ರೋಟರಿ ಕ್ಲಬ್ ಕುಂದಾಪುರ ರಿವರ್ ಸೈಡ್ ಪದಗ್ರಹಣ ಸಮಾರಂಭ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಇಲ್ಲಿನ ರೋಟರಿ ಕ್ಲಬ್ ಕುಂದಾಪುರ ರಿವರ್ ಸೈಡ್ ಇದರ ಪದಗ್ರಹಣ ಸಮಾರಂಭವು ಅಕ್ಷತಾ ಹಾಲ್ ನಲ್ಲಿ ನಡೆಯಿತು.

Call us

Click Here

ವಲಯ ಒಂದರ ಸಹಾಯಕ ಗವರ್ನರ್ ಬಿ.ರಾಜೇಂದ್ರ  ಶೆಟ್ಟಿ ಪದ ಪ್ರಧಾನ ನೆರವೇರಿಸಿ ರೋಟರಿಯ ಮೂಲಕ ಸಮಾಜ ಸೇವೆಗೆ ಉತ್ತಮ ಅವಕಾಶಗಳಿವೆ ಇದನ್ನು ಬಳಸಿಕೊಂಡು ಕೃತಾರ್ಥರಾಗೊಣ ಎಂದು ಕರೆ ನೀಡಿದರು.

ಡಾ. ಸಂದೀಪ್ ಕುಮಾರ್ ಶೆಟ್ಟಿ, ಸದಾನಂದ ಉಡುಪ, ಗೌತಮ್ ಕಾಮತ್, ಸದಾನಂದ ಬಳ್ಕೂರು, ನರಸಿಂಹ ಹೊಳ್ಳ, ರಾಜು ಪೂಜಾರಿ, ರಾಮಕೃಷ್ಣ ಐತಾಳ್, ಭಾಸ್ಕರ್, ಮಂಜುನಾಥ ಕೆ.ಎಸ್,. ಕೌಶಿಕ್ ಯಡಿಯಾಳ, ಮಂಜುನಾಥ್ ಗಾಣಿಗ ಹಾಗೂ ನಟರಾಜ್ ಇವರುಗಳು ಅತಿಥಿಗಳನ್ನು ಪರಿಚಯಿಸಿದರು.

ಕ್ಲಬ್ ಬುಲೆಟಿನ್ ರಿವರ್ ನ್ನು ವಲಯ  ಸೇನಾನಿ ವೆಂಕಟೇಶ್ ನಾವುಂದ ಬಿಡುಗಡೆಗೊಳಿಸಿದರು. ಸ್ಥಳೀಯ ಚರ್ಚಿನ ಧರ್ಮಗುರುಗಳಾದ ಅತೀ ವಂದನೀಯ ಫಾ.ಪೌಲ್ ರೇಗೋ ಮುಖ್ಯ ಅತಿಥಿಗಳಾಗಿ ಆಗಮಿಸಿ ರೋಟರಿಯ ಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ನೂತನ ಅಧ್ಯಕ್ಷರಾದ ವಿಶ್ರಾಂತ್ ಎನ್. ಶೆಟ್ಟಿ ಇವರು ಅಧ್ಯಕ್ಷೀಯ ನುಡಿಗಳನ್ನು ಹೇಳಿದರು. ಪ್ರತಿಭಾವಂತ ವಿದ್ಯಾರ್ಥಿಗಳನ್ನು  ಗುರುತಿಸಲಾಯಿತು.

ನಿರ್ಗಮನ ಅಧ್ಯಕ್ಷ ಜಗನ್ನಾಥ ಮೊಗೇರ ಇವರು ಸ್ವಾಗತಿಸಿದರು, ಜೇಷ್ಠ.ಜಿ.ಕಾಮತ್ ಪ್ರಾರ್ಥಿಸಿದರು, ಕಾರ್ಯದರ್ಶಿ ರೊನಾಲ್ಡ್ ಡಿಮೆಲ್ಲೊ  ವಂದಿಸಿದರು.

Click here

Click here

Click here

Click Here

Call us

Call us

Leave a Reply