ಕುಂದಾಪ್ರ ಡಾಟ್ ಕಾಂ ವರದಿ ಮೂಡುಬಿದಿರೆ: ಗುರುವಿನ ಆಟ, ಮಂತ್ರದ ಆಟ, ಗಾಳಿಯ ಆಟ, ಸಿದ್ಧಪ್ಪನ ಆಟ. ಈ ಚಮತ್ಕಾರ ಆಟ ಶಿವನು ಬಲ್ಲನು ತಿಳಿಯಿರಿ? ಎನ್ನುತ್ತಾ ಸಣ್ಣ ಗುಂಡೊಂದನ್ನು ಕೈಯಲ್ಲಿ ಹಿಡಿದು ಗಾಳಿಯಲ್ಲಿ ತೇಲಿಸಿ ಗಣಪತಿ, ಆಂಜನೇಯ, ಶಿವಲಿಂಗ, ಬಸವಣ್ಣನ ಮೂರ್ತಿ ತೆಗೆದು ತೋರಿಸುತ್ತಿದ್ದರೆ ಜನ ನಿಬ್ಬೆರಗಾಗಿ ನೋಡುತ್ತಿದ್ದರು. ಆಳ್ವಾಸ್ ನುಡಿಸಿರಿಗೆ ಆಗಮಿಸಿದ್ದ ಸುಡುಗಾಡು ಸಿದ್ಧರ ತಂಡ ಕ್ಯಾಂಪಸ್ನಲ್ಲಿ ನಡೆದು ಸಾಗುತ್ತಿದ್ದವರನ್ನು ಅವರತ್ತ ಸೆಳೆಯುತ್ತಾ, ತಮ್ಮ ಕೈಚಳಕ ತೋರುತ್ತಾ ಸುಡುಗಾಡು ಸಿದ್ಧರ ಕಲಾ ಪ್ರಕಾರಗಳನ್ನು ತೆರೆದಿಟ್ಟರು. ಹೊಸಪೇಟೆಯ ಕಲಾವಿದ ವಿರೂಪಾಕ್ಷಪ್ಪ ಅವರು ಎಳೆಂಟು ಗೋಲಿಗಳನ್ನು ಒಂದೊಂದಾಗಿ ನುಂಗುತ್ತಿದ್ದರು. ಅದರ ಮಧ್ಯೆಯೇ ಜನರ ಗಮನ ಹಿಡಿದಿಟ್ಟುಕೊಳ್ಳಲು ಸುತ್ತ ಕುಳಿತ ಇತರೆ ಕಲಾವಿದರು ತಮ್ಮ ಜೋಳಿಗೆಗಳಿಂದ ಬರುತ್ತಿದ್ದ ‘ಕುಯ್ ಕುಯ್’ ಸದ್ದನ್ನು ಅಡಗಿಸುತ್ತಿದ್ದರು. ಬಳಿಕ ನುಂಗಿದ ಎಲ್ಲಾ ಗೋಲಿಗಳನ್ನು ಕಲಾವಿದ ಗಂಟಲಿನಿಂದ ವಾಪಸ್ ತೆಗೆದು ವೀಕ್ಷಕರನ್ನು ಅಚ್ಚರಿ ಪಡಿಸಿದರು. ವಿರೂಪಾಕ್ಷಪ್ಪ ಅವರು ರಾಜ್ಯ ಪ್ರಶಸ್ತಿ ಪುರಸ್ಕೃತರು. ಬದುಕಿಗಾಗಿ ಹಿರಿಯರ ಬಳುವಳಿಯಾಗಿ ಬಂದ ಸುಡುಗಾಡು…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕಲಾಮನಸ್ಸುಗಳನ್ನು ಒಗ್ಗೂಡಿಸಿಕೊಂಡು ಕುಸುಮಾ ಫೌಂಡೇಶನ್ ನಾಗೂರು ಆಯೋಜಿಸುತ್ತಿರುವ ಕುಸುಮಾಂಜಲಿ- ೨೦೧೬ ಕಾರ್ಯಕ್ರಮದ ಪೂರ್ವಭಾವಿಯಾಗಿ ಹಮ್ಮಿಕೊಂಡ ಹಮ್ಮಿಕೊಂಡ ಗಾನಕುಸುಮ ಸಂಗೀತ ಕಾರ್ಯಕ್ರಮದ ಅಂತಿಮ ಸುತ್ತಿನ ಸೀನಿಯರ್ ವಿಭಾಗದಲ್ಲಿ ಬಿ.ಬಿ ಹೆಗ್ಡೆ ಕಾಲೇಜು ಕುಂದಾಪುರದ ವಿಜಯಲಕ್ಷ್ಮಿ, ಬಿ.ಬಿ ವಿಜೇತರಾಗಿದ್ದರೇ, ಜೂನಿಯರ್ ವಿಭಾಗದಲ್ಲಿ ವಕ್ವಾಡಿ ಗುರುಕುಲ ಪಬ್ಲಿಕ್ ಸ್ಕೂಲ್ನ ಬಿ.ಅನೀಶ್ ವಿಜೇತರಾಗಿದ್ದಾರೆ. ನಾಗೂರಿನ ಶ್ರೀ ಕೃಷ್ಣ ಲಲಿತ ಕಲಾ ಮಂದಿರದಲ್ಲಿ ನಡೆಯಿತು. ಸೆಮಿಫೈನಲ್ ಸುತ್ತಿನಲ್ಲಿ ಜೂನಿಯರ್ ಹಾಗೂ ಸೀನಿಯರ್ ವಿಭಾಗದಿಂದ ೧೫ ಗಾಯಕರನ್ನು ಫೈನಲ್ ಸ್ಪರ್ಧೆಗೆ ಆಯ್ಕೆಯಾದರೇ, ಫೈನಲ್ನಲ್ಲಿ ಇಬ್ಬರು ಆಯ್ಕೆಯಾದರು. ಸ್ಪರ್ಧೆಯ ತಿರ್ಪುಗಾರರಾಗಿ ಪ್ರಸಿದ್ಧ ಸಂಗೀತ ಬಾಲಚಂದ್ರ, ಉಡುಪಿ, ಗಾಯಕ ರಾಘವೇಂದ್ರ ಐತಾಳ ಬ್ರಹ್ಮಾವರ, ಗಾಯಕ ಪಲ್ಲವಿ ತುಂಗಾ ಕಾರ್ಯನಿರ್ವಹಿಸಿದರು. ಕುಸುಮಾಂಜಲಿ ೨೦೧೬ ರ ಚಾನೆಲ್ ಪಾರ್ಟ್ನರ್ ಮುಂಬಯಿ ಶುಭಸಾಗರ್ ಹೋಟೆಲ್ ಮಾಲಿಕರು ಲಕ್ಷ್ಮಣ ಪೂಜಾರಿ ದೀಪ ಬೆಳಗಿಸುದರ ಮೂಲಕ ಕಾರ್ಯಕ್ರಮವನ್ನು ಉಧ್ಘಾಟಿಸಿದರು. ಕುಸುಮ ಹೋಮ್ಸ್ ಪ್ರೈವೆಟ್ ಲಿಮಿಟೆಡ್ನ ನಿರ್ದೇಶಕ ಕುಸುಮಾವತಿ ಎಸ್. ಶೆಟ್ಟಿ, ನಿವೃತ್ತ ಶಿಕ್ಷಕಿ…
ಶಾಂಭವಿ ಎಂ. ಜೆ. | ಕುಂದಾಪ್ರ ಡಾಟ್ ಕಾಂ ವರದಿ ಮೂಡುಬಿದಿರೆ: ಯಾವುದೇ ಕಾರ್ಯಕ್ರಮದ ಯಶಸ್ಸು ಅಲ್ಲಿನ ಸಂಘಟಕರಷ್ಟೇ ಸ್ವಯಂಸೇಕರ ಮೇಲೆಯೂ ಅವಲಂಬಿಸಿದೆ. ನಾಡು ನುಡಿ ಸಂಸ್ಸೃತಿಯ ರಾಷ್ಟ್ರೀಯ ಸಮ್ಮೇಳನ ಆಳ್ವಾಸ್ ನುಡಿಸಿರಿಯಲ್ಲಿಯೂ ಆಳ್ವಾಸ್ ಸಂಸ್ಥೆಯ ಉದ್ಯೋಗಿಗಳು, ವಿದ್ಯಾರ್ಥಿಗಳು ಮತ್ತು ಸ್ವಯಂಸೇವಕರ ಒಗ್ಗಟ್ಟಾಗಿ ದುಡಿಯುತ್ತಿರುವ ಘಲವಾಗಿ ಪ್ರತಿವರ್ಷಯೂ ಕಾರ್ಯಕ್ರಮ ಯಶಸ್ವಿಯಾಗಿ ಜರುಗುತ್ತಿವೆ. ಆಳ್ವಾಸ್ ನುಡಿಸಿರಿಗೆ ದೂರ ದೂರದ ಊರುಗಳಿಂದ ಬರುವವರುನ್ನು ಮೊದಲು ಸ್ವಾಗತಿಸಿಕೊಳ್ಳುವುದು ವಿದ್ಯಾಗಿರಿ ಕ್ಯಾಂಪಸ್ ಆರಂಭದಲ್ಲಿಯೇ ಇರುವ ನೊಂದಣಿ ಕೇಂದ್ರ. ಮೂರು ದಿನದ ನುಡಿಸಿರಿಯಲ್ಲಿ ಪ್ರತಿಯೊಬ್ಬರನ್ನೂ ಸ್ವಾಗತಿಸಿಕೊಂಡು ಅವರಿಗೆ ವಸತಿ ವ್ಯವಸ್ಥೆ ಮಾಡಿ, ಅಗತ್ಯ ಮಾಹಿತಿ ನೀಡುವ ಜವಾಬ್ದಾರಿಯನ್ನು ಸ್ವಾಗತ ಸಮಿತಿಯ ಒಂದು ತಂಡ ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ. ನುಡಿಸಿರಿಗೆ ವಿವಿಧ ಜಿಲ್ಲೆಗಳಿಂದ ಬರುವವರಿಗಾಗಿ ಮೂರು ದಿನಗಳ ಕಾಲ ಪ್ರತ್ಯೇಕ ಕೌಂಟರ್ ತೆರೆಯಲಾಗಿದ್ದು ಬೆಳಿಗ್ಗೆ ೫ರಿಂದ ರಾತ್ರಿ ೧೧ಗಂಟೆಯ ತನಕವೂ ಕಾರ್ಯಾಚರಿಸುತ್ತಿದೆ. ಆನ್ಲೈನ್ ಮೂಲಕವೂ ನೊಂದಣಿ ಮಾಡಿಕೊಳ್ಳುವುದಕ್ಕೆ ಮೂರು ತಿಂಗಳ ಹಿಂದೆಯೇ ಅವಕಾಶ ಮಾಡಿಕೊಟ್ಟು ಅವರ ಮಾಹಿತಿ ಕಲೆಹಾಕಿ ಅಗತ್ಯ ವ್ಯವಸ್ಥೆಗಳನ್ನು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಗಂಗೊಳ್ಳಿ ಗ್ರಾಮ ಪಂಚಾಯತ್ನ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಅನೇಕ ಜನರಿಗೆ ವರ್ಷದಲ್ಲಿ ಕನಿಷ್ಠ ೧೦೦ ದಿನ ಉದ್ಯೋಗ ನೀಡಲು ಸರಕಾರ ಮುಂದಾಗಿರುವುದರಿಂದ ಜನರು ಸ್ವಾವಲಂಬಿ ಜೀವನ ನಡೆಸಲು ಸಹಾಯಕವಾಗಿದೆ. ಜನರು ಈ ಯೋಜನೆಯಡಿ ಹೆಸರನ್ನು ನೊಂದಾಯಿಸಿಕೊಂಡು ಈ ಯೋಜನೆ ಸಂಪೂರ್ಣ ಪ್ರಯೋಜನ ಪಡೆದುಕೊಳ್ಳಲು ಮುಂದಾಗಬೇಕು. ಈ ಯೋಜನೆಯಡಿ ನೀಡಲಾಗುತ್ತಿರುವ ಕೂಲಿ ಹಣವನ್ನು ಹೆಚ್ಚಿಸಲು ಸಂಬಂಧಪಟ್ಟ ಇಲಾಖೆಯ ಮೇಲೆ ಒತ್ತಡ ಹೇರಲು ಪ್ರಯತ್ನಿಸುವುದಾಗಿ ಜಿಲ್ಲಾ ಪಂಚಾಯತ್ ಸದಸ್ಯೆ ಶೋಭಾ ಜಿ.ಪುತ್ರನ್ ಹೇಳಿದರು. ಅವರು ಗಂಗೊಳ್ಳಿ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ೨೦೧೭-೧೮ನೇ ಸಾಲಿನ ಕಾರ್ಮಿಕ ಆಯ-ವ್ಯಯವನ್ನು ತಯಾರಿಸುವ ಬಗ್ಗೆ ಜರುಗಿದ ಗಂಗೊಳ್ಳಿ ಗ್ರಾಮ ಪಂಚಾಯತ್ನ ಗ್ರಾಮಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಯಶಸ್ಸಿಗಾಗಿ ಗ್ರಾಮದಲ್ಲಿ ವಾರ್ಡ್ಸಭೆ ಮತ್ತು ಗ್ರಾಮಸಭೆಯನ್ನು ಆಯೋಜಿಸಿ ಜನರಿಂದ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ…
ಮೂಡುಬಿದಿರೆ: ಜಾಗತಿಕ ಭಾಷೆಗಳು ನಮ್ಮನ್ನು ಆಳುತ್ತಿರುವ, ಆಕ್ರಮಿಸುತ್ತಿರುವ ಹೊತ್ತಿನಲ್ಲಿ ನಮ್ಮ ಸೋದರ ಭಾಷೆಯ ಆಗುಹೋಗುಗಳನ್ನು ಅರಿಯುವ ಹಿನ್ನೆಲೆಯಲ್ಲಿ ಆಳ್ವಾಸ್ ನುಡಿಸಿರಿಯಲ್ಲಿ `ಸೋದರ ಭಾಷೆಗಳು-ನಾಳೆಗಳ ನಿರ್ಮಾಣ’ ವಿಚಾರ ಗೋಷ್ಠಿ ನಡೆಯಿತು. ಗೋಷ್ಠಿಯಲ್ಲಿ ಕನ್ನಡ, ತಮಿಳು, ಮಲೆಯಾಳಂ ಭಾಷೆಗಳಲ್ಲಿ ನಡೆಯುತ್ತಿರುವ ಪ್ರಗತಿಪರ ಬದಲಾವಣೆಗಳ ಕುರಿತು ವಿದ್ವಾಂಸರು ತಮ್ಮ ವಿಚಾರವನ್ನು ಮಂಡಿಸಿದರು. ತಮಿಳು ಭಾಷೆ-ನಾಳೆಗಳ ನಿರ್ಮಾಣ ತಮಿಳು ಭಾಷೆಯಲ್ಲಾಗಿರುವ, ಆಗುತ್ತಿರುವ ತ್ವರಿತ ಬದಲಾವಣೆಗಳ ಕುರಿತು ಮಾತನಾಡಿದ ಡಾ. ತಮಿಳ್ ಸೆಲ್ವಿ, ಕರ್ನಾಟಕದಲ್ಲಿ ನಾಳೆಗಳನ್ನು ನಿರ್ಮಾಣ ಮಾಡುವ ಮೊದಲು ನಮ್ಮ ಸೋದರ ಭಾಷೆಗಳಲ್ಲಿ ಏನಾಗುತ್ತಿದೆಯೆಂಬುದನ್ನು ಅರಿತುಕೊಳ್ಳುವುದು ತುಂಬಾ ಮುಖ್ಯ. ವಾಸ್ತವದಲ್ಲಿ ನಮ್ಮಿಂದ ಮಾಡಲಾಗದ ಕಾರ್ಯವನ್ನು ತಮ್ಮ ಕಾವ್ಯಗಳ ಮೂಲಕ ಕವಿಗಳು ಮಾಡುತ್ತಾರೆ. ಭಾಷೆಗೆ ಆ ಅಂತಸ್ಸತ್ವ ಇದೆ. ಹೀಗಾಗಿ ನಾವು ಭಾಷೆಯನ್ನು ಅಭಿವೃದ್ಧಿಪಡಿಸುವತ್ತ ಹೆಚ್ಚಿನ ಗಮನ ಹರಿಸಬೇಕು. ಇಂದು ನಾವು ಒಳ್ಳೆಯ ಬೀಜಗಳನ್ನು ಬಿತ್ತಿದರೆ ನಾಳೆ ಅದು ಸದೃಢ ಹೆಮ್ಮರವಾಗಲು ಸಾಧ್ಯ. ಆದ್ದರಿಂದ ತುಂಬಾ ಜಾಗೃತಪ್ರಜ್ಞೆಯಿಂದ ನಾವು ಭಾಷೆ-ಸಂಸ್ಕೃತಿಯ ಕೆಲಸವನ್ನು ಮಾಡಬೇಕೆಂದು ಅಭಿಪ್ರಾಯಪಟ್ಟರು. `ತಮಿಳರು ತಮ್ಮ ಭಾಷೆಯನ್ನು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕಂಬದಕೋಣೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಾದ ಕಿರಣ 7ನೇ ತರಗತಿ ವಿಭಾಗ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, ಪಡೆದು ರಾಜ್ಯ ಮಟ್ಟಕ್ಕೆ, ಶಶಿಕಲಾ ೮೦ ಮೀಟರ್ ಅಡೆತಡೆ ಓಟದಲ್ಲಿ ತಾಲೂಕು ಮಟ್ಟದಲ್ಲಿ ಪ್ರಥಮ ಜಿಲ್ಲಾ ಮಟ್ಟಕ್ಕೆ, ಅಕ್ಷಯ ಎತ್ತರ ಜಿಗಿತದಲ್ಲಿ ತಾಲೂಕು ಮಟ್ಟದಲ್ಲಿ ದ್ವಿತೀಯ ಜಿಲ್ಲಾ ಮಟ್ಟಕ್ಕೆ ಆಯ್ಕೆ, ವಿಸ್ಮಿತಾ ೮೦ ಮೀಟರ್ ಅಡೆತಡೆ ಓಟದಲ್ಲಿ ತಾಲೂಕು ಮಟ್ಟದಲ್ಲಿ ತೃತೀಯ ಸ್ಥಾನ ಪಡೆದಿರುತ್ತಾರೆ.
ಶಾಂಭವಿ ಎಂ. ಜೆ | ಕುಂದಾಪ್ರ ಡಾಟ್ ಕಾಂ ವರದಿ ಮೂಡುಬಿದಿರೆ: ಸೊಂಡಿಲೆತ್ತಿ ಘೀಳಿಡುವ ಆನೆಗಳು, ಗರ್ಜಿಸಿ ಬೆದರಿಸುವ ಹುಲಿ ಸಿಂಹ, ಡಿಜೆ ಧ್ವನಿಗೆ ತಕ್ಕಂತೆ ತಲೆಯಾಡಿಸುವ ಚಿಂಪಾಂಜಿ. ದೂರದಿಂದ ನೋಡುವವರಿಗೆ ಎಲ್ಲವೂ ಜೀವಂತ ಪ್ರಾಣಿಗಳೇ. ಸಮೀಪಕ್ಕೆ ತೆರಳಿದರಷ್ಟೇ ತಿಳಿಯುವುದು ಅವು ಸುಂದರ ಮಾನವ ನಿರ್ಮಿತ ಕಲಾಕೃತಿಗಳು. ಆಳ್ವಾಸ್ ನುಡಿಸಿರಿಯಲ್ಲಿ ರತ್ನಾಕರವರ್ಣಿ ವೇದಿಕೆಯ ಮುಂಭಾಗದಲ್ಲಿದಲ್ಲಿ ನಿಲ್ಲಿಸಲಾಗಿದ್ದ ಈ ಆಕ್ಷನ್ ಕಲಾಕೃತಿಗಳು ಪ್ರೇಕ್ಷಕರ ಆಕರ್ಷಣೆಯ ಕೇಂದ್ರಬಿಂದು. ಕೇರಳದ ಜೇಡಿಗೋಬೆ ಕಲಾವಿದರಿಂದ ಮೂಡಿಬಂದ ಪ್ರಾಣಿಗಳ ಕಲಾಕೃತಿಗಳು ಹದಿನಾರು ಮಂದಿಯ ತಂಡದೊಂದಿಗೆ ಮೂರು ದಿನಗಳ ಕಾಲ ಪ್ರದರ್ಶನಕ್ಕಾಗಿ ವಿದ್ಯಾಗಿರಿ ಮೈದಾನದಲ್ಲಿ ನೆಲೆಕಂಡಿವೆ. ಕಲಾಕೃತಿಗಳನ್ನು ಮೆಟಲ್, ಕಬ್ಬಿಣ, ಪೈಬರ್ ಹಾಗೂ ಕಪ್ಪು ಬಟ್ಟೆಗಳನ್ನು ಬಳಸಿ ರಚಿಸಲಾಗಿದ್ದು ವಿದ್ಯುತ್ ಸಹಾಯದಿಂದ ಪ್ರಾಣಿಗಳು ಕಿವಿ, ಕತ್ತು, ಸೊಂಡಿಲುಗಳನ್ನು ಅಲ್ಲಾಡಿಸುತ್ತವೆ. ಕೆಳಭಾಗದಲ್ಲಿ ಗಾಲಿಗಳನ್ನು ಅಳವಡಿಸಿರುವುದರಿಂದ ಒಂದೆಡೆಯಿಂದ ಮತ್ತೊಂಡೆಗೆ ಸುಲಭವಾಗಿ ಸಾಗಿಸುತ್ತೇವೆ ಎನ್ನುತ್ತಾರೆ ಕೇರಳದ ಆದರ್ಶ್. ಆನೆ ಹುಲಿ ಸಿಂಹವನ್ನು ಕಾಡು, ಮೃಗಾಲದಲ್ಲಿ ನೋಡುತ್ತೇವೆ ಆದರೆ ಇಷ್ಟೊಂದು ಬೃಹದಾಕಾರದ ಪ್ರಾಣಿಗಳ ಪ್ರತಿರೂಪವನ್ನು ಹತ್ತಿರದಿಂದ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂದಾಪುರದ ಪ್ರತಿಷ್ಠಿತ ವಿದ್ಯಾಸಂಸ್ಥೆ ಗುರುಕುಲ ಪಬ್ಲಿಕ್ ಸ್ಕೂಲ್ ನಲ್ಲಿ ೧೧ನೇ ವಾರ್ಷಿಕೋತ್ಸವದ ಅಂಗವಾಗಿ ೨೦೧೬-೧೭ನೇ ಸಾಲಿನ ಸಾಂಸ್ಕ್ರತಿಕ ಸ್ಪರ್ಧೆಗಳ ವಿಜೇತರಿಗೆ ಬಹುಮಾನಗಳನ್ನು ನೀಡಿ ವಿತರಿಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಆಸರೆ ಚಾರಿಟೇಬಲ್ ಟ್ರಸ್ಟ್ನ ಮುಖ್ಯಸ್ಥೆ ಡಾ. ಆಶಾಜ್ಯೋತಿ ರೈ ರವರು ಮಾತನಾಡಿ ಋಗ್ವೇದದಲ್ಲಿ ಹೇಳಿರುವಂತೆ ಶಿಕ್ಷಣವು ವಿದ್ಯಾರ್ಥಿಗಳಿಗೆ ಸಂಸ್ಕ್ರತಿಯನ್ನು ಪ್ರತಿಬಿಂಬಿಸುವ ದಾರಿ ದೀಪವಾಗಬೇಕು. ಪ್ರತಿಯೊಬ್ಬ ವಿದ್ಯಾರ್ಥಿಯು ಮಹತ್ವಾಕಾಂಕ್ಷೆಯ ಗುಣಗಳನ್ನು ಬೆಳೆಸಿಕೊಳ್ಳಬೇಕು ಪಾಲಕ ಶಿಕ್ಷಕರೀರ್ವರು ವಿದ್ಯಾರ್ಥಿಗಳನ್ನು ಕೇವಲ ಹಣಕ್ಕಾಗಿ ವೃತ್ತಿಯನ್ನು ಮಾಡಲು ಪ್ರೇರೇಪಿಸದೇ, ಸಮಾಜದ ಮೌಲ್ಯಗಳನ್ನು ಆದರ್ಶಗಳನ್ನು ಹೊತ್ತು ಸಾಗುವ ವಾಹಕಗಳನ್ನಾಗಿ ರೂಪಿಸಬೇಕು ಕರೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಬಾಂಡ್ಯ ಎಜುಕೇಶನ್ ಟ್ರಸ್ಟ್ನ ಜಂಟಿ ಕಾರ್ಯ ನಿರ್ವಹಕಿ ಅನುಪಮ.ಎಸ್.ಶೆಟ್ಟಿ ಮಾತನಾಡಿ ಅತಿಯಾದ ಪ್ರೀತಿಯಿಂದ ಮಕ್ಕಳನ್ನು ದುರ್ಬಲರನ್ನಾಗಿ ಮಾಡದೇ ಸ್ವಾಭಾವಿಕವಾಗಿ ಮಕ್ಕಳನ್ನು ಬೆಳೆಯಲು ಅನುವು ಮಾಡಿಕೊಡಬೇಕು ಎಂದು ಪಾಲಕರಿಗೆ ಸಂದೇಶವನ್ನು ನೀಡಿದರು. ಬಾಂಡ್ಯ ಎಜ್ಯುಕೇಶನ್ ಟ್ರಸ್ಟ್ ನ ಜಂಟಿ ಕಾರ್ಯನಿರ್ವಹಣಾಧಿಕಾರಿ ಸುಭಾಶ್ಚಂದ್ರ ಶೆಟ್ಟಿ ಉಪಸ್ಥಿತರಿದ್ದರು. ಪದವಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಮೂಡುಬಿದಿರೆ: ಇಂದು ಸುಮಾರು ನಾಲ್ಕು ಮಿಲಿಯನ್ ಬಡ ಮಕ್ಕಳಿಗೆ ಆಹಾರ ಸಿಗುತ್ತಿಲ್ಲ. ಅವರಲ್ಲಿ ಸಾವಿರಾರು ಮಂದಿ ‘ನೈಡ್ಸ್’ ಎಂಬ ಖಾಯಿಲೆಯಿಂದ ಬಳಲುತಿದ್ದಾರೆ. ಪೌಷ್ಟಿಕ ಆಹಾರದ ಕೊರತೆಯಿಂದಾಗಿ ಗರ್ಭಿಣಿಯರಿಗೆ ಸರಿಯಾದ ಆಹಾರ ಸಿಗುತ್ತಿಲ್ಲ. ಶಾಲಾ ಮಕ್ಕಳಿಗೆ ಬಿಸಿ ಊಟ ಕೊಡುವುದಕ್ಕಿಂತ, ಗರ್ಭಿಣಿಯರಿಗೆ ಪೌಷ್ಠಿಕ ಆಹಾರ ನೀಡುವುದು ಸೂಕ್ತ ಎಂದು . ಎಂದು ಡಾ. ಬಿ.ಎಂ. ಹೆಗ್ಡೆ ಹೇಳಿದರು. ಆಳ್ವಾಸ್ ನುಡಿಸಿರಿಯ ರತ್ನಾಕರವರ್ಣಿ ವೇದಿಕೆ, ಪುಂಡಲೀಕ ಹಾಲಂಬಿ ಸಭಾಂಗಣದಲ್ಲಿ ‘ಆರೋಗ್ಯ ಮತ್ತು ಆಹಾರ’ ಎಂಬ ವಿಷಯದ ಕುರಿತು ವಿಶೇಷೋಪನ್ಯಾಸದಲ್ಲಿ ಅವರು ಮಾತನಾಡಿದರು. ಪ್ರತಿದಿನವೂ ಎಲ್ಲರಿಗೂ ಆಹಾರವು ದಕ್ಕುವಂತೆ ಮಾಡಿ, ನಾನು ಬದುಕಿ ಇತರರನ್ನೂ ಬದುಕಲು ಬಿಡುವಂತಹ ದೃಡಸಂಕಲ್ಪ ಮಾಡಬೇಕು. ಮನಸ್ಸು ಸಂತಸದಿಂದ ಇದ್ದರೆ ಆರೋಗ್ಯ ಚನ್ನಾಗಿರುತ್ತದೆ. ಸಂತಸ ಎನ್ನುವುದು ಕನ್ನಡಿ ಇದ್ದ ಹಾಗೆ. ಬೇರೆಯವರಿಗೆ ಖುಷಿ ಕೊಟ್ಟರೆ ಸಂತೋಷ ನಮ್ಮನ್ನು ಹುಡುಕಿಕೊಂಡು ಬರುತ್ತದೆ. ನುಡಿಸಿರಿಯಲ್ಲಿ ಇಂತಹ ಜನರನ್ನು ಉತ್ತೇಜನಗೊಳಿಸುವ ಕಾರ್ಯಕ್ರಮಗಳು ಇನ್ನಷ್ಟು ಆಗಲಿ ಎಂದರು.
