ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ಕುಂಭಾಸಿ ಆನೆಗುಡ್ಡೆ ವಿನಾಯಕ ಸಭಾಗೃಹದಲ್ಲಿ ಜೂ.28ರಂದು 20ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ʼನುಡಿಬೆಳಕು-2026ʼ ನಡೆಯಲಿದೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಉಮೇಶ್ ಪುತ್ರನ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿ, ಪ್ರಸ್ತುತ ಘಟಕವು ಸರಕಾರದ ಯಾವುದೇ ನೆರವಿಲ್ಲದೆ ಕಳೆದ ನಾಲ್ಕುವರೆ ವರ್ಷಗಳಲ್ಲಿ 4 ತಾಲೂಕು ಸಮ್ಮೇಳನ, 1 ಜಿಲ್ಲಾ ಸಮ್ಮೇಳನ, ವಿಜಯಕರ್ನಾಟಕ ಸಹಯೋಗದೊಂದಿಗೆ ವೈದ್ಯ ಸಾಹಿತ್ಯ ಸಮ್ಮೇಳನ ನಡೆಸಿದೆ. ನವಂಬರ್ನಲ್ಲಿ ಹಾಲಿ ಘಟಕದ ಪದಾಧಿಕಾರಿಗಳ ಅವಧಿ ಮುಗಿಯಲಿದ್ದು, ಅದರೊಳಗೆ ಇನ್ನೊಂದು ವಿಶಿಷ್ಟ ಸಮ್ಮೇಳನ ನಡೆಸಲು ತೀರ್ಮಾನಿಸಿದ್ದೇವೆ ಎಂದರು.
ಹಿರಿಯ ಪತ್ರಿಕೋದ್ಯಮಿ ಯು.ಎಸ್. ಶೆಣೈ ಅವರು ಸಮ್ಮೇಳನದ ಸರ್ವಾಧ್ಯಕ್ಷರಾಗಿರುವ ಹಿನ್ನೆಲೆಯಲ್ಲಿ ಸಮ್ಮೇಳನಕ್ಕೆ ನುಡಿಬೆಳಕು ಶೀರ್ಷಿಕೆ ಇರಿಸಿದ್ದೇವೆ. ಸಮ್ಮೇಳನದ ಪೂರ್ವ ತಯಾರಿ ನಡೆದಿದೆ.
ಈ ಬಾರಿ ಅದ್ಧೂರಿಯಾಗಿ ನಡೆಸಲು ತೀರ್ಮಾನಿಸಿದ್ದೇವೆ. ಕುಂಭಾಸಿ, ಕೊಲ್ಲೂರು ದೇವಸ್ಥಾನ ಅಲ್ಲದೆ ಸಾರ್ವಜನಿಕ ಸೇವಾ ಸಂಸ್ಥೆಗಳು ಸಮ್ಮೇಳನದ ಯಶಸ್ಸಿಗೆ ಸಹಕರಿಸು ತ್ತಿದ್ದಾರೆ. ಸಮ್ಮೇಳನದ ಸ್ವಾಗತ ಸಮಿತಿಯ ಗೌರವಾಧ್ಯಕ್ಷ ಆನೆಗುಡ್ಡೆ ದೇವಸ್ಥಾನದ ಆನುವಂಶೀಯ ಆಡಳಿತ ಧರ್ಮದರ್ಶಿ ಶ್ರೀರಮಣ ಉಪಾಧ್ಯಾಯ ಅವರ ಮಾರ್ಗ ದರ್ಶನದಲ್ಲಿ ಸಮ್ಮೇಳನ ನಡೆಯಲಿದೆ.
ಬೆಳಗ್ಗೆ 8ಗಂಟೆಗೆ ಸಮ್ಮೇಳನಕ್ಕೆ ವಿದ್ಯುಕ್ತ ಚಾಲನೆ ದೊರಕಲಿದೆ. ಆರಂಭದಲ್ಲಿ ಸಮ್ಮೇಳನಾಧ್ಯಕ್ಷರ ಪುರ ಮೆರವಣಿಗೆ, ಕನ್ನಡಾಂಬೆ ಭುವನೇಶ್ವರಿಯ ಮೆರವಣಿಗೆ, ನಂತರ ಉದ್ಘಾಟನೆ, ಗೋಷ್ಠಿಗಳು, ಸಾಂಸ್ಕೃತಿಕ ವೈವಿಧ್ಯ, ಸಾಧಕರಿಗೆ ಸನ್ಮಾನ, ಸಮಾರೋಪ ಜರುಗಲಿದೆ. ಇಡೀ ದಿನದ ಕಾರ್ಯಕ್ರಮ ದಲ್ಲಿ ಪುಸ್ತಕ ಮಳಿಗೆಗಳು ಸೇರಿದಂತೆ ಸಾಹಿತ್ಯ ಪೂರಕ ಚಟುವಟಿಕೆಗಳು ತೆರೆದುಕೊಳ್ಳಲಿವೆ.
ಹಿರಿಯ ಕವಿ ವಿಶ್ವಂಭರ ಉಪಾಧ್ಯಾಯರ ಜನ್ಮಶತಮಾನೋತ್ಸವ ಹಿನ್ನೆಲೆಯಲ್ಲಿ ಅವರ ಇಷ್ಟ ಕ್ಷೇತ್ರವಾಗಿದ್ದ ಗಮಕ ವಿಭಾಗದ ಸಾಧಕರನ್ನು ಗೌರವಿಸಲಾಗುತ್ತದೆ. ಸಮ್ಮೇಳನ ವನ್ನು ಹಿರಿಯ ಸಾಹಿತಿ ನರೇಂದ್ರ ರೈ. ದೇರ್ಲ ಉದ್ಘಾಟಿಸುವರು.
ಮೂಡಿ ಸಮ್ಮೇಳನ ಯಶಸ್ವಿಯಾಗಿ ಬರುವಲ್ಲಿ ಸಾಹಿತ್ಯಾಸಕ್ತರು, ಕನ್ನಡಾ ಭಿಮಾನಿಗಳು ಮತ್ತು ಸಾರ್ವಜನಿಕರು ಸಹಕರಿಸಬೇಕು ಎಂದರು. ಕಸಾಪ ಕುಂದಾಪುರ ಘಟಕ ಗೌರವ ಕಾರ್ಯದರ್ಶಿಗಳಾದ ದಿನಕರ ಆರ್. ಶೆಟ್ಟಿ ಅಕ್ಷತಾ ಗಿರೀಶ್ ಉಪಸ್ಥಿತರಿದ್ದರು.

















