Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ವಿಶ್ವೇಶ್ವರ ಭಟ್ಟರ ‘ವಿಶ್ವವಾಣಿ’ಗೆ ಕುಂದಾಪುರದಲ್ಲಿ ಮೊದಲ ಪ್ರಚಾರ!
    ವಿಶೇಷ ವರದಿ

    ವಿಶ್ವೇಶ್ವರ ಭಟ್ಟರ ‘ವಿಶ್ವವಾಣಿ’ಗೆ ಕುಂದಾಪುರದಲ್ಲಿ ಮೊದಲ ಪ್ರಚಾರ!

    Updated:10/08/20162 Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    ಕುಂದಾಪ್ರ ಡಾಟ್ ಕಾಂ ಸುದ್ದಿ.

    Click Here

    Call us

    Click Here

    ವಿಭಿನ್ನವಾದ ಯೋಚನೆ ಹಾಗೂ ಬರಹದ ಮೂಲಕ ಕನ್ನಡ ಪತ್ರಿಕೋದ್ಯಮಕ್ಕೊಂದು ಹೊಸ ಆಯಾಮ ದೊರಕಿಸಿಕೊಟ್ಟವರಲ್ಲಿ ಸ್ಟಾರ್ ಸಂಪಾದಕ ವಿಶ್ವೇಶ್ವರ ಭಟ್ ಅವರ ಹೆಸರು ದೊಡ್ಡದು. ತನ್ನ ನಡೆ ನುಡಿಯಿಂದಲೇ ಸದ್ದು ಮಾಡುವ ಭಟ್ಟರು ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಅದು ಸುದ್ದಿಗೆ ಗುದ್ದು ನೀಡುವ ಹೊಸ ಸಾಹಸದೊಂದಿಗೆ! ಪತ್ರಿಕೆಗಳ ಬೆಲೆ ಗಗನಕ್ಕೇರುತ್ತಿದ್ದ ಕಾಲದಲ್ಲಿ, ಪತ್ರಿಕೆಗಳೆಂದರೆ ಹೀಗೆ ಮಾತ್ರ ಇರಬೇಕು ಎಂದು ಅಜ್ಜ ನೆಟ್ಟ ಆಲದ ಮರಕ್ಕೆ ನೇತು ಬಿದ್ದು ಹೊಸತನಕ್ಕೆ ಮಂಕು ಹಿಡಿಸಿ ಕುಳಿತಿದ್ದ ಹೊತ್ತಿನಲ್ಲಿ ಸಾಮಾನ್ಯನಿಗೂ ಪತ್ರಿಕೆ ದೊರಕುವ ಮತ್ತು ಓದುಗನಲ್ಲಿ ದಿನವೂ ಅಷ್ಟೇ ಪ್ರೀತಿಯಿಂದ ಪತ್ರಿಕೆಯನ್ನು ಸ್ವಾಗತಿಸುವ ಗುಣವನ್ನು ಬೆಳೆಸಿದರು ಭಟ್ಟರು. ವಿಜಯ ಕರ್ನಾಟಕ ಆರಂಭಗೊಂಡಾಗ ಅವರ ಪ್ರಯೋಗಶೀಲತೆಗೆ ತೆರೆದುಕೊಂಡ ರೀತಿ ಬೆರಗು ಮೂಡಿಸಿತ್ತು. ಅದು ಅಂಕಿಅಂಶಗಳಲ್ಲಿ ಮಾತ್ರವೇ ಆಗಿರದೇ ಜನರ ಮನಸ್ಸಿನಲ್ಲಿಯೂ ನಂ.1 ಪತ್ರಿಕೆಯಾಗಿ ಉಳಿದಿತ್ತು. ತಾನೇ ಕಟ್ಟಿಬೆಳೆಸಿದ ಪತ್ರಿಕೆಯಿಂದ ಹೊರಬಂದ ಮೇಲೆ, ಕನ್ನಡಪ್ರಭ ಹಾಗೂ ಸುವರ್ಣ ವಾಹಿನಿಯಲ್ಲಿ ಇದ್ದಷ್ಟೂ ದಿನ ಹೊಸ ಪ್ರಯೋಗಗಳಗೆ  ಒಗ್ಗಿಕೊಳ್ಳುತ್ತಾ ಬಂದ ಭಟ್ಟರು ಸದ್ದು ಮಾಡುವ ಪ್ರೌವೃತ್ತಿಯನ್ನೂ ಅಲ್ಲಿಯೂ ಮುಂದುವರಿಸಿದ್ದರು. ಈಗ ತನ್ನದೇ ಸಂಸ್ಥೆಯಡಿಯಲ್ಲಿ ತಮ್ಮದೇ ಪತ್ರಿಕೆ ಹಾಗೂ ಚಾನಲ್ ಆರಂಭಿಸಲು ತಯಾರಿ ನಡೆಸುತ್ತಿದ್ದಾರೆ. ಅಂದಹಾಗೇ ಇದೂ ಕೂಡ ಸುದ್ದಿಯಾಗುತ್ತಿದೆ. (ಕುಂದಾಪ್ರ ಡಾಟ್ ಕಾಂ ವರದಿ)

    ಹೌದು ವಿಶ್ವಾಕ್ಷರ ಮೀಡಿಯಾ ಎಂಬ ಸಂಸ್ಥೆಯ ಮೂಲಕ ಮೊದಲಿಗೆ ‘ವಿಶ್ವವಾಣಿ’ ಹೆಸರಿನ ಪತ್ರಿಕೆ ಸದ್ಯದಲ್ಲೇ ನಿಮ್ಮ ಕೈಸೇರಲಿದೆ. ಭಟ್ಟರು ಕನ್ನಡಪ್ರಭದಿಂದ ಹೊರಬಂದಾಗ ಅವರ ಬರಹಗಳು ಮಿಸ್ ಆದವಲ್ಲ ಎಂದು ಬೇಸರಿಸಿಕೊಂಡ ಅವರ ಓದುಗರಲ್ಲಿ, ಇವರ ಸುಮ್ಮನೆ ಕೂರುವವರಲ್ಲ. ಹೊಸದೇನೋ ಆರಂಭಿಸುತ್ತಾರೆ ಎಂಬ ಆಶಾಭಾವವೂ ಮೂಡಿತ್ತು. ಅದು ಕೊನೆಗೂ ಅದು ನಿಜವಾಗುತ್ತಿದೆ. ವಿಶ್ವಾಕ್ಷರದ ವಿಶ್ವೇಶ್ವರ ಭಟ್ಟರ ಸಾರಥ್ಯದಲ್ಲಿ ವಿಶ್ವವಾಣಿ ಬರುತ್ತಿದೆ. ಆರಂಭದಿಂದಲೂ ಸಾಮಾಜಿಕ ತಾಣಗಳನ್ನು ಸಮರ್ಥವಾಗಿ ಬಳಸಿಕೊಳ್ಳುತ್ತಿರುವ ಭಟ್ಟರು ಮತ್ತವರ ಟೀಂ ತಮ್ಮ ಕ್ರೀಯಾಶೀಲತೆಯನ್ನು ಇಲ್ಲಿಯೂ ಮುಂದುವರಿಸಿದ್ದಾರೆ. ಭಿನ್ನ ಭಿನ್ನವಾದ ಪೋಸ್ಟ್ ಗಳನ್ನು ಹಾಕುವ ಮೂಲಕ ಓದುಗರಲ್ಲಿ ಮತ್ತಷ್ಟು ಕುತೂಹಲ ಹೆಚ್ಚಿಸುತ್ತಿದ್ದಾರೆ. (ಕುಂದಾಪ್ರ ಡಾಟ್ ಕಾಂ ವರದಿ)

    ಕುಂದಾಪುರದಲ್ಲಿ ವಿಶ್ವವಾಣಿ ಪ್ರಚಾರ!
    ವಿಶ್ವೇಶ್ವರ ಭಟ್ಟರ ಪತ್ರಿಕೆ ವಿಶ್ವವಾಣಿಗೆ ಕುಂದಾಪುರದಲ್ಲೂ ಪ್ರಚಾರ ಆರಂಭಗೊಂಡಿದೆ! ಕುಂದಾಪುರದ ಚಿರಪರಿಚಿತ ಪತ್ರಿಕಾ ಏಜೆಂಟ್ ಶಂಕರಾಚಾರ್ಯ ಹಾಗೂ ಅವರೊಂದಿಗೆ ರಮೇಶ್ ಭಟ್ ತಮ್ಮ ಅಂಗಡಿ ಬಳಿ ಹಾಗೂ ಬೈಕಿಗೆ ತಮ್ಮ ಸ್ವಇಚ್ಛೆಯಿಂದ ವಿಶ್ವವಾಣಿಯ ಬ್ಯಾನರ್, ಸ್ಟಿಕ್ಕರ್ ಅಂಟಿಸಿಕೊಂಡಿದ್ದಾರೆ. ವಿಶ್ವವಾಣಿಯನ್ನು ಒಂದು ಬಗೆಯ ಕುತೂಹಲ ಮೂಡಿಸಿದೆ. ನಾವುಗಳೂ ಪತ್ರಿಕೆಯ ನಿರೀಕ್ಷೆಯಲ್ಲಿದ್ದೇವೆ. ಹಾಗಾಗಿ ಈ ಪ್ರಯತ್ನವೆಂದು ಹೇಳಿಕೊಂಡಿದ್ದಾರೆ.

    ಒಟ್ಟಿನಲ್ಲಿ ಆರಂಭಕ್ಕೆ ಮುನ್ನವೇ ಸಾಕಷ್ಟು ಸುದ್ದಿಯಲ್ಲಿರುವ ವಿಶ್ವೇಶ್ವರ ಭಟ್ಟರ ವಿಶ್ವವಾಣಿ ಹೇಗೆ ತನ್ನ ನಾವಿನ್ಯತೆಯನ್ನು ಕಾಯ್ದುಕೊಳ್ಳಲಿದೆ? ಓದುಗರು ಪ್ರತಿಕ್ರಿಯೆ ಹೇಗಿರಲಿದೆ ಎಂಬುದನ್ನು ಕಾದು ನೋಡಬೇಕಿದೆ. ಆ ದಿನಗಳೂ ದೂರವಿಲ್ಲ!

    Click here

    Click here

    Click here

    Call us

    Call us

    – ಸುನಿಲ್ ಹೆಚ್. ಜಿ. ಬೈಂದೂರು

    Vishwakshara media shankaracharyaVishwakshara mediaVishwakshara media4Vishwakshara media5Vishwakshara media3Vishwakshara media7Vishwakshara media13 Vishwakshara media12 Vishwakshara media11 Vishwakshara media10 Vishwakshara media9 Vishwakshara media job5 Vishwakshara media job4Vishwakshara media job2 Vishwakshara media job3Vishwakshara media job6
    Vishwakshara media shankaracharya1
    Vishwakshara media jobs1Vishwakshara media jobsVishwakshara media job7

    Like this:

    Like Loading...

    Related

    Vishwavani Vishweshwar Bhat
    Share. Facebook Twitter Pinterest LinkedIn Tumblr Telegram Email
    Editor Desk
    • Website
    • Facebook
    • X (Twitter)

    Related Posts

    ಸೈಕಲ್‌ನಲ್ಲಿ 3,300 ಕಿಮೀ ಕ್ರಮಿಸಿ ಲಡಾಕ್ ಯಾತ್ರೆ ಪೂರೈಸಿದ ಹಳ್ಳಿಹೊಳೆಯ ಯುವಕ ದಿನೇಶ್‌ ಬೋವಿ

    30/09/2025

    ಶಿಥಿಲ ಮನೆಯಲ್ಲಿಯೇ 12 ಮಂದಿ ವಾಸ. ಇದು ಅಸಹಾಯಕ ಕುಟುಂಬದ ಕಣ್ಣೀರ ಕಥೆ

    03/08/2024

    ಹುಲ್ಕಡಿಕೆ ಜನರ ಬದುಕಿಗಿಲ್ಲ ಭರವಸೆ! ಅಪಾಯಕಾರಿ ಹೊಳೆದಾಟಿ ಶಿಕ್ಷಣ ಪಡೆಯುತ್ತಿರುವ ವಿಶೇಷ ಚೇತನ ಮಕ್ಕಳು

    02/07/2024

    2 Comments

    1. ಅಡಿವೆಪ್ಪಾ ಸೋನ್ಯಾಗೋಳ on 19/01/2016 7:13 am

      ವಿಶ್ವವಾಣಿ ಮೂಲಕ ವಿಶ್ವೇಶ್ವರ ಭಟ್ಟರು ವಿನೂತನ ಪ್ರಯೋಗಗಳನ್ನು ವಿಶ್ವಕ್ಕೆ ಪರಿಚಯಿಸಲೆಂದು ಹಾರೈಸುವೆ

      Reply
    2. ಅಡಿವೆಪ್ಪಾ ಸೋನ್ಯಾಗೋಳ on 17/01/2016 5:38 am

      ವಿಶ್ವದೆಲ್ಲೆಡೆ ವಿಚಾರಗಳನ್ನು ವಿಸ್ತರಿಸುತ್ತಿರುವ ವಿಶ್ವೇಶ್ವರ ಸಾಹೇಬರಿಗೆ ವೈಭವಪೂರವಕ ಅಭಿನಂದನೆಗಳು.

      Reply

    Leave a ReplyCancel reply

    Call us

    Click Here

    Call us

    Call us

    Call us
    Highest Viewed Recently
    • ಎಸ್‌ಸಿಡಿಸಿಸಿ ಬ್ಯಾಂಕ್ ತೆಕ್ಕಟ್ಟೆ ಶಾಖೆ: ಗ್ರಾಹಕರಿಗೆ ಆರ್ಥಿಕ ಅರಿವು ಜಾಗೃತಿ ಕಾರ್ಯಕ್ರಮ
    • ಬೈಂದೂರು ಉತ್ಸವ: ಜಿಲ್ಲಾಧಿಕಾರಿ ಕಚೇರಿಯಲ್ಲಿ ಶಾಸಕ ಗಂಟಿಹೊಳೆ ನೇತೃತ್ವದಲ್ಲಿ ವಿವಿಧ ಇಲಾಖಾ ಅಧಿಕಾರಿಗಳ ಸಭೆ
    • ರಾಜ್ಯ ಮಟ್ಟದ ಐಡಿಯಾಥಾನ್ ಸ್ಪರ್ಧೆಯಲ್ಲಿ ಎಂಐಟಿ ಕುಂದಾಪುರದ ಅಧ್ಬುತ ಸಾಧನೆ
    • ಕುಂದಾಪುರ: ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಸಂಸ್ಥಾಪಕರ ದಿನಾಚರಣೆ
    • ಡಾ. ಬಿ.ಬಿ. ಹೆಗ್ಡೆ ಕಾಲೇಜು: ವಾರ್ಷಿಕ ಕ್ರೀಡಾಕೂಟ ಉದ್ಘಾಟನೆ

    © 2025 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.

     

    Loading Comments...
     

      %d