Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಸತ್ತು ಸಂಸ್ಕಾರ ಮಾಡಿದ ಮೇಲೆ ಮತ್ತೆ ಬದುಕಿ ಬಂದ ಅಸಾಮಿ!
    Recent post

    ಸತ್ತು ಸಂಸ್ಕಾರ ಮಾಡಿದ ಮೇಲೆ ಮತ್ತೆ ಬದುಕಿ ಬಂದ ಅಸಾಮಿ!

    Updated:09/11/20151 Comment
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    ಕುಂದಾಪ್ರ ಡಾಟ್ ಕಾಂ ವರದಿ

    Click Here

    Call us

    Click Here

    ಕುಂದಾಫುರ: ಸುರತ್ಕಲ್ ಸಮೀಪ ನಡೆದ ರಸ್ತೆ ಅಪಘಾತದಲ್ಲಿ ಮಡಿದ ವ್ಯಕ್ತಿಯ ಶವವನ್ನು ಬಾರ್ಕೂರು ಬೆಣೆಕುದ್ರುವಿಗೆ ತಂದು ಸಂಸ್ಕಾರ ಮಾಡಿ ದಿನಗಳೇ ಕಳೆದಿತ್ತು. ಆದರೆ ಮೃತಪಟ್ಟು ಸಂಸ್ಕಾರ ಮಾಡಿದ ವ್ಯಕ್ತಿ ಮತ್ತೆ ಪ್ರತ್ಯಕ್ಷವಾಗಿ ಆಶ್ಚರ್ಯ, ಭಯ ಎರಡನ್ನೂ ಹುಟ್ಟಿಸಿದ್ದಾನೆ! ಅಂದಹಾಗೆ ಬಾರ್ಕೂರು ಬೆಣ್ಣೆಕುದ್ರು ಮೂಲದ ಶಂಕರ(48) ಸತ್ತು ಬದುಕಿ ಬಂದ ಅಸಾಮಿ

    ಕಳೆದ ವಾರ ಮಂಗಳೂರು ಸುರತ್ಕಲ್‌ನ ರಸ್ತೆ ಅಪಘಾತದಲ್ಲಿ ಓರ್ವ ವ್ಯಕ್ತಿ ಮೃತಪಟ್ಟು, ಶವದ ಗುರುತಿಗಾಗಿ ಹಾಗೇಯೇ ಇರಿಸಲಾಗಿತ್ತು. ಈ ವಿಚಾರ ಶಂಕರನ ಸಂಬಂಧಿಗಳು ಅದು ಆತನದೇ  ಶವವಾಗಿರಬಹುದೆಂಬ ಅನುಮಾನದಿಂದ ಶವ ಪರಿಶೀಲನೆ ನಡೆಸಿದ್ದರು. ಮೃತಪಟ್ಟ ವ್ಯಕ್ತಿಯ ಕೈಯಲ್ಲಿನ ಗುರುತು ಮತ್ತು ಕೆಲವೊಂದು ನಿರ್ದಿಷ್ಟ ಹೋಲಿಕೆಗಳಿಂದ ಅದು ಶಂಕರನ ಶವ ಎಂದು ತಿರ್ಮಾನಕ್ಕೆ ಬಂದು ಪೊಲೀಸ್ ಇಲಾಖೆಗೆ ತಿಳಿಸಿ ಶವವನ್ನು ಶಂಕರನ ಹುಟ್ಟೂರಾದ ಬಾರ್ಕೂರಿನ ಬೆಣ್ಣೆಕುದ್ರುಗೆ ತಂದು ಸಂಸ್ಕಾರ ಮಾಡಲಾಗಿತ್ತು. (ಕುಂದಾಪ್ರ ಡಾಟ್ ಕಾಂ ವರದಿ)

    ಇದಾದ ಕೆಲವೇ ದಿನಗಳಲ್ಲಿ ಶಂಕರನ ಬಂಧುವಿಗೊಂದು ಅಚ್ಚರಿ ಕಾದಿತ್ತು. ಸಾಸ್ತಾನದ ಬಾರ್‌ಗೆ ತೆರಳಿದ್ದ ಶಂಕರನ ಆತ ಮೃತಪಟ್ಟ ವಿಚಾರವನ್ನು ಪ್ರಸ್ತಾಪಿಸಿದ್ದರು. ಆಗ ಅಲ್ಲಿಯೇ ಇದ್ದ ಆಶ್ಚರ್ಯಗೊಂಡು ತಾನೇ ಆತನಿಗೆ ಜೀವಂತವಾಗಿಯೇ ಇದ್ದಾನೆ. ತಾನೇ ಗುಲ್ಬರ್ಗಾದ ಹೋಟೆಲ್ ಒಂದರಲ್ಲಿ ಕೆಲಸ ಆತನಿಗೆ ಕೆಲಸ ಕೊಡಿಸಿದ್ದೇನೆ ಎಂದಿದ್ದಾರೆ. ಇದನ್ನು ದೃಢಪಡಿಸಲು ಆತನಿಗೆ  ಕರೆ ಮಾಡಿದ್ದಾರೆ. ವಿಚಾರ ತಿಳಿದ ಶಂಕರನಿಗೂ ಆಶ್ಚರ್ಯ. ಯಾರು ಸತ್ತಿದ್ದು? ಸಂಸ್ಕಾರ ಮಾಡಿದ್ದು ಯಾರದ್ದು! ಶಂಕರ ಕೂಡಲೇ ಊರಿಗೆ ಮರಳಿದಾಗ ಆತ ಜೀವಂತವಾಗಿರುವುದನ್ನು ಕಂಡ ಸಂಬಂಧಿ, ಸ್ನೇಹಿತರು ಸಂಭ್ರಮ ಪಟ್ಟಿದ್ದಾರೆ. ಆದರೆ ತರಾತುರಿಯಲ್ಲಿ ತಂದು ಸಂಸ್ಕಾರ ಮಾಡಲಾದ ಶವ ಯಾರದ್ದು ಎನ್ನುವ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. (ಕುಂದಾಪ್ರ ಡಾಟ್ ಕಾಂ ವರದಿ)

    ಬಾರ್ಕೂರು ಬೆಣ್ಣೆಕುದ್ರು ಮೂಲದವನಾದ ಶಂಕರ(48) ಗುಂಡ್ಮಿ ಮಾಣಿಕಟ್ಟು ಸಮೀಪದ ಗೌರಿ ಎನ್ನುವವರೊಂದಿಗೆ ಹಲವು ವರ್ಷಗಳ ಹಿಂದೆ ವಿವಾಹವಾಗಿದ್ದ. ವಿಪರೀತವಾಗಿ ಕುಡಿಯುವ ಚಟಕ್ಕೆ ಬಲಿಯಾಗಿದ್ದ ಆತ ತನ್ನ ಹೆಂಡತಿ ಮನೆ ಗುಂಡ್ಮಿ ಮಾಣಿಕಟ್ಟಿನಲ್ಲಿಯೇ ಇರುತ್ತಿದ್ದ. 2 ಗಂಡು ಮತ್ತು ಒಂದು ಮಗಳಿದ್ದರೂ ಕೂಡ ಕುಡಿತಕ್ಕೆ ದಾಸನಾಗಿದ್ದ ಶಂಕರ ಯಾವುದೇ ವಿಷಯಕ್ಕೆ ಬೇಸರ ಮಾಡಿಕೊಂಡು ಕೆಲವು ಸಮಯಗಳಿಂದ ಮನೆಬಿಟ್ಟು ತೆರಳಿದ್ದ. (ಕುಂದಾಪ್ರ ಡಾಟ್ ಕಾಂ ವರದಿ)

    Click here

    Click here

    Click here

    Call us

    Call us

    Like this:

    Like Loading...

    Related

    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಸೈಕಲ್‌ನಲ್ಲಿ 3,300 ಕಿಮೀ ಕ್ರಮಿಸಿ ಲಡಾಕ್ ಯಾತ್ರೆ ಪೂರೈಸಿದ ಹಳ್ಳಿಹೊಳೆಯ ಯುವಕ ದಿನೇಶ್‌ ಬೋವಿ

    30/09/2025

    ಶಿಥಿಲ ಮನೆಯಲ್ಲಿಯೇ 12 ಮಂದಿ ವಾಸ. ಇದು ಅಸಹಾಯಕ ಕುಟುಂಬದ ಕಣ್ಣೀರ ಕಥೆ

    03/08/2024

    ಹುಲ್ಕಡಿಕೆ ಜನರ ಬದುಕಿಗಿಲ್ಲ ಭರವಸೆ! ಅಪಾಯಕಾರಿ ಹೊಳೆದಾಟಿ ಶಿಕ್ಷಣ ಪಡೆಯುತ್ತಿರುವ ವಿಶೇಷ ಚೇತನ ಮಕ್ಕಳು

    02/07/2024

    1 Comment

    1. Sandeep shetty heggadde on 10/11/2015 12:05 am

      Ha ha ha very funny

      Reply

    Leave a ReplyCancel reply

    Call us

    Click Here

    Call us

    Call us

    Call us
    Highest Viewed Recently
    • ಕೋಡಿ ಉಂಜಲೋತ್ಸವ, ಪುಷ್ಪಯಾಗ ಮಹೋತ್ಸವ ಚಪ್ಪರ ಮುಹೂರ್ತ
    • ಶಕ್ತಿ ಮತ್ತು ಸಾಮರ್ಥ್ಯದ ಮೇಲಿನ ನಂಬಿಕೆಯೇ ಗೆಲುವು: ಜೆ.ಪಿ. ಶೆಟ್ಟಿ ಕಟ್ಕೆರೆ
    • ಶಸ್ತ್ರಚಿಕಿತ್ಸೆಗೆ ನೆರವಾದ ಟೀಮ್ ಊರ್ಮನಿ ಮಕ್ಕಳ್‌ ತಂಡ
    • ಅಂತರಾಷ್ಟ್ರೀಯ ಮಟ್ಟದ ವೇದಿಕ್ ಮಾಥ್ಸ್ ಸ್ಪರ್ಧೆ: ಮದರ್ ತೆರೇಸಾ ಶಾಲೆಯ ವಿದ್ಯಾರ್ಥಿಗಳಿಗೆ ಚಾಂಪಿಯನ್‌ಶಿಪ್ ಗರಿ 
    • ಡಾ. ಬಿ.ಬಿ. ಹೆಗ್ಡೆ ಕಾಲೇಜಿನ ವಾರ್ಷಿಕ ಕ್ರೀಡಾಕೂಟ ಸಂಪನ್ನ

    © 2025 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.

    %d