Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಎಪಿಎಂಸಿ ಚುನಾವಣೆಯಲ್ಲಿ ಬಿಜೆಪಿ ಕಾಂಗ್ರೆಸ್ ಸಮಬಲ. ಕಾಂಗ್ರೆಸ್ ಬೆಂಬಲಿತರಿಗೆ ಗದ್ದುಗೆ
    ವಿಶೇಷ ವರದಿ

    ಎಪಿಎಂಸಿ ಚುನಾವಣೆಯಲ್ಲಿ ಬಿಜೆಪಿ ಕಾಂಗ್ರೆಸ್ ಸಮಬಲ. ಕಾಂಗ್ರೆಸ್ ಬೆಂಬಲಿತರಿಗೆ ಗದ್ದುಗೆ

    Updated:17/02/2017No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    ಕುಂದಾಪ್ರ ಡಾಟ್ ಕಾಂ ವರದಿ.
    ಕುಂದಾಪುರ: ಕುಂದಾಪುರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಚುನಾವಣೆಯಲ್ಲಿ ಈ ಭಾರಿ ಬಿಜೆಪಿ ಅಧಿಕಾರ ಕೈತಪ್ಪಿದ್ದು ಕಾಂಗ್ರೆಸ್ ಸುಲಭವಾಗಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. ಇಂದು ಮಿನಿ ವಿಧಾನಸೌಧದಲ್ಲಿ 6 ಕ್ಷೇತ್ರಗಳಿಗೆ ನಡೆದ ಚುನಾವಣೆಗೆ ಮತ ಎಣಿಕೆ ನಡೆದಿದ್ದು, 3ಕಾಂಗ್ರೆಸ್ 3 ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸುವ ಮೂಲಕ ಸಮಬಲ ಸಾಧಿಸಿದ್ದಾರೆ.

    Click Here

    Call us

    Click Here

    ಉಳಿದ ಏಳು ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದ್ದು ಕಾಂಗ್ರೆಸ್ ಬೆಂಬಲಿತ 3 ಹಾಗೂ ಬಿಜೆಪಿ ಬೆಂಬಲಿತ 4 ಅಭ್ಯರ್ಥಿಗಳು ಆಯ್ಕೆಗೊಂಡಿದ್ದರು. ಒಟ್ಟು ಹದಿಮೂರು ಸ್ಥಾನಗಳಲ್ಲಿ ಕಾಂಗ್ರೆಸ್ ಪಕ್ಷ 6 ಸ್ಥಾನ ಪಡೆದುಕೊಂಡರೆ, ಬಿಜೆಪಿ ಪಕ್ಷ 7 ಸ್ಥಾನ ಪಡೆದು ಬಹುಮತ ಸಾಧಿಸಿದ್ದರೂ ಮೂವರು ನಾಮ ನಿರ್ದೇಶಿತ ಸದಸ್ಯರಿಂದಾಗಿ ಅಧಿಕಾರ ಕೈತಪ್ಪಲಿದೆ. ಎಪಿಎಂಸಿ ಆರು ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ದು, ವರ್ತಕ ಕ್ಷೇತ್ರ, ಶಿರೂರು ಹಾಗೂ ಕಿರಿಮಂಜೇಶ್ವರದಲ್ಲಿ ಬಿಜೆಪಿ ಬೆಂಲಿತರು ಜಯ ಸಾಧಿಸಿದರೆ, ಕಂಬದಕೋಣೆ, ತ್ರಾಸಿ, ವಂಡ್ಸೆ ಕೃಷಿ ಕ್ಷೇತ್ರದಿಂದ ಕಾಂಗ್ರೆಸ್ ಬೆಂಬಲಿಗರು ವಿಜಯ ಗಳಿಸಿದ್ದಾರೆ. ಕುಂದಾಪ್ರ ಡಾಟ್ ಕಾಂ ವರದಿ.

    ರೈತ ಸಂಘದ ಅಧ್ಯಕ್ಷರ ಸೋಲು
    ಎರಡು ಭಾರಿ ಎಂಪಿಎಂಸಿಯ ಅಧಿಕಾರದ ಚುಕ್ಕಾಣಿ ಹಿಡಿದಿದ್ದ ದೀಪಕ್‌ಕುಮಾರ್ ಶೆಟ್ಟಿ ಈ ಭಾರಿ ಸೋಲು ಕಂಡಿದ್ದಾರೆ. ಒಂದು ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷರಾಗಿದ್ದ ದೀಪಕ್ ಕುಮಾರ್ ಶೆಟ್ಟಿ ಮೂರನೇ ಬಾರಿ ಸ್ವರ್ಧಿಸಿದ್ದರು. ರೈತಸಂಘದ ಅಧ್ಯಕ್ಷರಾಗಿಯೂ ಗುರುತಿಸಿಕೊಂಡಿದ್ದರು. ಆದರೆ ಈ ಭಾರಿ ಕಂಬದಕೋಣೆ ಕ್ಷೇತ್ರದಿಂದ ಸ್ವರ್ಧಿಸಿ ಸೋಲು ಕಂಡಿದ್ದಾರೆ.

    ಕುಂದಾಪುರ ಎಪಿಎಂಸಿಯಲ್ಲಿ ಒಟ್ಟು 13 ಕ್ಷೇತ್ರಗಳ ಪೈಕಿ 11 ಕೃಷಿಕರ ಕ್ಷೇತ್ರ, ತಲಾ ಒಂದು ಟಿಎಪಿಸಿಎಂ ಹಾಗೂ ಮಾರಾಟ ಪ್ರತಿನಿಧಿಗಳ ಕ್ಷೇತ್ರವಿದ್ದು, ಕುಂದಾಪುರ ಎಪಿಎಂಸಿ ಚುನಾವಣೆಗೆ ಒಟ್ಟು 42 ನಾಮಪತ್ರ ಸಲ್ಲಿಕೆಯಾಗಿದ್ದು, 16 ಮಂದಿ ಕಣದಲ್ಲಿದ್ದರು.

    ಗೆಲುವು ಸಾಧಿಸಿದ ಅಭ್ಯರ್ಥಿಗಳು

    Click here

    Click here

    Click here

    Call us

    Call us

    • ಬಿಜೆಪಿ: ಶಿರೂರು-ವೆಂಕಟ ಪೂಜಾರಿ, ಕಿರಿಮಂಜೇಶ್ವರ-ಮಂಜು ದೇವಾಡಿಗ, ವರ್ತಕರ ಪ್ರತಿನಿಧಿ-ರಾಮರಾಯ ಕಾಮತ್.
    • ಕಾಂಗ್ರೆಸ್: ಕಂಬದಕೋಣೆ-ವಸಂತ ಶೆಟ್ಟಿ, ವಂಡ್ಸೆ-ಸಂಜೀವ ಪೂಜಾರಿ, ತ್ರಾಸಿ ಶರತ್ ಕುಮಾರ್ ಶೆಟ್ಟಿ,

    ಅವಿರೋಧವಾಗಿ ಆಯ್ಕೆಗೊಂಡವರು:

    • ಎಸ್.ರಾಜು ಪೂಜಾರಿ (ಕಾಂಗ್ರೆಸ್ – ಸಹಕಾರಿ ಮಾರುಕಟ್ಟೆ ಪ್ರತಿನಿಧಿ ಕ್ಷೇತ್ರ ಸಾಮಾನ್ಯ)
    • ಕೃಷ್ಣಾವತಿ ಶೆಡ್ತಿ (ಕಾಂಗ್ರೆಸ್- ಅಂಪಾರು ಕ್ಷೇತ್ರ ಮೀಸಲು ಮಹಿಳೆ)
    • ಕೆ.ರಾಮ ನಾಯ್ಕ್ (ಬಿಜೆಪಿ-ಸಿದ್ದಾಪುರ ಕ್ಷೇತ ಅನುಸೂಚಿತ ಪಂಗಡ)
    • ಗಣೇಶ್ ಶೇರಿಗಾರ್ (ಕಾಂಗ್ರೆಸ್- ಕುಂದಾಪುರ ಸಾಮಾನ್ಯ ಕ್ಷೇತ್ರ)
    • ಹೆಚ್.ವಸಂತ ಶೆಟ್ಟಿ(ಬಿಜೆಪಿ- ತೆಕ್ಕಟ್ಟೆ ಕ್ಷೇತ್ರ ಹಿಂದುಳಿದ ವರ್ಗ ಬಿ)
    • ಮಂಜುಳಾ (ಬಿಜೆಪಿ- ಹೊಂಬಾಡಿ-ಮಂಡಾಡಿ ಮೀಸಲು ಮಹಿಳೆ)
    • ಚಂದ್ರ ಸಮಗಾರ(ಬಿಜೆಪಿ- ಹಾಲಾಡಿ ಕ್ಷೇತ್ರ ಅನುಸೂಚಿತ ಜಾತಿ) ಕುಂದಾಪ್ರ ಡಾಟ್ ಕಾಂ ವರದಿ.

    ಮತವಿವರ:

    • ಶಿರೂರು: ವೆಂಕಟ ಪೂಜಾರಿ (ಬಿಜೆಪಿ)-1609, ಮಹಾಬಲ ದೇವಾಡಿಗ-1223, ಸ್ವತಂತ್ರ ಅಭ್ಯರ್ಥಿಗಳಾದ-ಮೋಹನಚಂದ್ರ-26, ರವಿಚಂದ್ರ-29, ತಿರಸ್ಕೃತ ಮತ 39, ಚಲಾವಣೆಯಾದ ಮತ 2926. ಅಂತರ-386
    • ಕಂಬದಕೋಣೆ: ವಸಂತ ಹೆಗ್ಡೆ (ಕಾಂ)-1014, ದೀಪಕ್ ಕುಮಾರ್ ಶೆಟ್ಟಿ-933, ಸ್ವತಂತ್ರ ಅಭ್ಯರ್ಥಿಗಳು-ಮೋಹನಚಂದ್ರ-8, ರವಿಚಂದ್ರ-21, ತಿರಸ್ಕೃತ ಮತ 20, ಚಲಾವಣೆಯಾದ ಮತ-1996. ಅಂತರ-81
    • ಕಿರಿಮಂಜೇಶ್ವರ: ಮಂಜು ದೇವಾಡಿಗ (ಬಿಜೆಪಿ)-981, ನರಸಿಂಹ ಪೂಜಾರಿ-916, ತಿರಸ್ಕೃತ ಮತ 19, ಚಲಾವಣೆಯಾದ ಮತ 1916. ಅಂತರ-25
    • ತ್ರಾಸಿ: ಶರತ್ ಕುಮಾರ್ ಶೆಟ್ಟಿ (ಕಾಂ)-1381, ರಾಧಾಕೃಷ್ಣ ಸೇರಿಗಾರ್-1138, ತಿರಸ್ಕೃತ-52, ಚಲಾವಣೆಯಾದ ಮತ-2576. ಅಂತರ 243
    • ವಂಡ್ಸೆ: ಸಂಜು ಪೂಜಾರಿ (ಕಾಂ)-1516, ಚಂದ್ರ ಆಚಾರ್ ಕಳಿ-1336, ತಿರಸ್ಕೃತ-73, ಚಲಾವಣೆಯಾದ ಮತ 2925. ಅಂತರ-180
    • ವರ್ತಕರ ಕೇತ್ರ: ರಾಮರಾಯ ಕಾಮತ್ (ಬಿಜೆಪಿ)-73, ರಾಜೇಶ್ ಪೈ-41 ಚಲಾವಣೆಯಾದ ಮತ-411 ಅಂತರ 32 ಕುಂದಾಪ್ರ ಡಾಟ್ ಕಾಂ ವರದಿ.

    ವಿಜಯೋತ್ಸವ
    ಕುಂದಾಪುರ ಎಪಿಎಂಸಿ ಚುನಾವಣೆಯಲ್ಲಿ ಜಯಗಳಿಸದ ಕಾಂಗ್ರೆಸ್ ಬೆಂಬಲಿತರಾದ ಶರತ್ ಕುಮಾರ್ ಶೆಟ್ಟಿ, ವಸಂತ ಹೆಗ್ಡೆ, ಸಂಜು ಪೂಜಾರಿ ವಿಜಯೋತ್ಸವ ಆಚರಿಸಿದರೇ ಬಿಜೆಪಿ ಬೆಂಬಲದಿಂದ ಆಯ್ಕೆಯಾದ ವೆಂಕಟ ಪೂಜಾರಿ, ಮಂಜು ದೇವಾಡಿಗ, ರಾಮರಾಯ ಕಾಮತ್ ಅವರನ್ನು ಬಿಜೆಪಿ ಕಾರ‍್ಯಕರ್ತರು ಅಭಿನಂದಿಸಿದರು. © ಕುಂದಾಪ್ರ ಡಾಟ್ ಕಾಂ.

    ► ಕುಂದಾಪುರ ಎಪಿಎಂಸಿ ಚುನಾವಣೆ. ಗದ್ದುಗೆಗೆ ಪೈಪೋಟಿ – http://kundapraa.com/?p=20589

    Kundapura APMC
    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಸೈಕಲ್‌ನಲ್ಲಿ 3,300 ಕಿಮೀ ಕ್ರಮಿಸಿ ಲಡಾಕ್ ಯಾತ್ರೆ ಪೂರೈಸಿದ ಹಳ್ಳಿಹೊಳೆಯ ಯುವಕ ದಿನೇಶ್‌ ಬೋವಿ

    30/09/2025

    ಶಿಥಿಲ ಮನೆಯಲ್ಲಿಯೇ 12 ಮಂದಿ ವಾಸ. ಇದು ಅಸಹಾಯಕ ಕುಟುಂಬದ ಕಣ್ಣೀರ ಕಥೆ

    03/08/2024

    ಹುಲ್ಕಡಿಕೆ ಜನರ ಬದುಕಿಗಿಲ್ಲ ಭರವಸೆ! ಅಪಾಯಕಾರಿ ಹೊಳೆದಾಟಿ ಶಿಕ್ಷಣ ಪಡೆಯುತ್ತಿರುವ ವಿಶೇಷ ಚೇತನ ಮಕ್ಕಳು

    02/07/2024
    Leave A Reply Cancel Reply

    Call us

    Click Here

    Call us

    Call us

    Call us
    Highest Viewed Recently
    • ಡಿ.23ರಂದು ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದಿಂದ ರಾಷ್ಟ್ರೀಯ ರೈತರ ದಿನಾಚರಣೆ
    • ಕೋಟ ಅಮೃತೇಶ್ವರೀ ಜಾತ್ರಾ ಆಮಂತ್ರಣ ಬಿಡುಗಡೆ
    • ಗಂಗೊಳ್ಳಿ ಎಸ್‌ವಿ ಪ.ಪೂ ಕಾಲೇಜಿನಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ
    • ಪದವಿಪೂರ್ವ ಶಿಕ್ಷಣದ ಯಶಸ್ಸಿಗೆ ಸಮರ್ಥ ಆಯ್ಕೆ ಕ್ರಿಯೇಟಿವ್ ಶೈಕ್ಷಣಿಕ ಸಹಭಾಗಿತ್ವದ ತ್ರಿಶಾ ಪಿಯು ಕಾಲೇಜು
    • ಸಿಎಲ್‌ಎಟಿ ಫಲಿತಾಂಶ: ಆಳ್ವಾಸ್ ಪಿಯು ಕಾಲೇಜಿನ 11 ವಿದ್ಯಾರ್ಥಿಗಳು ಉತ್ತೀರ್ಣ  

    © 2025 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.