ಜಮೀಯ ತುಲ್ ಫಲಾಹ್: ವಿದ್ಯಾರ್ಥಿ ಪುರಸ್ಕಾರ ಹಾಗೂ ವಿದ್ಯಾರ್ಥಿ ವೇತನ ವಿತರಣೆ

Call us

Call us

Call us

ಕುಂದಾಪುರ: ಜಮ್ಯಿಯತುಲ್ ಫಲಾಹ ಕುಂದಾಪುರ ತಾಲೂಕು ಘಟ್ಟದ ವತಿಯಿಂದ ಪಾರಿಜಾತ ಹೋಟೇಲ್‌ನ ಪದ್ಮಾವತಿ ಕಲ್ಯಾಣ ಮಂಟಪದಲ್ಲಿ ಅರ್ಹ ಬಡ ವಿದ್ಯಾರ್ಥಿಗಳಿಗೆ ಝಕಾತ್ ಫಂಡಿನಿಂದ ವಿದ್ಯಾರ್ಥಿ ವೇತನ ನೀಡಲಾಯಿತು. ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನ ಪುರಸ್ಕರಿಸಲಾಯಿತು.

Call us

Click Here

ಕಾರ್ಯಕ್ರಮದಲ್ಲಿ ಜಮ್ಯಿಯ ತುಲ್‌ಫಲಾಹ್ ದ.ಕ.ಉಡುಪಿ ಜಿಲ್ಲಾಧ್ಯಕ್ಷ ಜನಾಬ್ ಅಬ್ದುಲ್ ಲತೀಫ್, ಅಖಿಲ ಭಾರತ ಕೊಂಕಣಿ ಖಾರ್ವಿ ಮಹಾ ಸಭಾದ ಅಧ್ಯಕ್ಷ ಬಸವ ಖಾರ್ವಿ, ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಯ ನಿರ್ದೇಶಕ ಚಂದ್ರಶೇಖರ್ ದೋಮ, ದ.ಕ.-ಉಡುಪಿ ಜಿಲ್ಲಾ ಮಾಜಿ ಅಧ್ಯಕ್ಷರಾದ ಖಲೀಲ್ ಆಹ್ಮದ ಉಡುಪಿಶುಭಹಾರೈಸಿದರು.

ಸಭೆಯ ಅಧ್ಯಕ್ಷತೆಯನ್ನು ಜಮೀಯ್ಯ ತುಲ್ ಫಲಾಹ್ ಕುಂದಾಪುರದ ತಾಲೂಕು ಘಟಕದ ಜನಾಬ್ ಖತೀಜ್ ಅಬು ಮೊಹ್ಮದ್ ವಹಿಸಿದರು. ಕಾರ್ಯದರ್ಶಿ ಅಸ್ಗರ್ ಅಲಿ ಸ್ವಾಗತಿಸಿ ವಂದಿಸಿದರು. ಖಜಾಂಚಿ ಬಿ.ಅಪ್ಪಣ್ಣ ಪ್ರತಿಭಾವಂತ ವಿದ್ಯಾರ್ಥಿಗಳ ಹೆಸರು ಓದಿದರು. ಅಸ್ಗರ ಹೈಕಾಡಿ ಕಾರ್ಯಕ್ರಮವನ್ನು ನಿರೂಪಿಸಿದರು. ಖಜಾಂಜಿ ಬಿ.ಅಬ್ದುಲ್ಲಾ ಜೊತೆ ಕಾರ್ಯದರ್ಶಿ ಕೆ.ಎಸ್.ರಿಯಾಜ್ ಹಾಗೂ ಅಲ್ತಾಫ ಕುರೈಷಿ ಕಾರ್ಯಕ್ರಮಕ್ಕೆ ಸಹಕರಿಸಿದ್ದರು.

Leave a Reply