Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಸಂಗೀತ ಲೋಕ ಸೃಷ್ಟಿಸಿದ ಕನ್ನಡಿಗರು ದುಬೈ (ಕನ್ನಡಿಗರ ಕನ್ನಡ ಕೂಟ)ನ ಸಂಗೀತ ಸೌರಭ -2024
    ಗಲ್ಫ್

    ಸಂಗೀತ ಲೋಕ ಸೃಷ್ಟಿಸಿದ ಕನ್ನಡಿಗರು ದುಬೈ (ಕನ್ನಡಿಗರ ಕನ್ನಡ ಕೂಟ)ನ ಸಂಗೀತ ಸೌರಭ -2024

    Updated:06/06/2024No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    ಕುಂದಾಪ್ರ ಡಾಟ್ ಕಾಂ ಸುದ್ದಿ.
    ದುಬೈ:
    ಕನ್ನಡಿಗರ ಕನ್ನಡ ಕೂಟ (ಕನ್ನಡಿಗರು ದುಬೈ ) ಯು ಜೆ.ಎಸ್.ಸ್. ಖಾಸಗಿ ಶಾಲೆಯ ಆಡಿಟೋರಿಯಂನಲ್ಲಿ ಸಂಗೀತ ಸೌರಭ -2024 ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

    Click Here

    Call us

    Click Here

    ಕನ್ನಡಿಗರು ದುಬೈನ ಅಧ್ಯಕ್ಷರು, ಉಪಾಧ್ಯಕ್ಷರು, ಗೌರವಾನ್ವಿತ ಗಣ್ಯರು, ಪದಾಧಿಕಾರಿಗರು ದೀಪ ಬೆಳೆಗುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ಕೊಡಲಾಯಿತು.

    ಕಾರ್ಯಕ್ರಮದ ಸ್ವಾಗತ ಭಾಷಣವನ್ನು ಕನ್ನಡಿಗರು ದುಬೈ ನ ನೂತನ ಅಧ್ಯಕ್ಷ ಅರುಣ್ ಕುಮಾರ್ ಎಂ.ಕೆ. ಅವರು ನೆರವೇರಿದರು. ಅರುಣ್ ಕುಮಾರ್ ಅವರು ಮಾತನಾಡುತ್ತ, ಕನ್ನಡಿಗರು ದುಬೈನ ಕಳೆದ 20 ವರ್ಷದ ಸಾಧನೆಗಳ ಪಟ್ಟಿಗಳನ್ನು ವಿವರಿಸಿತ್ತಾ, ದುಬೈಯಲ್ಲಿ ಸತತ ಎರಡು ದಶಕಗಳಿಂದ ಸಂಗೀತ ಸೌರಭ ಮತ್ತು ಕರ್ನಾಟಕ ರಾಜ್ಯೋತ್ಸವ ನಡೆಸಿಕೊಂಡು ಬಂದಿರುವ ಏಕೈಕ ಸಂಘ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಹಾಗೂ ಸಂಗೀತ ಸೌರಭದ ಮೂಲಕ ಹೊಸ ಹೊಸ ಮೈಲುಗಲ್ಲು ಸೃಷ್ಟಿಸಿರುವ ಏಕೈಕ ಸಂಘ ಎಂದು ತಿಳಿಸಿದರು. ಇಂತಹ ದೊಡ್ಡ ಜವಾಬ್ದಾರಿಯನ್ನು ಕೊಟ್ಟಿರುವ ಕನ್ನಡಿಗರು ದುಬೈನ ಮಾಜಿ ಅಧ್ಯಕ್ಷರುಗಳಾದ ಸಾದನ್ ದಾಸ್, ವೀರೇಂದ್ರ ಬಾಬು, ಉಮಾ ವಿದ್ಯಾಧರ್, ಸಲಹಾ ಸಮಿತಿ ಸದಸ್ಯರುಗಳಾದ ರೊನಾಲ್ಡ್ ಮಾರ್ಟಿಸ್ ಮತ್ತು ಮಂಜುನಾಥ್ ರಾಜ್ ಹಾಗೂ ಎಲ್ಲ ಸಮಿತಿಯ ಸದಸ್ಯರುಗಳಿಗೆ ಧನ್ಯವಾದ ತಿಳಿಸಿದರು.

    ಸಂಗೀತ ಸೌರಭ -2024 ಕಾರ್ಯಕ್ರಮವು ಡಾ. ಅಭೀಷೆಕ್ ರಾವ್ ಅವರ ರಸಮಂಜರಿ ಪ್ರೇಕ್ಷಕರನ್ನು ಮನೋರಂಜಿಸಿತು ಅವರ ಜೊತೆ ಶ್ರೀಮತಿ.ಅಕ್ಷತಾ ರಾವ್, ಹಶ್ಮಿತಾ ದಿನೇಶ್, ಅಶೊಕ ಕಾಶಿ ಸುಮಧುರ ಗಾನಗಳನ್ನು ಹೇಳಿ ಮನೋರಂಜಿಸಿದರು. ಇದರ ಜೊತೆಗೆ ಹಲವಾರು ನಾಟ್ಯಗಳು, ಭಾವಗೀತ, ಜಾನಪದ ಗೀತೆಗಳು ಹಾಗೂ ನೃತ್ಯಗಳು ಸಂಗೀತ ಲೋಕವನ್ನೇ ಸೃಷ್ಟಿಸಿತ್ತು. ಕೊನೆಯಲ್ಲಿ ನಡೆದ ಕರ್ನಾಟಿಕ್ ವಾದ್ಯ ಸಂಗೀತವು ಶ್ರೀ. ಕಾರ್ತಿಕ್ ಮೆನನ್ (ವಯೊಲಿನ್), ಶ್ರೀ.ಅಮೃತ್ ಕುಮಾರ್ ( ಮೌರ್ಸಿಂಗ್ / ಕುಣ್ಣೂಕೋಲ್) ಮತ್ತು ಶ್ರೀ. ನಂದಗೋಪಾಲ್ ( ಮೃದಂಗ) ಸಂಗೀತ ಲೋಕವನ್ನೇ ಸೃಷ್ಟಿಸಿತು.

    ವೇದಿಕೆಯಲ್ಲಿ, ಇತ್ತೀಚೆಗಷ್ಟೇ ದಿವಂಗತರಾದ ಕನ್ನಡದ ಕುಳ್ಳ ಶ್ರೀ. ದ್ವಾರಕೀಶ್ ಅವರ ಸವಿನೆನಪಿನ ಚಿತ್ರಣದ ಮೂಲಕ ಸಂತಾಪ ಸೂಚಿಸಿ ಗೌರವಿಸಲಾಯಿತು. ವೇದಿಕೆಯಲ್ಲಿ ದ್ವಾರಕೀಶ್ ಅವರ ಸುಪುತ್ರ ಶ್ರೀ.ಸುಕೇಶ್ ದ್ವಾರಕೀಶ್ ಅವರು ತಮ್ಮ ಪತ್ನಿ ಶ್ರೀಮತಿ.ಲೀಲಾ ಸುಕೇಶ್ ಮತ್ತು ಮಗಳು ಕುಮಾರಿ. ಧೀಕ್ಷಾ ಅವರು ಉಪಸ್ಥಿತರಿದ್ದರು.

    Click here

    Click here

    Click here

    Call us

    Call us

    ಕಾರ್ಯಕ್ರಮಕ್ಕೆ Fortune ಗ್ರೂಪ್ ನ ಮುಖ್ಯಸ್ಥರಾದ ಶ್ರೀ. ಪ್ರವೀಣ್ ಶೆಟ್ಟಿ, ಅಬುಧಾಬಿ ಕನ್ನಡ ಸಂಘದ ಅಧ್ಯಕ್ಷರಾದ ಶ್ರೀ. ಸರ್ವೋತ್ತಮ ಶೆಟ್ಟಿ, ಶಾರ್ಜಾ ಕನ್ನಡ ಸಂಘದ ಅಧ್ಯಕ್ಷರಾದ ಶ್ರೀ. ಸತೀಶ್ ಪೂಜಾರಿ ಹಾಗೂ ಮಾಜಿ ಅಧ್ಯಕ್ಷರುಗಳು, UAE ಬ್ರಾಹ್ಮಣ ಸಮಾಜದ ಅಧ್ಯಕ್ಷರಾದ ಶ್ರೀ. ಸುಧಾಕರ್ ಪೇಜಾವರ, ಬಸವ ಸಮಿತಿ ಅಧ್ಯಕ್ಷರಾದ ಶ್ರೀ. ಬಸವರಾಜ್ ಹೊಂಗಲ್, ಶ್ರೀ.ಜಯಂತ್ ಶೆಟ್ಟಿ ಯಕ್ಷ ಮಿತ್ರರು, ವೊಕ್ಕಲಿಗ ಸಂಘದ ಅಧ್ಯಕ್ಷರಾದ ಶ್ರೀ. ಕಿರಣ್ ಗೌಡ, ಶ್ರೀ. ಬಾಲ ಸಾಲಿಯಾನ್, ಶ್ರೀ. ಗಣೇಶ್ ರೈ ಸಾಮಾಜಿಕ ಜಾಲತಾಣ, ಶ್ರೀ. ವಾಸುದೇವ ಶೆಟ್ಟಿ (ಬ್ರಿಟಾನಿಯಾ) ಮತ್ತು ಹಲವಾರು ಸಂಘ ಸಂಸ್ಥೆ ಗಳಾದ UAE ಹೆಮ್ಮೆಯ ಕನ್ನಡ ಸಂಘ, ಗಲ್ಫ್ ಗೆಳೆಯರು, ಗಲ್ಫ್ ಗೆಳೆತಿಯರು ಮತ್ತು ಇತರೆ ಹಲವು ಸಂಘ ಸಂಸ್ಥೆಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು ಮತ್ತು ಗಣ್ಯರನ್ನು ವೇಧಿಕೆಯಲ್ಲಿ ಸನ್ಮಾನಿಸಲಾಯಿತು…

    ಇದೇ, ಸಂದರ್ಭದಲ್ಲಿ ಕನ್ನಡಿಗರು ದುಬೈ ಯು ಅತ್ಯಂತ ಯಶಸ್ವೀ ಕಾರ್ಯಕ್ರಮ ಗಲ್ಫ್ ಗಾನ ಕೋಗಿಲೆ – ಸೀಸನ್ 2 ನಡೆಸುವ ಬಗ್ಗೆ ಚಿಂತನೆ ನಡೆಸಿರುವುದರ ಬಗ್ಗೆ ಮಾಹಿತಿ ನೀಡಿತಿ ಮತ್ತು ಪ್ರತೀ ವರ್ಷ ನವೆಂಬರ್ ನ ಎರಡನೇ ವಾರ ನಡೆಸಿಕೊಂಡು ಬಂದಿರುವ ಕರ್ನಾಟಕ ರಾಜ್ಯೋತ್ಸವ – 2024ನ್ನು 09 ನವೆಂಬರ್ 2024 ರಂದು ಎಲ್ಲ ಗಲ್ಫ್ ರಾಷ್ಟ್ರಗಳ ಕನ್ನಡ ಸಂಘಗಳ ಸಹಯೋಜನೆಯೊಂದಿಗೆ ನಡೆಸುವುದಾಗಿ ಅಧಿಕೃತ ಪತ್ರಿಕಾ ವರದಿಯನ್ನು ಬಿಡುಗಡೆ ಮಾಡಲಾಯಿತು.

    ಕಿಕ್ಕಿರಿದ 600ಕ್ಕೂ ಹೆಚ್ಚು ಪ್ರೇಕ್ಷಕರನ್ನು ಮನೋರಂಜಿಸಿತು. ಕನ್ನಡಿಗರು ದುಬೈನ ಉಪಾಧ್ಯಕ್ಷರಾದ ವಿನೀತ್ ರಾಜ್ ಅವರು ಎಲ್ಲ ಪ್ರಾಯೋಜಕರುಗಳಿಗೆ, ಗಣ್ಯರುಗಳಿಗೆ, ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ, ನೆರೆದಿದ್ದ ಎಲ್ಲ ಸಭಿಕರುಗಳಿಗೆ ವಂದನಾರ್ಪಣೆಯನ್ನು ಸಲ್ಲಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಕೃಷ್ಣ ರಕ್ಷಿತ್ ಅವರು ನೆರವೇರಿಸಿದರು.

    Like this:

    Like Loading...

    Related

    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ದುಬೈನಲ್ಲಿ ಅದ್ದೂರಿಯಾಗಿ ಜರುಗಿದ ಅಂತರಾಷ್ಟ್ರೀಯ ಜಾನಪದ ಉತ್ಸವ – 25

    12/09/2025

    ಜು.24ರಂದು ನಮ್ಮ ಕುಂದಾಪ್ರ ಕನ್ನಡ ಬಳಗ ಗಲ್ಫ್ ವತಿಯಿಂದ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ

    21/07/2025

    ನಮ್ಮ ಕುಂದಾಪ್ರ ಕನ್ನಡ ಬಳಗ ಗಲ್ಫ್ ನೇತೃತ್ವದಲ್ಲಿ ವಿಹಾರ ಕೂಟ ಮತ್ತು ಗ್ರಾಮೀಣ ಆಟೋಟ ಸ್ಪರ್ಧೆಗಳ ಯಶಸ್ವಿ ಆಯೋಜನೆ

    25/12/2024

    Leave a ReplyCancel reply

    Call us

    Click Here

    Call us

    Call us

    Call us
    Highest Viewed Recently
    • ಇಎಸ್ಐ ಮತ್ತು ಇಪಿಎಫ್ ಸೌಲಭ್ಯದಿಂದ ಉದ್ಯೋಗಳಿಗೆ ಭವಿಷ್ಯದಲ್ಲಿ ಆರ್ಥಿಕ ಭದ್ರತೆ: ಪ್ರತೀಕ್ ಬಾಯಲ್
    • ಎಸ್‌ಸಿಡಿಸಿಸಿ ಬ್ಯಾಂಕ್ ತೆಕ್ಕಟ್ಟೆ ಶಾಖೆ: ಗ್ರಾಹಕರಿಗೆ ಆರ್ಥಿಕ ಅರಿವು ಜಾಗೃತಿ ಕಾರ್ಯಕ್ರಮ
    • ಬೈಂದೂರು ಉತ್ಸವ: ಜಿಲ್ಲಾಧಿಕಾರಿ ಕಚೇರಿಯಲ್ಲಿ ಶಾಸಕ ಗಂಟಿಹೊಳೆ ನೇತೃತ್ವದಲ್ಲಿ ವಿವಿಧ ಇಲಾಖಾ ಅಧಿಕಾರಿಗಳ ಸಭೆ
    • ರಾಜ್ಯ ಮಟ್ಟದ ಐಡಿಯಾಥಾನ್ ಸ್ಪರ್ಧೆಯಲ್ಲಿ ಎಂಐಟಿ ಕುಂದಾಪುರದ ಅಧ್ಬುತ ಸಾಧನೆ
    • ಕುಂದಾಪುರ: ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಸಂಸ್ಥಾಪಕರ ದಿನಾಚರಣೆ

    © 2025 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.

     

    Loading Comments...
     

      %d