ಯಕ್ಷಗಾನದ ಚುರುಕು ನಡೆಯ ಕಲಾವಿದ ಕಣ್ಣಿಮನೆ ಇನ್ನಿಲ್ಲ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ
ಬೆಂಗಳೂರು: ಯಕ್ಷಗಾನ ಕಂಡ ಚುರುಕ ನಡೆಯ ಖ್ಯಾತ ಕಲಾವಿದ ಗಣಪತಿ ಭಟ್ ಕಣ್ಣಿಮನೆ (47) ಗುರುವಾರ ಸಾಯಂಕಾಲ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

Call us

Click Here

ಕಳೆದ ಕೆಲವು ದಿನಗಳಿಂದ ತೀವ್ರ ಅನಾರೋಗ್ಯ ಪೀಡಿತರಾಗಿದ್ದ ಕಣ್ಣಿಮನೆಯವರನ್ನು ಬುಧವಾರ ಸಾಯಂಕಾಲ ಮಂಗಳೂರಿನ ಖಾಸಗಿ ಆಸ್ಪತ್ರೆಯಿಂದ ಬೆಂಗಳೂರಿನ ಆಸ್ಪತ್ರಗೆ ದಾಖಲಿಸಲಾಗಿತ್ತು. ಆದರೆ ಗುರುವಾರ ಸಾಯಂಕಾಲ ಅಂಗಾಂಗ ವೈಫಲ್ಯಕ್ಕೆ ಒಳಗಾಗಿ ನಿಧನರಾಗಿದ್ದಾರೆಂದು ತಿಳಿದುಬಂದಿದೆ. ಉತ್ತರಕನ್ನಡದ ಹೊನ್ನಾವರ ತಾಲೂಕಿನ ಕಣ್ಣಿಮನೆಯವರಾದ ಗಣಪತಿ ಭಟ್ ಪತ್ರಿ, ಪುತ್ರ, ಪುತ್ರಿ ಹಾಗೂ ಅಪಾರ ಯಕ್ಷಾಭಿಮಾನಿಗಳನ್ನು ಅಗಲಿದ್ದಾರೆ.

 IMG-20160218-WA0108 IMG-20160218-WA0107 IMG-20160218-WA0084

Leave a Reply