Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಯಕ್ಷರಂಗದ ಭರವಸೆಯ ಕಲಾವಿದ ಪ್ರಸನ್ನ ಶೆಟ್ಟಿಗಾರ್
    ಯಕ್ಷಲೋಕ

    ಯಕ್ಷರಂಗದ ಭರವಸೆಯ ಕಲಾವಿದ ಪ್ರಸನ್ನ ಶೆಟ್ಟಿಗಾರ್

    Updated:12/10/2016No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    ಕರುಣಾಕರ ಬಳ್ಕೂರು | ಕುಂದಾಪ್ರ ಡಾಟ್ ಕಾಂ ಲೇಖನ

    Click Here

    Call us

    Click Here

    ಕರಾವಳಿಯ ಯಕ್ಷರಂಗದ ಬಡಗುತಿಟ್ಟಿನ ಕ್ಷೇತ್ರವನ್ನು ಆಳಿದ ದೀಮಂತ ದಿಗ್ಗಜರುಗಳ ಭವ್ಯ ಪರಂಪರೆಯೇ ನಮ್ಮ ನಡುವೆ ಇದೆ. ಅದೀಗ ಇತಿಹಾಸ ಹೌದು. ಆ ಇತಿಹಾಸದ ಪುಟಗಳಿಗೆ ಮತ್ತೆ ಇನ್ನಷ್ಟು ಸಾಧನೆಗಳನ್ನು ಸೇರಿಸಲು ಯಕ್ಷರಂಗದಲ್ಲಿ ಸಾಧನೆಯಿಂದ ಬೆಳೆಯುತ್ತಿರುವ ಕಲಾವಿದರು ನೂರಾರು ಮಂದಿ ನಮ್ಮ ಮುಂದೆ ಕಾಣಸಿಗುತ್ತಾರೆ. ಅದರಲ್ಲೂ ಯುವ ಕಲಾವಿದರ ಸಾಲಿನಲ್ಲಿ ಭರವಸೆಯ ಕಲಾವಿದ ಪ್ರಸನ್ನ ಶೆಟ್ಟಿಗಾರ್ ಕೂಡ ಒರ್ವರು.

    6 ವರ್ಷದ ಎಳೆ ವಯಸ್ಸಿನಲ್ಲೇ ಯಕ್ಷರಂಗಕ್ಕೆ ಪಾದಾರ್ಪಣೆ ಮಾಡಿ ಪ್ರಸ್ತುತ ತನ್ನದೇ ಅಭಿಮಾನಿಗಳನ್ನು ಸೃಷ್ಟಿಸಿಕೊಳ್ಳುತ್ತಿರುವ ಕಲಾವಿದ ಪ್ರಸನ್ನ ಶೆಟ್ಟಿಗಾರ್ ಮಂದಾರ್ತಿ. ಕುಂದಾಪುರ ತಾಲೂಕಿನ ಮಂದಾರ್ತಿ ಗ್ರಾಮದ ತಂತ್ರಾಡಿಯ ಗಂಗಾಧರ ಶೆಟ್ಟಿಗಾರ್ ಮತ್ತು ಸುಲೋಚನಾ ದಂಪತಿಯ 3 ಮಕ್ಕಳಲ್ಲಿ ಹಿರಿಯ ಮಗನಾಗಿ ಜನಿಸಿದರು. 20ನೇ ವಯಸಿನಲ್ಲಿಯೇ ತಂತ್ರಾಡಿಯ ಹಿರಿಯಣ್ಣ ಶೆಟ್ಟಿಗಾರ್ ಅವರಿಂದ ಪ್ರಾಥಮಿಕ ನೃತ್ಯಾಭ್ಯಾಸವನ್ನು ಅಭ್ಯಾಸ ಮಾಡಿ, ಅನಂತರ ಮಂದಾರ್ತಿ ಕಲಾಕೇಂದ್ರದಲ್ಲಿ ಪೂರ್ಣ ಪ್ರಮಾಣದ ಅಭ್ಯಾಸವನ್ನು ಪೂರೈಸಿದರು. ಬಳಿಕ ಪ್ರಥಮ ಬಾರಿಗೆ ರಂಗದ ಮೇಲೆ ಮಿಂಚಿದ್ದು ಹುಟ್ಟೂರಿನ ಮೇಳವಾಗಿರುವ ಮಂದಾರ್ತಿ ಮೇಳದಲ್ಲಿ ತಿರುಗಾಟ ನಡೆಸಿದರು. ಆಗ ಬಾಲಗೋಪಾಲ, ಒಡ್ಡೋಲಗದ ನೃತ್ಯ ಇತ್ಯಾದಿ ವೇಷಗಳ ಮೂಲಕ ಇನ್ನಷ್ಟು ಅಭ್ಯಾಸವನ್ನು ತಿರುಗಾಟದಲ್ಲೇ ನಡೆಸಿದರು.  ಕುಂದಾಪ್ರ ಡಾಟ್ ಕಾಂ ಲೇಖನ.

    ಯಕ್ಷಗಾನದಲ್ಲಿ ಪ್ರಬುದ್ಧ ಕಲಾವಿದ ಎಂಬ ಹೆಗ್ಗಳಿಕೆ ಪಡೆಯಲು ಕೆಲವು ಅರ್ಹತೆಗಳಿವೆ. ಆಳಂಗ ನಿಲುವು, ಶೃತಿ, ಬದ್ದ ಸ್ವರ, ವೇಷ ಭೂಷಣ ಕಟ್ಟುವ ಕೌಶಲ್ಯ, ಗತ್ತು ಗಾಂಭೀರ್ಯ, ಪೌರಾಣಿಕ ಕಥಾವಸ್ತುಗಳ ಬಗ್ಗೆ ಆಳವಾದ ಜ್ಞಾನ, ಲಯಬದ್ಧತೆ ಇತ್ಯಾದಿ. ಹೀಗೆ ಈ ಎಲ್ಲಾ ವಿಚಾರಗಳಲ್ಲಿಯೂ ಪ್ರಸನ್ನ ಗುರುತಿಸಿಕೊಂಡಿದ್ದಾರೆ. ಇವರು ಒಡ್ಡೋಲಗ ವೇಷ, ಮೂರನೇ ವೇಷ, ಪುರುಷ ವೇಷ, ಹೀಗೆ ಹಂತ ಹಂತವಾಗಿ ಹಿರಿಯರ ಒಡನಾಟದಿಂದಲೇ ಪಳಗಿ ಮುಖ್ಯ ವೇಷದ ಸ್ಥಾನ ಪಡೆದರು. ಸುಮಾರು ವರ್ಷದ ಹಿಂದೆ ಅರಾಟೆ ಮಂಜುನಾಥರ ಪ್ರವಾಸಿ ಯುಕ್ಷಗಾನ ಮಂಡಳಿಯ ವತಿಯಿಂದ ಮುಂಬಯಿ ನಗರಕ್ಕೆ ಪ್ರಥಮವಾಗಿ ಕಾಲಿಟ್ಟು ಇವರು ಅನೇಕ ಪೌರಾಣಿಕ ಪಾತ್ರಗಳಲ್ಲಿ ತನ್ನ ಪ್ರತಿಭೆಯನ್ನು ಹೊರ ರಾಜ್ಯಗಳಲ್ಲೂ ತೋರಿಸಿದ್ದಾರೆ.

    ಪ್ರಸನ್ನರವರು ಗದಾಯುದ್ಧದ ಕೌರವ, ಕಾರ್ತವೀರ್ಯ, ಚಕ್ರಚಂಡಿಕಾದ ಬರ್ಬರಿಕಾ, ಬಭ್ರುವಾಹನ, ದೇವಿ ಮಹಾತ್ಮೆಯ ವಿಷ್ಣು, ರುದ್ರಕೋಪ ಮುಂತಾದ ಪಾತ್ರಗಳು ಸುಪ್ರಸಿದ್ಧವಾಗಿದೆ. ಸಾಮಾಜಿಕ ಪ್ರಸಂಗಗಳಲ್ಲಿಯೂ ಸೈಎನಿಸಿಕೊಂಡಿದ್ದಾರೆ. ಕಳೆದವರ್ಷದ ಈಶ್ವರ ಮಂಗಲ ವಿರಚಿತ ವಜ್ರ ಮಾನಸಿ ಪ್ರಸಂಗದಲ್ಲಿ ಭುವನೇಂದ್ರನಾಗಿ ಹೀಗೆ ಹಲವು ಪ್ರಸಂಗಗಳಲ್ಲಿ ಪಾತ್ರವನ್ನು ನಿರ್ವಹಿಸಿದ್ದಾರೆ. ಇವರ ಅಭಿನಯದಲ್ಲಿ ಬಡಾ ಬಡಗಿನ ಕಲಾವಿದರ ಚಿರಮುದ್ರೆಯನ್ನು ಕಾಣುತ್ತೇವೆ.

    Click here

    Click here

    Click here

    Call us

    Call us

    ಇವರು ರಂಗದ ಮೇಲೆ ಮಿಂಚಲು ಮತ್ತು ತಪ್ಪೊಪ್ಪುಗಳನ್ನು ತಿದ್ದಿದವರು ಸಾಲಿಗ್ರಾಮದ ಮೇಳದ ಹಿರಿಯ ಕಲಾವಿದರು ಮತ್ತು ಇತರರು. ತನ್ನ ಪ್ರತಿಭೆ ಅನಾವರಣಗೊಳ್ಳಲು ಅವಕಾಶ ನೀಡಿದ ಮೇಳದ ಯಜಮಾನರನ್ನು ಮತ್ತು ಹಿರಿಯ ಕಲಾವಿದರನ್ನು ಸ್ಮರಿಸುತ್ತಾರೆ. ನಿರಂತರ ೬ ವರ್ಷಗಳ ಕಾಲ ಮಂದಾರ್ತಿ ಮೇಳದಲ್ಲಿ ಕಲಾಸೇವೆ ಗೈದು ಪ್ರಸ್ತುತ ಪ್ರಸಿದ್ಧ ಮೇಳವಾದ ಸಾಲಿಗ್ರಾಮ ಮೇಳದ ತಿರುಗಾಟದಲ್ಲಿ ಇದ್ದಾರೆ. ಇವರ ಕಲಾಸೇವೆ ಇನ್ನೂ ನಿರಂತರವಾಗಿ ನಡೆದು ಕಲಾಕ್ಷೇತ್ರದಲ್ಲಿ ವಿನೂತನ ಸಾಧನೆ ಮಾಡಲಿ ಎಂದು ಹಾರೈಸೋಣ. © ಕುಂದಾಪ್ರ ಡಾಟ್ ಕಾಂ.

    ಲೇಖಕರು ಮಂಗಳೂರು ಎಕ್ಸಪರ್ಟ್  ಪಿಯು ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರು.

    Like this:

    Like Loading...

    Related

    Yakshagana
    Share. Facebook Twitter Pinterest LinkedIn Tumblr Telegram Email
    Editor Desk
    • Website
    • Facebook
    • X (Twitter)

    Related Posts

    ರಾಮೀ ಗ್ರೂಪ್ಸ್ ಸಂಸ್ಥಾಪಕ, ಹೆಸರಾಂತ ಉದ್ಯಮಿ ವರದರಾಜ್ ಎಂ. ಶೆಟ್ಟಿ ಅವರ ವಿಶೇಷ ಸಂದರ್ಶನ

    14/12/2023

    Video ಅಪಘಾತಕ್ಕೀಡಾಗುವ ಅನಾಥ ಗೋವುಗಳ ಆಪತ್ಭಾಂದವ ಬೈಕ್ ಮೆಕ್ಯಾನಿಕ್ ಸಂಜೀವ

    14/10/2023

    INTERVIEW ಬಿಜೆಪಿ ಸರಕಾರದ ಅಭಿವೃದ್ಧಿ ಕಾರ್ಯಗಳೇ ನಮಗೆ ಮತವಾಗಲಿದೆ – ಗುರುರಾಜ ಶೆಟ್ಟಿ ಗಂಟಿಹೊಳೆ

    05/05/2023

    Leave a ReplyCancel reply

    Call us

    Click Here

    Call us

    Call us

    Call us
    Highest Viewed Recently
    • ಎಸ್‌ಸಿಡಿಸಿಸಿ ಬ್ಯಾಂಕ್ ತೆಕ್ಕಟ್ಟೆ ಶಾಖೆ: ಗ್ರಾಹಕರಿಗೆ ಆರ್ಥಿಕ ಅರಿವು ಜಾಗೃತಿ ಕಾರ್ಯಕ್ರಮ
    • ಬೈಂದೂರು ಉತ್ಸವ: ಜಿಲ್ಲಾಧಿಕಾರಿ ಕಚೇರಿಯಲ್ಲಿ ಶಾಸಕ ಗಂಟಿಹೊಳೆ ನೇತೃತ್ವದಲ್ಲಿ ವಿವಿಧ ಇಲಾಖಾ ಅಧಿಕಾರಿಗಳ ಸಭೆ
    • ರಾಜ್ಯ ಮಟ್ಟದ ಐಡಿಯಾಥಾನ್ ಸ್ಪರ್ಧೆಯಲ್ಲಿ ಎಂಐಟಿ ಕುಂದಾಪುರದ ಅಧ್ಬುತ ಸಾಧನೆ
    • ಕುಂದಾಪುರ: ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಸಂಸ್ಥಾಪಕರ ದಿನಾಚರಣೆ
    • ಡಾ. ಬಿ.ಬಿ. ಹೆಗ್ಡೆ ಕಾಲೇಜು: ವಾರ್ಷಿಕ ಕ್ರೀಡಾಕೂಟ ಉದ್ಘಾಟನೆ

    © 2025 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.

    %d