ನಿನಾದ ಗಂಗೊಳ್ಳಿಯಿಂದ ಸಂಗೀತ ಸುಧೆ

Call us

Call us

Call us

ಗಂಗೊಳ್ಳಿ: ಗಂಗೊಳ್ಳಿಯ ನಿನಾದ ಸಂಸ್ಥೆಯ ಸಂಗೀತ ಶಾಲೆಯ ವಿದ್ಯಾರ್ಥಿಗಳಿಂದ ಶ್ರೀ ಗಣೇಶೋತ್ಸವದ ಪ್ರಯುಕ್ತ ಸಂಗೀತ ಕಾರ್ಯಕ್ರಮ ಇತ್ತೀಚಿಗೆ ಗಂಗೊಳ್ಳಿಯ ಮಲ್ಯರಮಠ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ನಡೆಯಿತು.

Call us

Click Here

ದೇವಳದ ಆಡಳಿತ ಮೊಕ್ತೇಸರ ಎನ್.ಸದಾಶಿವ ನಾಯಕ್, ಜಿ.ಎ.ಪೈ ಮುಂಬೈ, ಬಿ.ಪ್ರಕಾಶ ಪಡಿಯಾರ್, ಎಚ್.ಸಂಜೀವ ನಾಯಕ್ ಹಾಗೂ ಸಂಗೀತ ಶಿಕ್ಷಕ ಶಂಭು ಭಟ್ ಅವರು ಜಂಟಿಯಾಗಿ ಕಾರ್ಯಕ್ರಮ ಉದ್ಘಾಟಿಸಿದರು. ಇದೇ ಸಂದರ್ಭ ಸಂಗೀತ ಶಾಲೆಯ ಶಿಕ್ಷಕ ಶಂಭು ಭಟ್ಟ ಅವರನ್ನು ಉದ್ಯಮಿ ಎಚ್.ಗಣೇಶ ಕಾಮತ್ ಮತ್ತು ಮಾಜಿ ಮಂಡಲ ಪ್ರಧಾನ ಬಿ.ಸದಾನಂದ ಶೆಣೈ ಇವರು ಸನ್ಮಾನಿಸಿದರು ಹಾಗೂ ಕರ್ನಾಟಕ ಸರಕಾರದ ವತಿಯಿಂದ ನಡೆದ ಸಂಗೀತ ಪರೀಕ್ಷೆಯಲ್ಲಿ ಉತ್ತೀರ್ಣರಾದ ದಿವ್ಯಾ ನಾಯಕ್ ಹಾಗೂ ಪ್ರಿಯಾ ಪೈ ಇವರನ್ನು ಜಿ.ಜಯಶ್ರೀ ಎನ್.ಶೆಣೈ ಗೌರವಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ದೇವಳದ ಆಡಳಿತ ಮಂಡಳಿ ಸದಸ್ಯ ಜಿ.ವೆಂಕಟೇಶ ನಾಯಕ್ ಪ್ರಶಂಸನಾ ಪತ್ರ ವಿತರಿಸಿ ಶುಭ ಹಾರೈಸಿದರು.

ಹಿಂದುಸ್ತಾನಿ, ಶಾಸ್ತ್ರೀಯ ಸಂಗೀತ, ತಬಲಾ ವಾದನ ಹಾಗೂ ಭಜನೆಗಳ ಮೂಲಕ ನಿನಾದ ಸಂಸ್ಥೆಯ ಸಂಗೀತ ಶಾಲೆಯ ವಿದ್ಯಾರ್ಥಿಗಳು ನೆರೆದವರ ಮೆಚ್ಚುಗೆಗೆ ಪಾತ್ರರಾದರು.

Leave a Reply