Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ನಿದ್ರೆಯಿಂದ ಎದ್ದ ತಕ್ಷಣ ಬರುವ ಕುತ್ತಿಗೆ ನೋವಿಗೆ ಇಲ್ಲಿದೆ ಸಿಂಪಲ್ ಮನೆಮದ್ದು!
    ವಿಶೇಷ ಲೇಖನ

    ನಿದ್ರೆಯಿಂದ ಎದ್ದ ತಕ್ಷಣ ಬರುವ ಕುತ್ತಿಗೆ ನೋವಿಗೆ ಇಲ್ಲಿದೆ ಸಿಂಪಲ್ ಮನೆಮದ್ದು!

    No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    ಇಡೀ ರಾತ್ರಿ ಆರಾಮವಾಗಿ ಮಲಗಿ ನಿದ್ರೆ ಮಾಡಿ ಬೆಳಗ್ಗೆ ಎದ್ದ ತಕ್ಷಣ ಕುತ್ತಿಗೆ ನೋವು ಕಾಣಿಸಿಕೊಳ್ಳುವುದು ಸರ್ವೆಸಾಮಾನ್ಯ ಆದರೆ ನಿದ್ರೆಯ ಸಮಯದಲ್ಲಿ ಇದು ಅರಿವಿಗೆ ಬಂದಿರುವುದಿಲ್ಲ. ನಿದ್ರೆಯಲ್ಲಿ ನಮಗೆ ಬೇಕಾದ ಹಾಗೆ ಸರಿಯಾಗಿ ದಿಂಬಿನ ಮೇಲೆ ತಲೆ ಇಟ್ಟುಕೊಳ್ಳದೆ ಹೇಗೆಂದರೆ ಹಾಗೆ ಮಲಗಿರುತ್ತೇವೆ. ಇದರಿಂದ ಬೆಳಗ್ಗೆ ಎದ್ದ ಯಾಕೋ ಕುತ್ತಿಗೆ ಹಿಡಿದುಕೊಂಡಿದೆ ಅಥವಾ ಕುತ್ತಿಗೆ ನೋವು ಬಂದಿದೆ ಎನಿಸುತ್ತದೆ. ಬೆಳಗ್ಗೆ ಎದ್ದ ತಕ್ಷಣ ಕುತ್ತಿಗೆ ನೋವು ಎನಿಸಿದರೆ ಆ ಸಮಯದಲ್ಲಿ ಮಾತ್ರೆ ಅಥವಾ ಔಷಧಿ ತೆಗೆದುಕೊಂಡು ಇದನ್ನು ಕಡಿಮೆ. ಮಾಡಿಕೊಳ್ಳಬಹುದು. ಆದರೆ ಇದರಿಂದ ಸೈಡ್ ಎಫೆಕ್ಟ್ ಸಹ ಹೆಚ್ಚಾಗುತ್ತದೆ. ಅದರ ಬದಲಾಗಿ ಮನೆಯಲ್ಲಿ ಸುಲಭವಾಗಿ ಬಳಸುವ ಮನೆ ಮದ್ದುಗಳ ಬಗ್ಗೆ ತಿಳಿಯೋಣ

    Click Here

    Call us

    Click Here

    ಕುತ್ತಿಗೆ ನೋವಿಗೆ ಆರೈಕೆ ಬಹಳ ಮುಖ್ಯ:
    ಬೆಳಗ್ಗೆ ಎದ್ದ ತಕ್ಷಣ ಕುತ್ತಿಗೆ ಹಿಡಿದುಕೊಂಡಿದ್ದರೆ, ಯಾವುದೇ ಕಾರಣಕ್ಕೂ ವೇಗವಾಗಿ ಕುತ್ತಿಗೆಯನ್ನು ಅತ್ತಿತ್ತ ಆಡಿಸಲು ಹೋಗಬೇಡಿ. ಕುತ್ತಿಗೆಯನ್ನು ಹೇಗೆ ಇಟ್ಟುಕೊಂಡರೆ ನೋವು ಕಡಿಮೆ ಕಾಣುತ್ತದೆ ಅದೇ ರೀತಿ ಇಟ್ಟುಕೊಂಡಿರಿ. ಎದ್ದ ತಕ್ಷಣ ಕುತ್ತಿಗೆಯನ್ನು ಬಲವಾಗಿ ಆಡಿಸಲು ಹೋದರೆ ನೋವು ಮತ್ತಷ್ಟು ಹೆಚ್ಚಾಗುತ್ತದೆ.

    ಬಿಸಿ ನೀರಿನ ಸ್ನಾನ :
    ಇದಕ್ಕೆ ಅತ್ಯುತ್ತಮವಾದ ಒಂದು ಪರಿಹಾರ ಎಂದರೆ, ಬಿಸಿ ನೀರಿನ ಸ್ನಾನ ಮಾಡುವುದು. ಅಂದರೆ ಉಗುರು ಬೆಚ್ಚಗಿನ ನೀರನ್ನು ಕುತ್ತಿಗೆಯ ಭಾಗಕ್ಕೆ ನೋವು ಕಂಡು ಬರುವ ಜಾಗದಲ್ಲಿ ಹಾಕಬೇಕು ನೀರಿನ ಬಿಸಿ ನಿಧಾನವಾಗಿ ಚರ್ಮದ ಒಳಗೆ ಹೋಗುತ್ತಿದ್ದಂತೆ ಕುತ್ತಿಗೆಯನ್ನು ಸಾಧ್ಯವಾದಷ್ಟು ನಿಧಾನಗತಿಯಲ್ಲಿ ಸುತ್ತಲೂ ಆಡಿಸಲು ಪ್ರಾರಂಭ ಮಾಡಬೇಕು. ನಿಧಾನವಾಗಿ ಕುತ್ತಿಗೆಯನ್ನು ಬಾಗಿಸಿ ಮೊದಲು ಎಡಬದಿಯಿಂದ ಪ್ರಾರಂಭ ಮಾಡಿ ನಂತರ ಬಲಬದಿಗೆ ತಿರುಗಿಸಲು ಮುಂದಾಗಬೇಕು ಉಗುರು ಬೆಚ್ಚಗಿನ ನೀರಿನ ಬಿಸಿ ಹಿಡಿದುಕೊಂಡಿರುವ ಕುತ್ತಿಗೆ ಭಾಗದ ಮಾಂಸಖಂಡಗಳಿಗೆ ವಿಶ್ರಾಂತಿ ನೀಡುತ್ತದೆ. ಇದರಿಂದ ಕುತ್ತಿಗೆಯ ಚಲನೆಗೆ ಅನುಕೂಲ ಮಾಡಿಕೊಡುತ್ತದೆ.

    ಇನ್ನೊಂದು ಮನೆಮದ್ದು:
    ಕಣ್ಣು ಮುಚ್ಚಿ ಮಲಗಿರುವ ಸಮಯದಲ್ಲಿ ಮಾಡಬೇಕಾದ ಕೆಲಸ ಇದು.ಹೇಗೆಂದರೆ ನಿಮ್ಮ ಬಳಿ ಒಂದು ಟವೆಲ್ ಇದ್ದರೆ ಅದನ್ನು ಕೋಲಿನ ಆಕಾರದಲ್ಲಿ ಸುತ್ತಿ ಕುತ್ತಿಗೆ ಭಾಗಕ್ಕೆ ಬೆಂಬಲವಾಗಿ ಕೊಟ್ಟುಕೊಳ್ಳಿ. ಸಂಪೂರ್ಣ ಕುತ್ತಿಗೆ ಟವೆಲ್ ಮೇಲೆ ಇರುವಂತೆ. ನೋಡಿಕೊಳ್ಳಿ ಹಾಸಿಗೆ ಮೇಲೆ ಮಲಗಿದ ಸಂದರ್ಭದಲ್ಲಿ ದಿಂಬು ಹಾಕಿಕೊಳ್ಳದೆ ಕುತ್ತಿಗೆಗೆ ಕೇವಲ ಸುತ್ತಿದ ಟವಲ್ ಮಾತ್ರ ಹಾಕಿಕೊಂಡು ಮಲಗಬೇಕು. ಹಾಕಿಕೊಳ್ಳುವ ಟವಲು ತಲೆಗೆ ಅಥವಾ ದೇಹಕ್ಕೆ ತಾಗುವಂತೆ ಇರಬಾರದು ಕೇವಲ ಕುತ್ತಿಗೆ ಮಾತ್ರ ಟವಲ್ ಮೇಲ್ಬಾಗದಲ್ಲಿ ಇರಬೇಕು. ಸುರುಳಿಯಾಕಾರದಲ್ಲಿ ಸುತ್ತಿದ ಟವಲ್ ಕುತ್ತಿಗೆಯ ಭಾಗಕ್ಕೆ ಅತ್ಯಂತ ಪರಿಣಾಮಕಾರಿಯಾಗಿ ನೋವು ನಿವಾರಣೆಯ ಅಸ್ತ್ರವಾಗಿ ಕೆಲಸ ಮಾಡುತ್ತದೆ. ಯಾವುದೇ ಬಂಗಿಯಲ್ಲಿ ಮಲಗಿಕೊಂಡರು ಸಹ ಇದು ಅನುಕೂಲಕರವಾಗಿ ಇರುತ್ತದೆ ಎಂದು ಹೇಳಬಹುದು. ಆದರೆ ಹೊಟ್ಟೆ ಕೆಳಗೆ ಮಾಡಿಕೊಂಡು ಮಾತ್ರ ಮಲಗಬಾರದು ಅಷ್ಟೇ.

    ಕುಂದಾಪ್ರ ಡಾಟ್ ಕಾಂ ಲೇಖನ

    Click here

    Click here

    Click here

    Call us

    Call us

    Like this:

    Like Loading...

    Related

    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಗಣನಾಯಕನ ರೂಪ, ಗುಣದಲ್ಲಿ ಕಲಿಯಬೇಕಾದ ಪಾಠಗಳು ಅನೇಕ

    06/09/2024

    ಭಾರತ ಬಜೆಟ್-23 ಮುನ್ನೋಟ: ಆರ್ಥಿಕ ಕುಸಿತದ ಭೀತಿಯ ನಡುವೆ ಭಾರತೀಯ ಅರ್ಥವ್ಯವಸ್ಥೆಯನ್ನು ಮೇಲೆತ್ತುವ ಸವಾಲು

    01/02/2023

    ಉದ್ಯೋಗ ಸಂದರ್ಶನದ ತಯಾರಿಗೆ ಒಂದಿಷ್ಟು ಟಿಪ್ಸ್

    01/01/2023

    Leave a ReplyCancel reply

    Call us

    Click Here

    Call us

    Call us

    Call us
    Highest Viewed Recently
    • ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನ – ಅರ್ಜಿ ಸಲ್ಲಿಕೆ: ಅವಧಿ ವಿಸ್ತರಣೆ
    • ಹಿರಿಯ ಯಕ್ಷಗಾನ ಕಲಾವಿದ ಆರ್ಗೋಡು ಮೋಹನದಾಸ್ ಶೆಣೈ ಅವರಿಗೆ ಉಪ್ಪಿನಕುದ್ರು ಕೊಗ್ಗ ದೇವಣ್ಣ ಕಾಮತ್ ಪ್ರಶಸ್ತಿ
    • ಬಸ್‌ನಲ್ಲಿ ಕುಸಿದು ಬಿದ್ದು ಮಹಿಳೆ ಸಾವು
    • ಕುಂಭಾಶಿ ವಿಶ್ವಕರ್ಮ ಕರಕುಶಲ ಶಿಲ್ಪಕಲಾ ಕೇಂದ್ರಕ್ಕೆ ಉಡುಪಿ ಎಸ್‌ಪಿ ಹರಿರಾಂ ಶಂಕರ್ ಭೇಟಿ
    • ವಿದೇಶಿ ವಿದ್ಯಾರ್ಥಿವೇತನ – ಅರ್ಜಿ ಸಲ್ಲಿಕೆ: ಅವಧಿ ವಿಸ್ತರಣೆ

    © 2025 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.

    %d