ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ರಾಷ್ಟ್ರೀಯ ಸೇವಾ ಯೋಜನೆ ಘಟಕ ಸರಕಾರಿ ಪದವಿ ಪೂವ೯ ಕಾಲೇಜು ಬೈಂದೂರು, ಹಸ್ತ ಚಿತ್ರ ಫೌಂಡೇಶನ್ ವಕ್ವಾಡಿ, ಜನಸೇವಾ ಟ್ರಸ್ಟ್ ಮೂಡುಗಿಳಿಯಾರು, ಉಸಿರು ಕೋಟ, ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆ ಬೈಂದೂರು ತಾಲೂಕು ಘಟಕ, ಸಮೃದ್ಥ ಜನಸೇವಾ ಚಾರಿಟೇಬಲ್ ಟ್ರಸ್ಟ್ ಬೈಂದೂರು ತಂಡದೊಂದಿಗೆ ಸ್ವರಾಜ್ಯ 75 ತಂಡದ 33ನೇ ಸ್ವಾತಂತ್ರ್ಯ ಹೋರಾಟಗಾರರ ಮನೆ ನಾಮಫಲಕ ಅನಾವರಣ ಕಾಯ೯ಕ್ರಮವು ನಡೆಯಿತು.
ಪತ್ರಕರ್ತ ಅರುಣ ಶಿರೂರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಗಣ್ಯರು ಪುಷ್ಪಾರ್ಚನೆ ಗೈದರು. ವಾಗ್ಮಿ ಆದಶ೯ ಕೆಲ ನಾಮಫಲಕ ಅನಾವರಣ ಮಾಡಿದರು.
ಭಾರತ ಸ್ವಾತಂತ್ರ್ಯ ಸಂಗ್ರಾಮಕ್ಕೆ ಕರಾವಳಿಯರ ಕೊಡುಗೆಯೊಂದಿಗೆ ಉಪ್ಪುಂದ ವೆಂಕಟ ಖಾವಿ೯ ಸ್ವಾತಂತ್ರ್ಯ ಹೋರಾಟದ ವಿಚಾರವನ್ನು ಕವಿತಾ ಆಚಾಯ೯ ಮುದೂರು ಪ್ರಸ್ತುತಪಡಿಸಿದರು.
ಕಾಯ೯ಕ್ರಮ ದ ಅಧ್ಯಕ್ಷತೆಯನ್ನು ಕುಂದ ಅಧ್ಯಯನ ಕೇಂದ್ರದ ಉಪ್ಪುಂದ ಚಂದ್ರಶೇಖರ ಹೊಳ್ಳರು ವಹಿಸಿದ್ದರು. ಗಣ್ಯರಾಗಿ ಪ್ರಸನ್ನ ಮಯ್ಯ, ಅಕ್ಷತಾ ಗಿರೀಶ್ ಐತಾಳ್, ಆಶಾಲತಾ ಮರವಂತೆ, ಗಣೇಶ್ ಖಾವಿ೯ ಕಿರಿಮಂಜೇಶ್ವರ ಮಾತನಾಡಿದರು.
ಕಾಯ೯ಕ್ರಮ ಸಂಚಾಲಕರಾದ ( ಸ್ವರಾಜ್ಯ 75) ಪ್ರದೀಪ ಕುಮಾರ್ ಬಸ್ರೂರು ವಿಚಾರ ರೂಪುರೇಷ ತಿಳಿಸಿದರು. ಪ್ರಸಾದ್ ಮೊಗವೀರ ನಿರೂಪಿಸಿ, ರಮಿತ್ ಕುಮಾರ್ ಧನ್ಯವಾದಗೈದರು.















