ಕುಂದಾಪುರ ಛಾಯಾಚಿತ್ರಗಾರನ ಕಾರು ಕಾಪುವಿನಲ್ಲಿ ಬೆಂಕಿಗಾಹುತಿ. ಪ್ರಯಾಣಿಕ ಸೇಫ್

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕುಂದಾಪುರ ಖ್ಯಾತ ಗೋಡೆ ಸ್ಟುಡಿಯೋ ಮಾಲಕ ದಿನೇಶ್ ಗೋಡೆ ಅವರು ಪ್ರಯಾಣಿಸುತ್ತಿದ್ದ ಕಾರಿಗೆ ಕಾಪು ರಾಷ್ಟ್ರೀಯ ಹೆದ್ದಾರಿಯಲ್ಲಿ ಬೆಂಕಿ ತಗುಲಿ ಸಂಪೂರ್ಣ ಸುಟ್ಟು ಕರಲಾಗಿದ್ದು, ಕಾರು ಚಲಾಯಿಸುತ್ತಿದ್ದ ದಿನೇಶ್ ಅವರ ಅದೃಷ್ಟವಶಾತ್ ಪ್ರಣಾಪಾಯದಿಂದ ಪಾರಾಗಿದ್ದಾರೆ.

Call us

Click Here

ಘಟನೆಯ ವಿವರ
ಪೋಟೋಗ್ರಫಿ ಕಾರ್ಯನಿಮಿತ್ತ ಮೂಡುಬಿದಿರೆ ಸಮೀಪದ ಮುಡ್ಕೂರಿಗೆ ತೆರಳಿ ಅಲ್ಲಿಂದ ಕುಂದಾಪುರಕ್ಕೆ ಹಿಂತಿರುಗುತ್ತಿದ್ದ ವೇಳೆ ಕಾಪು ಪ್ಲೈಓವರ್‌ನಲ್ಲಿ ಅವರ ವೆಗನಾರ್ ಕಾರು ಬೆಂಕಿಗಾಹುತಿಯಾಗಿದೆ. ಕಾರು ಇದ್ದಕ್ಕಿಂತ ಜರ್ಕ್ ಹೊಡೆದು ಇಂಜಿನ್‌ನಲ್ಲಿ ಹೊಗೆ ಕಾಣಿಸಿಕೊಂಡಿತ್ತು. ಕಾರು ಚಲಾಯಿಸುತ್ತಿದ್ದ ದಿನೇಶ್, ಕೂಡಲೇ ಹೊರಬಂದಿದ್ದು ನೋಡನೋಡುತ್ತಿದ್ದಂತೆಯೇ ಕಾರು ಬೆಂಕಿಗೆ ಆಹುತಿಯಾಗಿದೆ. ಅಗ್ನಿಶಾಮಕ ದಳ ಬೆಂಕಿ ನಂದಿಸುವ ಹೊತ್ತಿಗೆ ಕಾರು ಸಂಪೂರ್ಣ ಸುಟ್ಟು ಹೋಗಿದ್ದವು. ಕಾಪು ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದಾರೆ/ಕುಂದಾಪ್ರ ಡಾಟ್ ಕಾಂ ಸುದ್ದಿ/

Kundapura dinesh gode car met in fire accident - dinesh safe (1)Kundapura dinesh gode car met in fire accident - dinesh safe (3)Kundapura dinesh gode car met in fire accident - dinesh safe (2) Kundapura dinesh gode car met in fire accident - dinesh safe (4)

Leave a Reply