ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಕಲಾಮಂದಿರಲ್ಲಿ ನ.೨೬ರಿಂದ ನ.೨೯ರ ವರೆಗೆ ಕಾಟೂನು ಕುಂದಾಪ್ರ ತಂಡ ನೇತೃತ್ವದಲ್ಲಿ ಜರುಗುತ್ತಿರುವ ’ಕಾರ್ಟೂನು ಹಬ್ಬ’ದಲ್ಲಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ವಿವಿಧ ಸ್ವರ್ಧೆಗಳನ್ನು ಆಯೋಜಿಸಲಾಗಿದೆ.
ಶಾಲಾ-ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗಾಗಿ ನ.೨೬ರ ಮಧ್ಯಾಹ್ನ ೨ ಗಂಟೆಗೆ ’ಕಾರ್ಟೂನು ಮೊಗ್ಗು ಕಾರ್ಟೂನು ಸ್ವರ್ಧೆ’ ಆಯೋಜಿಸಲಾಗಿದೆ. ಜ್ಯೂನಿಯರ್ ಹಾಗೂ ಸಿನಿಯರ್ ವಿಭಾಗದಲ್ಲಿ ಸ್ವರ್ಧೆ ನಡೆಯಲಿದ್ದು ವಿದ್ಯಾರ್ಥಿಗಳು ಸೋಶಿಯಲ್ ಮೀಡಿಯಾ, ಡಿಜಿಟಲ್ ಇಂಡಿಯಾ ಹಾಗೂ ಕಾಳಧನ ಈ ಮೂರು ವಿಷಯದಲ್ಲಿ ಯಾವುದಾದರೂ ಎರಡು ವಿಷಯವನ್ನು ಆಯ್ದುಕೊಂಡು ಎರಡು ಗಂಟೆಯ ಅವಧಿಯಲ್ಲಿ ಸ್ಥಳದಲ್ಲಿಯೇ ಕಾರ್ಟೂನು ರಚಿಸಬಹುದಾಗಿದೆ.
ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಗೆ ನ.೨೮ರ ಬೆಳಿಗ್ಗೆ ೧೦ಗಂಟೆಗೆ ’ಸೈಬರ್ ಕಾರ್ಟೂನು ಸ್ವರ್ಧೆ’ ಆಯೋಜಿಸಲಾಗಿದೆ. ಸೋಶಿಯಲ್ ಮೀಡಿಯಾ, ಡಿಜಿಟಲ್ ಇಂಡಿಯಾ ಎಂಬ ವಿಷಯದಲ್ಲಿ ಒಂದನ್ನು ಆಯ್ದುಕೊಳ್ಳಬಹುದಾಗಿದ್ದು ಜ್ಯೂನಿಯರ್ ಹಾಗೂ ಸೀನಿಯರ್ ವಿಭಾಗದಲ್ಲಿ ಸ್ವರ್ಧೆ ನಡೆಯಲಿದೆ.
ಡ್ರಾಯಿಂಗ್ ಹಾಳೆ ಹೊರತು ಪಡಿಸಿ ಉಳಿದ ಪರಿಕರಗಳನ್ನು ವಿದ್ಯಾರ್ಥಿಗಳು, ಸಾರ್ವಜನಿಕರೇ ತರಬೇಕಿದ್ದು ಎಲ್ಲಾ ಸ್ವರ್ಧೆಯಲ್ಲಿ ಆಯ್ಕೆಗೊಂಡ ಕಾರ್ಟೂನುಗಳಿಗೆ ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನವನ್ನು ಕಾರ್ಟೂನು ಹಬ್ಬದ ಸಮಾರೋಪ ಸಮಾರಂಭಲ್ಲಿ ನೀಡಲಾಗುವುದು ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.










