ಗಿರಿಜಾ ಸರ್ಜಿಕಲ್ಸ್ ಪ್ರಾಯೋಜಕತ್ವದ ‘ಕೂತು ಮಾತಾಡುವ’ ಕಾರ್ಯಕ್ರಮ: ಸಮಾಜ ಸೇವಕಿ ಆಯಿಷಾ ಬಾನು ಅವರಿಗೆ ಸನ್ಮಾನ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಗಿರಿಜಾ ಸರ್ಜಿಕಲ್ಸ್ ಕುಂದಾಪುರದ ಪ್ರಾಯೋಜಕತ್ವದಲ್ಲಿ ಹೆಲ್ಪಿಂಗ್ ಹ್ಯಾಂಡ್ಸ್ ಕುಂದಾಪುರ ಮತ್ತು ಮಂಥನ ಸಂಸ್ಥೆ ಕುಂದಾಪುರ ಇವರ ಸಹಭಾಗಿತ್ವದಲ್ಲಿ ನಿರೂಪಕ ಅವಿನಾಶ್ ಕಾಮತ್ ಸಂಯೋಜಿತ ‘ಕೂತು ಮಾತಾಡುವ’ ಕಾರ್ಯಕ್ರಮ ಇತ್ತಿಚಿಗೆ ಗಿರಿಜಾ ಸರ್ಜಿಕಲ್ಸ್ ಆವರಣದಲ್ಲಿ ಜರುಗಿತು.

Call us

Click Here

ಈ ಸಂದರ್ಭದಲ್ಲಿ ಕುಂದಾಪುರದವರೇ ಆದ ಕಾರ್ಕಳದಲ್ಲಿ ಉಚಿತ ಅನಾಥಾಶ್ರಮ ನಡಿಸುತಿರುವ ಬಡವರ, ನಿರ್ಗತಿಕರ, ಅನಾಥರ ಪಾಲಿನ ತಾಯಿ ಆಯಿಷಾ ಬಾನು ಅವರನ್ನು ಎಲ್ಲಾ ಸಂಸ್ಥೆಗಳ ವತಿಯಿಂದ ಸನ್ಮಾನಿಸಿ ಗೌರವಿಸಿ ಸಣ್ಣ ಮಟ್ಟದ ಆರ್ಥಿಕ ಸಹಾಯ ವನ್ನೂ ನೀಡಲಾಯಿತು.

ಕೂತು ಮಾತಾಡುವ ಸರಣಿ ಕಾರ್ಯಕ್ರಮವನ್ನು ನ್ಯಾಯವಾದಿ ಎ.ಎಸ್. ಎನ್. ಹೆಬ್ಬಾರ್ ಉದ್ಘಾಟಿಸಿದರು. ಗಿರಿಜಾ ಗ್ರೂಪ್ ಆಪ್ ಕಾನ್ಸರ್ನ್ಸ್ ನ ರವೀಂದ್ರ ಶೆಟ್ಟಿ , ಸುರೇಖಾ ರವೀಂದ್ರ ಶೆಟ್ಟಿ , ಹೆಲ್ಪಿಂಗ್ ಹ್ಯಾಂಡ್ಸ್ ಕುಂದಾಪುರ ಮತ್ತು ಮಂಥನ ಸಂಸ್ಥೆ ಕುಂದಾಪುರದ ಎಲ್ಲಾ ಪದಾಧಿಕಾರಿಗಳು ಸದಸ್ಯರು ಮತ್ತು ಕೂತು ಮಾತಾಡುವ ಕಾರ್ಯಕ್ರಮದ ರೂವಾರಿ ಅವಿನಾಶ್ ಕಾಮತ್ ಉಪಸ್ಥಿತರಿದ್ದರು.

Leave a Reply