Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ‘ದಾಸ ಸಿಂಚನ’ದಲ್ಲಿ ಭಕ್ತಿಭಾವ ಮಂಥನ
    alvas nudisiri

    ‘ದಾಸ ಸಿಂಚನ’ದಲ್ಲಿ ಭಕ್ತಿಭಾವ ಮಂಥನ

    Updated:26/12/2022No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Call us

    Call us

    Call us

    Call us

    Click Here

    ಕುಂದಾಪ್ರ ಡಾಟ್ ಕಾಂ ಸುದ್ದಿ.
    ವಿದ್ಯಾಗಿರಿ:
    ’ತಾನಲ್ಲ ತನ್ನದಲ್ಲ ಆಸೆ ತರವಲ್ಲ ಮುಂದೆ ಬಾಹುದಲ್ಲ, ದಾಸನಾಗು ವಿಶೇಷನಾಗು’ ಎಂಬ ಅಂತರಂಗ ಶುದ್ಧಿಗೊಳಿಸುವ ಅರ್ಥಗರ್ಭಿತ ದಾಸರ ಸಾಲುಗಳು ಅರ್ಥಪೂರ್ಣ ಕಾರ್ಯಕ್ರಮಕ್ಕೆ ಅಚ್ಚೊತ್ತಿದಂತಿತ್ತು. ಈ ಸಾಲುಗಳಿಗೆ ತಬಲ, ಕೀಬೋರ್ಡ್‌ನ ಸಾಥ್ ಸಿಕ್ಕರೆ ವಾಹ್… ಭಕ್ತಿಯ ಕಡಲಲ್ಲಿ ಮಿಂದೇಳಲು ಇನ್ನೇನು ಬೇಕು?

    Click Here

    Call us

    Click Here

    ಹೀಗೆ ಪ್ರೇಕ್ಷಕರನ್ನು ಭಾವಲೋಕಕ್ಕೆ ಕೊಂಡೊಯ್ಯುವಲ್ಲಿ ಯಶಸ್ವಿಯಾದವರು ಬೆಂಗಳೂರಿನ ಎಂ.ಎಸ್. ಗಿರಿಧರ್ ಮತ್ತು ಬಳಗದ ’ದಾಸ ಸಿಂಚನ’ ತಂಡ. ಮೂಡಬಿದ್ರೆಯ ಆಳ್ವಾಸ್ ಜಾಂಬೂರಿಯ ಕೃಷಿಸಿರಿ ವೇದಿಕೆ ಇಂತಹದೊಂದು ಅಭೂತಪೂರ್ವ ಕ್ಷಣಕ್ಕೆ ಸಾಕ್ಷಿಯಾಯಿತು.

    ’ಮುಸುರೆ ತೊಳೆಯಬೇಕು ಮನಸಿನ ಮುಸುರೆ ತೊಳೆಯಬೇಕು’ ಎಂಬ ಪುರಂದರದಾಸರ ಕೀರ್ತನೆಯನ್ನು ರಾಗದೊಂದಿಗೆ ಅನುಭವಿಸುವುದೇ ಚೆಂದ. ಪ್ರೇಕ್ಷಕರು ಒಕ್ಕೊರಲಿನಿಂದ ಹಾಡುಗಾರರ ಭಕ್ತಿ ಸುಧೆಯಲ್ಲಿ ಮಿಂದು ’ರಾಮ ಕೃಷ್ಣ ಗೋವಿಂದ ನಾರಾಯಣ’ ಎಂದಾಗ ಭಗವಂತನೇ ಇಲ್ಲಿ ನೆಲೆಸಿ ಹಾಡಿಸುತ್ತಿದ್ದಾನೆ ಎಂದು ಭಾಸವಾಗುತ್ತಿತ್ತು.

    ತಳ ಹಿಡಿದ ಪಾತ್ರೆಗಳನ್ನು ಹಸಿರ ಹುಲ್ಲಿನಿಂದ ಸ್ವಚ್ಛಗೊಳಿಸುವಂತೆ ಮನಸಿನ ಕಲ್ಮಶಗಳನ್ನು ಕಿತ್ತೊಗೆಯಲು ದೇವರ ನಾಮ ಸ್ಮರಣೆಯೊಂದೇ ದಾರಿ ಎಂಬ ಅರ್ಥಗರ್ಭಿತ ಮಾತುಗಳನ್ನು ದಾಸ ಸಾಹಿತ್ಯದ ಗಾಯಕ ಗಿರಿಧರ್ ಅವರ ಬಾಯಿಂದ ಕೇಳುವ ಭಾಗ್ಯ ನೆರೆದ ಪ್ರೇಕ್ಷಕ ವರ್ಗಕ್ಕೆ ಒದಗಿಬಂದಿತ್ತು.

    ಸೇವೆಯನ್ನು ಮಾಡಲು ಜ್ಞಾನದ ಬಾಗಿಲನ್ನು ತೆರೆ ಭಗವಂತ. ಒಳದೃಷ್ಟಿಯ ’ಬಾಗಿಲನು ತೆರೆದು’ ಅವಕಾಶವನ್ನು ಒದಗಿಸು ದೇವರೇ ಎಂದು ಕನಕದಾಸರು ಪರಿಪರಿಯಾಗಿ ಭಗವಂತನನ್ನು ಕೇಳಿಕೊಳ್ಳುವ ಸಾಲುಗಳನ್ನು ಬೆಂಗಳೂರಿನ ಎಂ.ಎಸ್.ಗಿರಿಧರ್ ಮತ್ತು ಬಳಗದವರು ಮಧುರವಾಗಿ ಹಾಡಿದರು.

    Click here

    Click here

    Click here

    Click Here

    Call us

    Call us

    ’ಬಂದಳ್ ನೋಡೆ ಬಂದಳ್ ನೋಡೆ ಭಾಗ್ಯದ ಲಕ್ಷ್ಮೀ’ ಎಂದು ಸಹಗಾಯಕಿ ವಸುಧಾ ಹಾಡಿಗೆ ಸಾಕ್ಷಾತ್ ಲಕ್ಷ್ಮಿಯೇ ತಲೆದೂಗುತ್ತಿದ್ದಾಳೆ ಎಂದು ಭಾಸವಾಗುತ್ತಿತ್ತು. ಭಾವವಿಲ್ಲದೆ ಯಾವ ಕೆಲಸ ಮಾಡಿದರೂ ಅಭಾವ ಉಂಟಾಗುತ್ತದೆ ಎಂಬ ಗಿರಿಧರ್ ಅವರ ಮಾತುಗಳು ನೆರೆದವರು ಹೌದು ಎನಿಸುವಷ್ಟು ಹಿತವೆನಿಸಿತ್ತು. ’ಶಿವ ಶಿವ ಎನ್ನಿರೋ’ ಎಂಬ ದಾಸ ಪದದೊಂದಿಗೆ ಎಲ್ಲರೂ ಶಿವ ಧ್ಯಾನ ಮಾಡಿ ಪ್ರತಿಕಿಯಿಸುವಂತೆ ಮಾಡಿದ ಕೀರ್ತಿ ತಂಡಕ್ಕೆ ಸಲ್ಲುತ್ತದೆ.

    ಪ್ರೀತಿ ಇದ್ದಲ್ಲಿ ಭಗವಂತ ಇರುತ್ತಾನೆ ಎಂಬ ತಿರುಳನ್ನು ಇಟ್ಟುಕೊಂಡು ’ಬಾರೋ ಕೃಷ್ಣಯ್ಯ ನಿನ್ನ ಮುಖವ ತೋರೋ’ ಎಂಬ ಭಕ್ತಿಗೀತೆ ಹಾಡಿ ಎಲ್ಲರ ಮನಸೂರೆಗೊಳಿಸಿದರು. ’ಏನು ಧನ್ಯಳೋ ಲಕುಮಿ ಎಂಥ ಮಾನ್ಯಳೋ’ ಎಂಬ ಹಾಡು ಕೇಳುಗರನ್ನು ತನ್ಮಯಗೊಳಿಸಿತು. ಪುರಂದರದಾಸರ ಕೀರ್ತನೆ ಅಲ್ಲಿದ್ದವರ ಮನಕೆ ಹಿತ ನೀಡಿತು. ’ಸುಮ್ಮನೆ ದೊರಕುವುದೇ ಶ್ರೀರಾಮನ ದಿವ್ಯ ನಾಮ’ ಎಂಬ ಸಾಲುಗಳು ಪರಿಶ್ರಮ ಹಾಗೂ ನಿಶ್ಕಲ್ಮಶ ಭಕ್ತಿಯ ಮಹತ್ವವನ್ನು ಹಿಡಿದಿಟ್ಟವು.

    ಸರಳ ಪದಗಳ ಮುಖೇನ ಜೀವನ ಪಾಠಗಳನ್ನು ಅಚ್ಚುಕಟ್ಟಾಗಿ ಕಟ್ಟಿಕೊಡುವ ದಾಸಸಾಹಿತ್ಯದ ಸಾಲುಗಳಿಗೆ ವಾದ್ಯವೃಂದದ ಪ್ರತಿಭಾಕೌಶಲ್ಯವು ಅರ್ಥವಂತಿಕೆಯನ್ನು ತಂದುಕೊಟ್ಟಿತು. ಮನಸ್ಸಿಗೆ ಮುದ ನೀಡುವ ಹಾಸ್ಯ, ಕರ್ಣಾನಂದಗೊಳಿಸುವ ದಾಸರ ಹಾಡುಗಳಿಗೆ ಪ್ರಸಾದ್ ಕುಮಾರ್(ತಬಲ), ಸುಮಂತ್(ಗೆಜ್ಜೆ), ಆತ್ಮಸ್ವರೂಪ್(ಕೀಬೋರ್ಡ್) ಸಹಕರಿಸಿದರು. ರಂಜಿತ್, ಆಶಿಶ್, ಚಂದನ್, ಅಮೀಶ್ ಕುಮಾರ್, ನಿಹಾರಿಕಾ, ಸೌಭಾಗ್ಯ, ಲಕ್ಷ್ಮೀ, ಸೃಜನಾ, ಆನಿ ಸಹಗಾಯಕರಾಗಿದ್ದರು.

    • ವರದಿ: ರಕ್ಷಾ ಕೋಟ್ಯಾನ್, ದ್ವಿತೀಯ ವರ್ಷ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರ, ಉಜಿರೆ.
    • ಚಿತ್ರ: ಅರ್ಪಿತ್ ಇಚ್ಛೆ
    SDM Ujire Students
    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಆಳ್ವಾಸ್‌ನ ‘ಲಿಪಿ’ ಮುದ್ರಣಾಲಯ ಲೋಕಾರ್ಪಣೆ

    20/05/2026

    ಆಳ್ವಾಸ್‌ನಲ್ಲಿ ಮಹಾವೀರ ಸ್ವಾಮಿ ಜನ್ಮ ಕಲ್ಯಾಣ ಮಹೋತ್ಸವ

    21/04/2026

    ಆಳ್ವಾಸ್ ನ್ಯಾಚುರೋಪಥಿ ಕಾಲೇಜಿಗೆ 12 ರ‍್ಯಾಂಕ್‌

    20/04/2026
    Leave A Reply Cancel Reply

    five × four =

    Call us

    Click Here

    Call us

    Call us

    Call us
    Highest Viewed Recently
    • ಡಾ. ಬಿ. ಬಿ. ಹೆಗ್ಡೆ ಕಾಲೇಜು: ಜೀವನ ಮೌಲ್ಯ ಉಪನ್ಯಾಸ ಮಾಲಿಕೆ
    • ಜೆಸಿಐ ಹಾಲಾಡಿ ವಾರಾಹಿ ವತಿಯಿಂದ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರ
    • ಕೊರವಡಿ ಶಾಲಾ ಕಟ್ಟಡ ನಿರ್ಮಾಣಕ್ಕೆ ಶ್ರೀ‌ಕ್ಷೇತ್ರ ಧ.ಗ್ರಾ.ಯೋ. ಅನುದಾನ, ಮಂಜೂರಾತಿ ಪತ್ರ ಹಸ್ತಾಂತರ
    • ಆಳ್ವಾಸ್‌ನ ‘ಲಿಪಿ’ ಮುದ್ರಣಾಲಯ ಲೋಕಾರ್ಪಣೆ
    • ಮಕ್ಕಳ ಸಾಹಿತ್ಯ ಉತ್ಸವದ ಆಶುಲೇಖನ ಸ್ಪರ್ಧೆಯಲ್ಲಿ ಸಮೃದ್ಧಿ ವಿ. ಪೂಜಾರಿ ದ್ವಿತೀಯ ಸ್ಥಾನ

    © 2026 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.