ಕುಂದಾಪುರ: ಖಾರ್ವಿಕೇರಿ ಶ್ರೀ ಮಹಾಂಕಾಳಿ ದೇವಸ್ಥಾನದ ಮಾರಿ ಪೂಜೆ ಉತ್ಸವದ ಸಂದರ್ಭ ಮಾಜಿ ಸಚಿವ, ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ರಾಜ್ಯ ಮೀನುಗಾರರ ಪ್ರಕೋಷ್ಠದ ಸಂಚಾಲಕ ಕಿಶೋರ್ ಕುಮಾರ್ ಕುಂದಾಪುರ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ದೇವಳದ ಅಧ್ಯಕ್ಷರಾದ ಜಯಾನಂದ ಖಾರ್ವಿ, ಉಪಾಧ್ಯಕ್ಷರಾದ ಪ್ರಕಾಶ್ ಆರ್. ಖಾರ್ವಿ, ಕುಂದಾಪುರ ಕ್ಷೇತ್ರ ಬಿಜೆಪಿ ಅಧ್ಯಕ್ಷ ರಾಜೇಶ್ ಕಾವೇರಿ, ರೋಟರಿ ಕ್ಲಬ್ ಕುಂದಾಪುರ ಸನ್ರೈಸ್ ಅಧ್ಯಕ್ಷ ದಿನಕರ ಪಟೇಲ್, ದೇವಳದ ಮೋಕ್ತೆಸರರಾದ ಪಾಂಡು ಸಾರಂಗ್, ರತ್ನಾಕರ ಖಾರ್ವಿ, ದಾಸ ಹೆಗ್ಡೆ, ಶೇಖರ ಖಾರ್ವಿ, ಮಂಜುನಾಥ ಖಾರ್ವಿ, ಗಣಪತಿ ಪೀತಾಂಬರ ಇನ್ನಿತರರು ಉಪಸ್ಥಿತರಿದ್ದರು. ಮಾರಿ ಪೂಜೆ ಉತ್ಸವದ ಅಂಗವಾಗಿ ದೇವಳದಲ್ಲಿ ವಿಶೇಷ ಪೂಜೆ, ಪುಷ್ಪಾಲಂಕಾರ, ಭಕ್ತಾಧಿಗಳಿಗೆ ವಿಶೇಷ ಪ್ರಸಾದ ವಿತರಣೆ ಮಾಡಲಾಯಿತು. ಸಾವಿರಾರು ಭಕ್ತರು ಶ್ರೀದೇವಿಯ ದರ್ಶನ ಪಡೆದು ಪೂಜೆ ಸಲ್ಲಿಸಿದರು.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ. ಕುಂದಾಪುರ: ಕನ್ನಡ ಚಲನಚಿತ್ರರಂಗದಲ್ಲಿ ವಾಣಿ ಜಯರಾಂ ಹೆಸರು ಚಿರಪರಿಚಿತ. ಸಂಗೀತ ಲೋಕದಲ್ಲಿ ತನ್ನ ಗಾನ ಮಾಧುರ್ಯದಿಂದ ಶೋತೃಗಳನ್ನು ಮಂತ್ರ ಮುಗ್ಧರನ್ನಾಗಿಸಿ ಕೋಟ್ಯಾಂತರ ಜನರ ಹೃದಯದಲ್ಲಿ ಸ್ಥಾನ ಪಡೆದ ಗಾನ ಕೋಗಿಲೆ ವಾಣಿಜಯರಾಂ. ಕರ್ನಾಟಕ ಮಾತ್ರವಲ್ಲದೇ ದಕ್ಷಿಣ ಭಾರತದಲ್ಲೇ ಹೆಸರು ವಾಸಿಯಾದ ಗಾಯಕಿ ಇವರು. ಕನ್ನಡ, ಮಲಯಾಳಿ, ತೆಲುಗು, ಹಿಂದಿ, ಗುಜರಾತಿ ಸೇರಿದಂತೆ 19 ಭಾಷೆಗಳಲ್ಲಿ ತಮ್ಮ ಗಾನ ಸಿಂಚನವನ್ನು ಹರಡಿದ ಹೆಗ್ಗಳಿಗೆ ಇವರದು. ಇಂತಹ ಅಪ್ರತಿಮ ಸಾಧಕಿಯನ್ನು ಕುಂದಾಪುರಕ್ಕೆ ಕರೆತರುವ ಪ್ರಯತ್ನ ಮಾಡಿ ವಾಣಿಜಯರಾಂ ಅವರನ್ನು ನೇರವಾಗಿ ನೋಡುವ ಮತ್ತು ಅವರ ಗಾನ ಮಾಧುರ್ಯದ ಸವಿಯನ್ನು ನೇರವಾಗಿ ಅನುಭವಿಸಲು ಅವಕಾಶ ಕಲ್ಪಿಸಿಕೊಟ್ಟವರು ಕುಂದಾಪುರದ ಖ್ಯಾತ ವೈದ್ಯ ಹಾಗೂ ಗಾಯಕ ಡಾ. ಸತೀಶ್ ಪೂಜಾರಿಯವರು. ಅವರಿಗೆ ಸಾಥ್ ನೀಡಿದ್ದು ಖ್ಯಾತ ವೈದ್ಯ ಡಾ. ಪ್ರಕಾಶ್ ತೋಳಾರ್ ಮತ್ತು ಸಹನಾ ಡೆವೆಲಪರ್ಸ್ನ ವ್ಯವಸ್ಥಾಪಕ ನಿರ್ದೇಶಕ ಸುರೇಂದ್ರ ಶೆಟ್ಟಿ. ವಾಣಿಯ ಗಾನಾಮೃತ ಸವಿದ ಅಭಿಮಾನಿಗಳು : ಸಂಘಟಕರು ಕಾರ್ಯಕ್ರಮದ ವೇದಿಕೆಗೆ ಕಹಳೆ…
ಕುಂದಾಪ್ರ ಡಾಟ್ ಕಾಂ ವರದಿ ಕೊಲ್ಲೂರು: ಇಲ್ಲಿನ ಶ್ರೀ ಮೂಕಾಂಬಿಕಾ ದೇವಳದ ಚಿನ್ನಾಭರಣ ಕಳವು ಪ್ರಕರಣದ ತನಿಕೆ ಮುಂದುವರಿದ್ದು ಸುಮಾರು 60ಲಕ್ಷ ರೂ.ಗಿಂತ ಹೆಚ್ಚಿನ ಮೌಲ್ಯದ ಚಿನ್ನಾಭರಣಗಳನ್ನು ಕಳವುಗೈದಿರುವುದು ಸಷ್ಟವಾಗಿದೆ. ಪ್ರಕರಣದ ಆರೋಪಿ ಶಿವರಾಮ ಮಡಿವಾಳನನ್ನು ಬಂಧಿಸಿ ನ್ಯಾಯಾಲಕ್ಕೆ ಹಾಜರುಪಡಿಸಿದ್ದು ಏಳು ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಕುಂದಾಪುರ ಡಿವೈಎಸ್ಪಿ ನೇತೃತ್ವದಲ್ಲಿ ಆರೋಪಿಯ ತನಿಕೆ ನಡೆಸುತ್ತಿದ್ದು ಪ್ರಕರಣದ ಒಂದೊಂದೇ ಮಾಹಿತಿಗಳು ಬೆಳಕಿಗೆ ಬರುತ್ತಿದೆ. [quote font_size=”16″ bgcolor=”#ffffff” bcolor=”#dd9933″ arrow=”yes” align=”right”]* ಕೊಲ್ಲೂರು ದೇವಳದ ಚಿನ್ನಾಭರಣ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯ ವಿಚಾರಣೆ ಪ್ರಗತಿಯಲ್ಲಿದ್ದು, ಸ್ವಲ್ಪ ಪ್ರಮಾಣದ ಒಡವೆಗಳನ್ನು ಈಗಾಗಲೇ ವಶಪಡೆಡಿದ್ದು ಉಳಿದವುಗಳನ್ನು ವಿವಿಧ ಹಣಕಾಸು ಸಂಸ್ಥೆಗಳಲ್ಲಿ ಅಡಮಾನವಿಟ್ಟಿರುವ ಬಗ್ಗೆ ಆಪಾದಿತನಿಂದ ಮಾಹಿತಿ ಪಡೆಯಲಾಗಿದೆ. ಶೀಘ್ರದಲ್ಲಿಯೇ ಅವುಗಳನ್ನು ಸ್ವಾದೀನಪಡಿಸಿಕೊಳ್ಳುವುದರೊಂದಿಗೆ ಈ ಕೃತ್ಯದಲ್ಲಿ ಆತನೊಂದಿಗೆ ಇತರರು ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆ ತನಿಕೆ ನಡೆಸಲಾಗುತ್ತಿದೆ. – ಕೆ. ಅಣ್ಣಾಮಲೈ, ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ.[/quote] ದೇವಳದ ತಿಜೋರಿಯಲ್ಲಿದ್ದ ಒಟ್ಟು 48 ಬಗೆಯ ಒಡವೆಗಳ ಪೈಕಿ ಒಟ್ಟು 9 ನಮೂನೆಯ…
ಕುಂದಾಪುರ: ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ಬೈಂದೂರು ಕ್ಷೇತ್ರದ ಶಾಸಕ ಕೆ. ಗೋಪಾಲ ಪೂಜಾರಿ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆಯಲ್ಲಿ ಉಡುಪಿ ಜಿಲ್ಲೆಯಲ್ಲಿ ಪಕ್ಷ ನಿರೀಕ್ಷಿತ ಗೆಲುವು ಸಾಧಿಸದೆ ತೀವ್ರ ಮುಖಭಂಗ ಅನುಭವಿಸಿರುವ ಹಿನ್ನೆಲೆಯಲ್ಲಿ ಸೋಲಿನ ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ ಕೊಲ್ಲೂರು: ಇಲ್ಲಿನ ಪ್ರಸಿದ್ಧ ಶ್ರೀ ಮೂಕಾಂಬಿಕಾ ದೇವಳದ ಆಭರಣ ಕಳವು ಪ್ರಕರಣ ನಿರೀಕ್ಷಿತ ತಿರುವು ಪಡೆದುಕೊಂಡಿದ್ದು, ಚಿನ್ನಾಭರಣ ಕಳವುಗೈದ ಘಟನೆ ಬಯಲಿಗೆ ಬರುತ್ತಿದ್ದಂತೆ ತಿಜೋರಿಯ ಕೀಲಿಕೈಯೊಂದಿಗೆ ಕಾಣಿಯಾಗಿದ್ದ ಆಪಾದಿತ ದೇವಳದ ಸಿಬ್ಬಂಧಿ ಶಿವರಾಮ ಮಡಿವಾಳ ಎಂಬುವವರನ್ನು ಬಂಧಿಸಿ ವಿಚಾರಣೆ ನಡೆಸಿದ ಬಳಿಕ ಸಾರ್ವಜನಿಕರ ಸಮ್ಮುಖದಲ್ಲಿಯೇ ದೇವಳದ ತಿಜೋರಿಯನ್ನು ತೆರೆದು ನೋಡಿದಾಗಿ ಕಳವಾಗಿರುವ ಚಿನ್ನಾಭರಣಗಳ ಕುರಿತು ಸ್ಪಷ್ಟ ಮಾಹಿತಿ ಲಭ್ಯವಾಗಿದೆ. ಶಿವರಾಮ ಮಡಿವಾಳರ ಕೈಗೆ ತಿಜೋರಿ ಕೀಲಿಕೈ ದೊರೆತಾಗಿನಿಂದ ಇಲ್ಲಿಯವರೆಗೆ ದೇವಳಕ್ಕೆ ಹರಕೆಯ ರೂಪದಲ್ಲಿ ಸಂದಾಯವಾಗಿರುವ 47 ವಿವಿಧ ಬಗೆಯ ಚಿನ್ನಾಭರಣ ಬಗ್ಗೆ ರಶೀದಿಯಲ್ಲಿ ದಾಖಲಾಗಿದೆ. ಆದರೆ ತಿಜೋರಿ ತೆರೆದಾಗ 12 ಬಗೆಯ ಚಿನ್ನಾಭರಣದ ಹಾಗೂ ಇತರೆ ಬೆಳ್ಳಿಯ ಆಭರಣಗಳು ಮಾತ್ರ ದೊರೆತಿವೆ. ಉಳಿದ ಆಭರಣಗಳು ಖೋತಾ ಆಗಿರುವುದು ಸ್ಪಷ್ಟವಾಗಿದೆ. ಹಲವೆಡೆ ಸಾಲ ಮಾಡಿಕೊಂಡಿರುವ ಶಿವರಾಮ್, ಸಾಲ ತೀರಿಸಲು ದೇವಳದ ಚಿನ್ನಾಭರಣಗಳನ್ನೇ ಒಂದೊಂದಾಗಿ ಎಗರಿಸಿ ಬ್ಯಾಂಕಿನಲ್ಲಿ ಅಡವಿಟ್ಟಿರು ಬಗ್ಗೆ ಮಾಹಿತಿ ಲಭ್ಯವಾಗಿದೆ. ಕುಂದಾಪ್ರ ಡಾಟ್ ಕಾಂ ಸುದ್ದಿ ಹಲವರು ಭಾಗಿಯಾಗಿರುವ…
ಕುಂದಾಪ್ರ ಡಾಟ್ ಕಾಂ ವರದಿ ಕುಂದಾಪುರ,ಫೆ.24: ಇಲ್ಲಿನ ಕೋಟೇಶ್ವರ ಕೈಗಾರಿಕಾ ವಲಯದಲ್ಲಿರುವ ದಾಮೋದರ ಕೆಮಿಕಲ್ ಇಂಡಸ್ಟ್ರಿಗೆ ಬೆಂಕಿ ತಗುಲಿ ಇಡಿ ಕಾರ್ಖಾನೆಯ ಭಸ್ಮಗೊಂಡ ಘಟನೆ ಇಂದು ಬೆಳಿಗ್ಗೆ 11:30ರ ಸುಮಾರಿಗೆ ನಡೆದಿದೆ. ಕುಂದಾಪ್ರ ಡಾಟ್ ಕಾಂ ವರದಿ ಘಟನೆಯ ವಿವರ: ವಾಹನದ ಬ್ರೇಕ್ ಲೈನರ್ಗೆ ಬಳಸುವ ಆಯಿಲ್ ತಯಾರಿಸುವ ಕಾರ್ಖಾನೆಯ ಗೋಡನ್ನಲ್ಲಿ ಸುಮಾರು ೪೦ ಟನ್ ಆಯಿಲ್ ಶೇಖರಿಸಿಡಲಾಗಿತ್ತು. ಒಂದೇ ಸಮನೆ ಏರಿದ ಉಷ್ಟಾಂಶದಿಂದಾಗಿ ಆಯಿಲ್ ಟ್ಯಾಂಕಿಯಲ್ಲಿ ಬೆಂಕಿ ಕಾಣಿಸಿಕೊಂಡು ಇಡೀ ಕ್ಷಣಾರ್ಧದಲ್ಲಿ ಇಡೀ ಕಾರ್ಖಾನೆಗೆ ಆವರಿಸಿಕೊಂಡಿತ್ತು ಎನ್ನಲಾಗಿದೆ. ಏಕಾಏಕಿ ಬೆಂಕಿಯ ಧಗೆಯನ್ನು ಗಮನಿಸಿ ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂಧಿಗಳಿಗೆ ಸುದ್ದಿ ಮುಟ್ಟಿಸಲಾಯಿತು. ಘಟನೆಯಲ್ಲಿ ಸುಮಾರು ಐವತ್ತು ಲಕ್ಷಕ್ಕೂ ಅಧಿಕ ಮೌಲ್ಯದ ಸೊತ್ತುಗಳಿಗೆ ಹಾನಿಯಾಗಿರಬಹುದು ಎಂದು ಅಂದಾಜಿಸಲಾಗಿದೆ. ಅಗ್ನಿಶಾಮಕ ದಳದ ಸಿಬ್ಬಂಧಿಗಳು ಬೆಂಕಿ ನಂದಿಸುವಲ್ಲಿ ಹರಸಾಹಸ ಪಡಬೇಕಾಯಿತು. ದಾಮೋದರ ಕೆಮಿಕಲ್ ಇಂಡಸ್ಟ್ರೀಸ್ ಯಘ್ನೇಶ್ ಭಟ್ ಅವರ ಒಡೆತನಕ್ಕೆ ಸೇರಿದ್ದಾಗಿದೆ. ಕುಂದಾಪ್ರ ಡಾಟ್ ಕಾಂ ವರದಿ. ಕುಂದಾಪುರ ಪೊಲೀಸರು ಸ್ಥಳಕ್ಕಾಗಮಿಸಿ ಘಟನೆಯ ಬಗ್ಗೆ ಮಾಹಿತಿ…
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಪುರಸಭೆ ಅಭಿವೃದ್ಧಿಗೆ ದುಡ್ಡಿಲ್ಲ ಅಂತ್ರಲ್ಯಾ.. ಹಂಗಂದ್ರೆ ಹ್ಯಾಂಗೆ. ನಮ್ ಕಾಲದ್ಹಾಗೆ ಅಭಿವೃದ್ಧಿ ಮಾಡ್ಲಿಲ್ಯಾ? ನಮ್ ಕಿಸಿಗ್ ಹಾಯ್ಕಂಬುಕೆ ದುಡ್ಡ್ ಕೇಂತಿಲ್ಲ. ಪುರಸಭೆ ಅಭಿವೃದ್ಧಿಗೆ ಕೇಂತಿಪ್ಪುದ್. ನಿಮ್ದ್ ಸಚಿವರಿದ್ರ್, ಸರಕಾರ ಇತ್. ಹಾಂಗಿದ್ರೂ ಅನುದಾನ ಕೇಂಬುಕ್ ಹಿಂದಾಯ್ಕಂಬ್ದ್ ಯಾಕೆ? ನಮ್ ಅಧಿಕಾರ ಇಪ್ಪತಿಗೆ ಪುರಸಭೆಗೆ ಮಸ್ತ್ ಅನುದಾನ ತಂದಿತ್. ಅನುದಾನ್ ತಂದಿತ್ ಅಂದ್ಹೇಳಿ ಹೇಳ್ತ್ರಿ ಬಿಟ್ರೆ ಏಷ್ಟ್ ಅಂದೇಳಿ ಹೇಳಿ ಹೇಳುದಿಲ್ಲೆ. ೫ ವರ್ಷದಲ್ಲ್ ೫ ಕೋಟಿ ಹಣ ತಂದ್ಕಂಡ್ ಅನುದಾನ ತಂದಿತ್ ಅಂತ್ರಿ. ಆಗ ನಿಮ್ದೇ ಸರ್ಕಾರ ಇದ್ದಿತ್ ಆರೂ ಜಾಸ್ತಿ ಅನುದಾನ ತಪ್ಪುಕ್ ಆಯಿಲ್ಲೆ ನಿಮ್ಗೆ. ನಮ್ ಸರ್ಕಾರ ಬಂದ್ ಎರ್ಡೂವರೇ ವರ್ಷ ಆಯ್ತ್ ಅಷ್ಟೇ. ಇನ್ನು ಅನುದಾನ ಕೊಡ್ತೆ ಅಂದೇಳಿ ಉಸ್ತುವಾರಿ ಸಚಿವ್ರ್ ಹೇಳಿರ್. ಇನ್ನೂ ಎರ್ಡೂವರಿ ವರ್ಷ ಇತ್. ನಾವು ಅನುದಾನ್ ತಕಬತ್ತ್. ಅಭಿವೃದ್ಧಿ ಮಾಡಿ ತೋರ್ಸತ್ ಕಾಣಿ. ಕುಂದಾಪುರ ರಿಂಗ್ ರಸ್ತೆಯ ಅಭಿವೃದ್ಧಿಯಗಾಗಿ ಪುರಸಭೆ ಡಾ. ವಿ.ಎಸ್. ಆಚಾರ್ಯ…
ಕುಂದಾಪುರ ತಾಲೂಕು
ಕುಂದಾಪುರ: ಕಾಕತಾಳಿಯವೋ ಏನೋ. ಫೆ.23ರ ಬೆಳಿಗ್ಗೆ ಬೈಂದೂರು ಕ್ಷೇತ್ರ ಬಿಜೆಪಿ ಅಧ್ಯಕ್ಷ ಸುಕುಮಾರ ಶೆಟ್ಟಿ ಅವರ ಮನೆಯಲ್ಲಿ ಅರಳಿದ ಕಮಲ ಗೆಲುವಿನ ಮುನ್ಸೂಚನೆ ನೀಡಿತ್ತು. ನಾಲ್ಕು ಜಿಪಂ ಸೀಟುಗಳ ನಿರೀಕ್ಷೆಯಲ್ಲಿದ್ದ ಅಧ್ಯಕ್ಷರಿಗೆ ಅಂದು ಒಂದು ಕ್ಷೇತ್ರ ಬೋನಸ್ ದೊರೆತಿತ್ತು. ಹದಿನೈದು ತಾಲೂಕು ಪಂಚಾಯತ್ ಕ್ಷೇತ್ರಗಳಲ್ಲಿಯೂ ಕಮಲ ಅರಳಿತ್ತು.
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಕಳೆದ ಫೆ.20 ರಂದು ನಡೆದ ಕುಂದಾಪುರ ತಾಪಂ, ಜಿಪಂ ಚುನವಾವಣೆ ಮತ ಎಣಿಕೆ ಕುಂದಾಪುರ ಭಂಡಾರ್ಕಾರ್ಸ್ ಕಾಲೇಜ್ನಲ್ಲಿ ಬೆಳಗ್ಗೆ 8 ರಿಂದ ಆರಂಭವಾಗಲಿದೆ. ಕುಂದಾಪುರ ಕ್ಷೇತ್ರದ ಹತ್ತು ಜಿಲ್ಲಾ ಪಂಚಾಯತ್ ಮತ್ತು ಮುವತ್ತೇಳು ತಾಲೂಕ್ ಪಂಚಾಯತಿಗೆ ಚುನಾವಣೆ ನಡೆದಿದ್ದು ತಾಪಂ ಒಟ್ಟು 37 ಸ್ಥಾನಕ್ಕ ಒಟ್ಟು 99 ಅಭ್ಯರ್ಥಿಗಳು ಮತ್ತು ಹತ್ತು ಜಿಲ್ಲಾ ಪಂಚಾಯತ್ ಕ್ಷೇತ್ರಕ್ಕೆ ಒಟ್ಟು 29 ಅಭ್ಯರ್ಥಿಗಳು ಚುನಾವಣೆ ಕಣದಲ್ಲಿದ್ದಾರೆ. ಮಾಜಿ ಜಿಪಂ ಅಧ್ಯಕ್ಷ ರಾಜು ಪೂಜಾರಿ, ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಬಾಬು ಶೆಟ್ಟಿ ತಗ್ಗರ್ಸೆ, ಗೌರಿ ದೇವಾಡಿಗ, ಮಾಜಿ ಜಿಪಂ ವಿರೋಧ ಪಕ್ಷದ ನಾಯಕ ಅನಂತ ಮೋವಾಡಿ, ಮಾಜಿ ಜಿಪಂ ಸದಸ್ಯರಾದ ಹರ್ಕೂರು ಮಂಜಯ್ಯ ಶೆಟ್ಟಿ, ಮದನ್ ಕುಮಾರ್, ತಾರಾನಾಥ ಶೆಟ್ಟಿ, ಬಾಳೆಮನೆ ಸಂತೋಷ್ ಕುಮಾರ್ ಶೆಟ್ಟಿ, ಸಾಧು ಎಸ್.ಬಿಲ್ಲವ, ರಾಜು ದೇವಾಡಿಗ ಅವರ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರವಾಗಿದೆ. ಮತ ಏಣಿಕೆ ಕೇಂದ್ರದಲ್ಲಿ ಎರಡು ಕೊಠಡಿಗಳಿದ್ದು, ೧೫ ಟೇಬಲ್ಗಳಲ್ಲಿ…
