Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಬೈಂದೂರು ತಾಲೂಕು ಗ್ಯಾರೆಂಟಿ ಅನುಷ್ಠಾನ ಸಮಿತಿ ಸಭೆ – ವಿವಿಧ ಯೋಜನೆಗಳ ಪ್ರಗತಿ ಪರಿಶೀಲನೆ
    ಊರ್ಮನೆ ಸಮಾಚಾರ

    ಬೈಂದೂರು ತಾಲೂಕು ಗ್ಯಾರೆಂಟಿ ಅನುಷ್ಠಾನ ಸಮಿತಿ ಸಭೆ – ವಿವಿಧ ಯೋಜನೆಗಳ ಪ್ರಗತಿ ಪರಿಶೀಲನೆ

    No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    Click Here

    ಕುಂದಾಪ್ರ ಡಾಟ್ ಕಾಂ ಸುದ್ದಿ.
    ಬೈಂದೂರು:
    ಬೈಂದೂರು ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿ ಸಭೆ ಇಲ್ಲಿನ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಶುಕ್ರವಾರ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಮೋಹನ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ಜರುಗಿತು.

    Click Here

    Call us

    Click Here

    ಈ ವೇಳೆ ಪ್ರಗತಿ ಪರಿಶೀಲನೆ ಮಾಡಿದ ಅಧ್ಯಕ್ಷರು, ಅನ್ನ ಭಾಗ್ಯ ಯೋಜನೆಯಡಿ ಇದುವರೆಗೆ 22313 ಬಿಪಿಎಲ್  ಫಲಾನುಭವಿಗಳಿಗೆ 477720 ಕ್ವಿಂಟಾಲ್  ಅಕ್ಕಿ ಹಾಗೂ  3219 ಅಂತ್ಯೋದಯ ಫಲಾನುಭವಿಗಳಿಗೆ 85525 ಕ್ವಿಂಟಾಲ್ ಅಕ್ಕಿ ವಿತರಿಸಿರುವ ಕುರಿತು ಪ್ರಗತಿ ಪರಿಶೀಲನೆ ಮಾಡಿದರು ನಂತರ ಶಿರೂರು ಹಡವಿನಕೋಣೆಯಲ್ಲಿ ಹೊಸದಾಗಿ ಪಡಿತರ ವಿತರಣಾ ಕೇಂದ್ರ ಆರಂಭಿಸಲು, ಮುಂದಿನ ವಾರದೊಳಗೆ ಅನುಮತಿ ಸಿಗುವುದಾಗಿ  ಸಭೆಯಲ್ಲಿ ಅಧ್ಯಕ್ಷರು ತಿಳಿಸಿದರು.

    ಗೃಹ ಲಕ್ಷ್ಮಿ ಯೋಜನೆಯಡಿ ಫೆಬ್ರವರಿ ಮಾಹೆಯವರೆಗೆ ಫಲಾನುಭವಿಗಳ ಖಾತೆಗೆ ಅನುದಾನ ಜಮೆ ಆಗಿದ್ದು, ಎಪ್ರಿಲ್ ಮಾಹೆಯ ಗೃಹಲಕ್ಷ್ಮಿ ಅನುದಾನ ಜುಲೈ ಮಾಹೆಯಲ್ಲಿ ಫಲಾನುಭವಿಗಳ ಖಾತೆಗೆ ಜಮೆ ಆಗಿರುವುದಾಗಿ ಹಾಗೂ ಮಾರ್ಚ ಮೇ ಜೂನ್ ಮಾಹೆಯ ಹಣ ಪಾವತಿಗೆ ಬಾಕಿ ಇರುವುದಾಗಿ ಅಧಿಕಾರಿಗಳು ನೀಡಿದ ಪ್ರಗತಿ ವರದಿಯನ್ನು ಅಧ್ಯಕ್ಷರು ಪರಿಶೀಲನೆ ಕೈಗೊಂಡರು.

    ಗೃಹಲಕ್ಷ್ಮಿ ಯೋಜನೆಯ ಮರಣಹೊಂದಿದ ಫಲಾನುಭವಿಗಳ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿ, ಇದುವರೆಗೆ  ಸಮೀಕ್ಷೆ ಪ್ರಕಾರ ಬೈಂದೂರು ಕುಂದಾಪುರ ತಾಲೂಕಿನಲ್ಲಿ ಇದುವರೆಗೆ ಒಟ್ಟು 25079 ಮರಣಹೊಂದಿದ ಪಲಾನುಭವಿಗಳ ಖಾತೆಗೆ  ಒಟ್ಟು ರೂ 77.44 ಲಕ್ಷ ಗೃಹಲಕ್ಷ್ಮಿ ಅನುದಾನ ಜಮೆಯಾಗಿದ್ದು, ಅದರಲ್ಲಿ ಸುಮಾರು 29.00 ಲಕ್ಷದಷ್ಟು ಅನುದಾನ ಸಂಬಂಧಪಟ್ಟ ಬ್ಯಾಂಕ್ನಿಂದ ಸರ್ಕಾರಕ್ಕೆ ಮರು ಜಮೆ ಆಗಿದ್ದು, ಉಳಿದ 22.00 ಲಕ್ಷದಷ್ಟು ಅನುದಾನ ಸರ್ಕಾರಕ್ಕೆ ಮರು ಜಮೆ ಮಾಡಲು ಬಾಕಿ ಇರುವುದಾಗಿ ಅಧಿಕಾರಿಗಳು ಉತ್ತರಿಸಿದರು. ಹಾಗೂ ಕೆಲವೊಂದು ಫಲಾನುಭವಿಗಳ 02 ಖಾತೆಗೆ ಅನುದಾನ ಜಮೆ ಆಗಿರುವ ಬಗ್ಗೆ ಸುದ್ದಿ ಆಗಿದ್ದು, ಇದನ್ನು ಪರಿಶೀಲನೆ ಕೈಗೊಂಡಾಗ ಒಂದು ಫಲಾನುಭವಿಯು ಗೃಹಲಕ್ಷ್ಮಿ ಆರಂಭದ ಆಧಾರ ಲಿಂಕ್ ಆದ ಬ್ಯಾಂಕ್ ಖಾತೆಗೆ ಅನುದಾನ ಜಮೆ ಆಗಿದ್ದು, ತದನಂತರ ದಿನಗಳಲ್ಲಿ ಸದ್ರಿ ಫಲಾನುಭವಿಯು ಹೊಸ ಖಾತೆ ತೆರೆದಾಗಿ ಆ ಖಾತೆಗೂ ಆಧಾರ್ ಲಿಂಕ್ ಮಾಡಿದಾಗ ಆಧಾರ್ ಲಿಂಕ್ ಆದ ಹೊಸ ಖಾತೆಗೆ ಗೃಹಲಕ್ಷ್ಮಿ ಅನುದಾನ ಜಮೆ ಆಗಿದ್ದರಿಂದ ಒಬ್ಬ ಫಲಾನುಭವಿಯ 02 ಖಾತೆಗೆ ಅನುದಾನ ಜಮೆ ಆಗಿರುವುದು ತಂತ್ರಾಂಶದಲ್ಲಿ ತೋರಿಸುತ್ತದೆ ಆದರೆ ಅನುದಾನ ಫಲಾನುಭವಿಯ 02 ಖಾತೆಗೂ ಜಮೆ ಆಗಿರುವುದಿಲ್ಲ ಎಂಬುದಾಗ ಸಭೆಗೆ ಅಧಿಕಾರಿಗಳು ಮಾಹಿತಿ ನೀಡಿದರು.

    ಗೃಹಜ್ಯೋತಿ ಯೋಜನೆಗೆ ಸಂಬಂಧಿಸಿದಂತೆ ಮೆಸ್ಕಾಂ ಇಲಾಖೆ ವ್ಯಾಪ್ತಿಯಲ್ಲಿ ಪಟ್ಟು 29239 ಗೃಹಜ್ಯೋತಿ ಫಲಾನುಭವಿಗಳಿದ್ದು, ಇಲ್ಲಿಯವರೆಗೆ 19356 ಫಲಾನುಭವಿಗಳ ಸರ್ವೆ ಆಗಿದ್ದು, 9883 ಫಲಾನುಭವಿಗಳ ಸರ್ವೆ ಕಾರ್ಯ ಬಾಕಿ ಇರುವುದಾಗಿ ಹಾಗೂ ತಲ್ಲೂರು ಮೆಸ್ಕಾಂ ಇಲಾಖಾ ವ್ಯಾಪ್ತಿಯಲ್ಲಿ 5353 ಫಲಾನುಭವಿಗಳಲ್ಲಿ 3815 ಫಲಾನುಭವಿಗಳ ಸರ್ವೆ ಕಾರ್ಯ ಮುಗಿದಿದ್ದು, 1538 ಬಾಕಿ ಇರುವುದಾಗಿ  ಇದಕ್ಕೆ ಎಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿ ಸದಸ್ಯರು ಸಹಕಾರ ನೀಡುವಂತೆ ಅಧಿಕಾರಿಗಳು ಸಭೆಯಲ್ಲಿ ಕೋರಿದರು.

    Click here

    Click here

    Click here

    Call us

    Call us

    ಶಕ್ತಿ ಯೋಜನೆಯಡಿ ಜೂನ್ ವರೆಗೆ  ರೂ 89,56,43,432.00 ಖರ್ಚಾಗಿರುವ ಪ್ರಗತಿ ವರದಿಯನ್ನು ಅಧ್ಯಕ್ಷರು ಪರಿಶೀಲನೆ ಕೈಗೊಂಡು ಹಳ್ಳಿಹೊಳೆ ಕೊಲ್ಲೂರು ಮಾರ್ಗವಾಗಿ ಬೈಂದೂರು ಕೇಂದ್ರ ಸ್ಥಾನಕ್ಕೆ ಸರ್ಕಾರಿ ಬಸ್ಸು ಓಡಿಸುವ ಬಗ್ಗೆ ಸಾಕಷ್ಟು ಬಾರಿ ಮನವಿ ಮಾಡಿದ್ದರೂ ಇದುವರೆಗೂ ಯಾವ ಕ್ರಮನೂ ಆಗಿರುವುದಿಲ್ಲ. ಬೈಂದೂರು ವಿಧಾನ ಸಭಾ ಕ್ಷೇತ್ರದ ಅರ್ಧ ಭಾಗದ ಮಹಿಳೆಯರಿಗೆ ಮಕ್ಕಳಿಗೆ ಶಕ್ತಿ ಯೋಜನೆಯ ಲಾಭ ಇನ್ನೂ ಸಿಗಲಿಲ್ಲ. ಇದರಿಂದಾಗಿ ಕೊಲ್ಲೂರು ಜಡ್ಕಲ್ ಮುದೂರು ಹಳ್ಳಿಹೊಳೆ ಭಾಗದ ಜನರಿಗೆ ಅನ್ಯಾಯವಾಗಿದೆ  ಈ ಮಾರ್ಗಕ್ಕೆ ಒಂದು ಬಸ್ಸನ್ನಾದರೂ ನೀಡುವಂತೆ ಅಧ್ಯಕ್ಷರು ಅಧಿಕಾರಿಗಳಿಗೆ ತಿಳಿಸಿದರು. ಹಾಗೂ ಈಗಾಗಲೇ ಕುಂದಾಪುರ ಕೊಲ್ಲೂರು ಮಾರ್ಗವಾಗಿ  ಮಂತ್ರಾಲಯಕ್ಕೆ ಈಗಾಗಲೇ ಸ್ಲೀಪರ್ ಸರ್ಕಾರಿ ಬಸ್ ಓಡಿಸಲಾಗುತ್ತಿದೆ. ಈ ಬಸ್ಸನ್ನು ಕುಂದಾಪುರ ಬೈಂದೂರು ಕೊಲ್ಲೂರು ಮಾರ್ಗವಾಗಿ ಮಂತ್ರಾಲಯಕ್ಕೆ ಓಡಿಸುವ ಬಗ್ಗೆ ಕ್ರಮವಹಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.

    ಬೈಂದೂರು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ನಾಗಶಯನ ಪಿ.ಸಿ. ಅವರು ಉಪಸ್ಥಿತರಿದ್ದರು.

    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಡಾ. ಪ್ರದೀಪ್ ಕುಮಾರ ಶೆಟ್ಟಿ ಅವರಿಗೆ ಸ್ವರ್ಣಕಮಲ ರಾಷ್ಟ್ರೀಯ ಪ್ರಶಸ್ತಿ

    25/07/2026

    ಕುಂದಾಪುರ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸಭೆ – ಜೂನ್‌ ತಿಂಗಳಲ್ಲಿ 15.12 ಕೋಟಿ ಬಿಡುಗಡೆ

    25/07/2026

    ಹಂಗಾರಕಟ್ಟೆ ಸರಕಾರಿ ಶಾಲೆ ಮಕ್ಕಳಿಗೆ ಕುರ್ಚಿ ಹಾಗೂ ಆಟದ ಸಾಮಗ್ರಿ ವಿತರಣೆ

    25/07/2026
    Leave A Reply Cancel Reply

    four + five =

    Call us

    Click Here

    Call us

    Call us

    Call us
    Highest Viewed Recently
    • ಬೈಂದೂರು ತಾಲೂಕು ಗ್ಯಾರೆಂಟಿ ಅನುಷ್ಠಾನ ಸಮಿತಿ ಸಭೆ – ವಿವಿಧ ಯೋಜನೆಗಳ ಪ್ರಗತಿ ಪರಿಶೀಲನೆ
    • ಡಾ. ಪ್ರದೀಪ್ ಕುಮಾರ ಶೆಟ್ಟಿ ಅವರಿಗೆ ಸ್ವರ್ಣಕಮಲ ರಾಷ್ಟ್ರೀಯ ಪ್ರಶಸ್ತಿ
    • ಕುಂದಾಪುರ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸಭೆ – ಜೂನ್‌ ತಿಂಗಳಲ್ಲಿ 15.12 ಕೋಟಿ ಬಿಡುಗಡೆ
    • ಹಂಗಾರಕಟ್ಟೆ ಸರಕಾರಿ ಶಾಲೆ ಮಕ್ಕಳಿಗೆ ಕುರ್ಚಿ ಹಾಗೂ ಆಟದ ಸಾಮಗ್ರಿ ವಿತರಣೆ
    • ಕೋಟ: ಹೋಟೆಲ್‌ನಲ್ಲಿ ಅಸ್ವಸ್ಥಗೊಂಡಿದ್ದ ಸಿಬ್ಬಂದಿ ಸಾವು

    © 2026 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.