ಕುಂದಾಪ್ರ ಡಾಟ್ ಕಾಂ ವರದಿ. ಕುಂದಾಪುರ: ಆ ಮನೆಯ ಸಂಭ್ರಮವೆಲ್ಲ ಉಡುಗಿ ಹದಿನೈದು ವರ್ಷಗಳೇ ಕಳೆದಿದೆ. ಹೊಸ ವರ್ಷ ಆಚರಣೆಗೆ ತೆರಳಿದ್ದವನಿಗೆ ವಿಧಿ ಸುಸ್ತು ಹೊಡೆಸಿದೆ. ಭವಿಷ್ಯದ ಕನಸುಗಳ ನನಸಾಗಿಸುತ್ತಾ ನಡೆಯಬೇಕಿದ್ದ ಯುವಕ ಚೈತನ್ಯ ಕಳೆದುಕೊಂಡು ವಿಕಲಚೇತನನಾಗಿ ಹಾಸಿಗೆ ಹಿಡಿದಿದ್ದಾನೆ. ಮಾತು ಮರೆತಿದ್ದಾನೆ. ತ್ರಾಣವಿಲ್ಲದೆ ಬದುಕಿರುವ ಮಗ, ಮಗುವಿನಂತೆ ತನ್ನ ತಾಯಿಯ ಆಸರೆಯಲ್ಲಿ ಬದುಕಿದ್ದಾನೆ. ಇದು ಸರಿಯಾಗಿ ಹದಿನೈದು ವರ್ಷಗಳ ಹಿಂದೆ ಹೊಸ ವರ್ಷದ ಆಹ್ವಾನಿಸುವ ಸಂಭ್ರಮದಲ್ಲಿ ಪಾಲ್ಗೊಳ್ಳಲು ಸ್ನೇಹಿತರೊಂದಿಗೆ ತೆರಳಿದ 21ವರ್ಷದ ದಿನೇಶ ಎಂಬ ಯುವಕನ ಬದುಕಿನ ದುರಂತ ಅಧ್ಯಾಯ. ಮೊಜಿನ ನಡುವಿನ ಸಣ್ಣ ಕಲಹ, ಕೆಲಸದ ನಡುವಿನ ಪೊಲೀಸರ ಆತುರ, ಯುವಕನಿಗೆ 36 ವರ್ಷಗಳಾದರೂ ಆತನ ಬದುಕನ್ನು ಜೀವಂತ ಶವವನ್ನಾಗಿಸಿದೆ. (ಕುಂದಾಪ್ರ ಡಾಟ್ ಕಾಂ ಸುದ್ದಿ) ದಿನೇಶರ ಬದುಕಿನಲ್ಲಿ ಕರಾಳ ದಿನ: ಕುಂದಾಪುರ ಕಾಳಿಬೆಟ್ಟು ನಡುಮನೆ ನಿವಾಸಿ ದಿನೇಶ್, ಹೊಸ ವರ್ಷಾಚರಣೆ ಸಂಭ್ರಮದಲ್ಲಿ ಬದುಕು ಬರಡಾಗಿಸಿಕೊಂಡ ಯುವಕ. ದಿ.ಪಂಜು ಪೂಜಾರಿ ಮತ್ತು ಲಚ್ಚ ಅವರ ಒಂದು ಹೆಣ್ಣು ಮತ್ತು ಇಬ್ಬರು ಗಂಡು…
Author: ಸುನಿಲ್ ಹೆಚ್. ಜಿ. ಬೈಂದೂರು
ಕುಂದಾಪುರ : ಮುದೂರು ಗ್ರಾಮದ ಸರ್ವೆ ನಂಬರ್ 63 ರಲ್ಲಿ ಸುಮಾರು 362 ಎಕ್ರೆ ದಲಿತರಿಗೆ ಮೀಸಲಿಟ್ಟ ಸರಕಾರಿ ಭೂಮಿ ಕಬಳಿಕೆ ಮಾಡಿರುವ ಬಾರಿ ಭೂ ಹಗರಣ ಬೆಳಕಿಗೆ ಬಂದಿದ್ದು, ಬೈಂದೂರು ವಿಶೇಷ ತಹಸೀಲ್ದಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಭೂಮಾಲಿಕರೊಬ್ಬರು 400 ಎಕ್ರೆ ಖಾಸಗಿ ಭೂಮಿ ಖರಿದಿಸುವ ನೆಪದಲ್ಲಿ ಬಡ ದಲಿತ, ಅಲ್ಪಸಂಖ್ಯಾತ ಹಾಗೂ ಇತರ ಹಿಂದುಳಿದ ವರ್ಗದ ಬಡ ಕುಟುಂಬಗಳಿಗೆ ಮೀಸಲಿಟ್ಟ 362ಎಕ್ರೆ ಸರಕಾರಿ ಭೂಮಿ ವಶಪಡಿಸಿ ಕೊಂಡಿರುವುದು ಖಚಿತಪಟ್ಟದೆ, ಮುದೂರು ಗ್ರಾಮದ ಸರ್ವೆ ನಂಬರ್ 63 ರಲ್ಲಿ 362 ಎಕ್ರೆ ಭೂಮಿ ಸರಕಾರಿ ಹೆಚ್ಚುವರಿ ಭೂಮಿಯೆಂದು ಪರಿಗಣಿಸಿ 1982-83 ರಲ್ಲಿ ಬಡ ದಲಿತ,ಮತ್ತು ಇತರ ಹಿಂದುಳಿದ ವರ್ಗದ 59 ಬಡ ಕುಟುಂಬಗಳಿಗೆ ಮಂಜೂರು ಗೊಳಿಸಲಾಗಿತ್ತು ಮಂಜೂರಾದ ಭೂಮಿಗೆ ಹಕ್ಕು ಪತ್ರ ನೀಡಬೇಕಾಗಿದ್ದ, ಇಲಾಖೆಯ ನಿರ್ಲಕ್ಷೆಯಿಂದ ಪಶ್ಚಿಮಘಟ್ಟದ ದಟ್ಟವಾದ ಅರಣ್ಯ ಪ್ರದೇಶವಾಗಿರುದರಿಂದ ಕ್ರೃಷಿಗೆ ಯೋಗ್ಯವಲ್ಲದ ಭೂಮಿಯೆಂದು ಪರಿಗಣಿಸಿ ಮಂಜೂರಾತಿಯನ್ನು ತಾತ್ಕಲಿಕವಾಗಿ ತಡೆಹಿಡಿಯಲಾಗಿತ್ತು, ಇದೀಗ ಖಾಸಗಿ ಭೂಮಿ ಖರಿದಿಸುವ ಹೆಸರಿನಲ್ಲಿ ೫೯…
ಕೋಟ: ಎರಡು ಜಿಲ್ಲೆಯ ಕಾಂಗ್ರೆಸ್ ಪಕ್ಷ ನಾಯಕರು ಮತ್ತು ಕಾರ್ಯಕರ್ತರು ಡಿಸೆಂಬರ್ ೨೭ರಂದು ನಡೆಯಲಿರುವ ವಿಧಾನ ಪರಿಷತ್ ಚುನಾವಣೆಯನ್ನು ಗಭೀರವಾಗಿ ಪರಿಗಣಿಸಿ ಪೂರ್ವ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದ್ದಾರೆ. ಪ್ರತಾಪಚಂದ್ರ ಶೆಟ್ಟಿ ಅವರ ಗೆಲುವಿಗೆ ಯಾವುದೆ ಆತಂಕವಿಲ್ಲ, ಕೋಟ ಶ್ರೀನಿವಾಸ ಪೂಜಾರಿ ಅವರಿಗಿಂತ ಅತ್ಯಧಿಕ ಮತಗಳಿಂದ ನಮ್ಮ ಅಭ್ಯರ್ಥಿ ಗೆಲುವು ಸಾಧಿಸುವ ವಿಶ್ವಾಸವಿದೆ ಎಂದು ಉಡುಪಿ ಶಾಸಕ ಪ್ರಮೋದ್ ಮಧ್ವರಾಜ್ ಹೇಳಿದರು. ಅವರು ಕೋಟ ಬ್ಲಾಕ್ ಕಾಂಗ್ರೆಸ್ ಕಛೇರಿ ಇಂದಿರಾ ಭವನದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ಈ ಚುನಾವನೆ ಹೇಗಾದರು ಮಾಡಿ ಗೆಲ್ಲಬೇಕು ಎನ್ನುವ ಕಾರಣಕ್ಕೆ ಬಂಡಾಯ ಅಭ್ಯರ್ಥಿಯ ಕಡೆಯವರು ಅನೈತಿಕವಾಗಿ ಮತದಾರರನ್ನು ಸಂಪರ್ಕ ಮಾಡಿ, ತಮ್ಮತ್ತ ಸೆಳೆಯುವ ಕಾರ್ಯ ನಡೆಸುತ್ತಿರುವ ಬಗ್ಗೆ ನಮ್ಮ ಗಮನಕ್ಕೆ ಬಂದಿದೆ. ನಮ್ಮ ಉಡುಪಿ ವಿಧಾನ ಸಭಾ ಕ್ಷೇತ್ರದಲ್ಲಿ ಪ್ರತಾಪಚಂದ್ರ ಶೆಟ್ಟಿ ಅವರ ಕುರಿತು ಪೂರಕವಾದ ಅಭಿಪ್ರಾಯ ಮೂಡಿಬರುತ್ತಿದೆ. ಇದಲ್ಲದೆ ಹೆಗ್ಡೆಯವರ ಕುರಿತು ಬಿಜೆಪಿಯಲ್ಲೂ ಕೂಡ ಯಾವುದೇ ಒಲವಿಲ್ಲ. ಕಾಂಗ್ರೆಸ್ ಮತಗಳು ಮಾತ್ರವಲ್ಲದೇ ಬಂಡಾಯ ಅಭ್ಯರ್ಥಿಗಳು ಊಹಿಸದ ರೀತಿಯಲ್ಲಿ…
ಕುಂದಾಪುರ.ಡಿ.26: ಇಲ್ಲಿನ ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ 94ನೇ ಶ್ರೀ ರಾಮ ಭಜನಾ ಸಂಕೀರ್ತನೆ ಈ ಸಂದರ್ಭದಲ್ಲಿ ಪುಷ್ಪಾಲಂಕೃತಗೊಂಡ ವಸಂತ ಮಂಟಪ. ಸುಬ್ಬ ಪೈ ಸ್ಮರಣಾರ್ಥ ದೇವಸ್ಥಾನದಲ್ಲಿ ಸಂಜೆ 5:30 ರಿಂದ ಗಾಯಕಿ ಆಶಾ ಶೆಣೈ (ಪಾಂಗಾಳ ಆಶಾ ಎಸ್.ನಾಯಕ್) ಅವರಿಂದ ಭಕ್ತಿ ಸಂಗೀತ ಕಾರ್ಯಕ್ರಮ ಜರುಗಲಿದೆ.
ಬೈಂದೂರು: ರೈತರ ಬದುಕು ಸ್ವಾಭಿಮಾನದ ಬದುಕಾಗಿದ್ದು, ಸಮಸ್ಯೆಗಳಿಗೆ ಧೃತಿಗೆಡದೆ ಜೀವನ ಸಾಗಿಸುವ ರೈತರ ಜೀವನ ಇತರರಿಗೆ ಮಾದರಿಯಾಗಿದೆ. ಇಂದು ರೈತರ ಹೆಸರು ಬಳಸಿಕೊಂಡು ವೈಭವಿಕರಣದ ವ್ಯಾಪಾರೀಕರಣ ನಡೆಯುತ್ತಿದೆ ಆದರೆ ನಿಜವಾದ ರೈತರ ಸ್ಥಿತಿ ಚಿಂತಜನಕವಾಗಿದೆ ಎಂದು ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಹೇಳಿದರು. ಉಪ್ಪುಂದ ಶಂಕರ ಕಾಲಾ ಮಂದಿರ ಸಮೃದ್ಧ್ ಸಭಾಭವನದಲ್ಲಿ ಖಂಬದಕೋಣೆ ರೈತರ ಸೇವಾ ಸಂಘ, ಸಂಘವು ಪ್ರಾಯೋಜಿಸಿರುವ ರೈತ ಶಕ್ತಿ ಹಾಗೂ ರೈತ ಸೇವಾ ಕೂಟ ಉಪ್ಪುಂದ ಇವರ ಜಂಟಿ ಆಶ್ರಯದಲ್ಲಿ ರೈತ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕುಂದಾಪುರ ಭೂ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ದಿನಕರ್ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಉಪ್ಪುಂದ ತುಂಡಿಹಿತ್ಲು ಹಿರಿಯ ರೈತ ವಿಠಲ್ ಶೆಟ್ಟಿ ರವರನ್ನು ಸನ್ಮಾನಿಸಲಾಯಿತು ಕುಂದಾಪುರ ಸಹಾಯಕ ಕೃಷಿ ನಿರ್ದೇಶಕ ಮೋಹನ್ ರಾಜ್, ಕುಂದಾಪುರ ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಚಿದಂಬರ್ ರಾವ್, ಜಿಪಂ ಮಾಜಿ ಸದಸ್ಯ ಮದನ್ ಕುಮಾರ್,…
ಕುಂದಾಪುರ: ಕುಂದಾಪುರ ಸುತ್ತಲಿನ ಪರಿಸರದ ಜನತೆಗಾಗಿ ಚಿನ್ಮಯ ಆಸ್ಪತ್ರೆಯಲ್ಲಿ ಚರ್ಮದ ವಿವಿಧ ಕಾಯಿಲೆಗಳ ನಿವಾರಣೆ ಹಾಗೂ ಸೌಂದರ್ಯವರ್ಧಕ ಚಿಕಿತ್ಸೆಗಳಿಗಾಗಿ ಲೇಸರ್, ಡರ್ಮಾಟೋಸರ್ಜರಿ ಹಾಗೂ ಕಾಸ್ಮಟಾಲಜಿ ವಿಭಾಗ ಆರಂಭಗೊಳ್ಳುತ್ತಿದೆ ಎಂದು ಚಿನ್ಮಯಿ ಆಸ್ಪತ್ರೆ ವೈದ್ಯಾಧಿಕಾರಿ ಡಾ. ಉಮೇಶ್ ಪುತ್ರನ್ ತಿಳಿಸಿದ್ದಾರೆ. ಡಿ. 27ರಂದು ನಡೆಯುವ ಕಾರ್ಯಕ್ರಮದಲ್ಲಿ ಬೆಂಗಳೂರು ಕ್ಯೂಟಿಸ್ ಅಕಾಡೆಮಿ ಆಫ್ ಕ್ಯೂಟನಿಯಸ್ ಸೈನ್ಸ್ನ ಚೀಪ್ ಡರ್ಮಾಟೋಲೊಜಿಸ್ಟ್ ಡಾ. ಚಂದ್ರಶೇಖರ್ ಬಿ.ಎಸ್. ಚಿನ್ಮಯ ಆಸ್ಪತ್ರೆಯಲ್ಲಿ ಈ ವಿಭಾಗವನ್ನು ಉದ್ಘಾಟಿಸಲಿದ್ದಾರೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಸೌಂದರ್ಯಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡುವ ದಿನಮಾನಗಳಲ್ಲಿ ಈ ಚಿಕಿತ್ಸೆ ಸೌಂದರ್ಯಪ್ರಿಯರಿಗೆ ವರದಾನವಾಗಲಿದೆ. ಮಹಿಳೆಯರ ಮುಖ ಹಾಗೂ ದೇಹದ ಮೇಲಿರುವ ಹೆಚ್ಚುವರಿ ಕೂದಲು, ಮುಖದ ಮೊಡವೆಯಿಂದಾದ ಹೊಂಡದ ಕಲೆಗಳು, ಗಾಯದಿಂದ ಉಂಟಾದ ಕಲೆಗಳು, ಸ್ತ್ರೀಯರ ಮುಖದ ಮೇಲೆ ಕಂಡುಬರುವ ಕಪ್ಪು ಬಣ್ಣದ ಕರಂಗಲ, ಕಪ್ಪು ಚುಕ್ಕೆಗಳು, ಮಚ್ಚೆಗಳು, ಕೃತಕವಾಗಿ ಹಾಕಿಸಿಕೊಂಡ ಟ್ಯಾಟೋ, ಜಿಡ್ಡು, ನೆರಿಗೆಗಟ್ಟಿದ ಮುಖ. ಹೀಗೆ ನಾನಾ ತರಹದ ಸಮಸ್ಯೆಗಳಿಗೆ ಈ ಚಿಕಿತ್ಸೆಯಿಂದ ಪರಿಹಾರ ಕಂಡಕೊಳ್ಳಬಹುದಾಗಿದೆ. ಚಿಕಿತ್ಸೆಗೆ ಮೊದಲು…
ಕುಂದಾಪುರ: ತಾಲೂಕು ಕೇಂದ್ರವೊಂದರಲ್ಲಿ ರಾಷ್ಟ್ರಮಟ್ಟದ ಕ್ರಿಕೆಟ್ ಪಂದ್ಯಾಟವನ್ನು ಆಯೋಜಿಸಿರುವುದು ಕ್ರೀಡಾ ಪ್ರೇಕ್ಷಕರಿಗೆ ಮನೋರಂಜನೆ ನೀಡುತ್ತಿರುವುದಲ್ಲದೇ ವಿವಿಧ ರಾಜ್ಯಗಳ ಉಡುಗೆ-ತೊಡುಗೆ, ಭಾಷೆ, ಸಂಸ್ಕೃತಿಗಳ ಸಮಾಗಮವೂ ಆದಂತಾಗಿದೆ. ಶಾಂತಿ ಮತ್ತು ಸಾಮರಸ್ಯದ ರಾಯಭಾರಿಯಾದ ಕ್ರಿಕೆಟ್ ನಾಡಿನ ಸೌಹಾರ್ದತೆಯ ಕೊಂಡಿಯಾಗಿ ಉಳಿಯಲಿ ಎಂದು ಕುಂದಾಪುರದ ಡಿಎಸ್ಪಿ ಮಂಜುನಾಥ ಶೆಟ್ಟಿ ಹೇಳಿದರು. ಇಲ್ಲಿನ ಗಾಂಧಿ ಮೈದಾನದಲ್ಲಿ ಕುಂದಾಪುರ ಚಕ್ರವರ್ತಿ ಕ್ರಿಕೆಟ್ ಕ್ಲಬ್ ಆಶ್ರಯದಲ್ಲಿ ನಡೆಯುತ್ತಿರುವ ನಾಲ್ಕು ದಿನಗಳ ರಾಷ್ಟ್ರೀಯ ಮಟ್ಟದ ಕ್ರಿಕೆಟ್ ಪಂದ್ಯಾಟ ’ಚಕ್ರವರ್ತಿ ಟ್ರೋಫಿ’ಯನ್ನು ಉದ್ಘಾಟಿಸಿ ಮಾತನಾಡಿದರು. ಇಂದು ಜಗತ್ತು ಶಾಂತಿ ಸಾಮರಸ್ಯವನ್ನು ಅರಸಿ ಭಾರತದತ್ತ ಮುಖಮಾಡುತ್ತಿದೆ. ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇ.65ರಷ್ಟು ಯುವಜನರೇ ಇರುವುದರಿಂದ ಅದನ್ನು ಕಾಪಿಡುವ ಜವಬ್ದಾರಿ ಅವರ ಮೇಲಿದೆ ಎಂದರು. ಕುಂದಾಪುರ ಪುರಸಭೆ ಅಧ್ಯಕ್ಷೆ ಕಲಾವತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಂಬೈ ಉದ್ಯಮಿಗಳಾದ ಎನ್.ಟಿ. ಪೂಜಾರಿ, ಸುರೇಶ್ ಎನ್. ಶೆಟ್ಟಿ ಮರತ್ತೂರು, ಉದ್ಯಮಿ ಕೃಷ್ಣ ಪೂಜಾರಿ, ಜಗದೀಶ್ ಶೆಟ್ಟಿ, ಪಿಡಬ್ಲ್ಯೂಡಿ ಗುತ್ತಿಗೆದಾರ ರಾಜೇಶ್ ಕಾರಂತ್ ಅತಿಥಿಗಳಾಗಿದ್ದರು. ಚಕ್ರವರ್ತಿ ಕ್ರಿಕೆಟ್ ಕ್ಲಬ್ ಗೌರವಾಧ್ಯಕ್ಷ…
ಬಸ್ರೂರು ಅಪ್ಪಣ್ಣ ಹೆಗ್ಡೆ ಬದುಕು ತೆರೆದ ಪುಸ್ತಕ. ದತ್ತಿನಿಧಿ ವಿತರಣೆಯಲ್ಲಿ ಶ್ರೀ ಸ್ವಾಮಿ ವಿನಾಯಕನಂದಜೀ ಮಹರಾಜ್ ಕುಂದಾಪುರ: ಪ್ರಸಕ್ತ ಆದರ್ಶ ನಾಯಕರ ಹಾಗೂ ವ್ಯಕ್ತಿಗಳ ಸಂಖ್ಯೆ ಕ್ಷೀಣಿಸುತ್ತಿದ್ದು, ಸಮಾಜ ಸನ್ಮಾರ್ಗದಲ್ಲಿ ನಡೆಸುವ ನಾಯಕರಿಲ್ಲದೆ ಯುವ ಸಮಾಜಕ್ಕೆ ಉತ್ತಮ ದಾರಿ ತಿಳಿಯದೆ ದಿಕ್ಕು ತಪ್ಪುತ್ತಿದ್ದಾರೆ ಎಂದು ಕಾರ್ಕಳ ಬೈಲೂರು ಶ್ರೀ ರಾಮಕೃಷ್ಣಾಶ್ರಮ ಶ್ರೀ ಸ್ವಾಮಿ ವಿನಾಯಕನಂದಜೀ ಮಹರಾಜ್ ಅಭಿಪ್ರಾಯಪಟ್ಟಿದ್ದಾರೆ. ಬಸ್ರೂರು ಅಪ್ಪಣ್ಣ ಹೆಗ್ಡೆ ದತ್ತಿನಿಧಿ ಪ್ರತಿಷ್ಠಾನ ಆಶ್ರಯದಲ್ಲಿ ಬಸ್ರೂರು ಮಹತೋಬಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವಠಾರದಲ್ಲಿ ನಡೆದ ಬಸ್ರೂರು ಅಪ್ಪಣ್ಣ ಹೆಗ್ಡೆ 81 ನೇ ಜನ್ಮ ದಿನಾಚರಣೆ ಮತ್ತು ದತ್ತಿ ನಿಧಿ ವಿತರಣೆಯಲ್ಲಿ ಆಶೀರ್ವಚನ ನೀಡಿ, ಬಸ್ರೂರು ಅಪ್ಪಣ್ಣ ಹೆಗ್ಡೆ ಬದುಕು ತೆರೆದ ಪುಸ್ತಕವಿದ್ದಂತೆ ಎಂದು ಬಣ್ಣಿಸಿದರು. ಸ್ವತಂತ್ರ್ಯ ನಂತರ ಈ ದೇಶ ಉತ್ತಮ ನಾಯಕರ ಅಭಾವ ಎದುರಿಸುತ್ತಿದ್ದು, ಅರ್ಪಣಾ ಮನೋಭಾವ ಬದಲು ದೋಚಿ ತಿನ್ನುವವರೇ ಹೆಚ್ಚಿದ್ದಾರೆ. ಇದರಿಂದ ಆದರ್ಶದ ದಾರಿ ತೋರಿಸುವ ನಾಯಕರಿಲ್ಲದಂತಾಗಿದೆ. ಬರೇ ಬುದ್ದಿ ಬೆಳೆದಿದೆಯೇ ಹೊರತು, ಹೃದಯ ಬೆಳೆದಿಲ್ಲ.…
ಕುಂದಾಪುರ: ಕ್ಯಾಲೆಂಡರ್ ಪ್ರತಿಯೊಬ್ಬನ ಅಗತ್ಯದ ಸಾಧನಗಳಲ್ಲೊಂದು, ಕುಂದಾಪುರ ವಲಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಹೊರತಂದಿರುವ 2016ನೇ ಸಾಲಿನ ಕ್ಯಾಲೆಂಡರ್ ಶಿಕ್ಷಕರಿಗೆ ಅಗತ್ಯವಾದ ಎಲ್ಲಾ ಶೈಕ್ಷಣಿಕ ವಿವರಗಳನ್ನು ಒಳಗೊಂಡಿದ್ದು ಸಂಗ್ರಹ ಯೋಗ್ಯ ದಿನದರ್ಶಿಯಾಗಿದೆ. ಈ ರೀತಿ ಇಲಾಖೆಯ ಎಲ್ಲಾ ಮಾಹಿತಿಗಳನ್ನು ಒಳಗೊಂಡ ಕ್ಯಾಲೆಂಡರ್ ಬಿಡುಗಡೆಗೊಳಿಸಿದ ಕುಂದಾಪುರ ವಲಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿದ್ದು, ಇಂತಹ ಕಾರ್ಯನಿರ್ವಹಿಸಿದ ಸಂಘದ ಕಾರ್ಯ ಅಭಿನಂದನಾರ್ಹ ಎಂದು ಉಡುಪಿ ಜಿಲ್ಲಾ ವಿದ್ಯಾಂಗ ಇಲಾಖೆಯ ಉಪನಿರ್ದೇಶಕ ಎಚ್. ದಿವಾಕರ ಶೆಟ್ಟಿ ಹೇಳಿದರು. ಅವರು ವಡೇರಹೋಬಳಿ ಶಾಸಕರ ಮಾದರಿ ಶಾಲೆಯಲ್ಲಿ ಕುಂದಾಪುರ ವಲಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ೨೦೧೬ನೇ ಸಾಲಿನ ಆಕರ್ಷಕ ಮುದ್ರಣದ ವಿನೂತನ ವಿನ್ಯಾಸದ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಮಾತನಾಡುತ್ತಿದ್ದರು. ಉಡುಪಿ ಡಯಟ್ನ ಪ್ರಾಂಶುಪಾಲ ಶೇಖರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಸಂಘದ ಕಾರ್ಯದರ್ಶಿಯಾಗಿ ೫ ವರ್ಷ ಸೇವೆ ಸಲ್ಲಿಸಿ ಬೈಂದೂರು ವಲಯದ ವಂಡ್ಸೆ ಶಿಕ್ಷಣ ಸಂಯೋಜಕರಾಗಿ ಪದೋನ್ನತಿ ಹೊಂದಿದ ಹಳನಾಡು ನಿತ್ಯಾನಂದ ಶೆಟ್ಟಿ ಅವರನ್ನು ಸಂಘದ…
ಬೈಂದೂರು: ಇಂದು ಇಂಗ್ಲೀಷ ಮಾಧ್ಯಮದ ವಿದ್ಯಾರ್ಥಿಗಳಿಗೆ ಕನ್ನಡ ಮಾಧ್ಯಮದಲ್ಲಿ ಕಲಿತ ವಿದ್ಯಾರ್ಥಿಗಳೇ ಪೈಪೋಟಿ ನೀಡುತ್ತಿರುವುದು ಹೆಮ್ಮಯ ವಿಷಯವಾಗಿದೆ, ಶಾಲೆಯಲ್ಲಿ ದೊರೆಯುವ ಸರಕಾರಿ ಸೌಲಭ್ಯಗಳನ್ನು ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕು. ಕನ್ನಡ ಶಾಲೆಗಳ ಮೇಲೆ ಹಿಂಜರಿಕೆ ಸಲ್ಲದು ಎಂದು ಕುಂದಾಪುರ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಸೀತಾರಾಮ ಶೆಟ್ಟಿ ಹೇಳಿದರು. ಅವರು ಬಿಜೂರು ಸ.ಪ್ರೌಢ ಶಾಲೆ ವಾರ್ಷಿಕೋತ್ಸವ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ನೂತನವಾಗಿ ನಿರ್ಮಿಸಿದ ಬಯಲು ರಂಗ ಮಂಟಪವನ್ನು ಕೆ.ಟಿ. ದಿವಾಕರ ಉದ್ಘಾಟಿಸಿದರು, 2014-15ರ ಅವಧಿಯಲ್ಲಿ ನಡೆದ ಶಾಲಾ ವಾರ್ಷಿಕ ಚಟುವಟಿಕೆಯ ಪೋಟೋ ಗ್ಯಾಲರಿಯನ್ನು ಪ್ರದರ್ಶಿಸಲಾಯಿತು. ಮಹಿಳಾ ಮತ್ತು ಮಕ್ಕಳ ಮಿತ್ರ ಕುಂದಾಪುರ ಸಂಚಾಲಕ ರಾಜೇಂದ್ರ ಬಿಜೂರು, ಬಿಜೂರು ಹಿರಿಯ ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯ ಅನಂತಪದ್ಮನಾಭ ಮಯ್ಯ , ಎಸ್ಡಿಎಂಸಿ ಸದಸ್ಯ ಸುಬ್ರಹ್ಮಣ್ಯ ಖಾರ್ವಿ, ಅಂಗನವಾಡಿ ಶಿಕ್ಷಕಿ ಸುಶೀಲಾ, ಶಿಕ್ಷಕ ಗಿರೀಶ ಶ್ಯಾನುಭಾಗ್, ಗ್ರಾಪಂ ಸದಸ್ಯರಾದ ಕೆ.ಟಿ ರಾಜೇಶ, ಜಯರಾಮ ಶೆಟ್ಟಿ ಬಿಜೂರು ಹಾಗೂ…
