ವಿಶ್ವಮಾನ್ಯ ಕನ್ನಡಿಗ ಪ್ರಶಸ್ತಿಗೆ ಭಾಜನರಾದ ಲೇಖಕಿ ಜ್ಯೋತಿ ದೇವಾಡಿಗ

Call us

Call us

Call us

ಕುಂದಾಪುರ: ಮರವಂತೆಯ ಸಾಧಕಿ ಜ್ಯೋತಿ ಎಸ್. ದೇವಾಡಿಗ ಅವರಿಗೆ ‘ವಿಶ್ವಕವಿ ಕುವೆಂಪು ಕಾವ್ಯ ಪುರಸ್ಕಾರ’ ದೊರೆತಿದೆ. ಶಯದೇವಿಸುತೆ ಬಿರುದಾಂಕಿತ ಜ್ಯೋತಿ ಎಸ್. ಅವರು ಮೈಸೂರಿನಲ್ಲಿ ಆಯೋಜಿಸಲಾಗಿದ್ದ ವಿಶ್ವಕವಿ ಕುವೆಂಪು ನೆನಪಿನ ರಾಜ್ಯಮಟ್ಟದ ಕವನ ಸ್ವರ್ಧೆಯಲ್ಲಿ ವಿಜೇತರಾಗಿದ್ದು ಅವರ ಕವನಕ್ಕೆ ಈ ಪುರಸ್ಕಾರ ದೊರೆತಿದೆ.

Call us

Click Here

ಮೈಸೂರಿನಲ್ಲಿ ನಡೆದ ವಿಶ್ವಕವಿ ಕುವೆಂಪುರವರ 111ನೇ ಜನ್ಮದಿನ ಹಾಗೂ ಸಂಸ್ಥೆಯ 30ನೇ ವಾರ್ಷಿಕೋತ್ಸವದ ಅಂಗವಾಗಿ ವರಕವಿ ದ.ರಾ. ಬೇಂದ್ರೆ ಸವಿನೆನಪಿನ ರಾಜ್ಯಮಟ್ಟದ ಅದ್ಧೂರಿ ಸಾಹಿತ್ಯೋತ್ಸವ ಸಂಭ್ರಮದಲ್ಲಿ ಹೆಸರಾಂತ ಕವಿ ಹಾಗೂ ಹಿರಿಯ ಸಾಹಿತಿಗಳ ಸಮ್ಮುಖದಲ್ಲಿ ಅವರಿಗೆ ಈ ಪುರಸ್ಕಾರ ಪ್ರದಾನಿಸಲಾಯಿತು. (ಕುಂದಾಪ್ರ ಡಾಟ್ ಕಾಂ ಸುದ್ದಿ)

ಮೇರು ಪ್ರತಿಭೆಯ ಲೇಖಕರೂ, ಕಲಾರಾಧಕರೂ ಆದ ಜ್ಯೋತಿ ಅವರಿಗೆ ಈ ಹಿಂದೆ ಕಲೆ ಮತ್ತು ಯಕ್ಷಗಾನ, ಸಾಹಿತ್ಯ ಕ್ಷೇತ್ರದಲ್ಲಿನ ಅಪೂರ್ವ ಸಾಧನೆಗಾಗಿ, “ರಂಗಸ್ಠಳ ರತ್ನ ಪ್ರಶಸ್ತಿ” ಹಾಗೂ, “ವರ್ಷದ ಕನ್ನಡ ಬರಹಗಾರ ಪ್ರಶಸ್ತಿ -2015ನ್ನು ಪಡೆದಿದ್ದರು.

news maravanthe1 news maravanthe2

Leave a Reply