Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ತಾಲೂಕಿನ ಶಿವಳ್ಳಿ ಗ್ರಾಮದ ಪೆರಂಪಳ್ಳಿ ಎಂಬಲ್ಲಿರುವ ಸಾಯಿರಾಧಾಟೌನ್‌ಶಿಪ್‌ ಬಳಿಯ ಸಾರ್ವಜನಿಕ ಸ್ಥಳದಲ್ಲಿ ನಿಷೇದಿತ ಮಾದಕ ವಸ್ತು ಗಾಂಜಾವನ್ನು ಇಟ್ಟುಕೊಂಡು ಮಾರಾಡಕ್ಕೆ ಯತ್ನಿಸುತ್ತಿದ್ದ ಕೇಳಾರ್ಕಳಬೆಟ್ಟು ನಿವಾಸಿ ಅಬ್ದುಲ್‌ ಜಬ್ಬಾರ್‌ (27) ಎಂಬಾತನ್ನು ಸೆನ್ ಪೊಲೀಸರು ಬಂಧಿಸಿದ್ದಾರೆ. ಆರೋಪಿಯಿಂದ ಗಾಂಜಾ – 2 ಕೆ.ಜಿ 344 ಗ್ರಾಂ ತೂಕ, ಮೌಲ್ಯ ರೂ, 1,87,500, ಸ್ಕೂಟರ್ -1 ಅಂದಾಜು ಮೌಲ್ಯ ರೂ, 1,00,000, ನಗದು ರೂ, 5.810, ಮೊಬೈಲ್ ಪೋನ್ ಅಂದಾಜು ಮೌಲ್ಯ ರೂ. 10,000, ವೆಯಿಂಗ್‌ ಮಿಶನ್‌ 1, ರೂ, 1,000, ಚೂರಿ-1, ರೂ, 300ರನ್ನು ಸೇರಿ ಒಟ್ಟು ರೂ, 3.04,610 ಮೌಲ್ಯದ ಸೊತ್ತನ್ನು ಸ್ವಾಧೀನಪಡಿಸಿಕೊಳ್ಳಳಾಗಿದೆ.. ಸೆನ್ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕ ರಾಮಚಂದ್ರ ನಾಯಕ್ ಅವರ ನೇತೃತ್ವದಲ್ಲಿ ಉಪ ನಿರೀಕ್ಷಕರಾದ ಪವನ್‌ ನಾಯಕ್, ಸಿಬ್ಬಂದಿಯವರಾದ ಪ್ರವೀಣ್ ಕುಮಾರ್‌, ಪ್ರವೀಣ್‌, ವೆಂಕಟೇಶ್‌, ರಾಜೇಶ್‌, ಯತೀನ್‌ ಕುಮಾರ್‌, ಪ್ರಶಾಂತ್ ಮತ್ತು ಚರಣ್‌ರಾಜ್‌ ರವರನ್ನೊಳಗೊಂಡ ತಂಡವು ಕಾರ್ಯಾಚರಣೆಯಲ್ಲಿ ಭಾಗವಹಿಸಿತ್ತು. ಸೆನ್ ಅಪರಾಧ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಬೈಂದೂರು: ಜಗತ್ತಿಗೆ ಗೋವುಗಳು ಒಂದು ಪ್ರಾಣಿಯಾದರೆ, ಭಾರತದಲ್ಲಿ ಅದು ಮಾತೆಯಾಗಿ ಪೂಜನೀಯ ಸ್ಥಾನ ಪಡೆದಿವೆ. ಅವುಗಳು ಸಂತೋಷದಲ್ಲಿರುವೆಡೆ ದೇವತೆಗಳು ಸಂತೋಷರಾಗುತ್ತಾರೆ ಎಂಬ ಮಾತಿದ್ದು, ಅಶಕ್ತ ಗೋವುಗಳ ರಕ್ಷಣೆ ಮಾಡುವುದು ಮಹಾನ್ ಪುಣ್ಯದ ಕಾರ್ಯವಾಗಿದೆ ಎಂದು ಹೃದಯ ವಿದ್ಯಾ ಫೌಂಡೇಷನ್ ಅಧ್ಯಕ್ಷ ವಿದ್ಯಾಸಾಗರ್ ಹೇಳಿದರು. ತಗ್ಗರ್ಸೆ ಗ್ರಾಮದ ವಸ್ರೆ ಮೈಕಳದಲ್ಲಿ ಶಾಸಕ ಗುರುರಾಜ ಗಂಟಿಹೊಳೆಯವರ ಪರಿಕಲ್ಪನೆಯಂತೆ ನಿರ್ಮಾಣಗೊಂಡ ಗಂಟಿಧಾಮ – ಅಶಕ್ತ ಗೋವುಗಳ ಪಾಲನಾ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು. ವಿಶ್ವಹಿಂದೂ ಪರಿಷತ್ ದಕ್ಷಿಣ ಪ್ರಾಂತ್ಯದ ಪ್ರಮುಖ ಶರಣ ಪಂಪವೆಲ್ ಮಾತನಾಡಿ, ಅಸಕ್ತ ಗೋವುಗಳ ರಕ್ಷಣೆಗಾಗಿ ಶಾಸಕರು ಮಾಡುತ್ತಿರುವ ಕಾಯಕ ಇತರರಿಗೆ ಮಾದರಿಯಾಗಿದೆ ಎಂದು ಶ್ಲಾಘಿಸಿ, ಇಂದು ಗ್ರಾಮೀಣ ಭಾಗ ಜೀವಂತವಾಗಿರುವುದೇ ಗೋವುಗಳಿಂದ, ದೇಶದಲ್ಲಿ ಋಷಿ ಪರಂಪರೆ ಉಳಿಯಬೇಕಾದರೆ ಅವುಗಳಿಗೆ ವಿಶೇ? ಸ್ಥಾನ ಕಲ್ಪಿಸಬೇಕಾದ ಅಗತ್ಯವಿದೆ. ಇಂದು ದೇಶದಲ್ಲಿ ಗೋಹತ್ಯೆ ಅವ್ಯಾಹತವಾಗಿ ನಡೆಯುತ್ತಿದ್ದು, ಬೀಡಾಡಿ ಜಾನುವಾರುಗಳು ಕಟುಕರ ಪಾಲಾಗುತ್ತಿದೆ ಎಂದು ಕಿಡಿಕಾರಿದ ಅವರು ಗೋವುಗಳ ರಕ್ಷಣೆಗಾಗಿ ಇಡೀ ಹಿಂದೂ ಸಮಾಜ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಅಂತರಾಷ್ಟ್ರೀಯ ಮನ್ನಣೆ ಪಡೆದ ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯ 100ನೇ ತಿಂಗಳ ಕಾರ್ಯಕ್ರಮವು ಅ.27ರ ಭಾನುವಾರ ಬೆಳಿಗ್ಗೆ 5-00 ಗಂಟೆಯಿಂದ ರಾತ್ರಿ 11-00 ಗಂಟೆಯ ತನಕ ಉಪ್ಪಿನಕುದ್ರು ಗೊಂಬೆಮನೆಯಲ್ಲಿ ನಡೆಯಲಿದೆ. ಉಪ್ಪಿನಕುದ್ರು ಶ್ರೀ ದೇವಣ್ಣ ಪದ್ಮನಾಭ ಕಾಮತ್‌ ಮೆಮೋರಿಯಲ್ ಯಕ್ಷಗಾನ ಟ್ರಸ್ಟ್‌ ಮತ್ತು ಗಣೇಶ ಯಕ್ಷಗಾನ ಗೊಂಬೆಯಾಟ ಮಂಡಳಿಯ ಯಕ್ಷಗಾನ ಗೊಂಬೆಯಾಟ ಅಕಾಡೆಮಿ ಪ್ರತಿ ತಿಂಗಳು ಗೊಂಬೆಮನೆಯಲ್ಲಿ ಆಯೋಜಿಸುತ್ತಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳು 100 ತಿಂಗಳು ತಲುಪಿದ್ದು, 100ನೇ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಯೋಜಿಸಲಾಗಿದೆ. ಬೆಳಿಗ್ಗೆ 5ರಿಂದ ಉದಯರಾಗದಿಂದ ಆರಂಭಗೊಂಡು ಹಿಂದೂಸ್ತಾನಿ ಹಾಡುಗಳು, ಯಕ್ಷಗಾನದ ಹಾಡುಗಳ ಗಾಯನ, ಅಕಾಡೆಮಿಯ ವಿದ್ಯಾರ್ಥಿಗಳಿಂದ ಗೊಂಬೆಯಾಟ ಪ್ರಾತ್ಯಕ್ಷಿಕೆ, ಬೆಳಿಗ್ಗೆ 10ರಿಂದ ಭಕ್ತಿರಾಗ – ಭಕ್ತಿ ಸಂಗೀತ ಹಾಗೂ ಭಜನೆ, ಮಧ್ಯಾಹ್ನ 12-30ರಿಂದ ಶಾಲಾ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಕಾರ್ಯಕ್ರಮ, ಪ್ರತಿಭಾನ್ವಿತರಿಂದ ಸಂಗೀತ, ಕೊಳಲು ವಾದನ, ಸಂಜೆ 5ರಿಂದ ಭಕ್ತಿ ಸಂಗೀತ, ಬಳಿಕ ಭಾವಗೀತೆ, ಸಂಜೆ 6ರಿಂದ 8:30ರ ತನಕ ಸಂಧ್ಯಾರಾಗ ಸಂಧ್ಯಾರಾಗ, ಬಳಿಕ ಯಕ್ಷಗಾನ ಪ್ರದರ್ಶನ ಇರಲಿದೆ.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಶಂಕರನಾರಾಯಣ: ಉಡುಪಿ ಜಿಲ್ಲಾ ಮಟ್ಟದ ಗ್ರಾಮೀಣ ಐ.ಟಿ ಕ್ವಿಜ್ – 2024ರ ಸ್ಪರ್ಧೆಯಲ್ಲಿ ಮದರ್ ತೆರೇಸಾ ಪಿಯು ಕಾಲೇಜು ಶಂಕರನಾರಾಯಣ ಇಲ್ಲಿನ ವಿದ್ಯಾರ್ಥಿಗಳಾದ ಅಮೋಧ್ ಹಾಗೂ ಸುಜನ್ ಶೆಟ್ಟಿ ಮೈಸೂರು ವಿಭಾಗ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ. ವಿಜೇತರಾದ ವಿದ್ಯಾರ್ಥಿಗಳಿಗೆ ಆಡಳಿತಮಂಡಳಿ,ಪ್ರಾಂಶುಪಾಲರು ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿ ಪ್ರತಿನಿಧಿಗಳು ಶುಭಕೋರಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು ಇದರ ವ್ಯವಹಾರ ಆಡಳಿತ ವಿಭಾಗದ ಆಶ್ರಯದಲ್ಲಿ ಅಕ್ಟೋಬರ್ 24 ಹಾಗೂ 25 ರಂದು ನಡೆದ ನೋವೇಶನ್ ಮ್ಯಾನೇಜ್ಮೆಂಟ್ ಫೆಸ್ಟ್ -2024 ಸಂಪನ್ನಗೊಂಡಿತು. ಮುಖ್ಯ ಅತಿಥಿಯಾಗಿ ಆಗಮಿಸಿದ ಇಂಡಿಯನ್ ಓವರ್ಸೀಸ್ ಬ್ಯಾಂಕ್ ಕುಂದಾಪುರ ಶಾಖೆಯ ಪ್ರಬಂಧಕರುಗಳಾದ ನಿಶಿತ್ ಪಾರ್ಮರ್ ಹಾಗೂ ರವಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಕೆ. ಉಮೇಶ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಿಭಾಗದ ಪ್ರಾಧ್ಯಾಪಕರುಗಳಾದ ಅವಿತಾ ಕೊರೆಯಾ, ಹರೀಶ್ ಬಿ, ಪ್ರವೀಣ್ ಮೊಗವೀರ ಗಂಗೊಳ್ಳಿ, ಚೈತಾಲಿ ಉಪಸ್ಥಿತರಿದ್ದರು. ಟೀಮ್ ಪಯೋನಿಯರ್ ಸಮಗ್ರ ಚಾಂಪಿಯನ್ ಆಗಿ ಮೂಡಿಬಂತು. ಸಕ್ಸಸ್ ಸ್ಕ್ವಾಡ್ ತಂಡ ರನ್ನರ್ ಅಪ್ ಪ್ರಶಸ್ತಿ ಪಡೆದುಕೊಂಡಿತು. ವ್ಯವಹಾರ ಆಡಳಿತ ವಿಭಾಗದ ಮುಖ್ಯಸ್ಥರಾದ ನಂದಾ ರೈ ಸ್ವಾಗತಿಸಿದರು. ಕಾಲೇಜಿನ ಉಪ-ಪ್ರಾಂಶುಪಾಲರಾದ ಡಾ| ಚೇತನ್ ಶೆಟ್ಟಿ ಕೋವಾಡಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಂಯೋಜಕರಾದ ರಜತ್ ಬಂಗೇರ ವಿಜೇತರ ಪಟ್ಟಿ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಶಂಕರನಾರಾಯಣ: ಕುಂದಾಪುರ ವಲಯ ಮಟ್ಟದ ಕ್ರೀಡಾ ಕೂಟದಲ್ಲಿ ಮದರ್ ತೆರೇಸಾ ಮೆಮೋರಿಯಲ್ ಸ್ಕೂಲಿನ ವಿದ್ಯಾರ್ಥಿಗಳು ಭಾಗವಹಿಸಿ ಉತ್ತಮ ಪ್ರದರ್ಶನದೊಂದಿಗೆ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.  ಅವರಿಗೆ ದೈಹಿಕ ಶಿಕ್ಷಣ ಶಿಕ್ಷಕರಾದ ಸತೀಶ್, ರತ್ನಕುಮಾರ್ ಮತ್ತು ಪ್ರಿಯಾಂಕಾ ತರಬೇತಿ ನೀಡಿರುತ್ತಾರೆ. ಫಲಿತಾಂಶದ ಯಾದಿಧನ್ವಿತ್, 80 ಮೀಟರ್ ಹರ್ಡಲ್ಸ್ ದ್ವಿತೀಯ , ಉದ್ದಜಿಗಿತ, ದ್ವಿತೀಯ (ಜಿಲ್ಲಾಮಟ್ಟಕ್ಕೆ ಆಯ್ಕೆ)ನಿನಾದ್ 600 ಮೀಟರ್ ಓಟ, ತೃತೀಯ , 400 ಮೀಟರ್ ಓಟ ತೃತೀಯಸಂಪ್ರೀತ್ 100 ಮೀಟರ್ ಓಟ ತೃತೀಯಬೃಂದಾ 3000 ಮೀಟರ್ ನಡಿಗೆ ತೃತೀಯಆಕಾಶ್ 100 ಮೀಟರ್ ಓಟ ದ್ವಿತೀಯ,( ಜಿಲ್ಲಾಮಟ್ಟಕ್ಕೆ ಆಯ್ಕೆ) ರೋಷನ್ ಆರ್ 400 ಮೀಟರ್ ಓಟ ದ್ವಿತೀಯ (ಜಿಲ್ಲಾಮಟ್ಟಕ್ಕೆ ಆಯ್ಕೆ) ಬಾಲಕರ 4*100 ಮೀಟರ್ ರಿಲೇ ತೃತೀಯಶಮಂತ್ 100 ಮೀಟರ್ ಓಟ ದ್ವಿತೀಯ, 200ಮೀಟರ್ ಓಟ  ದ್ವಿತೀಯಸಾಯಿಪ್ರಸಾದ್ 400*ಮೀಟರ್ ಓಟ ದ್ವಿತೀಯ, 600*ಓಟ ಪ್ರಥಮ*ಜಿಲ್ಲಾಮಟ್ಟಕ್ಕೆಆಯ್ಕೆರೋಷನ್200 ಮೀಟರ್ ಓಟ ಪ್ರಥಮ ಜಿಲ್ಲಾಮಟ್ಟಕ್ಕೆ ಆಯ್ಕೆ4*400 ರಿಲೇ ಬಾಲಕರು ತೃತೀಯಸಮಿತ್ ಗುಂಡು ಎಸೆತ ತೃತೀಯಲಿಖಿತ್ 80…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಬೈಂದೂರಿನ ಹೆಸರಾಂತ ಮೊಬೈಲ್ ಮಾರಾಟ ಮಳಿಗೆ ‘ಪ್ರೀತಿ ಮೊಬೈಲ್ಸ್’ನಲ್ಲಿ ‘ದೀಪಾವಳಿ’ ಹಬ್ಬದ ಅಂಗವಾಗಿ ಗ್ರಾಹಕರಿಗೆ ವಿವಿಧ ಕೊಡುಗೆಗಳನ್ನು ನೀಡಲಾಗುತ್ತಿದೆ. ಪ್ರತಿ ಸ್ಮಾರ್ಟ್ ಪೋನ್ ಖರೀದಿಯ ಮೇಲೆಯೂ ಖಚಿತ ಕೊಡುಗೆಗಳು, ಇಎಂಐ ಸೌಲಭ್ಯ, ಜೊತೆಗೆ ಲಕ್ಕಿ ಕೂಪನ್, ಮೆಗಾ ಎಕ್ಸ್’ಚೆಂಚ್ ಆಫರ್, ಉಚಿತ ಸ್ಕ್ರೀನ್ ಬದಲಾವಣೆ ಸೇರಿದಂತೆ ಹಲವು ಕೊಡುಗೆಗಳನ್ನು ಒಳಗೊಂಡಿದೆ. ಲಕ್ಕಿ ಕೂಪನ್‌ನಲ್ಲಿ ಕಾರು, ಬೈಕ್‌, ಸ್ಮಾರ್ಟ್‌ ಟಿವಿ ಸಹಿತ ಹಲವು ಕೊಡುಗೆಗಳನ್ನು ಗೆಲ್ಲುವ ಅವಕಾಶವಿದೆ. ದೀಪಾವಳಿಯ ಅಂಗವಾಗಿ ಈ ಆಫರ್ ನ.30ರ ತನಕ ಇರಲಿದೆ. ಹೆಚ್ಚಿನ ಮಾಹಿತಿ ಹಾಗೂ ಖರೀದಿಗೆ ಬೈಂದೂರು ಪೊಲೀಸ್ ಸ್ಟೇಷನ್ ಎದುರಿನ ಪಂಚಾಯತ್ ಕಟ್ಟಡದಲ್ಲಿರುವ ‘ಪ್ರೀತಿ ಮೊಬೈಲ್ಸ್’ ಮಳಿಗೆ, ಬೈಂದೂರು ಬಂಕೇಶ್ವರ ರಸ್ತೆಯ ಪಂಚಾಯತ್ ಕಟ್ಟಡದಲ್ಲಿನ ಮಳಿಗೆ ಅಥವಾ ಆಂಜನೇಯ ದೇವಸ್ಥಾನದ ಬಳಿಕ ಶೇಷಾದ್ರಿ ಕಾಂಪ್ಲೆಕ್ಸ್‍ ಮಳಿಗೆಗೆ ಭೇಟಿ ನೀಡಬಹುದಾಗಿದೆ. ಇದು ಜಾಹೀರಾತು ಸುದ್ದಿಯಾಗಿದೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಸ್ನೇಹಿತನ ಕುಟುಂಬದ ಮದುವೆಗೆಂದು ಬೆಂಗಳೂರಿನಿಂದ ಬಂದಿದ್ದ ಯುವಕರು ಈಜಲು ತೆರಳಿದ್ದ ವೇಳೆ ಅಲೆಗಳ ಹೊಡೆತಕ್ಕೆ ಸಿಲುಕಿ ಸಮುದ್ರಪಾಲಾಗಿರುವ ಘಟನೆ ಇಂದು ಬೆಳಿಗ್ಗೆ ಬೀಜಾಡಿ ಸಮುದ್ರ ಕಿನಾರೆಯಲ್ಲಿ ನಡೆದಿದೆ. ಘಟನೆಯಲ್ಲಿ ಬೆಂಗಳೂರಿನ ಯುವಕ ಸಂತೋಷ್‌ (24) ಮೃತಪಟ್ಟಿದ್ದು, ಕುಂದಾಪುರದ ಮೂಲಕ ಯುವಕ ಅಜೆಯ್‌ (24) ನಾಪತ್ತೆಯಾಗಿದ್ದಾನೆ. ಮದುವೆ ಕಾರ್ಯಕ್ರಮಕ್ಕಾಗಿ ಬೆಂಗಳೂರಿನಿಂದ ಕುಂದಾಪುರಕ್ಕೆ ಬಂದಿದ್ದ ಯುವಕರು ಬೀಜಾಡಿ ಬೀಚ್ ಸಮೀಪದ ರೆಸಾರ್ಟ್‌ನಲ್ಲಿ ಉಳಿದುಕೊಂಡಿದ್ದರು. ಬೆಳಿಗ್ಗೆ ನಾಲ್ವರು ಯುವಕರು ಸಮುದ್ರದಲ್ಲಿ ಈಜಲು ತೆರಳಿದ್ದು ಈ ವೇಳೆ ಅಲೆಗಳ ಹೊಡೆತಕ್ಕೆ ಸಿಲುಕಿ ಇಬ್ಬರು ಕೊಚ್ಚಿ ಹೋಗಿದ್ದರು. ಮಾಹಿತಿ ತಿಳಿದ ಸ್ಥಳೀಯರು ತಕ್ಷಣ ಸಂತೋಷ್‌ ಎಂಬಾತನ್ನು ರಕ್ಷಿಸಿ ಆಸ್ಪತ್ರೆಗೆ ಸಾಗಿಸಿದ್ದರಾದರೂ, ಆತನನ್ನು ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದನ್ನು ದೃಢಪಡಿಸಿದರು. ನಾಪತ್ತೆಯಾಗಿರುವ ಇನ್ನೋರ್ವ ಯುವಕ ಅಜೇಯನಿಗಾಗಿ ಸಮುದ್ರದಲ್ಲಿ ಸ್ಥಳೀಯ ಮುಳುಗು ತಜ್ಞರು ಹಾಗೂ ಕರಾವಳಿ ಕಾವಲು ಪಡೆಯ ಪೊಲೀಸರಿಂದ ಶೋಧ ನಡೆಸಲಾಗುತ್ತಿದೆ. ಸ್ಥಳಕ್ಕೆ ಕುಂದಾಪುರ ಪೊಲೀಸರು ಆಗಮಿಸಿ ಮಾಹಿತಿ ಪಡೆದಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಮಾತೃಭೂಮಿ ಮಹಿಳಾ ಸಹಕಾರ ಸಂಘ ಬೈಂದೂರು ಇದರ ವತಿಯಿಂದ ಪಂಚಮಿ ಮಾಸಿಕ ಠೇವಣಿ ಎಂಬ ಹೊಸ ಉಳಿತಾಯ ಯೋಜನೆಯು ಇತ್ತೀಚಿಗೆ ಆರಂಭವಾಯಿತು. ಸಭೆಯ ಅಧ್ಯಕ್ಷತೆಯನ್ನು ಸಹಕಾರ ಸಂಘದ ಅನಸೂಯ ಶೇಟ್ ಅವರು ವಹಿಸಿದ್ದರು. ಮುಖ್ಯ ಅತಿಥಿಯಾಗಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರೆಹನಾ ಸುಲ್ತಾನಾ ಹಾಗೂ ಸಂಸ್ಥೆಯ ನಿರ್ದೇಶಕರುಗಳಾದ ಆಶಾ, ಗೀತಾ, ಎಸ್. ಲಕ್ಷ್ಮೀ ಬೈಂದೂರು, ಗಿರಿಜಾ, ಸಾವಿತ್ರಿ, ಮಾಲತಿ, ಪ್ರೇಮಾ, ಅಂಬಿಕಾ, ಶ್ಯಾಮಲಾ, ಅಲಿಯಾ ನಾಜ್, ನೇತ್ರಾವತಿ, ಸರಳಾ, ಸ್ಥಾಪಕರು ಹಾಗೂ ಪತ್ರಕರ್ತರಾದ ಅಂದುಕಾ, ಸಿಬ್ಬಂದಿಗಳಾದ ನಾಗರಾಜ್ ಪೂಜಾರಿ, ನಾಗಶ್ರೀ, ಪೂರ್ಣಿಮಾ ಮತ್ತು ಎಲ್ಲಾ ಗ್ರಾಹಕರು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಸಮೃದ್ಧ ಬೈಂದೂರು, ವಿವಿಧ ಸಂಘ ಸಂಸ್ಥೆ, ತಾಲೂಕು ಆಡಳಿತ ಸಹಭಾಗಿತ್ವದಲ್ಲಿ ಬೈಂದೂರಿನಲ್ಲಿ ಪ್ರಥಮ ಬಾರಿ ಸಾಂಸ್ಕೃತಿಕ ಸಂಭ್ರಮ ಬೈಂದೂರು ಉತ್ಸವ ನ.1, 2, 3ರಂದು ನಡೆಯಲಿದೆ. ನ.1ರಂದು ಬೆಳಗ್ಗೆ ತಲ್ಲೂರಿನಿಂದ ಬೈಂದೂರಿಗೆ ಟ್ಯಾಬೊ ಜಾಥಾ ಹೊರಡಲಿದೆ. ಉಪ್ಪುಂದದಿಂದ ಬೈಂದೂರಿಗೆ ಭಜನಾ ಜಾಥಾ ನಡೆಯಲಿದೆ. ಕ್ಷೇತ್ರದ ವಿವಿಧ ಗ್ರಾಪಂ ಹಾಗೂ ಹಲವಾರು ಧಾರ್ಮಿಕ ಕೇಂದ್ರಗಳಿಂದ ಟ್ಯಾಬ್ಲೊ ಸಿದ್ಧಗೊಂಡಿದೆ. ಧಾರ್ಮಿಕ ಗೋಷ್ಠಿ, ಸಿನಿತಾರ ಸಂಗಮ, ಬೀಚ್ ಉತ್ಸವ, ಮೇಘನಾದ, ಸಾಂಸ್ಕೃತಿಕ ವೈಭವ, ಕಂಬಳ, ಗೊಂಬೆಯಾಟ, ಯಕ್ಷಗಾನ, ಆರೋಗ್ಯ ಮೇಳ, ರಂಗಗೀತೆ, ನೃತ್ಯೋತ್ಸವ, ಗಾನಲೋಕ, ಲೈವ್ ಸಂಗೀತ ಹಬ್ಬ, ಜಾದೂಲೋಕ, ಯೋಗ, ಭರತನಾಟ್ಯ, ಗೆಜ್ಜೆನಾದ, ಜಾಂಬೂರಿ, ಟ್ಯಾಬ್ಲೊ ಮೇಳ, ದೇಹದಾರ್ಡ್ಯ, ಪ್ರದರ್ಶನ, ನಾದನೂಪುರ, ಮೀನುಗಾರಿಕೆ, ಕೃಷಿ, ವೈದ್ಯರು, ವಕೀಲರು, ಬ್ಯಾಂಕಿಂಗ್, ಕೈಗಾರಿಕೆ, ಪ್ರವಾಸೋದ್ಯಮ, ಸಹಕಾರಿ ಕ್ಷೇತ್ರ ಸೇರಿ ವಿವಿಧ ಗೋಷ್ಠಿ ನಡೆಯಲಿದೆ. ಜನಪದ ಹಬ್ಬ, ಗೋಪೂಜೆ, ದೀಪ ವೈಭವ, ಸ್ಕೂಬಾಡೈವ್, ಆಹಾರ ಮೇಳ, ಕಾರ್ಟೂನ್ ಹಬ್ಬ, ಮನೋರಂಜನಾ ಪಾರ್ಕ್, ಕರಕುಶಲ…

Read More