Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಆಭರಣ ಕಳವು ಪ್ರಕರಣ: ಕೊಲ್ಲೂರು ದೇವಳದ ನೌಕರನ ಕರ್ಮಕಾಂಡ ಬಯಲಿಗೆ
    ಅಪಘಾತ-ಅಪರಾಧ ಸುದ್ದಿ

    ಆಭರಣ ಕಳವು ಪ್ರಕರಣ: ಕೊಲ್ಲೂರು ದೇವಳದ ನೌಕರನ ಕರ್ಮಕಾಂಡ ಬಯಲಿಗೆ

    Updated:24/02/2016No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    ಕುಂದಾಪ್ರ ಡಾಟ್ ಕಾಂ ಸುದ್ದಿ
    ಕೊಲ್ಲೂರು: ಇಲ್ಲಿನ ಪ್ರಸಿದ್ಧ ಶ್ರೀ ಮೂಕಾಂಬಿಕಾ ದೇವಳದ ಆಭರಣ ಕಳವು ಪ್ರಕರಣ ನಿರೀಕ್ಷಿತ ತಿರುವು ಪಡೆದುಕೊಂಡಿದ್ದು, ಚಿನ್ನಾಭರಣ ಕಳವುಗೈದ ಘಟನೆ ಬಯಲಿಗೆ ಬರುತ್ತಿದ್ದಂತೆ ತಿಜೋರಿಯ ಕೀಲಿಕೈಯೊಂದಿಗೆ ಕಾಣಿಯಾಗಿದ್ದ ಆಪಾದಿತ ದೇವಳದ ಸಿಬ್ಬಂಧಿ ಶಿವರಾಮ ಮಡಿವಾಳ ಎಂಬುವವರನ್ನು ಬಂಧಿಸಿ ವಿಚಾರಣೆ ನಡೆಸಿದ ಬಳಿಕ ಸಾರ್ವಜನಿಕರ ಸಮ್ಮುಖದಲ್ಲಿಯೇ ದೇವಳದ ತಿಜೋರಿಯನ್ನು ತೆರೆದು ನೋಡಿದಾಗಿ ಕಳವಾಗಿರುವ ಚಿನ್ನಾಭರಣಗಳ ಕುರಿತು ಸ್ಪಷ್ಟ ಮಾಹಿತಿ ಲಭ್ಯವಾಗಿದೆ.

    Click Here

    Call us

    Click Here

    ಶಿವರಾಮ ಮಡಿವಾಳರ ಕೈಗೆ ತಿಜೋರಿ ಕೀಲಿಕೈ ದೊರೆತಾಗಿನಿಂದ ಇಲ್ಲಿಯವರೆಗೆ ದೇವಳಕ್ಕೆ ಹರಕೆಯ ರೂಪದಲ್ಲಿ ಸಂದಾಯವಾಗಿರುವ 47 ವಿವಿಧ ಬಗೆಯ ಚಿನ್ನಾಭರಣ ಬಗ್ಗೆ ರಶೀದಿಯಲ್ಲಿ ದಾಖಲಾಗಿದೆ. ಆದರೆ ತಿಜೋರಿ ತೆರೆದಾಗ 12 ಬಗೆಯ ಚಿನ್ನಾಭರಣದ ಹಾಗೂ ಇತರೆ ಬೆಳ್ಳಿಯ ಆಭರಣಗಳು ಮಾತ್ರ ದೊರೆತಿವೆ. ಉಳಿದ ಆಭರಣಗಳು ಖೋತಾ ಆಗಿರುವುದು ಸ್ಪಷ್ಟವಾಗಿದೆ. ಹಲವೆಡೆ ಸಾಲ ಮಾಡಿಕೊಂಡಿರುವ ಶಿವರಾಮ್, ಸಾಲ ತೀರಿಸಲು ದೇವಳದ ಚಿನ್ನಾಭರಣಗಳನ್ನೇ ಒಂದೊಂದಾಗಿ ಎಗರಿಸಿ ಬ್ಯಾಂಕಿನಲ್ಲಿ ಅಡವಿಟ್ಟಿರು ಬಗ್ಗೆ ಮಾಹಿತಿ ಲಭ್ಯವಾಗಿದೆ. ಕುಂದಾಪ್ರ ಡಾಟ್ ಕಾಂ ಸುದ್ದಿ

    ಹಲವರು ಭಾಗಿಯಾಗಿರುವ ಶಂಕೆ:
    ದೇವರಿಗೆ ಹರಕೆಯ ರೂಪದಲ್ಲಿ ಸಲ್ಲಿಕೆಯಾದ ಚಿನ್ನಾಭರಣಗಳನ್ನು ವ್ಯವಸ್ಥಿತವಾಗಿ ಎಗರಿಸಿರುವ ಶಿವರಾಮ್ ಅವರ ಸಂಚಿನ ಹಿಂದೆ ಹಲವು ಕಾಣದ ಕೈಗಳಿವೆ ಎಂಬ ಶಂಕೆ ವ್ಯಕ್ತವಾಗಿದೆ. ಶಿವರಾಮ ನಾಪತ್ತೆಯಾದ ಪ್ರಕರಣ ಬಯಲಿಗೆ ಬರುತ್ತಿದ್ದಂತೆ ಅವರು ಕೊಂಡೊಯ್ದಿದ್ದ ನಾಲ್ಕು ಲಕ್ಷ ಹಣ ಬ್ಯಾಂಕಿಗೆ ಮರುಸಂದಾಯವಾಗಿರುವುದು, ಡಿ ದರ್ಜೆಯ ನೌಕರನ ಕೈಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ಕೀಲಿಕೈ ನೀಡಿ ಬೇಜವಾಬ್ದಾರಿ ತೋರ್ಪಡಿಸಿರುವುದು ಈ ಎಲ್ಲದರ ಹಿಂದೆ ಕಾಣದ ಕೈಗಳು ಕೆಲಸ ಮಾಡಿವೆ ಎಂಬ ಶಂಕೆ ವ್ಯಕ್ತವಾಗಿದೆ. ಈ ಕೃತ್ಯವೆಸಗುವಾಗ ಪ್ರೋತ್ಸಾಹಿಸಿ, ಸಿಕ್ಕಿಬಿದ್ದಾಗ ತನ್ನನ್ನು ಒಬ್ಬಂಟಿಯನ್ನಾಗಿಸಿದ್ದಾರೆ ಎಂದು ಆಪಾದಿತ ಶಿವರಾಮ್ ದೂರಿಕೊಂಡಿರುವುದು ಅನುಮಾನಗಳಿಗೆ ಪುಷ್ಠಿ ನೀಡಿದಂತಾಗಿದೆ. ಕುಂದಾಪ್ರ ಡಾಟ್ ಕಾಂ ಸುದ್ದಿ

    ಸಾರ್ವಜನಿಕರ ಸಮ್ಮುಖದಲ್ಲಿ ದೇವಳದ ತಿಜೋರಿ ತೆರೆಯುವ ಸಂದರ್ಭದಲ್ಲಿ ದೇವಳದ ಕಾರ್ಯನಿರ್ವಹಣಾಧಿಕಾರಿ ಟಿ. ಆರ್. ಉಮಾ, ನಿವೃತ್ತ ಕಾರ್ಯನಿರ್ವಹಣಾಧಿಕಾರಿ ಎಲ್.ಎಸ್. ಮಾರುತಿ, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಕೃಷ್ಣಮೂರ್ತಿ, ಅಧೀಕ್ಷಕ ಕೆ. ರಾಮಕೃಷ್ಣ ಅಡಿಗ, ಅರ್ಚಕರಾದ ಕೆ. ಮಂಜುನಾಥ ಅಡಿಗ, ಕೆ. ನರಸಿಂಹ ಅಡಿಗ, ಕೊಲ್ಲೂರು ಶ್ರೀ ಮೂಕಾಂಬಿಕಾ ಪದವಿಪೂರ್ವ ಕಾಲೇಜಿನ ಪ್ರಿನ್ಸಿಪಾಲ್ ಅರುಣಪ್ರಕಾಶ್ ಶೆಟ್ಟಿ, ಮತ್ತಿತರರು ಉಪಸ್ಥಿತರಿದ್ದರು.

    ಇದನ್ನೂ ಓದಿ
    ►ಕೊಲ್ಲೂರು ದೇಗುಲದಲ್ಲಿ ಚಿನ್ನಾಭರಣ ಕಳವು? – http://kundapraa.com/?p=11395 .
    ► ದೇವಳದ ಭದ್ರತೆಯ ಬಗ್ಗೆ ಅನುಮಾನ. ಅಧಿಕಾರಿಗಳ ಬಗ್ಗೆ ಭಕ್ತರ ಆಕ್ರೋಶ – http://kundapraa.com/?p=11401 .
    ►ಕೊಲ್ಲೂರು ದೇವಳದ ಚಿನ್ನ ಕಳವು ಪ್ರಕರಣ. ಆಪಾದಿತ ನೌಕರ ಶಿವರಾಮ ಪತ್ತೆ – http://kundapraa.com/?p=11440 .

    Click here

    Click here

    Click here

    Call us

    Call us

    Like this:

    Like Loading...

    Related

    Kolluru Gold theft incident
    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಕುಂದಾಪುರ: ಕಾರಿನಲ್ಲಿ ಇರಿಸಿದ್ದ ಹಣವನ್ನು ಹಾಡಹಗಲೇ ಲಪಟಾಯಿಸಿದ ಖದೀಮರು

    06/11/2025

    ರಿಕ್ಷಾಕ್ಕೆ ಪಿಕಪ್ ವಾಹನ ಡಿಕ್ಕಿಯಾಗಿ ರಿಕ್ಷಾ ಚಾಲಕನ ಸಾವು

    18/10/2025

    ಕೊಡೇರಿ: ಈಜಲು ತೆರಳಿದ್ದ ಮೂವರು ವಿದ್ಯಾರ್ಥಿಗಳು ಸಮುದ್ರಪಾಲು, ಓರ್ವ ಪ್ರಾಣಾಪಾಯದಿಂದ ಪಾರು

    14/10/2025

    Leave a ReplyCancel reply

    Call us

    Click Here

    Call us

    Call us

    Call us
    Highest Viewed Recently
    • ಎಸ್‌ಸಿಡಿಸಿಸಿ ಬ್ಯಾಂಕ್ ತೆಕ್ಕಟ್ಟೆ ಶಾಖೆ: ಗ್ರಾಹಕರಿಗೆ ಆರ್ಥಿಕ ಅರಿವು ಜಾಗೃತಿ ಕಾರ್ಯಕ್ರಮ
    • ಬೈಂದೂರು ಉತ್ಸವ: ಜಿಲ್ಲಾಧಿಕಾರಿ ಕಚೇರಿಯಲ್ಲಿ ಶಾಸಕ ಗಂಟಿಹೊಳೆ ನೇತೃತ್ವದಲ್ಲಿ ವಿವಿಧ ಇಲಾಖಾ ಅಧಿಕಾರಿಗಳ ಸಭೆ
    • ರಾಜ್ಯ ಮಟ್ಟದ ಐಡಿಯಾಥಾನ್ ಸ್ಪರ್ಧೆಯಲ್ಲಿ ಎಂಐಟಿ ಕುಂದಾಪುರದ ಅಧ್ಬುತ ಸಾಧನೆ
    • ಕುಂದಾಪುರ: ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಸಂಸ್ಥಾಪಕರ ದಿನಾಚರಣೆ
    • ಡಾ. ಬಿ.ಬಿ. ಹೆಗ್ಡೆ ಕಾಲೇಜು: ವಾರ್ಷಿಕ ಕ್ರೀಡಾಕೂಟ ಉದ್ಘಾಟನೆ

    © 2025 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.

    %d