ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಉತ್ತರ ಪ್ರದೇಶದ ಹತ್ರಾಸ್ ನಲ್ಲಿ ನಡೆದ ಮನಿಷಾ ಎಂಬ ಯುವತಿಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣವನ್ನು ಖಂಡಿಸಿ, ಸೂಕ್ತ ತನಿಖೆಯೊಂದಿಗೆ ಅಪರಾಧಿಗಳಿಗೆ ಕಠಿಣ ಶಿಕ್ಷೆಯಾಗಬೇಕೆಂದು ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕುಂದಾಪುರ ವತಿಯಿಂದ ಕುಂದಾಪುರದ ಮಿನಿ ವಿಧಾನಸೌಧ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿತು. ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಜ್ವಲ್ “ಯುವತಿಯ ಮೇಲೆ ನಡೆದ ಅಮಾನವೀಯ ಅತ್ಯಾಚಾರ ಪ್ರಕರಣವನ್ನು ಎಬಿವಿಪಿ ತೀವ್ರವಾಗಿ ಖಂಡಿಸುತ್ತದೆ. ಮಹಿಳೆಯರನ್ನು ಪೂಜಿಸುವ ಪರಂಪರೆಯನ್ನು ಹೊಂದಿರುವ ಜಗತ್ತಿನ ಶ್ರೇಷ್ಠ ದೇಶದಲ್ಲಿ ಇಂತಹ ಕ್ರೂರ ಘಟನೆಗಳು ನಡೆಯುತ್ತಿರುವುದು ಅತ್ಯಂತ ದುಃಖಕರ ಮತ್ತು ವಿಷಾದನೀಯ. ಯುವತಿಯು ಸಾವನ್ನಪ್ಪಲು ಕಾರಣರಾದ ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಎಬಿವಿಪಿ ಆಗ್ರಹಿಸುತ್ತದೆ” ಎಂದರು. ಪ್ರತಿಭಟನೆಯಲ್ಲಿ ಎಬಿವಿಪಿ ರಾಜ್ಯ ಸಹಕಾರ್ಯದರ್ಶಿ ಸಂದೇಶ್ ರೈ ಮಜಕ್ಕಾರ್ , ತಾಲೂಕಿನ ಕಾರ್ಯಕರ್ತರಾದ ನಿರಂಜನ್ , ದೀಪಕ್ , ಪ್ರಥ್ವಿಕ್ , ಪದ್ಮನಾಭ, ಅಭಿಷೇಕ್ , ಶಶಿಕಿರನ್ ಮುಂತಾದವರು ಉಪಸ್ಥಿರಿದ್ದರು.
Author: ಸುನಿಲ್ ಹೆಚ್. ಜಿ. ಬೈಂದೂರು
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಉಡುಪಿ ಜಿಲ್ಲಾ ಪಂಚಾಯತ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಡಾ. ನವೀನ್ ಭಟ್ ವೈ ಅಧಿಕಾರ ಸ್ವೀಕರಿಸಿದರು. ಇವರು ಈ ಹಿಂದೆ ಹಾಸನ ಉಪವಿಭಾಗದಲ್ಲಿ ಉಪ ವಿಭಾಗಾಧಿಕಾರಿಯಾಗಿದ್ದರು. ಉಡುಪಿ ಜಿಲ್ಲಾ ಸಿಇಓ ಆಗಿದ್ದ ಪ್ರೀತಿ ಗೆಲ್ಹೋಟ್ ಅಧಿಕಾರ ಹಸ್ತಾಂತರಿಸಿದರು
ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟ : ಡಾ. ಶಿವರಾಮ ಕಾರಂತ ಪ್ರತಿಷ್ಠಾನ ಕೋಟ, ಕೋಟತಟ್ಟು ಗ್ರಾಮ ಪಂಚಾಯತ್ , ಡಾ. ಶಿವರಾಮ ಕಾರಂತ ಟ್ರಸ್ಟ್ ಉಡುಪಿ ಇವರ ಆಶ್ರಯದಲ್ಲಿ ನಡೆಯುವ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಹಾಗೂ ಹತ್ತು ದಿನಗಳ ಕಾಲ ನಡೆಯುವ ಆನಲೈನ್ ಸಾಹಿತ್ಯಿಕ – ಸಾಂಸ್ಕೃತಿಕ ದಿಬ್ಬಣ ಕಾರ್ಯಕ್ರಮದ ಆಲ್ಮೋರ – 2020 ’ಮರೆಯಲಾಗದ ಶಬ್ಧತೀರ’ ಹೆಸರನ್ನು ಗೀತಾನಂದ ಫೌಂಢೇಶನ್ನ ಪ್ರವರ್ತಕ, ಕಾರಂತ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಆನಂದ್ ಸಿ. ಕುಂದರ್ ಅನಾವರಣಗೊಳಿಸಿದರು. ಅನಾವರಣಗೊಳಿಸಿ ಮಾತನಾಡಿ, ಕಾರಂತರ ಬದುಕಿನ ಚಿತ್ರಣವನ್ನು ಇಂದಿನ ಸಮಾಜಕ್ಕೆ ಪ್ರಸ್ತುತಿ ಪಡಿಸುವ ಜವಾಬ್ದಾರಿ ನಮ್ಮ ಮೇಲಿದೆ ಆದ್ದರಿಂದ ಕಾರಂತರ ವಿಷಯಾಧರಿತ ಕಾರ್ಯಕ್ರಮಗಳನ್ನು ಇನ್ನಷ್ಟೂ ಕಾರಂತ ಥೀಮ್ ಪಾರ್ಕ್ನಲ್ಲಿ ಆಯೋಜನೆಗೊಳ್ಳಲಿದೆ ಎಂದರು. ಆಯ್ಕೆ ಸಮಿತಿಯ ಯು. ಎಸ್ ಶೆಣೈ ಮಾತಾನಾಡಿ, ಈ ವರ್ಷ ಸಾಹಿತ್ಯ ಕ್ಷೇತ್ರದಲ್ಲಿ ಅನುಪಮ ಸೇವೆಯನ್ನು ಪರಿಗಣಿಸಿ ನಾಡೋಜ ಡಾ. ಎಸ್ .ಎಲ್. ಭೈರಪ್ಪ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಉತ್ತರ ಪ್ರದೇಶದಲ್ಲಿ ಅಮಾಯಕ ದಲಿತ ಯುವತಿ ಮನೀಷಾ ವಾಲ್ಮಿಕಿ ಮೇಲೆ ಅತ್ಯಾಚಾರ ನಡೆಸಿ ಅಮಾನುಷವಾಗಿ ಕೊಲೆ ಮಾಡಿರುವ ಕಾಮಾಂಧರ ಪೈಶಾಚಿಕ ಕುಕೃತ್ಯವನ್ನು ಖಂಡಿಸಿ ಮತ್ತು ಸಂತ್ರಸ್ತ ಕುಟುಂಬಕ್ಕೆ ಸಾಂತ್ವಾನ ಹೇಳಲು ತೆರಳುತ್ತಿದ್ದ ಕಾಂಗ್ರೆಸ್ ಪಕ್ಷದ ನಾಯಕರಾದ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿಯವರ ಬಂಧನವನ್ನು ಖಂಡಿಸಿ ಬೈಂದೂರು ಯುವ ಕಾಂಗ್ರೆಸ್ ವತಿಯಿಂದ ಬೈಂದೂರು ಸರ್ಕಲ್ ಬಳಿ ಪ್ರತಿಭಟನೆ ನೆಡೆಸಲಾಯಿತು. ಪ್ರತಿಭಟನೆಗೂ ಮುನ್ನ ಕಾಮಾಂಧರಿಂದ ಅಮಾನುಷವಾಗಿ ಹತ್ಯೆಯಾದ ದಲಿತ ಯುವತಿಯ ಆತ್ಮಕ್ಕೆ ಶಾಂತಿ ಕೋರಿ ಮೌನ ಪ್ರಾರ್ಥನೆ ಸಲ್ಲಿಸಲಾಯಿತು. ಸಂತೃಸ್ತ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ಒತ್ತಾಯಿಸಿ ಅತ್ಯಾಚಾರಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳದ ಉತ್ತರ ಪ್ರದೇಶ ಬಿಜೆಪಿ ಸರಕಾರದ ಮುಖ್ಯಮಂತ್ರಿ ಆಧಿತ್ಯನಾಥರ ಪ್ರತಿಕೃತಿ ದಹಿಸಲಾಯಿತು. ಬ್ಲಾಕ್ ಅಧ್ಯಕ್ಷರಾದ ಎಸ್. ಮದನ್ ಕುಮಾರ್, ಪ್ರಧಾನ ಕಾರ್ಯದರ್ಶಿ ನಾಗರಾಜ ಗಾಣಿಗ, ಗಣೇಶ ಪೂಜಾರಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೌರಿ ದೇವಾಡಿಗ, ಶಾಂತಿ ಪೆರೇರಾ, ಯುವ ಕಾಂಗ್ರೆಸ್ ಅಧ್ಯಕ್ಷ ಶೇಖರ್…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಸಂಗಮ್ ಬಳಿ ನೂತನ ಬಿಗ್ಬಾಸ್ ಮೆನ್ಸ್ ಎಕ್ಸ್ಕ್ಲ್ಯೂಸಿವ್ ಫ್ಯಾಶನ್ ವೇರ್ ಮಳಿಗೆಯನ್ನು ಬಿಗ್ಬಾಸ್ ಸೀಸನ್ – 7ನ ವೀಜೇತ, ನಟ ಶೈನ್ ಶೆಟ್ಟಿ ಉದ್ಘಾಟಿಸಿದರು. ಈ ಸಂದರ್ಭ ಪುರಸಭಾ ಸದಸ್ಯರಾದ ಅಬು ಬಾಯಿ, ಉದ್ಯಮಿಗಳಾದ ಕಾಳವಾರ ಉದಯ ಕುಮಾರ್ ಶೆಟ್ಟಿ, ಕೆ. ನಾಗರಾಜ, ರೋಹಿದಾಸ್ ನಾಯಕ್ ಮೋಹಂ ಸಾಹೇಬ್, ಪಾಲ್ಲಿ ಹುಸ್ಮಾನ್, ವಿಜಯ್ ಕುಂದರ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಯಕೂಬ್ ಖಾದರ್ ಗುಲ್ವಾಡಿ ನಿರೂಪಿಸಿದರು
ಕುಂದಾಪ್ರ ಡಾಟ್ ಕಾಂ ವರದಿ. ಕುಂದಾಪುರ: ‘ಈ ಊರ್ ಚಂದ, ಈ ಊರ ಜನು ಚಂದ, ಈ ಊರ ಭಾಷೆ ಚಂದ, ನಾನಿಲ್ಲೇ ಇದ್ದುಬಿಡಲೆ ಅಂತ ಅನಿಸುತ್ತಿದೆ’ ಹಿಂಗೆ ಕುಂದಾಪುರದವರೇ ನಾಚುವಂತೆ ಕುಂದಾಪ್ರ ಕನ್ನಡದಲ್ಲಿ ಮನಬಿಚ್ಚಿ ಮಾತಾಡ್ತಾ ಹಳ್ಳಿಯ ಬದುಕಿನೊಂದಿಗೆ ಬೆರೆತುಹೋಗಿದ್ದಾರೆ ಸ್ಪೇನ್ ದೇಶದಿಂದ ಬಂದ ಯುವತಿ ತೆರೆಸಾ. ದಕ್ಷಿಣ ಭಾರತ ಪ್ರವಾಸಕ್ಕೆಂದು ಮುಂಬೈಗೆ ಬಂದಿದ್ದ ತೆರೆಸಾ ಅವರು ಲಾಕ್ಡೌನ್ ಕಾರಣದಿಂದ ಸ್ಪೇಯ್ನ್ ದೇಶಕ್ಕೆ ಹಿಂದಿರುಗಲಾರದೇ ತನ್ನ ಅಣ್ಣ ಕಾರ್ಲೂಸ್ ಅವರ ಆಪ್ತ ಗೆಳೆಯ ಬೈಂದೂರು ತಾಲೂಕಿನ ಹೇರಂಜಾಲಿನ ಕೃಷ್ಣ ಪೂಜಾರಿ ಅವರೊಂದಿಗೆ ನಾಲ್ಕು ತಿಂಗಳ ಹಿಂದೆ ಬೈಂದೂರು ತಾಲೂಕಿನ ಹೆರಂಜಾಲಿಗೆ ಬಂದು, ಅವರು ಆ ಮನೆಯ ಮಗಳಾಗಿ ಹೋಗಿದ್ದಾರೆ. ಕೃಷ್ಣ ಪೂಜಾರಿ ಅವರ ತಂದೆ-ತಾಯಿ, ಸಹೋದರ-ಸಹೋದರಿಯರೊಂದಿಗೆ ಮನೆ ಮಂದಿಯಂತೆ ಹಳ್ಳಿ ಸೊಗಡಿನೊಂದಿಗೆ ಬೆರೆತುಹೋಗಿದ್ದಾರೆ. ಕುಂದಾಪ್ರ ಡಾಟ್ ಕಾಂ ವರದಿ. ತೆರೆಸಾ ಅವರು ಈಗ ಮನೆಮಂದಿಯ ಜತೆ ಕೃಷಿ ಕಾರ್ಯದಲ್ಲಿ ಭಾಗಿಯಾಗುತ್ತಾರೆ. ಗೊಬ್ಬರ ಹೊತ್ತು ಗದ್ದೆಗೆ, ತೋಟಕ್ಕೆ ಹಾಕುತ್ತಾರೆ. ಕೃಷ್ಣ ಪೂಜಾರರ ತಾಯಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರಾಗಿ ಡಾ. ಕರುಣಾಕರ ಎ. ಕೋಟೆಗಾರ್ ನೇಮಕಗೊಂಡಿದ್ದಾರೆ. ಕರ್ನಾಟಕದ ರಾಜ್ಯಪಾಲರು ಮುಂದಿನ ಮೂರು ವರ್ಷದ ಅವಧಿಗೆ ಅವರನ್ನು ನಾಮನಿರ್ದೇಶನ ಮಾಡಿದ್ದಾರೆ. ಡಾ. ಕರುಣಾಕರ ಕೋಟೆಗಾರ್ ಅವರು ಎಂಐಟಿ ಮಣಿಪಾಲದಲ್ಲಿ ಕಂಪ್ಯೂಟರ್ ಅಪ್ಲಿಕೇಶನ್ ವಿಭಾಗದ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥರಾಗಿದ್ದು, ಕಳೆದು 22 ವರ್ಷಗಳಿಂದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಿಎಸ್ಸಿ, ಎಂಸಿಎ ಪದವಿ ಪೂರ್ಣಗೊಳಿಸಿದ್ದ ಕರುಣಾಕರ್ ಅವರು 2009ರಲ್ಲಿ ಪಿಎಚ್ಡಿ ಪದವಿ, 2011 ಐರ್ರ್ಯಾಂಡ್ನಲ್ಲಿ ಪೋಸ್ಟ್ ಡಾಕ್ಟೋರಲ್ ಫೆಲೋಶಿಪ್ ಪಡೆದಿದ್ದಾರೆ. ಅಲ್ಲದೇ ಇವರು ಪುಲ್ಬ್ರೈಟ್ ಯುಎಸ್ಎ ಹಾಗೂ ಡಿಎಎಡಿ ಜರ್ಮನಿ ಸಂಸ್ಥೆಗಳ ಸ್ಕಾಲರ್ ಕೂಡ ಆಗಿದ್ದಾರೆ. 2012ರಲ್ಲಿ ಬೆಸ್ಟ್ ಟೀಚರ್ ಅವಾರ್ಡ್, 2013ರಲ್ಲಿ ಇಂಟಲೆಕ್ಚುವಲ್ ವೆಂಚರ್ಸ್ನಿಂದ ಇನ್ವೆಂಕ್ಷನ್ ಅವಾರ್ಡ್, 2014ರಲ್ಲಿ ಬೆಸ್ಟ್ ಪೇಪರ್ ಅವಾರ್ಡ್ ಪಡೆದಿದ್ದಾರೆ. ಈವರೆಗೆ 50ಕ್ಕೂ ಹೆಚ್ಚು ಭಾರಿ ಅಂತರಾಷ್ಟ್ರೀಯ ಜರ್ನಲ್ಗಳಲ್ಲಿ ರಿಸರ್ಚ್ ಪೇಪರ್ ಪ್ರಕಟಿಸಿದ್ದಾರೆ. ಹತ್ತಾರು ವಿಷಯದ ಬಗ್ಗೆ ದೇಶ-ವಿದೇಶಗಳಲ್ಲಿ ವಿಷಯ ಮಂಡನೆ ಮಾಡಿದ್ದಾರೆ. ಇತ್ತಿಚಿಗೆ ಇವರ ಸಂಶೋಧನಾ ಕೆಲಸವೊಂದು…
ಕುಂದಾಪ್ರ ಡಾಟ್ ಕಾಂ ವರದಿ. ಬೈಂದೂರು: ನೆಮ್ಮದಿಯಿಂದ ವಾಸಿಸಲು ಸುಸಜ್ಜಿತ ಸೂರು ನಿರ್ಮಿಸಿಕೊಳ್ಳಬೇಕೆಂಬ ಹಂಬಲವೊಂದು ಆ ಕುಟುಂಬಕ್ಕೆ ಗಗನಕುಸುಮವಾಗಿದ್ದ ಹೊತ್ತಿನಲ್ಲಿ, ತಾಲೂಕಿನ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ನ ಮಾನವೀಯ ನೆರವು ಅವರ ಕನಸನ್ನು ನನಸಾಗಿಸಿದೆ. ಉಪ್ಪುಂದದ ಬಾಯಂಹಿತ್ಲುವಿನಲ್ಲಿ ಕೇವಲ ಒಂದೆರಡು ತಿಂಗಳುಗಳಲ್ಲಿ ಸುಂದರ ಮನೆಯೊಂದು ಸಿದ್ಧಗೊಂಡಿದೆ. ಬೈಂದೂರು ತಾಲೂಕಿನ ಉಪ್ಪುಂದ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಾಯಂಹಿತ್ಲು ನಿವಾಸಿ ಬೇಬಿ ಸುಬ್ಬಯ್ಯ ದೇವಾಡಿಗ ಎಂಬುವವರ ಕುಟುಂಬ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟಿನ ಈ ಮಹತ್ವಾಕಾಂಕ್ಷಿ ಯೋಜನೆಯ ಫಲಾನುಭವಿಗಳು. 2 ತಿಂಗಳಿನಲ್ಲಿ ಗೃಹ ನಿರ್ಮಾಣ ಪೂರ್ಣ: ಬೇಬಿ ದೇವಾಡಿಗ ಅವರ ಕುಟುಂಬ ಸುಮಾರು 30 ವರ್ಷಗಳಿಂದ ಚಿಕ್ಕ ಗುಡಿಸಿಲಿನಲ್ಲಿ ವಾಸಿಸುತ್ತಿದ್ದರು. ಇತ್ತಿಚಿನ ವರ್ಷಗಳಲ್ಲಿ ಅದು ತೀರ ದುಸ್ಥಿತಿಗೆ ತಲುಪಿದ್ದರಿಂದ ಹೊಸ ಮನೆ ನಿರ್ಮಾಣಕ್ಕೆ ಮುಂದಾಗಿದ್ದರು. ಆದರೆ ಅವರಿಗೆ ಆರ್ಥಿಕ ಅಡಚಣೆ ಎದುರಾಗಿತ್ತು. ಆರಂಭದಲ್ಲಿ ಮನೆಯ ತಳಪಾಯ ನಿರ್ಮಾಣಕ್ಕೆ ಅವರು ಕೂಡಿಸಿಟ್ಟಿದ್ದ ಒಂದಿಷ್ಟು ಹಣದೊಂದಿಗೆ ವಂಡ್ಸೆಯ ರಮೇಶ್ ದೇವಾಡಿಗ ಹಾಗೂ ಒಂದಿಷ್ಟು ದಾನಿಗಳು ನೆರವಾಗಿದ್ದರು. ಮನೆಯ…
ಕುಂದಾಪ್ರ ಡಾಟ್ ಕಾಂ ವರದಿ. ಕುಂದಾಪುರ: ಕೊಲ್ಲೂರು-ಕೊಡಚಾದ್ರಿಯನ್ನು ಸುಲಭವಾಗಿ ಸಂಪರ್ಕಿಸಬಹುದಾದ ಮಹತ್ವಾಕಾಂಕ್ಷಿಯ ರೋಪ್-ವೇ ಯೋಜನೆಯ ಜಾರಿಗೆ ಸಿದ್ದತೆ ನಡೆಯುತ್ತಿದೆ. ಅದು ಅನುಷ್ಠಾನಗೊಂಡರೆ ಕರಾವಳಿಯ ಮೊದಲ ರೋಪ್-ವೇ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದ್ದು, ಬೈಂದೂರು ಹಾಗೂ ಕುಂದಾಪುರ ತಾಲೂಕುಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಅರ್ಥಿಕ, ಸಾಮಾಜಿಕ ಪ್ರಗತಿ ಸಾಧ್ಯವಾಗಲಿದೆ. ಕೊಲ್ಲೂರು-ಕೊಡಚಾದ್ರಿ ನಂಟು: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಕೇರಳ ಸೇರಿದಂತೆ ವಿವಿಧ ರಾಜ್ಯಗಳ ಯಾತ್ರಾರ್ಥಿಗಳು ಸಾವಿರಾರು ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಅವರಲ್ಲಿ ಬಹುಪಾಲು ಮಂದಿ ಕೊಡಚಾದ್ರಿ ಸರ್ವಜ್ಞ ಪೀಠಕ್ಕೂ ತೆರಳುವ ಹರಕೆ ಹೊತ್ತು ಬಂದಿರುತ್ತಾರೆ. ದೇವಿ ಮೂಕಾಂಬಿಕೆಯ ದರ್ಶನ ಮಾಡಿದವರು ಕೊಡಚಾದ್ರಿಯ ಸರ್ವಜ್ಞ ಪೀಠ ದರ್ಶನ ಮಾಡುವುದರೊಂದಿಗೆ ಅವರ ಧಾರ್ಮಿಕ ಯಾತ್ರೆ ಸಮಾಪ್ತಿಗೊಳ್ಳುತ್ತದೆ. ಹಾಗಾಗಿ ಕೊಲ್ಲೂರು ಶ್ರೀ ಮೂಕಾಂಬಿಕೆಯನ್ನು ನಂಬಿದ ಭಕ್ತರಿಗೆ ಕೊಡಚಾದ್ರಿ ಬಹುಮುಖ್ಯ ಆರಾಧನಾ ತಾಣವಾಗಿದೆ. ಕುಂದಾಪ್ರ ಡಾಟ್ ಕಾಂ ವರದಿ. ಪ್ರಸಿದ್ಧ ಟ್ರಕ್ಕಿಂಗ್ ಪಾಯಿಂಟ್: ಕೊಡಚಾದ್ರಿ ಬೆಟ್ಟ ಧಾರ್ಮಿಕ ಐತಿಹ್ಯ ಹೊಂದಿರುವ ಜೊತೆಗೆ ಪ್ರಸಿದ್ಧ ಟ್ರಕ್ಕಿಂಗ್ ಪಾಯಿಂಟ್ ಕೂಡ ಹೌದು. ಇಲ್ಲಿಗೆ ಟ್ರಕ್ಕಿಂಗ್’ಗಾಗಿ ಸಾವಿರಾರು ಮಂದಿ…
ಕುಂದಾಪ್ರ ಡಾಟ್ ಕಾಂ ವರದಿ . ಕುಂದಾಪುರ: ಹಾಲಿನ ಉತ್ಪನ್ನದ ರೀತಿಯಲ್ಲಿಯೇ, ತೆಂಗಿನ ಮರದ ಈ ಉತ್ಪನ್ನವೊಂದು ಸದ್ಯದಲ್ಲಿಯೇ ಮಾರುಕಟ್ಟೆಗೆ ಬರಲಿದೆ. ನೀರಾ, ಸೇಂದಿ, ಕಳ್ಳು ಎನ್ನುವ ಥರಹೇವಾರಿ ಹೆಸರಲ್ಲಿ ಗುರುತಿಸಿಕೊಂಡ ಪದಾರ್ಥ ಇನ್ನು ಮುಂದೆ ತಂಪು ಪಾನೀಯದ ಹಾಗೆ ದೊರೆಯಲಿದೆ. ಆದರೆ ಕುಡಿದವರಿಗೆ ಅಮಲು ಇರೋದಿಲ್ಲ! ಕಲ್ಪರಸ ಎಂದು ಕರೆಯಲ್ಪಡುವ ತೆಂಗಿನ ಮರದ ಜೇನು ಬಣ್ಣದ ಈ ತಾಜಾ ಸಿಹಿ ಪಾನಿಯ ಎಳನೀರಿಗಿಂತಲೂ ಆರೋಗ್ಯಕ್ಕೆ ಹಿತಕರ. ಉಡುಪಿ ಜಿಲ್ಲಾ ಭಾರತೀಯ ಕಿಸಾನ್ ಸಂಘ ಮಾರ್ಗದರ್ಶನದಲ್ಲಿ ಪ್ರಾರಂಭವಾಗಿರುವ ಉಡುಪಿ ಕಲ್ಪರಸ ತೆಂಗು ಮತ್ತು ಸರ್ವ ಸಾಂಭಾರ ಉತ್ಪಾದಕರ ಕಂಪನಿ (ಉಕಾಸ) ಅಬಕಾರಿ ಇಲಾಖೆಯಿಂದ ಕಲ್ಪರಸ ಸಂಗ್ರಹಣೆ, ಸಂಸ್ಕರಣೆ ಮತ್ತು ಮಾರಾಟ ಹಾಗೂ ಅದರ ಉಪ ಉತ್ಪನ್ನಗಳ ತಯಾರಿಕೆಗೆ ಪರವಾನಿಗೆ ಪಡೆದಿದೆ. ಕಲ್ಪರಸ ಮಾರಾಟ ಮಾಡುವ ದೊಡ್ಡ ಪ್ರಮಾಣದ ಘಟಕ ಕುಂದಾಪುರ ತಾಲೂಕು ಜಪ್ತಿಯಲ್ಲಿ ಪ್ರಾರಂಭವಾಗಿದ್ದು, ತೆಂಗಿನ ಬೆಳೆಗಾರರಲ್ಲಿ ಆಶಾ ಭಾವನೆ ಮೂಡಿಸಿದೆ. ಕಲ್ಪರಸ ಹಾಗೂ ಅದರ ಉಪ ಉತ್ಪನ್ನ ಸೆಪ್ಟೆಂಬರ್ ತಿಂಗಳಲ್ಲಿ ಮಾರುಕಟ್ಟೆಗೆ ಬರಲಿದೆ.…
