ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಸಮೃದ್ಧ ಬೈಂದೂರು ಪರಿಕಲ್ಪನೆಯ ಕ್ಲೀನ್ ಕಿನಾರ ಯೋಜನೆಯಲ್ಲಿ ಭೂಮಿ ಟ್ರಸ್ಟ್ ಸಹಕಾರದೊಂದಿಗೆ 170 ವಾರ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡ ಕ್ಲೀನ್ ಕಿನಾರ ತಂಡಕ್ಕೆ ಸ್ವಚ್ಛತಾ ಪರಿಕರಗಳ ಹಸ್ತಾಂತರ ಕಾರ್ಯಕ್ರಮವನ್ನು ಶಾಸಕರಾದ ಗುರುರಾಜ್ ಗಂಟಿಹೊಳೆ ಅವರು ನೆರವೇರಿಸಿದರು.

ಗಿಡ ನೆಡುವ ಹಾಗೂ ಸ್ವಚ್ಛತಾ ಕಾರ್ಯಗಳಿಗೆ ಅಗತ್ಯವಿರುವ ಉಪಕರಣಗಳನ್ನು ಹಸ್ತಾಂತರಿಸಿ ಮಾತನಾಡಿದ ಶಾಸಕರು ಸತತ 170 ವಾರಗಳ ಕಾಲ ಸಮುದ್ರ ಕಿನಾರ ಮತ್ತು ಊರಿನ ಸ್ವಚ್ಛತೆ ಮಾಡಿಕೊಂಡು ಬರುತ್ತಿರುವುದು ನಿಜವಾಗಲೂ ಒಂದು ತಪ್ಪಸ್ಸು, ದೃಢ ಇಚ್ಚಾ ಶಕ್ತಿ ಇದ್ದಲ್ಲಿ ಮಾತ್ರ ಇದು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ನಂತರ ಕ್ಲೀನ್ ಕಿನಾರ ತಂಡ ಹಿಂದೂ ರುದ್ರ ಭೂಮಿ ಆವರಣದ ಸುತ್ತ ಗಿಡ ನೆಟ್ಟು ಸ್ವಚ್ಛತಾ ಕಾರ್ಯ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಸ್ವಚ್ಛತಾ ಪರಿಕರಗಳನ್ನು ಕೊಡಿಸುವಲ್ಲಿ ಸಹಕರಿಸಿದ ಚರಣ್ ಬೈಂದೂರು, ಭೂಮಿ ಟ್ರಸ್ಟ್ ಪದಾಧಿಕಾರಿಗಳು, ಮುಕ್ತಿಧಾಮ ಟ್ರಸ್ಟ್ನ ಸರ್ವಸದಸ್ಯರು, NECF ಹಾಗೂ ಕ್ಲೀನ್ ಕಿನಾರಾ ಸದಸ್ಯರು, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಸುರೇಶ್ ಬಟ್ವಾಡಿ, ಪ್ರಮುಖರಾದ ಗೋಪಾಲ್ ಪೂಜಾರಿ ವಸ್ರೆ, ರಾಘು ಶೇರಿಗಾರ್, ದಿನೇಶ್ ಗಾಣಿಗ ಮತ್ತು ರಾಜೇಶ್ ಆಚಾರ್, ಶ್ರೀಧರ್ ಜಿ. ಪಡುವರಿ ಸೇರಿದಂತೆ ಹಲವರು ಭಾಗವಹಿಸಿದರು.
ಕ್ಲೀನ್ ಕಿನಾರಾ ಕಾರ್ಯದರ್ಶಿ ನಿತೇಶ್ ನಿರೂಪಿಸಿದರು. ಸಂಯೋಜಕರಾದ ರಾಘವೇಂದ್ರ ಸುರಭಿ ಕಾರ್ಯಕ್ರಮ ಸಂಯೋಜಿಸಿದರು. NECF ಸದಸ್ಯ ದಿನೇಶ್ ಗಾಣಿಗ ವಂದಿಸಿದರು. NECF ಮುಖ್ಯಸ್ಥರಾದ ಶಶಿಧರ್ ಶೆಟ್ಟಿ ಅವರು ದೂರವಾಣಿ ಮೂಲಕ ಶುಭ ಹಾರೈಸಿದರು. ಸ್ವಚ್ಛತಾ ಪರಿಕರಗಳನ್ನು ಒದಗಿಸಿದ ಶಾಸಕರು ಹಾಗೂ ಭೂಮಿ ಟ್ರಸ್ಟ್ ಸದಸ್ಯರಿಗೆ ಕ್ಲೀನ್ ಕಿನಾರ ತಂಡ ಧನ್ಯವಾದಗಳನ್ನು ಸಲ್ಲಿಸಿದರು.
















