ವಿದ್ಯಾರ್ಥಿಗಳ ಜೀವನದಲ್ಲಿ ತಂಡ ನಿರ್ಮಾಣವು ಅತ್ಯಂತ ಮುಖ್ಯವಾದ ಭಾಗ: ಜಯಕಿಶನ್ ಭಟ್

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
 ಕುಂದಾಪುರ:
ವಿದ್ಯಾರ್ಥಿಗಳ ಜೀವನದಲ್ಲಿ ತಂಡ ನಿರ್ಮಾಣವು ಅತ್ಯಂತ ಮುಖ್ಯವಾದ ಭಾಗ. ಇದು ನಮಗೆ ಹೆಚ್ಚು ಗುರಿ ಸಾಧಿಸಲು ಪರಸ್ಪರ ಸಹಾಯ ಮಾಡಿಕೊಳ್ಳಲು ಮತ್ತು ಒಟ್ಟಾಗಿ ಯಶಸನ್ನು ಕಾಣಲು ನೆರವಾಗುತ್ತದೆ. ಇದರ ಜೊತೆಯಲ್ಲಿ ತಂಡ ನಿರ್ಮಾಣವು ಪರಸ್ಪರ ಸಹಾಯ ಮನೋಭಾವನೆ ರೂಪಿಸುವುದಲ್ಲದೆ ಇಂತಹ ಸಹಯೋಗವು ಗೆಲುವಿಗೆ ಮತ್ತು ಸಂತ್ರಪ್ತಿಗೆ ದಾರಿ ಮಾಡುತ್ತದೆ ಎಂದು ಉಡುಪಿಯ ಫ್ರೀಲೆನ್ಸ್ ತರಬೇತುದಾರರಾದ ಜಯಕಿಶನ್ ಭಟ್ ಹೇಳಿದರು.

Call us

Click Here

ಅವರು ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿ ಆಶ್ರಯದಲ್ಲಿ ನೂತನವಾಗಿ ಸೇರ್ಪಡೆಗೊಂಡ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಆಯೋಜಸಿದ ‘ಪ್ರೇರಣಾ’ ಪೂರ್ವ ಪರಿಚಯ ಕಾರ್ಯಕ್ರಮದಲ್ಲಿ “ಟೀಮ್ ಬಿಲ್ಡಿಂಗ್” ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.

ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿ ಕಾರ್ಯಕ್ರಮ ಸಂಯೋಜಿಸಿದರು. ಈ ಸಂದರ್ಭದಲ್ಲಿ ಉಪ-ಪ್ರಾಂಶುಪಾಲರಾದ ಡಾ| ಚೇತನ್ ಶೆಟ್ಟಿ ಕೋವಾಡಿ ಉಪಸ್ಥಿತರಿದ್ದರು.

ವಾಣಿಜ್ಯ ವಿಭಾಗದ ಪ್ರಾಧ್ಯಾಪಕರಾದ ಪೂಜಾ ಕುಂದರ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ಅಕ್ಷಯ್ ಕುಮಾರ್ ಅತಿಥಿಗಳನ್ನು ಪರಿಚಯಿಸಿದರು.

Leave a Reply