ಪರೀಕ್ಷೆ ಭಯದಿಂದ ವಿದ್ಯಾರ್ಥಿ ಸಾವು

Call us

Call us

Call us

ಕುಂದಾಪುರ: ಪರೀಕ್ಷೆಯ ಭಯದಿಂದಾಗಿ ವಿದ್ಯಾರ್ಥಿ ಮೃತಪಟ್ಟ ಘಟನೆ ತಾಲೂಕಿನ ಸಿದ್ದಾಪುರ ಬಡಾಬಾಳು ಎಂಬಲ್ಲಿ ಸಂಭವಿಸಿದೆ. ಸಿದ್ಧಾಪುರ ಬಡಾಬಾಳು ನಿವಾಸಿ ಬಿಕಾಂ ವಿದ್ಯಾರ್ಥಿ ಸಂತೋಷ್ ಶ್ಯಾನುಭಾಗ್(20) ಆಕಸ್ಮಿಕವಾಗಿ ಕುಸಿದು ಬಿದ್ದು ಸಾವಿಗೀಡಾದ ವಿದ್ಯಾರ್ಥಿ.

Call us

Click Here

ಶಂಕರನಾರಾಯಣ ಪ್ರಥಮ ದರ್ಜೆ ಕಾಲೇಜಿನ ದ್ವಿತೀಯ ವರ್ಷದ ಬಿಕಾಂ ಪದವಿ ಓದುತ್ತಿರುವ ಸಂತೋಷ್ ಪರೀಕ್ಷೆ ವಿಚಾರದಲ್ಲಿ ಟೆನ್ಸನ್ ಮಾಡಿಕೊಂಡು ಕಳೆದ ಕೆಲವು ದಿನಗಳಿಂದ ಸರಿಯಾಗಿ ಊಟ, ನಿದ್ದೆ ಮಾಡದೆ ರಾತ್ರಿ ಕೂಡ ನಿದ್ದೆಬಿಟ್ಟು ಓದುತ್ತಿದ್ದರು. ಸೋಮವಾರ ರಾತ್ರಿ ಮನೆ ಸಮೀಪದ ನಾಗಬ್ರಹ್ಮ ದೇವಸ್ಥಾನದ ಬಳಿ ಓದಲು ಹೋಗಿದ್ದು ಮನೆಗೆ ವಾಪಸ್ ಬರುತ್ತಿರುವ ವೇಳೆ ಕಾಲು ಜಾರಿ ತೋಡಿನಲ್ಲಿ ಕುಸಿದುಬಿದ್ದಿದ್ದರು. ತೀವ್ರ ಅಸ್ವಸ್ಥಗೊಂಡಿದ್ದ ಇವರನ್ನು ತಕ್ಷಣ ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆತರಲಾಗಿದ್ದು ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ಶಂಕರನಾರಾಯಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply