Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಜಕಣಿ: ಕುಂದನಾಡಿನ ಅಪರೂಪದ ಜನಪದೀಯ ಆಚರಣೆ
    Recent post

    ಜಕಣಿ: ಕುಂದನಾಡಿನ ಅಪರೂಪದ ಜನಪದೀಯ ಆಚರಣೆ

    Updated:19/06/2017No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    ಮಂಜುನಾಥ ಹಿಲಿಯಾಣ | ಕುಂದಾಪ್ರ ಡಾಟ್ ಕಾಂ ಲೇಖನ |
    ಜಕಣಿ(ಜಕ್ಣಿ) ಕುಂದಾಪುರ ನೆಲದ ಕೃಷಿ ಸಂಸ್ಕೃತಿಯೊಂದಿಗೆ ಹುಟ್ಟಿ ಬೆಳೆದಿರುವ ವಿಶಿಷ್ಟ-ವಿಭಿನ್ನ ಆಚರಣೆ. ಪ್ರತಿ ವರ್ಷ ಬೆಸಿಗೆಯ ವೃಷಭ ಸಂಕ್ರಮಣದಿಂದ ಮಿಥುನ ಸಂಕ್ರಮಣದವರೆಗೆ ನೆಡೆಯುವ ಗ್ರಾಮ್ಯ ಬದುಕಿನ ಈ ಆಚರಣೆ ಬಹುನಂಬಿಕೆಯ ಬಹು ಆಯಾಮವುಳ್ಳ ಅಪ್ಪಟ ಜನಪದೀಯ ಆಚರಣೆ. ಸ್ವಲ್ಪ ಮಟ್ಟಿಗೆ ವಿಕ್ಷಿಪ್ರತೆ-ವಿಭಿನ್ನತೆಯ ಆಯಾಮವುಳ್ಳ ಈ ಜಕಣಿ ಆಚರಣೆ ತುಳುನಾಡಿನ ಮೂಲ ಜನರ ಬದುಕಿನೊಂದಿಗೆ ಹುಟ್ಟಿಕೊಂಡ ಅತೀ ಪುರಾತನ ಆಚರಣೆಯೂ ಆಗಿದೆ. ಕಾರ್ತೇಲ್ ತಿಂಗಳಿನ ಮೊದಲ ಮಳೆ ನೆಲವನ್ನು ತಾಕಿದ ಕೂಡಲೇ ಕುಂದನಾಡಿನ ಎಲ್ಲರ ಮನೆಗಳಲ್ಲಿ ಜಕಣಿಯ ಗೌಜಿ ಮೆಲ್ಲಗೆ ಆರಂಭಗೊಳ್ಳುತ್ತದೆ. ಇರಿಸಿದ ಶುಭ ಮೂಹೂರ್ತವೊಂದರಲ್ಲಿ ಕುಟುಂಬದ ಹಿರಿ ಮನೆಗಳಲ್ಲಿ ಕುಟುಂಬದ ಸದಸ್ಯರೆಲ್ಲ ಸೇರಿ ಆಚರಿಸುವ ಈ ಜಕಣಿ ಆಚರಣಾ ಪದ್ದತಿ ಮಾತ್ರ ತೀರಾ ವಿಭಿನ್ನ. ಅಷ್ಟೇ ಕೌತುಕಪೂರ್ಣವಾದದ್ದು.

    Click Here

    Call us

    Click Here

    ಜಕಣಿ ವಿಧಿ-ವಿಧಾನಗಳ ಬಗ್ಗೆ:
    ಸಂಜೆಯ ಸೂರ್ಯ ಪಡುವಣದಲ್ಲಿ ಕಂತುವ ವೇಳೆಯಲ್ಲಿ ಪೂಜಾ ಸಾಮಾಗ್ರಿಗಳನ್ನು ತಲೆಯ ಮೇಲೆ ಹೊತ್ತು ಕುಟುಂಬದ ಹಿರಿ ತಲೆಗಳೆಲ್ಲ ಮನೆಯ ಹತ್ತಿರವಿರುವ ಹಾಡಿಗೆ ದೌಡಾಯಿಸುತ್ತಾರೆ. ಕೈಯಲ್ಲಿ ಊರ ಕೋಳಿಗಳನ್ನು ಹಿಡಿದು ಹಿರಿಯರನ್ನು ಹಿಂಬಾಲಿಸಿ ಬರುವ ಮಕ್ಕಳಿಗೆಲ್ಲ ಅದೊಂದು ಭಯಮಿಶ್ರಿತ ಕೌತುಕದ ಸಂಜೆ.

    ಹಾಡಿಯಲ್ಲಿ ಹೆಚ್ಚಾಗಿ ನಾಗ ಸಂಪಿಗೆ ಅಥವಾ ಬನ್ನೇರಳೆ ಮರದಡಿಯಲ್ಲಿ ಪ್ರತಿಷ್ಠಾಪಿಸಿದ್ದ ರಾಯಿ ಕಲ್ಲುಗಳಿಗೆ, ಸತ್ತ ಪಿತೃಗಳ ನೆನಪಿನಲ್ಲಿ ಹುದುಗಿಸಿದ್ದ ಪಿತೃ ಕಲ್ಲುಗಳಿಗೆ ಕಾಯಿಯನ್ನು ಒಡೆಯಲಾಗುತ್ತದೆ, ದಾಸವಾಳ, ಕಿಸ್ಕೂರ ಇನ್ನಿತರ ಕಾಡ ಹೂಗಳನ್ನು ಇರಿಸಿ ಶೃಂಗರಿಸಲಾಗುತ್ತದೆ. ನಂತರ ಕೂಡಿ ಬಾಳೆ ಎಲೆಯ ಮೇಲೆ ಚೆರು (ಅನ್ನು) ಹಾಕಿ, ಎಣ್ಣೆಯಲ್ಲಿ ಅದ್ದಿ ತೆಗೆದ ಬಟ್ಟೆಯ ತುಂಡನ್ನು ಸುತ್ತಿ ತಯಾರಿಸಿದ್ದ ನೆಣೆ ಕೋಲಿಗೆ ಬೆಂಕಿ ಹತ್ತಿಸಲಾಗುತ್ತದೆ. ಅರಸಿನ ಮತ್ತು ಸುಣ್ಣವನ್ನು ನೀರಿನಲ್ಲಿ ಕರಡಿ ಅಡಿಕೆ ಹಾಳೆಯನ್ನು ಕಟ್ಟಿ ತಯಾರಿಸಿದ ಹಾನದ ಕೊಟ್ಟೆಗೆ ಎರೆದು ಕೆಂಪಗಿನ ಹಾನವನ್ನು ತಯಾರಿಸಲಾಗುತ್ತದೆ.

    ಹಾಡಿಯಲ್ಲಿ ಸೇರಿದ ಕಿರಿಯರೆಲ್ಲ ಕೋಳಿಯ ಕಾಲನ್ನು ತೊಳೆದು ರೆಡಿ ಮಾಡುತ್ತಿದ್ದಂತೆ ಹಿರಿಯ ಸದಸ್ಯನೊರ್ವರು ಕೋಳಿ ಕುತ್ತಿಗೆಯನ್ನು ಕೊಯ್ದು ಕತ್ತರಿಸುತ್ತಾರೆ ಚಿಮ್ಮುವ ಕೆಂಪು ರಕ್ತವನ್ನು ಹಾನದ ಕೊಟ್ಟೆಗೆ, ಚೆರುವಿಗೆ ತಾಗಿಸಿ ಕೋಳಿ ಕಾಲನ್ನು ಎಳೆದು ಬಿಡಲಾಗುತ್ತದೆ. ಕೊನೆಯಲ್ಲಿ ಹಾಡಿಯಲ್ಲಿ ನೆರೆದ ಎಲ್ಲ ಸದಸ್ಯರು ಒಂದೈದು ನಿಮಿಷ ಬೆನ್ನು ತಿರುಗಿಸಿ ನಿಲ್ಲುತ್ತಾರೆ. ಸತ್ತ ಕುಟುಂಬದ ಆತ್ಮಗಳು ಆ ಸಮಯದಲ್ಲಿ ಬಂದು ಉಣ್ಣುತ್ತಾರೆ ಎಂಬ ನಂಬಿಕೆ ಅಷ್ಟೆ. ಹಿರಿಯರ ಪ್ರಾರ್ಥನೆ ಮುಗಿದ ಮೇಲೆ ಚೊಂಬಿನಲ್ಲಿದ್ದ ಜಲವನ್ನು ತುಳಸಿ ದಳದಿಂದ ಸುತ್ತೆಲ್ಲ ಪ್ರೋಕ್ಷಣೆ ಮಾಡಲಾಗುತ್ತದೆ. ನಂತರ ಗೌಜಿನಲ್ಲಿ ಊರ ಕೋಳಿಗಳ ರಿಪೇರಿ ಕಾರ್ಯ ನೆಡೆಯುತ್ತದೆ. ಪಿರಿ ಪಿರಿ ಮಳೆಯಲ್ಲಿ, ನುಸಿಯ ಹಿಂಡಿನಲ್ಲಿ, ಕೋಳಿ ಸಮಾ ಮಾಡಿ ಕೊಚ್ಚಿ ತೊಳೆಯುವ ಕೆಲಸ ನಿಜಕ್ಕೂ ಮಕ್ಕಳಿಗೆ ಯಮಯಾತನೆ ನೀಡುವಂತಹದ್ದು. ಒಂದಿಷ್ಟು ಖುಷಿ ಸಂಭ್ರಮವನ್ನು ನೀಡುವಂತಹದ್ದು! ಕುಂದಾಪ್ರ ಡಾಟ್ ಕಾಂ ಲೇಖನ.

    ಜಕಣಿ ಅನ್ನುವುದು ವರ್ಷದ ಒಂದು ದಿನ ಕುಟುಂಬದ ಎಲ್ಲ ಸದಸ್ಯರು ಸೇರಿ ಕಲೆತು ಆಚರಿಸುವ ಒಂದು ಸಂಭ್ರಮದ ಆಚರಣೆ. ಹಲಸಿನ ಹಣ್ಣಿನ ಕಡಬು, ಇಡ್ಲಿ, ಊರ ಕೋಳಿ ತುಂಡು, ಕೋಳಿ ಗಸಿ ಜಕಣಿಯ ವಿಶಿಷ್ಟ ಖಾದ್ಯಗಳು. ಕುಂದನಾಡಿನ ಜನ ಇವತ್ತಿಗೂ ತುಳುನಾಡಿನ ಅವಿಭಾಜ್ಯ ಅಂಗವಾಗಿ ಬದುಕುತ್ತಿರುವವರು. ಕಲ್ಲುಕುಟಿಕ(ಕಲ್ಕುಡ), ಬೊಬ್ಬರ್ಯ, ನಂದಿ, ಇನ್ನಿತರ ದೈವಗಳ ಆರಾಧನೆ ಇವರ ಬದುಕಿನ ಅವಿಭಾಜ್ಯ ಅಂಗ. ತಾವು ನಂಬಿದ ದೈವಗಳನ್ನು ಜಕಣಿ ದಿನ ಪೂಜಿಸಿ ದೈವ ದರ್ಶನ ಮಾಡಿಸಿ ಕುಟುಂಬವನ್ನು ಸಲಹುವಂತೆ ಬೇಡಿಕೊಳ್ಳುವುದು ಜಕಣಿಯ ಮುಖ್ಯ ಉದ್ದೇಶ. ಕೆಲವೆಡೆ ದೈವದ ದರ್ಶನ ನೆಡೆಯುತ್ತಿರುವಾಗಲೇ ಅನಾಥರಾಗಿ ಸತ್ತ ಕುಟುಂಬದ ಆತ್ಮಗಳು ಕುಟುಂಬದ ಯಾವುದಾದರೂ ಸದಸ್ಯರ ಮೈ ಮೇಲೆ ಅಹಾವನೆ ಆಗಿ ಕೂಗುವುದು, ಅಳುವುದು, ಒರಲುವುದು ಉಂಟು.

    Click here

    Click here

    Click here

    Call us

    Call us

    ಜಕಣಿಯ ಅಧೀಕೃತ ಪೂಜೆ ಪುನಸ್ಕಾರಗಳೆಲ್ಲ ಮುಗಿದ ಮೇಲೆ ಹಲಸಿನ ಹಣ್ಣಿನ ಕಡುಬು, ಇಡ್ಲಿ, ಕೋಳಿ ತುಂಡನ್ನು ಸೇರಿಸಿ ಕೊಡಿ ಬಾಳೆ ಎಲೆಯ ಮೇಲೆ ಉಣಬಡಿಸಿದ ’ಮೀಸಲು’ ಎಡೆಯನ್ನು ಸತ್ತ ಪಿತೃಗಳಿಗೆ ಇಡಲಾಗುತ್ತದೆ. ಮುಂದಿನ ಕಾರ್ತೇಲ್ ತಿಂಗಳವರೆಗೆ ಕುಟುಂಬಕ್ಕೇನೂ ಉಪದ್ರ, ಅನಾಚಾರ, ತೊಂದರೆಗಳು ನೀಡದಂತೆ ಕೇಳಿಕೊಳ್ಳಲಾಗುತ್ತದೆ. ನಂತರ ಕುಟುಂಬದವರೆಲ್ಲ ಸೇರಿ ಸಹಪಂಕ್ತಿಯಲ್ಲಿ ಉಂಡು ತೇಗಿ ಸಂಭ್ರಮಿಸುತ್ತಾರೆ. ಕುಂದಾಪ್ರ ಡಾಟ್ ಕಾಂ ಲೇಖನ.

    ಜಕಣಿ: ಒಂದು ವಿಮರ್ಷೆ

    ಮಂಜುನಾಥ ಹಿಲಿಯಾಣ

    ಈ ಜಕಣಿ ಅನ್ನುವುದನ್ನು ವಿಮರ್ಶಾ ದೃಷ್ಟಿಕೋನದಲ್ಲಿ ನೋಡುವುದಾದರೆ ಇದೊಂದು ಸತ್ತ ಆತ್ಮಗಳ ಆರಾಧನೆಯ ಆಚರಣೆ. ಸತ್ತ ಆತ್ಮಗಳನ್ನು “ಜಕಣಿ” ಅಂತಾನೇ ಕರೆಯುವ ವಾಡಿಕೆ ಕುಂದಾಪುರದಲ್ಲಿ ಉಂಟು. ಕುಟುಂಬ ಸದಸ್ಯನೊಬ್ಬ ಸತ್ತು ಅವನನ್ನು ಬೂದಿ ಮಾಡಿದ ಮೇಲೂ ಅವನ ಆತ್ಮವನ್ನು ವರ್ಷಕ್ಕೊಂದು ಬಾರಿ ಕರೆದು ಸತ್ಕರಿಸಿ ಕಳಿಸುವ ಅದ್ಬುತ ಪರಿಕಲ್ಪನೆಯ ಆಚರಣೆ ಈ ಜಕಣಿ.

    ಇನ್ನೊಂದು ಆಯಾಮದಲ್ಲಿ ನೋಡುವುದಾದರೆ ಹಿಂದೆಲ್ಲ ಮಳೆಗಾಲ ಅಂದರೆ ಸಾಲು ಸಾಲು ಕಾಯಿಲೆಗಳು ಬರುವ ಕಾಲವು ಹೌದು. ಚಿತ್ರ ವಿಚಿತ್ರ ಸಾಂಕ್ರಾಮಿಕ ರೋಗಗಳು ಬಂದು ಕುಟುಂಬದ ಸದಸ್ಯರನ್ನು ಬಲಿ ತೆಗೆದುಕೊಳ್ಳುತ್ತಿದ್ದವು. ಇದಕ್ಕೆ ವೈಜ್ಞಾನಿಕ ಸತ್ಯ ಅರಿಯದ ಜನಸಾಮನ್ಯರು ಸತ್ತ ಜಕಣಿಗಳ ಉಪದ್ರ ಎಂದೇ ಭಾವಿಸುತ್ತಿದ್ದರೇನೋ. ಹಾಗಾಗಿ ಕುಟುಂಬದ ಶಿಶುಗಳಿಗೆ ಸತ್ತ ಆತ್ಮಗಳ ಉಪದ್ರ ಭಾರದಿರಲಿ ಎಂಬ ನೆಲೆಯಲ್ಲೂ ಜಕಣಿ ಆಚರಣೆ ಹುಟ್ಟಿರಬಹುದೇನೊ!

    ಪ್ರತಿ ಕುಟುಂಬದ ಮೂಲ ಮನೆಯಲ್ಲಿ ನಡೆಯುವ ಈ ಭಿನ್ನ ವಾಮ-ನ್ಯಾಮ ಸಂಸ್ಕೃತಿಗೆ ಕಲ್ಲುಕುಟಿಕನ ಬೋಗ, ಕೊಲೆಭೂತ ಎಂಬಿತ್ಯಾದಿ ಅನೇಕ ಆಡು ನಾಮಧೇಯಗಳು ಕುಂದನಾಡಿನಲ್ಲಿ ಉಂಟು. ತೌಳವ ನಾಡಿನಲ್ಲಿ ಭೂತ ಕಟ್ಟುವುದು, ತಂಬಿಲ ಎಂಬ ಇದಕ್ಕೆ ಸಮೀಪವಾದ ಆಚರಣೆಗಳಿರುವುದನ್ನು ನಾವು ಗಮನಿಸಬಹುದು.

    ಜಕಣಿಯ ಗೌಜಿ ಹಿಂದಿನಂತೆ ಇಂದಿಲ್ಲ ನಿಜ. ಆದರೆ ಸತ್ತಿಲ್ಲ. ಹಲವು ಆಧುನಿಕ ಬದಲಾವಣೆಗಳೊಂದಿಗೆ ಅನಿರ್ವಾತೆಯ ಹೆಸರಿನಲ್ಲಾದರೂ ಇವತ್ತಿಗೂ ಕುಂದಾಪುರದ ಪ್ರತಿ ಮನೆಯಲ್ಲಿ ಆಚರಣೆಯಲ್ಲಿ ಉಂಟು. ವರ್ಷಕ್ಕೊಂದು ಬಾರಿಯಾದರೂ ಕುಟುಂಬದ ಸದಸ್ಯರನ್ನು ಸೇರಿಸಿ ಕಷ್ಟ ಸುಖಗಳನ್ನು ಹಂಚಿಕೊಳ್ಳುವಂತೆ ಮಾಡುವ ತಾಕತ್ತಿರುವುದು ಈ ಜಕಣಿಗೆ ಮಾತ್ರ.. ಇದು ಇನ್ನೂ ನೂರ್ಕಾಲ ಹೀಗೆ ಸಾಗಲಿ!! ಏನಂತೀರಿ?? ಕುಂದಾಪ್ರ ಡಾಟ್ ಕಾಂ ಲೇಖನ.

     

     

    Like this:

    Like Loading...

    Related

    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ದುಬೈನಲ್ಲಿ ಅದ್ದೂರಿಯಾಗಿ ಜರುಗಿದ ಅಂತರಾಷ್ಟ್ರೀಯ ಜಾನಪದ ಉತ್ಸವ – 25

    12/09/2025

    ಗಣನಾಯಕನ ರೂಪ, ಗುಣದಲ್ಲಿ ಕಲಿಯಬೇಕಾದ ಪಾಠಗಳು ಅನೇಕ

    06/09/2024

    ಭಾರತ ಬಜೆಟ್-23 ಮುನ್ನೋಟ: ಆರ್ಥಿಕ ಕುಸಿತದ ಭೀತಿಯ ನಡುವೆ ಭಾರತೀಯ ಅರ್ಥವ್ಯವಸ್ಥೆಯನ್ನು ಮೇಲೆತ್ತುವ ಸವಾಲು

    01/02/2023

    Leave a ReplyCancel reply

    Call us

    Click Here

    Call us

    Call us

    Call us
    Highest Viewed Recently
    • ಕೋಡಿ ಉಂಜಲೋತ್ಸವ, ಪುಷ್ಪಯಾಗ ಮಹೋತ್ಸವ ಚಪ್ಪರ ಮುಹೂರ್ತ
    • ಶಕ್ತಿ ಮತ್ತು ಸಾಮರ್ಥ್ಯದ ಮೇಲಿನ ನಂಬಿಕೆಯೇ ಗೆಲುವು: ಜೆ.ಪಿ. ಶೆಟ್ಟಿ ಕಟ್ಕೆರೆ
    • ಶಸ್ತ್ರಚಿಕಿತ್ಸೆಗೆ ನೆರವಾದ ಟೀಮ್ ಊರ್ಮನಿ ಮಕ್ಕಳ್‌ ತಂಡ
    • ಅಂತರಾಷ್ಟ್ರೀಯ ಮಟ್ಟದ ವೇದಿಕ್ ಮಾಥ್ಸ್ ಸ್ಪರ್ಧೆ: ಮದರ್ ತೆರೇಸಾ ಶಾಲೆಯ ವಿದ್ಯಾರ್ಥಿಗಳಿಗೆ ಚಾಂಪಿಯನ್‌ಶಿಪ್ ಗರಿ 
    • ಡಾ. ಬಿ.ಬಿ. ಹೆಗ್ಡೆ ಕಾಲೇಜಿನ ವಾರ್ಷಿಕ ಕ್ರೀಡಾಕೂಟ ಸಂಪನ್ನ

    © 2025 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.

     

    Loading Comments...
     

      %d