ನುಡಿಸಿರಿಯೇ ಒಂದು ಜನತಾ ವಿವಿ: ಸಮಾರೋಪ ಸಮಾರಂಭದಲ್ಲಿ ಸರ್ವಾಧ್ಯಕ್ಷ ಪ್ರೊ. ಟಿ.ವಿ. ವಿ ಅಭಿಮತ

Call us

Call us

Call us

ಮೂಡುಬಿದಿರೆ: ಒಂದು ರಾಷ್ಟ್ರದ ಅಭಿವೃದ್ಧಿಗೆ, ಶಾಂತಿಗೆ ನೆಮ್ಮದಿಯ ಬದುಕಿಗೆ ಯಾವೆಲ್ಲಾ ರೀತಿಯ ಕಾರ್ಯಗಳನ್ನು ರೂಪಿಸಬೇಕೋ ಅವೆಲ್ಲವನ್ನೂ ಆಳ್ವಾಸ್ ನುಡಿಸಿರಿ ಕಳೆದ ಹನ್ನೊಂದು ವರ್ಷಗಳಿಂದ ಸತತವಾಗಿ ನಿರ್ವಹಿಸಿಕೊಂಡು ಬಂದಿದೆ. ಇದಕ್ಕಾಗಿ ಇದನ್ನು ಜನತಾ ವಿಶ್ವವಿದ್ಯಾಲಯ ಎಂದು ಕರೆದರೂ ತಪ್ಪಾಗದು. ಹೀಗೆಂದು ನುಡಿದವರು ಆಳ್ವಾಸ್‌ರ ನುಡಿಸಿರಿ 2015ರ ಸರ್ವಾಧ್ಯಕ್ಷ ಪ್ರೊ. ಟಿ.ವಿ. ವೆಂಕಟಾಚಲ ಶಾಸ್ತ್ರೀ. ನುಡಿಸಿರಿ ಅಧ್ಯಕ್ಷೀಯ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಅವರು ಇಡೀ ನುಡಿಸಿರಿಯಲ್ಲಿ ನಡೆದ ಎಲ್ಲಾ ಗೋಷ್ಠಿಗಳು ಗಂಭೀರವಾಗಿ ತಲಸ್ಪರ್ಶಿಯಾಗಿದ್ದವು. ಶಿಸ್ತುಬದ್ಧ ಮತ್ತು ಉತ್ಕೃಷ್ಟ ಗುಣಮಟ್ಟದ ಕಾರ್ಯಕ್ರಮಗಳಿಗಾಗಿಯೇ ಇಂದು ಆಳ್ವಾಸ್ ನುಡಿಸಿರಿ ಇಡೀ ರಾಷ್ಟ್ರಕ್ಕೆ ಮಾದರಿಯಾಗಿದೆ ಎಂದರು.

Call us

Click Here

* ಆಳ್ವಾಸ್ ನುಡಿಸಿರಿ ನನಗೆ ಹೆಮ್ಮೆಯ ಗರಿ ಈ ಸಂದರ್ಭದಲ್ಲಿ ನನ್ನಿಂದ ಮಾತನಾಡಲು ಮಾತುಗಳು ಹೊರಬರುತ್ತಿಲ್ಲ. ಆದ್ದರಿಂದ ಒಂದು ಹಾಡಿನ ಮೂಲಕ ನನ್ನ ಋಣವನ್ನು ಅರ್ಪಿಸುತ್ತೇನೆ. – ವಿದ್ವಾನ್ ಆರ್. ಕೆ. ಪದ್ಮನಾಭ
* ಹೊಸತನದ ನಿಜವಾದ ಹುಡುಕಾಟಕ್ಕೆ ಈ ನುಡಿಸಿರಿ ನಾಂದಿಯಾಗಿದೆ. – ಡಾ. ಬನ್ನಂಜೆ ಗೋವಿಂದಾಚಾರ್ಯ
* ಕಂಡ ಕನಸುಗಳನ್ನು ಸರ್ವರಿಗೂ ಮಾದರಿಯಾಗುವ ರೀತಿಯಲ್ಲಿ ನನಸಾಗಿಸುವ ಒಬ್ಬ ದೊಡ್ಡ ಕನಸುಗಾರ ಡಾ. ಮೋಹನ ಆಳ್ವರು. – ಡಾ. ಸುಮತೀಂದ್ರ ನಾಡಿಗ
* ಇದು ಹೃದಯದಲ್ಲಿ ಯಾವಾಗಲೂ ಅಚ್ಚಳಿಯದೆ ಉಳಿಯುವ ಸನ್ಮಾನ. ಆಳ್ವರಿಂದ ಇತರರು ಕಲಿಯುವುದು ಸಾಕಷ್ಟಿದೆ. – ಎಸ್.ವಿ. ರಾಜೇಂದ್ರ ಸಿಂಗ್ ಬಾಬು.
* ಆಳ್ವಾಸ್ ನುಡಿಸಿರಿ ಪ್ರಶಸ್ತಿ ಅತ್ಯಂತ ಪೂಜನೀಯವಾದುದು. – ಡಾ. ಬಿ. ಎನ್. ಸುಮಿತ್ರಾಬಾಯಿ.
* ದೇಶದ ಅತ್ಯಂತ ಸಮೃದ್ಧ ಪ್ರಶಸ್ತಿಗಳಲ್ಲೊಂದಾದ ನುಡಿಸಿರಿ ಪುರಸ್ಕಾರವು ಸಮಗ್ರ ಕರ್ನಾಟಕದ ಸುಸಂಸ್ಕೃತಿಯ ಪ್ರತಿನಿಧಿ. – ಈಶ್ವರ ದೈತೋಟ

news nudisiri velidictory1 news nudisiri velidictory2 news nudisiri velidictory3 news nudisiri velidictory4 news nudisiri velidictory5

Leave a Reply