಳಿಗೆ ವಿಚಿತ್ರವಾಗಿ ಕಂಡರೂ ಆಶ್ಚರ‍್ಯವಿಲ್ಲ.

    ನಿನ್ನೆ ಒಂದು ಹರಟೆ ಕಾರ‍್ಯಕ್ರಮಕ್ಕೆ ಹೋಗಿದ್ದೆ. ಹರಟೆಯ ವಿಷಯ ’ಆ ಕಾಲ ಚಂದವೋ ಈ ಕಾಲ ಚಂದವೋ?’. ಆ ಕಾಲ ಚಂದ ಅನ್ನುವ ನಮ್ಮ ಗಂಪಿನಿಂದ ಒಬ್ಬರು ವರ್ಣಮಾಲೆಯಲ್ಲಿ ’ಈ’ ಗಿಂತ ಮೊದಲು ’ಆ’ ಬರುತ್ತದೆ, ಆದ್ದರಿಂದ ಯಾವಾಗಲೂ ಹಳೆಯದ್ದಕ್ಕೆ ಮೊದಲ ಆದ್ಯತೆ ಎಂದು ಅಭಿಪ್ರಾಯಪಟ್ಟರು. ವಾಗ್ವಾದಗಳು ತೀವ್ರವಾಗಿಯೇ ನಡೆಯಿತು. ಕೂಡಲೇ ಹಿರಿಯ ಹರಟೆ ಮಲ್ಲರೊಬ್ಬರು, ಆ ಕಾಲ ಚೆನ್ನಾಗಿದೆ ಎಂದು ಹೇಳ್ತಿದ್ದೀರಲ್ಲ, ಆ ಕಾಲವನ್ನು ಈಗ ಹೇಗೆ ವಾಪಾಸು ತರಬಲ್ಲಿರಿ? ಎಂದು ತಾರ್ಕಿಕ ಪ್ರಶ್ನೆಯನ್ನೆ ಎತ್ತಿದರು. ಇದು ಪ್ರಶ್ನೆಗಾಗಿ ಪ್ರಶ್ನೆ ಎಂಬುದು ಅವರಿಗೂ ಗೊತ್ತು, ನಮಗೂ ಗೊತ್ತು, ಸಭೆಗೂ ಗೊತ್ತು. ಆದರೆ ಇದಕ್ಕೆ ಕೊಡಬಹುದಾದ ಉತ್ತರ ಅಷ್ಟು ಸುಲಭವಾಗಿಲ್ಲ. ನಿನ್ನೆ ಎನ್ನುವುದು ಭ್ರಮೆ, ನಾಳೆ ಎನ್ನುವುದು ಕಲ್ಪನೆ. ನಾನು ಅನುಭವಿಸುವ ಈ ಕ್ಷಣ ಮಾತ್ರ ಸತ್ಯ. ಕಾಲ ಸದಾ ಹರಿಯುತ್ತಿರುವ ಪ್ರವಾಹ. ನಿನ್ನೆ-ಇಂದು-ನಾಳೆಗಳು ಆ ಪ್ರವಾಹಕ್ಕೆ ಸೇರುವ ತೊರೆಗಳು. ಕಾಲವು ರೂಪಿಸುವ ಅನೇಕ ಅನುಭವಗಳು ಕೂಡ ಹರಿವ ತೊರೆಗಳು. ಅದನ್ನು ಒಂದೊಂದಾಗಿ ಸ್ಮರಿಸುತ್ತಾ ಹೋಗುವುದೇ ಮಾನವ ಬದುಕಿನ ಮಹಾಕಾವ್ಯ. ಒಬ್ಬೊಬ್ಬರೂ ಒಂದೊಂದು ನೆನಪಿನ ಗಣಿ. ಬರೆದಿಟ್ಟರೆ ಪ್ರತಿಯೊಬ್ಬರೂ ವಾಲ್ಮೀಕಿ.

    Like this:

    Like Loading...

    Related

    Dr Shubha Maravanthe
    Share. Facebook Twitter Pinterest LinkedIn Tumblr Telegram Email
    Kundapra.com

    Related Posts

    ಸ್ನೇಹ ಹೃದಯದ ಭಾಷೆ

    07/08/2016

    ಮರವಂತೆಯಲ್ಲಿ ದಾಸ ಭಾಗವತರ ಸಂಸ್ಮರಣ ಕಾರ್ಯಕ್ರಮ, ಕಲಾ ಗೌರವ

    27/06/2016

    ಮರವಂತೆ: ನನ್ನ ಶಾಲೆಗೀಗ ಅಮೃತ ಮಹೋತ್ಸವದ ಸಂಭ್ರಮ

    16/04/2016

    Leave a ReplyCancel reply

    Call us

    Click Here

    Call us

    Call us

    Call us
    Highest Viewed Recently
    • ಹಿರಿಯ ಯಕ್ಷಗಾನ ಕಲಾವಿದ ಆರ್ಗೋಡು ಮೋಹನದಾಸ್ ಶೆಣೈ ಅವರಿಗೆ ಉಪ್ಪಿನಕುದ್ರು ಕೊಗ್ಗ ದೇವಣ್ಣ ಕಾಮತ್ ಪ್ರಶಸ್ತಿ
    • ಬಸ್‌ನಲ್ಲಿ ಕುಸಿದು ಬಿದ್ದು ಮಹಿಳೆ ಸಾವು
    • ಕುಂಭಾಶಿ ವಿಶ್ವಕರ್ಮ ಕರಕುಶಲ ಶಿಲ್ಪಕಲಾ ಕೇಂದ್ರಕ್ಕೆ ಉಡುಪಿ ಎಸ್‌ಪಿ ಹರಿರಾಂ ಶಂಕರ್ ಭೇಟಿ
    • ವಿದೇಶಿ ವಿದ್ಯಾರ್ಥಿವೇತನ – ಅರ್ಜಿ ಸಲ್ಲಿಕೆ: ಅವಧಿ ವಿಸ್ತರಣೆ
    • ಅಂತರಾಷ್ಟ್ರೀಯ ಮಟ್ಟದ ಅಬಾಕಸ್ ಸ್ಪರ್ಧೆ: ಮದರ್ ತೆರೇಸಾ ಶಾಲೆಯ ಪ್ರಿಯಾಂಶ್ ಶಂಕರ್‌ಗೆ ಚಿನ್ನದ ಪದಕ

    © 2025 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.

    %d