Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಬೈಂದೂರು ಹೇನಬೇರಿನ ಅಕ್ಷತಾಳ ಕರಾಳ ನೆನಪಿಗೆ ಒಂದು ವರ್ಷ
    ವಿಶೇಷ ವರದಿ

    ಬೈಂದೂರು ಹೇನಬೇರಿನ ಅಕ್ಷತಾಳ ಕರಾಳ ನೆನಪಿಗೆ ಒಂದು ವರ್ಷ

    Updated:17/03/2017No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    ಸುನಿಲ್ ಹೆಚ್. ಜಿ. ಬೈಂದೂರು | ಕುಂದಾಪ್ರ ಡಾಟ್ ಕಾಂ ವಿಶೇಷ ವರದಿ |
    17 ಜೂನ್ 2015. ಬೈಂದೂರಿನ ಇತಿಹಾಸದಲ್ಲಿ ಎಂದೂ ಮರೆಯಲಾಗದ ಕರಾಳ ದಿನವದು. ಎಲ್ಲರಂತೆಯೇ ನೂರಾರು ಕನಸು ಹೊತ್ತ ಕಂಗಳು ಅಂದು ಕಮರಿ ಹೋಗಿದ್ದವು. ಮನುಷ್ಯರೂಪಿ ವ್ಯಾಫ್ರನ ಅಟ್ಟಹಾಸಕ್ಕೆ ಆ ಕುಗ್ರಾಮದ ಹುಡುಗಿ ನಲುಗಿ ಹೋಗಿದ್ದಳು. ಭವಿಷ್ಯದ ಸ್ಪಷ್ಟ ಗುರಿ ಹೊಂದಿದ್ದ ದಿಟ್ಟ ಹುಡುಗಿಯ ಬದುಕಿನ ದಾರಿಗೆ ಅಂತ್ಯ ಹಾಡಲಾಗಿತ್ತು. ಹೌದು. ಅಂದು ಬೈಂದೂರು ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದ ಅಕ್ಷತಾ ದೇವಾಡಿಗ ಎಂಬ ಹೆಣ್ಣಮಗಳು ತನ್ನ ಮನೆಗೆ ಸಾಗುವ ಹಾದಿಯಲ್ಲಿಯೇ ವಿಧಿಯ ಕ್ರೂರಲೀಲೆ ಬಲಿಯಾಗಿ ಹೋಗಿದ್ದಳು

    Click Here

    Call us

    Click Here

    ಅಕ್ಷತಾಳ ಸಾವಿನ ಕರಾಳತೆಗೆ ಬೈಂದೂರಿನ ಜನತೆ ಬೆಚ್ಚಿ ಬಿದ್ದಿದ್ದರು. ವಿದ್ಯಾರ್ಥಿ ಸಮೂಹ ಅಕ್ಷರಶಃ ಆಕ್ರೋಶಭರಿತರಾಗಿ ಬೀದಿಗಿಳಿದಿದ್ದರು. ಸ್ವತಃ ಪೊಲೀಸ್ ವರಿಷ್ಠಾಧಿಕಾರಿಗಳೇ ತನಿಕೆಗೆ ಮುಂದಾದರು. ಕೊನೆಗೆ ಆರೋಪಿಯ ಬಂಧನವೂ ಆಯಿತು. ಆದರೆ ಅಕ್ಷತಾ ಮಾತ್ರ ಮರಳಿ ಬರಲಿಲ್ಲ!

    ಬದುಕಿದ್ದರೆ ಇಂಜಿನಿಯರಿಂಗ್ ಓದುತ್ತಿದ್ದಳು:
    ಹೇನಬೇರಿನ ಬಾಬು ದೇವಾಡಿಗ ಹಾಗೂ ರಾಧಾ ದಂಪತಿಗಳ ಮೂವರು ಹೆಣ್ಣು ಮಕ್ಕಳಲ್ಲಿ ಹಿರಿಯವಳಾದ ಅಕ್ಷತಾ ದೇವಾಡಿಗ ಪ್ರತಿಭಾವಂತೆ. ಭವಿಷ್ಯದ ಸ್ಪಷ್ಟ ಗುರಿ ಹೊಂದಿದ್ದ ಚತುರೆ. ಎಸ್‌ಎಸ್‌ಎಲ್‌ಸಿ ಕನ್ನಡ ಮಾಧ್ಯಮದಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣಳಾಗಿದ್ದಳು. ಪಿಯುಸಿ ವಿಜ್ಞಾನ ವಿಭಾಗವನ್ನು ಆಯ್ಕುಕೊಂಡು ತನ್ನ ಇಂಜಿನಿಯರ್ ಆಗು ಬಯಕೆಯೆಡೆಗೆ ಸಾಗುತ್ತಿದ್ದಳು. ತನಗೆ ವಿದ್ಯಾರ್ಥಿವೇತನ ನೀಡುತ್ತಿದ್ದ ಮಾತೃಶ್ರೀಗೆ ಬರೆದ ಪತ್ರದಲ್ಲಿ ಉಪಕಾರವನ್ನು ಸ್ಮರಿಸಿ ಒಳ್ಳೆಯ ಕೆಲಸ ಪಡೆದು ಇತರರಿಗೂ ಉಪಕಾರ ಮಾಡುವುದಾಗಿ ಹೇಳಿದ್ದ ಅಕ್ಷತಾ, ತನ್ನ ಡೈರಿಯಲ್ಲಿ ತನ್ನ ನೂರಾರು ಕನಸುಗಳನ್ನು ಬಿಚ್ಚಿಟ್ಟಿದ್ದಳು. ಅವಳ ಪ್ರತಿಭಾನ್ವಿತೆ ಮಾತ್ರವೇ ಆಗಿರಲಿಲ್ಲ. ಸಮಾಜದ ಬಗೆಗೂ ಒಂದೊಳ್ಳೆ ಕಾಳಜಿ ಹೊಂದಿದ್ದ ದಿಟ್ಟ ಹೆಣ್ಣುಮಗಳಾಗಿದ್ದಳು.

    ಕಟ್ಟೆಯೊಡೆದಿದ್ದ ವಿದ್ಯಾರ್ಥಿ, ನಾಗರಿಕರ ಆಕ್ರೋಶ:
    ಅಕ್ಷತಾಳ ಸಾವುನಿಂದ ಬೈಂದೂರಿನಂತಹ ಪ್ರದೇಶದಲ್ಲಿಯೂ ರಾಜಾರೋಷವಾಗಿ ಅತ್ಯಾಚಾರದಂತಹ ಪ್ರಕರಣಗಳು ನಡೆಯುತ್ತವೆ ಎಂಬುದನ್ನು ಅರಗಿಸಿಕೊಳ್ಳಲೂ ಸಾಧ್ಯವಾಗದಿದ್ದಾಗ ಬೈಂದೂರಿನ ನಾಗರಿಕರು ವ್ಯವಸ್ಥೆಯ ವಿರುದ್ಧ ತಿರುಗಿ ಬಿದ್ದಿದ್ದರು. ಪ್ರಕರಣ ನಡೆದ ಮರುದಿನವೇ ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಿ ಪ್ರತಿಭಟನೆ ನಡೆಸಿದ್ದರು. ಪೊಲೀಸರಿಗೆ ಅಪರಾಧಿಯನ್ನು ಬಂಧಿಸುವಂತೆ ಒತ್ತಡ ಹೇರಿದ್ದರು. ವಿದ್ಯಾರ್ಥಿಗಳು ಮೂರು ದಿನವೂ ಪ್ರತಿಭಟನೆಗಿಳಿದು ತಮ್ಮ ಆಕ್ರೋಶ ಹೊರಹಾಕಿದರು. ಸಮುದಾಯದ ಮುಖಂಡರು, ಬೈಂದೂರಿನ ನಾಗರಿಕರು ಪ್ರತಿಭಟನೆಯ ಮೂಲಕವೇ ಬಿಸಿ ಮುಟ್ಟಿಸಿದ್ದರು. ಕುಂದಾಪ್ರ ಡಾಟ್ ಕಾಂ ವಿಶೇಷ ವರದಿ.

    ಪೊಲೀಸರ ಕರ್ತವ್ಯಪ್ರಜ್ಞೆಗೆ ಶ್ಲಾಘನೀಯ:
    ರತ್ನಾ ಕೊಠಾರಿಯ ಪ್ರಕರಣದ ಬಗೆಗಿದ್ದಷ್ಟೇ ಒತ್ತಡ ಈ ಪ್ರಕರಣದಲ್ಲಿಯೂ ಎದುರಾಗಿದ್ದರಿಂದ ಘಟನೆ ನಡೆದ ದಿನದಿಂದಲೇ ಪೊಲೀಸರು ಕಾರ್ಯಪ್ರವೃತ್ತರಾಗಿದ್ದರು. ಮೂರು ಪೊಲೀಸ್ ತಂಡಗಳನ್ನು ರಚಿಸಿ ವಿವಿಧ ಹಂತಗಳಲ್ಲಿ ತನಿಕೆ ಕೈಗೆತ್ತಿಕೊಂಡರೇ, ಇನ್ನೊಂದೆಡೆ ಸ್ವತಃ ಪೊಲೀಸ್ ವರಿಷ್ಠಾಧಿಕಾರಿ ಅಣ್ಣಾಮಲೈ ಅವರಿಂದ ಮೊದಲ್ಗೊಂಡು ಇಲಾಖೆಯ ಅಧಿಕಾರಿಗಳು ಬೈಂದೂರಿನಲ್ಲಿ ಬೀಡುಬಿಟ್ಟಿದ್ದರು. ಮೂರು ದಿನದಲ್ಲಿ ಆರೋಪಿಯನ್ನು ಹಿಡಿದೊಪ್ಪಿಸುವುದಾಗಿ ಪ್ರತಿಭಟನಾ ನಿರತರಿಗೆ ಮಾತು ಕೊಟ್ಟಿದ್ದ ಎಸ್ಪಿ ಅದರಂತೆ ನಡೆದುಕೊಂಡರೂ ಕೂಡ. ಡಿವೈಎಸ್ಪಿ ಮಂಜುನಾಥ ಶೆಟ್ಟಿ, ಡಿಸಿಬಿಐ ಜೈಶಂಕರ್, ವೃತ್ತನಿರೀಕ್ಷಕ ಸುದರ್ಶನ, ಉಪನಿರೀಕ್ಷಕರುಗಳಾದ ಸಂತೋಷ್ ಕಾಯ್ಕಿಣಿ ಸೇರಿದಂತೆ ದೊಡ್ಡ ಪಡೆಯೇ ಪ್ರಕರಣದ ಹಿಂದೆ ಬಿದ್ದು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಕುಂದಾಪ್ರ ಡಾಟ್ ಕಾಂ ವರದಿ.

    Click here

    Click here

    Click here

    Call us

    Call us

    ಪೋಲಿ ಹುಡುಗರಿಗೆ ಕಠಿಣ ಶಿಕ್ಷೆಯಾಗಬೇಕಿದೆ:
    ಕಾಲೇಜು ಮುಗಿಸಿ ಮನೆಗೆ ತೆರಳುತ್ತಿದ್ದ ಅಕ್ಷತಾಳ ಬೆನ್ನಟ್ಟಿದ್ದ ಯೋಜನಾನಗರದ ಪೋಲಿ ಹುಡುಗ ಸುನಿಲ, ಆಕೆಯ ಸಾವಿಗೆ ಅಧ್ಯಾಯ ಬರೆದು ಬಂದಿದ್ದ. ದುಷ್ಚಟಗಳಿಗೆ ಬಲಿಯಾದ ಕಾಮುಕನಿಗೆ ಹೆಣ್ಣುಮಗಳೊಬ್ಬಳು ಬಲಿಯಾಗಬೇಕಾಯಿತು. ಕತ್ತು ಹಿಸುಕಿ ಕೊಂದರೂ ಏನೂ ಆಗಿಲ್ಲವೆಂಬಂತೆ ತಿರುಗಾಡಿಕೊಂಡಿದ್ದ ದುರುಳನನ್ನು ಪೊಲೀಸರು ಕೊನೆಗೂ ಬಲೆಗೆ ಬೀಳಿಸಿದರು. ಜೈಲಿಗೂ ಅಟ್ಟಿದರು. ಸಾಕ್ಷಾಧಾರ ನಾಶಪಡಿಸಿದನೆಂಬ ಕಾರಣಕ್ಕೆ ಆತನೊಂದಿಗೆ ಜೈಲಿಗೆ ಸೇರಿದ್ದ ಆತನ ಸ್ನೇಹಿತ ಅಕ್ಷಯ್‌ಗೆ ಈಗ ಹೊರಬಂದಿದ್ದಾನೆ. ಆದರೆ ಇಂತಹ ಕಾಮುಕರಿಗೆ ನ್ಯಾಯಾಲಯ ಕಠಿಣ ಶಿಕ್ಷೆ ನೀಡಿದಾಗಲೇ ಉಳಿದವರಿಗೂ ಒಂದಿಷ್ಟು ಭಯ ಹುಟ್ಟಲು ಸಾಧ್ಯವಿದೆ. ಅಷ್ಟು ಮಾತ್ರವಲ್ಲದೇ ಸಮಾಜದಲ್ಲಿ ಸೇರಿಕೊಂಡಿರುವ ಇಂತಹ ಪೊಲಿಗಳ ಬಗೆಗೆ ಪೊಲೀಸರು ಒಂದು ಕಣ್ಣಿಡದಿದ್ದರೇ ಇಂತಹ ಪ್ರಕರಣಗಳು ಮರುಕಳಿಸುವ ಸಾಧ್ಯತೆಯೂ ಇದೆ. ಕುಂದಾಪ್ರ ಡಾಟ್ ಕಾಂ ವಿಶೇಷ ವರದಿ.

    ಅಕ್ಷತಾಳ ನೆನಪಲ್ಲಿ ಹೇನಬೇರಿಗೆ ಅಭಿವೃದ್ಧಿ ಭಾಗ್ಯ?
    ಸರಣಿ ದನಗಳ ಸಾವಿನಿಂತ ಸುದ್ದಿಯಾಗಿದ್ದ ಹೇನಬೇರು ಪ್ರದೇಶಕ್ಕೆ ಸಾಲು ಸಾಲಾಗಿ ಬಂದು ಹೋಗಿದ್ದ ರಾಜಕಾರಣಿಗಳ ಕಾರು ಧೂಳೆಬ್ಬಿಸಿತ್ತೇ ಹೊರತು ಈ ಭಾಗದ ಅಭಿವೃದ್ಧಿ ಭಾಗ್ಯವನ್ನು ಕರುಣಿಸಿರಲಿಲ್ಲ. ಅಕ್ಷತಾ ದೇವಾಡಿಗಳ ಸಾವಿನ ಬಳಿಕ ಮನೆಯ ಮಕ್ಕಳ ರಕ್ಷಣೆಯ ಬಗೆಗೆ ಭಯಭೀತರಾದ ಜನತೆ ಈ ಭಾಗಕ್ಕೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಜನಪ್ರತಿನಿಧಿಗಳನ್ನು ಪಟ್ಟು ಹಿಡಿದರು. ಹಾಗಾಗಿಯೇ ರಸ್ತೆ, ಬೀದಿದೀಪ, ಇತ್ತಿಚಿಗೆ ಬಸ್ ಸೌಲಭ್ಯ ಸೇರಿದಂತೆ ಒಂದಿಷ್ಟು ಮೂಲಭೂತ ಸೌಲಭ್ಯಗಳು ಬೈಂದೂರು ಶಾಸಕರ ಮೂಲಕ ಈ ಭಾಗಕ್ಕೆ ಬಂದವು. ಒಂದು ಮಟ್ಟಿನ ಸುಧಾರಣೆಗಳೂ ಆಗಿದ್ದವು. ಬಹುಶಃ ಅಕ್ಷತಾಳೂ ಇದನ್ನೇ ನಿರೀಕ್ಷಿಸಿದ್ದಳೇನೊ. ಕುಂದಾಪ್ರ ಡಾಟ್ ಕಾಂ.

    ವರ್ಷವಾದರೂ ಮುಗಿಯದ ಸಾವಿನ ಮನೆಯ ರಾಜಕೀಯ:
    ಹೇನಬೇರು ಅಕ್ಷತಾಳ ಪ್ರಕರಣದಲ್ಲಿ ನೈಜ ಆರೋಪಿಯನ್ನು ಜೈಲಿಗೆ ಅಟ್ಟಲಾಗಿದೆ. ಸುಳ್ಳ ಮಾಹಿತಿಯನ್ನು ನೀಡಿದನೆಂಬ ಕಾರಣಕ್ಕೆ ಜೈಲು ಸೇರಿದ್ದ ಆರೋಪಿಗೆ ಆರು ತಿಂಗಳ ಬಳಿಕ ಬೇಲ್ ದೊರೆದಿದೆ. ಇಷ್ಟು ಬಿಟ್ಟರೆ ಪ್ರಕರಣದಲ್ಲಿ ಇನ್ನಾರೂ ಭಾಗಿಯಾಗಿಲ್ಲ ಎಂದು ಸ್ವತಃ ತನಿಕೆ ನಡೆಸಿರುವ ದಕ್ಷ ಪೊಲೀಸ್ ವರಿಷ್ಠಾಧಿಕಾರಿ ಅಣ್ಣಾಮಲೈ ಅವರೇ ತಿಳಿಸಿದ್ದರು. ಮಾತ್ರವಲ್ಲದೇ ಈ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸುವಂತೆ ಸಾರ್ವಜನಿಕರ ಒತ್ತಡ ಇದ್ದದ್ದು ಬಿಟ್ಟರೇ, ಯಾವುದೇ ಪಕ್ಷದ ಯಾವೊಬ್ಬ ರಾಜಕಾರಣಿಗಳಿಂದಲೂ ಬೆರೆ ತರಹದ ಒತ್ತಡ ಇದ್ದಿರಲಿಲ್ಲ ಎಂಬುದನ್ನೂ ಸ್ಪಷ್ಟಪಡಿಸಿದ್ದರು. ಇಷ್ಟಾಗಿಯೂ ಸ್ಥಳೀಯ ಪತ್ರಿಕೆಯೊಂದನ್ನು ದಾಳವನ್ನಾಗಿಸಿಕೊಂಡ ಕೆಲವರು ವಿನಾಕಾರಣ ಅಕ್ಷತಾಳ ಪ್ರಕರಣದಲ್ಲಿ ಆಕೆಗೆ ಕುಟುಂಬಕ್ಕೆ ನೆರವಾಗಿದ್ದವರನ್ನೇ ತೇಜೋವಧೆ ಮಾಡಲು ನಿಂತರು. ನಿರಂತರವಾಗಿ ಪತ್ರಿಕೆಯ ಮೂಲಕ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿ ತಮ್ಮ ಕಾರ್ಯ ಸಾಧಿಸಿಕೊಂಡರು. ಅಕ್ಷತಾಳ ಸಾವಿನ ಬಳಿಕವೂ ಪದೇ ಪದೇ ಅದೇ ವಿಚಾರವನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡಲು ಹೊರಟದ್ದು ಬೈಂದೂರಿನ ಇತಿಹಾಸದಲ್ಲಿ ಅಕ್ಷತಾಳ ಕರಾಳ ನೆನಪಿನೊಂದಿಗೇ ಉಳಿದುಕೊಂಡ ದುರಂತವೇ ಸರಿ. \ ಕುಂದಾಪ್ರ ಡಾಟ್ ಕಾಂ ವಿಶೇಷ ವರದಿ\

    ಇದನ್ನೂ ಓದಿ:
    ► ಬೈಂದೂರು ಕಾಲೇಜು ವಿದ್ಯಾರ್ಥಿನಿಯ ನಿಗೂಢ ಸಾವು. ಕೊಲೆ ಶಂಕೆ – http://kundapraa.com/?p=3247
    ► ಅಕ್ಷತಾ ಕೊಲೆ ಪ್ರಕರಣ: ಸಮಗ್ರ ತನಿಕೆಗೆ ಆಗ್ರಹ, ಬೈಂದೂರು ಬಂದ್ – http://kundapraa.com/?p=3342
    ► ವಿದ್ಯಾರ್ಥಿನಿ ಅಕ್ಷತಾ ದೇವಾಡಿಗ ಸಾವು: ಪ್ರತಿಭಟನೆ, ಚುರುಕುಗೊಂಡ ತನಿಕೆ – http://kundapraa.com/?p=3253
    ► ಅಕ್ಷತಾ ಸಾವು: ಎರಡನೇ ದಿನವೂ ಮುಂದುವರಿದ ವಿದ್ಯಾರ್ಥಿಗಳ ಪ್ರತಿಭಟನೆ – http://kundapraa.com/?p=3265
    ► ವಿದ್ಯಾರ್ಥಿನಿ ಅಕ್ಷತಾ ಕೊಲೆ ಆರೋಪಿ ಬಂಧನ – http://kundapraa.com/?p=3281
    ► ಆರಿದ ಅಕ್ಷತಾ ಎಂಬ ಬೆಳಕು ಮತ್ತು ಹೊಲಸು ರಾಜಕೀಯ – http://kundapraa.com/?p=3593
    ► ಅಕ್ಷತಾ ಪ್ರಕರಣ ಶೀಘ್ರ ಭೇದಿಸಿದ ಪೊಲೀಸ್ ಇಲಾಖೆ ಅಭಿನಂದನಾರ್ಹ: ಶಾಸಕ ಗೊಪಾಲ ಪೂಜಾರಿ – http://kundapraa.com/?p=3308
    ► ಬೈಂದೂರು ಅಕ್ಷತಾ ದೇವಾಡಿಗ ಕೊಲೆ ಪ್ರಕರಣ: ಎರಡನೇ ಆರೋಪಿ ಅಕ್ಷಯ್ ಗೆ ಜಾಮೀನು – http://kundapraa.com/?p=10164

    ► ಅಕ್ಷತಾ ಮನೆಗೆ ಸಂಸದ ಯಡಿಯೂರಪ್ಪ ಭೇಟಿ – http://kundapraa.com/?p=3336
    ► ಅಕ್ಷತಾ ಮನೆಗೆ ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ಭೇಟಿ – http://kundapraa.com/?p=3333
    ► ಮೃತ ಅಕ್ಷತಾ ಮನೆಗೆ ಮಾಜಿ ಸಚಿವ ವೀರಪ್ಪ ಮೊಯ್ಲಿ ಭೇಟಿ – http://kundapraa.com/?p=3295
    ► ಅಕ್ಷತಾ ಮನೆಗೆ ಪ್ರಾಥಮಿಕ ಶಿಕ್ಷಣ ಸಚಿವ ಕಿಮ್ಮನೆ ಭೇಟಿ – http://kundapraa.com/?p=3320

    ► ಅಕ್ಷತಾ ಕುಟುಂಬಕ್ಕೆ ನವೋದಯ ಟ್ರಸ್ಟ್‌ನಿಂದ 1ಲಕ್ಷ ರೂ. ಹಸ್ತಾಂತರ – http://kundapraa.com/?p=3273
    ► ಮೃತ ಅಕ್ಷತಾ ದೇವಾಡಿಗ ಹೆತ್ತವರಿಗೆ ಧನಸಹಾಯ – http://kundapraa.com/?p=5013
    ► ರತ್ನಾ ಕೊಠಾರಿ, ಅಕ್ಷತಾ ದೇವಾಡಿಗ ಕುಟುಂಬಕ್ಕೆ ಪರಿಹಾರ ವಿತರಣೆ – http://kundapraa.com/?p=4205
    ► ಹೇನಬೇರು ರಸ್ತೆಗೆ ಬಂತು ಸೋಲಾರ್ ದೀಪ – http://kundapraa.com/?p=4189
    ► ಬೈಂದೂರು ಹೇನಬೇರಿಗೆ ಬಂತು ಸರಕಾರಿ ಬಸ್ಸು. ಒಂದು ವರ್ಷದಲ್ಲಿ ಮೂಲಭೂತ ಸೌಕರ್ಯ ಅಭಿವೃದ್ಧಿಗೂ ಆದ್ಯತೆ – http://kundapraa.com/?p=14985

     

    Byndor Akshatha Devadiga incident3

    Kundapra.com

    Byndor Akshatha Devadiga incident9 Byndor Akshatha Devadiga incident12 Byndor Akshatha Devadiga incident13 Byndor Akshatha Devadiga incident14 Byndor Akshatha Devadiga incident16Byndor Akshatha Devadiga incident15Byndor Akshatha Devadiga incident17Byndor Akshatha Devadiga incident18Byndor Akshatha Devadiga incident19Byndor Akshatha Devadiga incident20Byndor Akshatha Devadiga incident4Byndor Akshatha Devadiga incident6Byndor Akshatha Devadiga incident5Byndor Akshatha Devadiga incident21Byndor Akshatha Devadiga incident22

    Akshatha Devadiga Murder Byndoor Byndoor MLA News Devadiga Girish Byndoor Gowri Devadiga Raju Poojary
    Share. Facebook Twitter Pinterest LinkedIn Tumblr Telegram Email
    ಸುನಿಲ್ ಹೆಚ್. ಜಿ. ಬೈಂದೂರು
    • Website
    • Facebook
    • X (Twitter)
    • LinkedIn

    ಸುನಿಲ್ ಬೈಂದೂರು ಅವರು 'ಕುಂದಾಪ್ರ ಡಾಟ್ ಕಾಂ' ಅಂತರ್ಜಾಲ ಸುದ್ದಿತಾಣದ ಮುಖ್ಯ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಎಂ.ಕಾಂ ಸ್ನಾತಕೋತ್ತರ ಪದವಿ ಪೂರೈಸಿದ್ದಾರೆ. 2009ರಲ್ಲಿ ಪದವಿ ವಿದ್ಯಾರ್ಥಿಯಾಗಿದ್ದಾಗ ಸಾಹಿತ್ಯ ಕೃಷಿ ಗುರುತಿಸಿ '14ನೇ ಕರಾವಳಿ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ', 2014ರಲ್ಲಿ 'ಆದಿ ಗ್ರಾಮೋತ್ಸವ ಯುವ ಗೌರವ', ಪತ್ರಿಕೋದ್ಯಮ ಕ್ಷೇತ್ರದ ಸಾಧನೆಗಾಗಿ 2016ರಲ್ಲಿ 'ಕರ್ನಾಟಕ ಜ್ಯೋತಿ ರಾಜ್ಯ ಪ್ರಶಸ್ತಿ' ಪ್ರಶಸ್ತಿ'ಗೆ ಭಾಜನರಾಗಿದ್ದಾರೆ. 2012ರಿಂದ ಕುಂದಾಪ್ರ ಡಾಟ್ ಕಾಂ ಸುದ್ದಿತಾಣವನ್ನು ಮುನ್ನಡೆಸುತ್ತಿದ್ದಾರೆ.

    Related Posts

    ರಂಗಭೂಮಿಯಿಂದ ಸಮಾಜದ ಸವಾಲುಗಳನ್ನು ಎದುರಿಸುವ ಶಿಕ್ಷಣ: ಸಂಸದ ಕೋಟ ಶ್ರೀನಿವಾಸ ಪೂಜಾರಿ

    15/12/2025

    ಡಿ.14ರಿಂದ 08 ದಿನಗಳ ಕಾಲ ಬೈಂದೂರಿನಲ್ಲಿ ರಾಜ್ಯ ಮಟ್ಟದ ನಾಟಕ ಸ್ಪರ್ಧೆ: ಆನಂದ ಮದ್ದೋಡಿ

    12/12/2025

    ಡಿ.25ರಂದು ಮಿಯ್ಯಾಣಿ ಕಾಡಿನತಾರು ಸೂರ್ಯ ಕಂಬಳೋತ್ಸವ

    12/12/2025
    Leave A Reply Cancel Reply

    Call us

    Click Here

    Call us

    Call us

    Call us
    Highest Viewed Recently
    • ಗಂಗೊಳ್ಳಿ: ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮ
    • ಹಟ್ಟಿಅಂಗಡಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಗೆ ಇಟಿ ಟೆಕ್ ಎಕ್ಸ್ ಸ್ಕೂಲ್ ಎಕ್ಸಿಲೆನ್ಸ್ ಪ್ರಶಸ್ತಿ ಗೌರವ
    • ಮನೆಯಲ್ಲಿ ಪುಸ್ತಕಗಳನ್ನು ಓದುವ ಹವ್ಯಾಸವನ್ನು ರೂಢಿಸಿಕೊಳ್ಳಿ: ಶಿವಾನಂದ ಗಾಣಿಗ
    • ರಾಜ್ಯಮಟ್ಟದ ಸ್ಪರ್ಧಾತ್ಮಕ ಲಿಖಿತ ಪರೀಕ್ಷೆ: ನೇಹ ಸತ್ಯನಾರಾಯಣ ರಾಜ್ಯಮಟ್ಟದಲ್ಲಿ ಐದನೇ ರ‍್ಯಾಂಕ್‌
    • ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿ ರಚನೆ: ಅರ್ಜಿ ಆಹ್ವಾನ

    © 2025 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.