ಉಪ್ಪುಂದದಲ್ಲಿ ಮನೆ ಕಳವುಗೈದ ಮೂವರು ಆರೋಪಿಗಳ ಬಂಧನ, 3 ಲಕ್ಷ ಮೌಲ್ಯದ ಸೊತ್ತು ಸ್ವಾಧೀನ

Click Here

Call us

Call us

Call us

Call us

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಬೈಂದೂರು:
ಉಪ್ಪುಂದ ಗ್ರಾಮದ ಬಪ್ಪೆಹಕ್ಲುವಿನ ಜನಾರ್ದನ ಎಂಬುವವರ ಮನೆಗೆ ಮಾರ್ಚ್‌ 10ರ ರಾತ್ರಿ ಯಾರೂ ಇಲ್ಲದೇ ವೇಳೆ ಬಾಗಿಲು ಮುರಿದು ನುಗ್ಗಿ ಕೊಠಡಿಯ  ಕಪಾಟಿನಲ್ಲಿರಿಸಿದ  ಬೆಲೆಬಾಳುವ  ಚಿನ್ನ ಮತ್ತು ಬೆಳ್ಳಿಯ ಅಭರಣಗಳನ್ನು ನಗದು ಹಣ ಮತ್ತು ಲ್ಯಾಪ್‌ಟಾಪ್‌ ಕಳವು ಮಾಡಿಕೊಂಡು ಹೋಗಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಬೈಂದೂರು ಪೊಲೀಸರು ಯಶಸ್ವಿಯಾಗಿದ್ದಾರೆ.

Click Here

Call us

Click Here

ಮನೆ ಕಳವಾಗಿರುವ ಬಗ್ಗೆ  ಜನಾರ್ದನರವರು ಬೈಂದೂರು ಪೊಲೀಸ್‌ ಠಾಣೆಗೆ ನೀಡಿರುವ ದೂರಿನಂತೆ ಬೈಂದೂರು ವೃತ್ತ ನಿರೀಕ್ಷಕರಾದ ಸವಿತೃತೇಜ, ಬೈಂದೂರು ಠಾಣೆಯ ಪಿಎಸೈ ತಿಮ್ಮೇಶ್‌  ಬಿ.ಎನ್‌ ಮತ್ತು ನವೀನ ಪಿ. ಬೋರ್ಕರ್  ಹಾಗೂ ಸಿಬ್ಬಂದಿಗಳಾದ ಚಿದಾನಂದ, ಮಾಳಪ್ಪ, ಪರಯ್ಯ ಮಠಪತಿ , ನವೀನ್‌, ರವೀಂದ್ರ,  ಅಶೋಕ ರಾಥೋಡ್‌, ಶಂಕರ  ಮತ್ತು ಚಂದ್ರರವರ ತಂಡ  ಮಾರ್ಚ್‌ 30ರಂದು ಈ ಕೃತ್ಯದಲ್ಲಿ  ಭಾಗಿಯಾಗಿರುವ  ಆರೋಪಿಗಳಾದ ಯತಿರಾಜ್‌, ಉಪ್ಪುಂದ, ಮಹೇಶ್‌ ಯಳಜಿತ್‌ ಹಾಗೂ ಕಾರ್ತಿಕ್‌ ನಾಗೂರು ಎಂಬವರನ್ನು ಪತ್ತೆ ಮಾಡಿ ಬಂಧಿಸಿದ್ದಾರೆ.

ಆರೋಪಿಗಳು ಕಳವು ಮಾಡಿರುವ ಚಿನ್ನಾಭರಣ, ಲ್ಯಾಪ್‌ಟಾಪ್‌ ಮತ್ತು ಆರೋಪಿಗಳು ಕೃತ್ಯಕ್ಕೆ ಬಳಸಿಕೊಂಡಿರುವ ಮೊಬೈಲ್‌ಗಳು ಸೇರಿ ಅಂದಾಜು ಸುಮಾರು 3 ಲಕ್ಷ ಮೌಲ್ಯದ ಸೊತ್ತುಗಳನ್ನು  ಸ್ವಾಧೀನಪಡಿಸಿಕೊಳ್ಳಲಾಗಿರುತ್ತದೆ.  ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿರುತ್ತದೆ.

Leave a Reply