Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಪರಿಸರ ಉಳಿವಿನ ಜಾಗೃತಿಗಾಗಿ ಸಿದ್ಧಗೊಂಡ ಬೀಜ ಗಣಪ
    ವಿಶೇಷ ವರದಿ

    ಪರಿಸರ ಉಳಿವಿನ ಜಾಗೃತಿಗಾಗಿ ಸಿದ್ಧಗೊಂಡ ಬೀಜ ಗಣಪ

    No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    ಕುಂದಾಪ್ರ ಡಾಟ್ ಕಾಂ ಸುದ್ದಿ.
    ಕುಂದಾಪುರ: ಪರಿಸರದ ಹಸಿರು ಕ್ಷೀಣಿಸಿ ಜನರ ಬದುಕಿನ ಮೇಲೆ ಆಗುತ್ತಿರುವ ದುಷ್ಪರಿಣಾಮ ತಡೆಯಲು ಪರಿಸರ ಪ್ರೇಮಿಗಳು ನಡೆಸುತ್ತ ಬಂದಿರುವ ವಿವಿಧ ಅಭಿಯಾನಗಳ ಸಾಲಿಗೆ ಇದೀಗ ಬೀಜಗಣಪ ಸೇರ್ಪಡೆ ಆಗಲಿದೆ. ಸದ್ಯ ಮರವಂತೆ ಕೇಂದ್ರಿತವಾಗಿ ನಡೆಯುವ ಈ ಅಭಿಯಾನದ ಆರಂಭಕ್ಕೆ ಜನಪ್ರಿಯ ಹಬ್ಬವಾದ ಗಣೇಶ ಚತುರ್ಥಿಯ ಮುಹೂರ್ತ ನಿಗದಿಯಾಗಿದೆ. ಗಣೇಶ ವಿಗ್ರಹಗಳನ್ನು ನಿರ್ಮಿಸುವ ಅಲ್ಲಿನ ಕಲಾವಿದ ಸತೀಶ ಮಧ್ಯಸ್ಥ ಅದಕ್ಕಾಗಿ ಬೀಜಗಣಪತಿಯ ಮೂರ್ತಿಗಳನ್ನು ಸಿದ್ಧಪಡಿಸುವುದರಲ್ಲಿ ನಿರತರಾಗಿದ್ದಾರೆ. ಇಂತಹ ಕೆಲಸ ಆರಂಭವಾಗಿರುವ ಸುದ್ದಿ ತಿಳಿದು ಮಧ್ಯಸ್ಥರ ಮನೆಗೆ ಹೋದ ’ಪ್ರಜಾವಾಣಿ’ಗೆ ಅವರು ಬಿಡುವು ಮಾಡಿಕೊಂಡು ಅಭಿಯಾನದ ವಿವರ ನೀಡಿದರು.

    Click Here

    Call us

    Click Here

    ಸಾಸ್ತಾನದ ವಿನಯಚಂದ್ರ ಈಗಾಗಲೆ ಹಲವೆಡೆ ಬೀಜದುಂಡೆಗಳ ಅಭಿಯಾನ ನಡೆಸಿ ಸುದ್ದಿ ಮಾಡಿದ್ದಾರೆ. ಒಂದೆರಡು ಕಡೆ ಸತೀಶ ಮಧ್ಯಸ್ಥ ಅವರ ಜತೆಯಾಗಿದ್ದರು. ಆಗ ಅವರಿಗೆ ಬೀಜಗಣಪ ಅಥವಾ ಜೀವಗಣಪ ಯೋಜನೆ ಹೊಳೆಯಿತು. ಅವರ ’ಮಿಶನ್ ಅರ್ಥ್’ ಸಂಸ್ಥೆಯ ಗೆಳೆಯರು ಈಗ ಅದರ ಅನುಷ್ಠಾನಕ್ಕೆ ಮುಂದಾಗಿದ್ದಾರೆ.

    ಬೀಜ ಗಣಪ ತಯಾರಿ ಹೇಗೆ? : ಆವೆ ಮಣ್ಣನ್ನು ಮಾತ್ರ ಬಳಸಿ ಪುಟ್ಟಪುಟ್ಟ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಮಾಡಿ ಅದರ ಟೊಳ್ಳುಭಾಗದಲ್ಲಿ ವಿವಿಧ ಜಾತಿಯ ಮೂರುನಾಲ್ಕು ಬೀಜಗಳನ್ನು ಹುದುಗಿಸಿದ ಬೀಜದುಂಡೆಗಳನ್ನು ಇಡಲಾಗುತ್ತದೆ. ಸದ್ಯ ಶ್ರೀಗಂಧ, ಹುಣಿಸೆ, ಗೋಲ್ಡನ್ ಬ್ಯಾಂಬೂ, ಸೀಗೆ ಬೀಜಗಳನ್ನು ಬಳಸಲಾಗುತ್ತಿದೆ. ಮುಂದೆ ಕಾಡು ಮರಗಳ ಬೀಜಗಳನ್ನೂ ಬಳಸಲಾಗುವುದು. ಬೀಜಗಣಪತಿಯನ್ನು ಶಾಲಾ ಮಕ್ಕಳಿಗೆ ವಿತರಿಸಲಾಗುತ್ತದೆ. ಮೂರ್ತಿಯನ್ನು ಒಯ್ಯುವ ಮಕ್ಕಳು ಅದನ್ನು ಒಂದು ಪುಟ್ಟ ಹೂಕುಂಡದಲ್ಲಿ ಇರಿಸಿ ಅದರ ತಲೆಭಾಗಕ್ಕೆ ಪ್ರತಿದಿನವೂ ಸ್ವಲ್ಪ ನೀರೆಯಬೇಕಾಗುತ್ತದೆ. ಅದರಿಂದ ಒಂದೆಡೆ ಮೂರ್ತಿಯ ಶಿರೋಭಾಗ ಕರಗುತ್ತದೆ. ನೀರು ಬೀಜದುಂಡೆಯನ್ನು ಒದ್ದೆ ಮಾಡಿ ಹದಿನೈದು ಇಪ್ಪತ್ತು ದಿನಗಳೊಳಗೆ ಬೀಜ ಮೊಳೆಯುವಂತೆ ಮಾಡುತ್ತದೆ. ಗಿಡ ಸಾಕಷ್ಟು ಬಲಿತ ಬಳಿಕ ಮಕ್ಕಳು ಅದನ್ನು ತಮ್ಮ ಸ್ಥಳದಲ್ಲಿ ನೆಡುತ್ತಾರೆ. ಗಣಪ ಮಕ್ಕಳ ಮೆಚ್ಚಿನ ದೇವರಾಗಿರುವುದರಿಂದ ಈ ಕೆಲಸವನ್ನು ಅವರು ಆಸಕ್ತಿಯಿಂದ ಮಾಡುತ್ತಾರೆ ಎನ್ನುವುದು ವಿನಯಚಂದ್ರ ಅವರ ಅಭಿಮತ. ಪ್ರಸಕ್ತ ಗಣೇಶ ಚತುರ್ಥಿ ವೇಳೆ ಇದರ ಪ್ರಯೋಗ ನಡೆಯುತ್ತದೆ. ಯಶಸ್ವಿಯಾದರೆ ಅದನ್ನು ಹಬ್ಬದ ಸಂದರ್ಭಕ್ಕೆ ಸೀಮಿತಗೊಳಿಸದೆ ನಿರಂತರ ನಡೆಸುವ ಉದ್ದೇಶ ಹೊಂದಲಾಗಿದೆ. ಬೀಜದುಂಡೆಗಳ ತಯಾರಿಯಲ್ಲಿ ಶಾಲಾ ಮಕ್ಕಳನ್ನು ತೊಡಗಿಸಿ, ಯಶಸ್ಸು ಪಡೆಯಲಾಗಿತ್ತು. ಬೀಜಗಣಪ ಯಶಸ್ವಿಯಾದರೆ ಈ ಅಭಿಯಾನವನ್ನೂ ಮಕ್ಕಳ ಕೈಗೊಪ್ಪಿಸಲಾಗುವುದು ಎಂದು ಇಬ್ಬರೂ ಹೇಳಿದರು.

    ಬೀಜಗಣಪ ನಿರ್ಮಾಣದ ಹೊಣೆ ಹೊತ್ತಿರುವ ಸತೀಶ ಮಧ್ಯಸ್ಥ ಕಲಾವಿದ. ಕೆಲವು ಮಹತ್ವದ ಕನ್ನಡ ಧಾರಾವಾಹಿಗಳಲ್ಲೂ ನಟಿಸಿದ್ದ ಅವರು ಈಗ ನಾವುಂದ ಶುಭದಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಲಾಶಿಕ್ಷಕರಾಗಿ ದುಡಿಯುತ್ತಿದ್ದಾರೆ. ಚಿತ್ರ ರಚನೆಯ ಜತೆಗೆ ರಂಗಭೂಮಿ ಚಟುವಟಿಕೆಯಲ್ಲೂ ಅವರು ಸಕ್ರಿಯರಾಗಿದ್ದಾರೆ. ತಮ್ಮ ಬಿಡುವಿನ ವೇಳೆಯಲ್ಲಿ ಪರಿಸರಪರವಾದ ಈ ಕಾರ್ಯದಲ್ಲಿ ದುಡಿಯು ಹಂಬಲ ಹೊಂದಿದ್ದಾರೆ.

    ಪ್ರಾಣಿಪಕ್ಷಿಗಳು ಸಹಜ ಕ್ರಿಯೆಯ ಮೂಲಕ ಬೀಜಪ್ರಸಾರ ಮಾಡಿ ಪರಿಸರ ವೃದ್ಧಿಗೆ ಕೊಡುಗೆ ನೀಡುತ್ತವೆ. ಮನುಷ್ಯ ಅದನ್ನು ನಾಶ ಮಾಡುತ್ತಾನೆ. ಬೀಜಗಣಪ ಅಭಿಯಾನವು ಮಕ್ಕಳಲ್ಲಿ ಬೀಜಪ್ರಸಾರದ ಅಗತ್ಯದ ಅರಿವು ಮೂಡಿಸುತ್ತದೆ – ವಿನಯಚಂದ್ರ ಸಾಸ್ತಾನ, ’ಮಿಶನ್ ಅರ್ಥ್’ ಸಂಸ್ಥೆಯ ಅಧ್ಯಕ್ಷ

    Click here

    Click here

    Click here

    Call us

    Call us

    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಸೈಕಲ್‌ನಲ್ಲಿ 3,300 ಕಿಮೀ ಕ್ರಮಿಸಿ ಲಡಾಕ್ ಯಾತ್ರೆ ಪೂರೈಸಿದ ಹಳ್ಳಿಹೊಳೆಯ ಯುವಕ ದಿನೇಶ್‌ ಬೋವಿ

    30/09/2025

    ಶಿಥಿಲ ಮನೆಯಲ್ಲಿಯೇ 12 ಮಂದಿ ವಾಸ. ಇದು ಅಸಹಾಯಕ ಕುಟುಂಬದ ಕಣ್ಣೀರ ಕಥೆ

    03/08/2024

    ಹುಲ್ಕಡಿಕೆ ಜನರ ಬದುಕಿಗಿಲ್ಲ ಭರವಸೆ! ಅಪಾಯಕಾರಿ ಹೊಳೆದಾಟಿ ಶಿಕ್ಷಣ ಪಡೆಯುತ್ತಿರುವ ವಿಶೇಷ ಚೇತನ ಮಕ್ಕಳು

    02/07/2024
    Leave A Reply Cancel Reply

    Call us

    Click Here

    Call us

    Call us

    Call us
    Highest Viewed Recently
    • ಗಂಗೊಳ್ಳಿ: ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮ
    • ಹಟ್ಟಿಅಂಗಡಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಗೆ ಇಟಿ ಟೆಕ್ ಎಕ್ಸ್ ಸ್ಕೂಲ್ ಎಕ್ಸಿಲೆನ್ಸ್ ಪ್ರಶಸ್ತಿ ಗೌರವ
    • ಮನೆಯಲ್ಲಿ ಪುಸ್ತಕಗಳನ್ನು ಓದುವ ಹವ್ಯಾಸವನ್ನು ರೂಢಿಸಿಕೊಳ್ಳಿ: ಶಿವಾನಂದ ಗಾಣಿಗ
    • ರಾಜ್ಯಮಟ್ಟದ ಸ್ಪರ್ಧಾತ್ಮಕ ಲಿಖಿತ ಪರೀಕ್ಷೆ: ನೇಹ ಸತ್ಯನಾರಾಯಣ ರಾಜ್ಯಮಟ್ಟದಲ್ಲಿ ಐದನೇ ರ‍್ಯಾಂಕ್‌
    • ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿ ರಚನೆ: ಅರ್ಜಿ ಆಹ್ವಾನ

    © 2025 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.