ಎಸ್‌ಕೆಪಿಎ ಕುಂದಾಪುರ – ಬೈಂದೂರು ‌ವಲಯ: ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ ಹಾಗೂ ಶಿಕ್ಷಕರಿಗೆ ಸನ್ಮಾನ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಎಸ್‌ಕೆಪಿಎ ದ.ಕ -ಉಡುಪಿ ಜಿಲ್ಲೆ ಕುಂದಾಪುರ – ಬೈಂದೂರು ವಲಯದ ವತಿಯಿಂದ ನ15 ಬುಧವಾರ ಮಕ್ಕಳದಿನಾಚರಣೆ ಅಂಗವಾಗಿ ಶ್ರೀ ಕೆ.ಎಸ್.ಎಸ್.ಸರಕಾರಿ ಪ್ರೌಢಶಾಲೆ ಹಕ್ಲಾಡಿಯಲ್ಲಿ ವಿಧ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ ಹಾಗೂ ಶಾಲಾ ಚಿತ್ರಕಲಾ ಶಿಕ್ಷಕರಾದ ರಾಜಶೇಖರ್ ಎಮ್.ತಾಳಿಕೋಟೆ ಇವರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.

Call us

Click Here

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್‌ಕೆಪಿಎ ಕುಂದಾಪುರ – ಬೈಂದೂರು ವಲಯದ ಅಧ್ಯಕ್ಷರಾದ ದಿವಾಕರ ಶೆಟ್ಟಿ ಉಪ್ಪುಂದ ವಹಿಸಿದ್ದರು.

ಈ ಸಂಧರ್ಭ ಶ್ರೀ.ಕೆ.ಎಸ್.ಎಸ್. ಸರಕಾರಿ ಪ್ರೌಢಶಾಲೆಯ ಹಿರಿಯ ಶಿಕ್ಷಕರಾದ ಡಾ. ಕಿಶೋರ್ ಶೆಟ್ಟಿ, ಎಸ್‌ಕೆಪಿಎ ಕುಂದಾಪುರ, ಬೈಂದೂರು ಇದರ ನಿಕಟಪೂರ್ವ ಅಧ್ಯಕ್ಷರಾದ ದೊಟ್ಟಯ್ಯ ಪೂಜಾರಿ, ಉಪಾಧ್ಯಕ್ಷರಾದ ಚಂದ್ರಕಾಂತ್, ಪ್ರಧಾನ ಕಾರ್ಯದರ್ಶಿ ದಿನೇಶ್ ರಾಯಪ್ಪನ‌ಮಠ, ಕಾರ್ಯಕ್ರಮದ ಸಂಯೋಜಕರು ನಮ್ಮ ವಲಯದ ಸದಸ್ಯರುಗಳಾದ ರಘುರಾಮ್ ಸಿ.ಜೆ, ವಿಶ್ವನಾಥ್ ಸುಮುಖ, ಶಾಲಾ ಶಿಕ್ಷಕ ವೃಂದದವರು,ವಲಯದ ಸದಸ್ಯರುಗಳು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಶಾಲಾ ವಿಧ್ಯಾರ್ಥಿಗಳು ಪ್ರಾರ್ಥಿಸಿದರು. ದಿವಾಕರ್ ಶೆಟ್ಟಿ ಸ್ವಾಗತಿಸಿದರು ಹಾಗೂ ಚಂದ್ರಕಾಂತ್ ವಂದಿಸಿದರು

Click here

Click here

Click here

Click Here

Call us

Call us

Leave a Reply