ಶ್ರೀ ಮಹಾಗಣಪತಿಯ ಸನ್ನಿಧಾನದಲ್ಲಿ ವಿಶೇಷ ರಂಗಪೂಜೆ, ಪುಷ್ಪಾಲಂಕಾರ ಹಾಗೂ ದೀಪಾರಾಧನೆ ಸೇವೆ

Call us

Call us

Call us

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಗಂಗೊಳ್ಳಿ:
ಗಂಗೊಳ್ಳಿಯ ಪೇಟೆ ಶ್ರೀ ವಿಠಲ ರಕುಮಾಯಿ ತಥಾ ಮುಖ್ಯಪ್ರಾಣ ದೇವಸ್ಥಾನದಲ್ಲಿ ಶ್ರೀ ಸಂಸ್ಥಾನ ಕಾಶೀ ಮಠದ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿ ಅವರ ಜನ್ಮ ಶತಾಬ್ದಿ ಉತ್ಸವದ ಅಂಗವಾಗಿ ದೇವಸ್ಥಾನದ ಶ್ರೀ ಮಹಾಗಣಪತಿಯ ಸನ್ನಿಧಾನದಲ್ಲಿ ವಿಶೇಷ ರಂಗಪೂಜೆ, ಪುಷ್ಪಾಲಂಕಾರ ಹಾಗೂ ದೀಪಾರಾಧನೆ ಸೇವೆಗಳು ಭಾನುವಾರ ವಿಜೃಂಭಣೆಯಿಂದ ಜರಗಿತು.

Call us

Click Here

ಶ್ರೀಗಳ ಜನ್ಮ ಶತಾಬ್ದಿ ಉತ್ಸವದ ಅಂಗವಾಗಿ ಸ್ವಾತಿ ನಕ್ಷತ್ರದ ಪರ್ವ ಕಾಲದಲ್ಲಿ ಸಂಜೆ ವ್ಯಾಸೋಪಾಸನೆ, ಭಜನೆ, ಗುರು ಗುಣಗಾನ, ಶ್ರೀ ಮಹಾಗಣಪತಿಯ ಸನ್ನಿಧಾನದಲ್ಲಿ ವಿಶೇಷ ರಂಗಪೂಜೆ, ಪುಷ್ಪಾಲಂಕಾರ ಹಾಗೂ ದೀಪಾರಾಧನೆ ಸೇವೆ ಹಾಗೂ ಪ್ರಸನ್ನ ಪೂಜೆ ದೇವಳದ ಪ್ರಧಾನ ಅರ್ಚಕ ಜಿ.ಮೋಹನದಾಸ ಭಟ್ ಮತ್ತು ಜಿ.ಪ್ರದೀಪ್ ಭಟ್ ನೇತೃತ್ವದಲ್ಲಿ ನಡೆಯಿತು. ಶ್ರೀ ವಿಠಲ ರಕುಮಾಯಿ ಸೇವಾ ಸಮಿತಿ ಸದಸ್ಯರು, ಅರ್ಚಕರು, ಸೇವಾದಾರರು, ಸಮಾಜಬಾಂಧವರು ಹಾಗೂ ಭಜಕರು ಉಪಸ್ಥಿತರಿದ್ದರು.

Leave a Reply