ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಶಿವಮೊಗ್ಗದಲ್ಲಿ ನಡೆದ ಓಪನ್ ಅಂತಾರಾಷ್ಟ್ರೀಯ ಕರಾಟೆ ಚಾಂಪಿಯನ್ ಶಿಪ್ – 2024ರಲ್ಲಿ ಬಸ್ರೂರಿನ ಮಿಥುನ್. ಆರ್ 16 ರಿಂದ 17 ವರ್ಷದ ವಯೋಮಾನದ ವಿಭಾಗದಲ್ಲಿ ಕಟಾದಲ್ಲಿ ಪ್ರಥಮ ಸ್ಥಾನ ಗಳಿಸಿರುತ್ತಾನೆ.
ಆರ್. ಎನ್. ಶೆಟ್ಟಿ ಕಂಪೋಸಿಟ್ ಪಿಯು ಕಾಲೇಜಿನ ಪ್ರಥಮ ಪಿಯುಸಿ ವಾಣಿಜ್ಯ ವಿಭಾಗದ ವಿದ್ಯಾರ್ಥಿ. ಅವರು ಬಸ್ರೂರಿನ ನಿವಾಸಿ ರಮೇಶ್ ಹಾಗೂ ಕುಸುಮ ದಂಪತಿಯ ಪುತ್ರ.
ಸಾಧಕ ಕರಾಟೆಪಟು ಮಿಥುನ್ ಆರ್. ಕಾಲೇಜಿನ ಸಂಚಾಲಕರಾದ ಸುಕುಮಾರ್ ಶೆಟ್ಟಿ ಅವರು, ಆಡಳಿತ ಮಂಡಳಿ ಸದಸ್ಯರು, ಪ್ರಾಂಶುಪಾಲರು ಹಾಗೂ ಕಾಲೇಜಿನ ಬೋಧಕ – ಬೋಧಕೇತರ ಸಿಬ್ಬಂದಿಗಳು ಅಭಿನಂದನೆ ಸಲ್ಲಿಸಿರುತ್ತಾರೆ.










