Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ರಕ್ತಹೀನತೆಯಿಂದ ಬಳಲುತ್ತಿರುವ ಅಶ್ವಿತಾಗೆ ನೆರವಾಗುವಿರಾ?
    Recent post

    ರಕ್ತಹೀನತೆಯಿಂದ ಬಳಲುತ್ತಿರುವ ಅಶ್ವಿತಾಗೆ ನೆರವಾಗುವಿರಾ?

    Updated:16/10/2017No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    ಪ್ರತೀ ತಿಂಗಳು ಎರಡು ಬಾಟಲಿ ರಕ್ತ ಕೊಡಬೇಕು : ಅಸ್ತಿಮಜ್ಜೆ ಜೋಡಣೆಯೇ ಇದಕ್ಕೆ ಪರಿಹಾರ

    Click Here

    Call us

    Click Here

    ಕುಂದಾಪ್ರ ಡಾಟ್ ಕಾಂ ವರದಿ.
    ಕುಂದಾಪುರ: ಬಾಲೆ ದೇಹದಲ್ಲಿ ರಕ್ತ ಉತ್ಪಾದನೆಯೇ ನಿಂತಿದೆ. ಹಾವಿನ ಪೊರೆಯಂತೆ ಮೈಚರ್ಮ ಕಿತ್ತು ಬರುತ್ತಿದೆ. ರಕ್ತ ಕೊಡದಿದ್ದರೆ ಮುಖ ಕಪ್ಪಡರಿ ಉಸಿರಾಟವೂ ಕಷ್ಟ. ಕಳೆದ ಒಂದು ವರ್ಷದಿಂದ ಇಂತಹ ಯಾತನಾದಾಯಕ ಬದುಕು ಸವೆಸುತ್ತಿದ್ದಾಳೆ ಈ ಹೆಣ್ಣು ಮಗಳು.

    ಕುಂದಾಪುರ ತಾಲೂಕ್, ಹಕ್ಲಾಡಿ ಗ್ರಾಮ, ಹಕ್ಲಾಡಿ ಗುಡ್ಡೆ ನಿವಾಸಿ ಅಶ್ವಿತಾ (16) ಫ್ಯಾನ್ಕೋನಿ ಅನೇಮಿಯಾ ಕಾಯಿಲೆಯಿಂದ ಬಳಲುತ್ತಿರುವ ಬಾಲಕಿ. ಎಲ್ಲರಂತೆ ಶಾಲೆಗೆ ಹೋಗಿ ಬರುತ್ತಿದ್ದ ಅಶ್ವಿತಾಗೆ ಏಕಾಏಕಿ ಜ್ವರ ಕಾಣಿಸಿಕೊಂಡು ಬರುಬರುತ್ತಾ ನಾಲ್ಕು ಹೆಜ್ಜೆ ನಡೆದರೂ ಎದುರುಸಿರು. ಅನಿವಾರ್ಯವಾಗಿ ಶಾಲೆಗೆ ವಿದಾಯ ಹೇಳಬೇಕಾಯಿತು. ತಿಂಗಳು ಸರಿಯಾಗಿ ಎರಡು ಬಾಟಲಿ ರಕ್ತ ಕೊಡಬೇಕು. ರಕ್ತ ಉತ್ಪತ್ತಿ ಮಾಡುವ ಅಸ್ತಿಮಜ್ಜೆ ಕೆಲಸ ನಿಲ್ಲಿಸಿದೆ. ಈ ಕಾಯಿಗೆ ವೈದ್ಯಲೋಕ ಇಟ್ಟ ಹೆಸರು ರಕ್ತ ಹೀನತೆ.

    ಚಿಕಿತ್ಸೆಗೆ 25 ಲಕ್ಷ ಹಣ ಬೇಕು:
    ಅಶ್ವಿತಾಳ ತಂದೆ ಕೃಷ್ಣ ಮೊಗವೀರ ಕೂಲಿ ಕೆಲಸಕ್ಕೆ ಹೋದರೆ, ಇನ್ನೊಂದು ಪುಟ್ಟ ಹೆಣ್ಣು ಮಗುವನ್ನು ಅಜ್ಜಿ ಜತೆ ಬಿಟ್ಟು ತಾಯಿ ಗುಲಾಬಿ ಬಂಟ್ವಾಡಿ ಗೇರು ಬೇಜ ಕಾರ್ಖಾನೆಯಲ್ಲಿ ದುಡಿಯುತ್ತಾರೆ. ಪ್ರತೀ ತಿಂಗಳು ಬಾಲೆಗೆ ರಕ್ತ ಹೊಂದಿಸಬೇಕು. ಮಣಿಪಾಲಕ್ಕೆ ಕರೆದುಕೊಂಡು ಹೋಗಿ ರಕ್ತ ಕೊಡಿಸಿ, ಕರೆತರಬೇಕು. ಮಗಳು ಚಿಕಿತ್ಸೆಗಾಗಿ ಪ್ರತೀ ತಿಂಗಳು 8 ಸಾವಿರಕ್ಕೂ ಮಿಕ್ಕ ಹಣ ಮೀಸಲಿಡಬೇಕು. ಮಗು ಸಂಪೂರ್ಣ ಗುಣ ಆಗಬೇಕಿದ್ದರೆ ಅಸ್ತಿಮಜ್ಜೆ ಜೋಡಣೆ ಮಾಡಬೇಕು. ಇದಕ್ಕೆ ಬರೋಬ್ಬರಿ 25 ಲಕ್ಷ ಹಣ ಬೇಕು. ಹೊಟ್ಟೆ ತುಂಬಿಸಿಕೊಳ್ಳುವುದು ಕಷ್ಟವಾಗಿರುವಾಗಿ ಇಷ್ಟೊಂದು ಬಾರಿ ಮೊತ್ತ ಭರಿಸಲಾಗದೆ ತಾಯಿ ಗುಲಾಬಿ ಕಂಗಾಲಾಗಿದ್ದರೆ. ಪ್ರತೀ ತಿಂಗಳು ರಕ್ತ ಕೊಟ್ಟಾಗಲೂ ರಕ್ತ ಒಗ್ಗದೆ ಬಾಲೆ ಪಡುವ ಕಷ್ಟ ಭಗವಂತನಿಗೇ ಪ್ರೀತಿ. ಒಮ್ಮೊಮ್ಮೆ ಮೂಗು, ಬಾಯಲ್ಲಿ ಕೊಟ್ಟ ಹೊಸ ರಕ್ತ ಒಸರಿಸುವುದುಂಟು.

    ಬೆಂಗಳೂರು ನಾರಾಯಣ ಹೃದಯಾಲಯದಲ್ಲೂ ಪರೀಕ್ಷೆ ಮಾಡಿದ ವೈದ್ಯರು ಅಸ್ತಿಮಜ್ಜೆ ಜೋಡಣೆ ಅನಿವಾರ್ಯ ಎಂದಿದ್ದಾರೆ. ಕಾರ್ಖಾನೆಯಲ್ಲಿ ತಾಯಿ ಕೆಲಸ ಮಾಡುತಿದ್ದು, ಇಎಸ್ಸೈ ಇದ್ದರೂ ಅವಧಿ ಆಗದ ಕಾರಣ ಚಿಕಿತ್ಸೆಗೆ ಸಹಕಾರಿ ಆಗುತ್ತಿಲ್ಲ. ಅಸ್ತಿಮಜ್ಜೆ ಜೋಡಿಸದಿದ್ದರೆ ಮಗುವಿನ ಪ್ರಾಣಕ್ಕೆ ಆಪಾಯವಿದೆ ಎಂಬುದನ್ನು ವೈದ್ಯರು ತಿಳಿಸಿದ್ದು, ತಾಯಿ ಮುಂದೆ ಏನೂ ಎಂಬ ಚಿಂತೆಗೆ ಒಳಗಾಗಿದ್ದಾರೆ. ಸಹೃದಯಿಗಳು ಸಹಕಾರ ನೀಡಿದರೆ ಬಡ ತಾಯಿಯ ಮಗು ಉಳಿಯುತ್ತದೆ. ಧನ ಸಹಾಯ ಮಾಡುವವರು ಸಿಂಡಿಕೇಟ್ ಬ್ಯಾಂಕ್, ಹೆಮ್ಮಾಡಿ ಶಾಖೆ ಅಕೌಂಟ್ ನಂ. 02682200071923 ಗೆ ಹಣ ವರ್ಗಾಯಿಸಬಹುದು.

    Click here

    Click here

    Click here

    Call us

    Call us

    ಅಪಾಯಕ್ಕೆ ಆಹ್ವಾನ:
    ಮಗುವಿಗೆ ಕಾಡುವ ಕಾಯಿಲೆಗೆ ಫ್ಯಾನ್ಕೋನಿ ಅನೇಮಿಯ ಎಂಬ ಹೆಸರಿದ್ದು, ರಕ್ತ ಪ್ರತೀ ತಿಂಗಳು ಕೊಡ ಬೇಕಾಗುತ್ತದೆ. ಇದು ಅಷ್ಟ ಸರಳವಲ್ಲಾ. ಅಪಾಯವೂ ಉಂಟು. ಇದಕ್ಕೆ ಬೆನ್ನುಹುರಿಯಲ್ಲಿ ಬಾಲಕಿಗೆ ಹೊಂದುವ ಅಸ್ತಿಮಜ್ಜೆ ಜೋಡಣೆ ಮಾಡಬೇಕು. ಅಸ್ತಿಮಜ್ಜೆ ಜೋಡಣೆ ದುಬಾರಿಯಾದರೂ ಈ ರೋಗಕ್ಕೆ ಅದೊಂದೇ ಪರಿಹಾರ. – ಡಾ. ವಿಶ್ವೇಶ್ವರ, ವೈದ್ಯಾಧಿಕಾರಿ, ಸರ್ಜನ್ ಆಸ್ಪತ್ರೆ ಅಂಕದಕಟ್ಟೆ

    ಸಿಂಡಿಕೇಟ್ ಬ್ಯಾಂಕ್ ಹೆಮ್ಮಾಡಿ ಶಾಲೆ
    ಅಕೌಂಟ್ ನಂ.: 02682200071923
    ಐಎಫ್‌ಎಸ್‌ಸಿ ಕೋಡ್: SYNB0000268

    Like this:

    Like Loading...

    Related

    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ರಾಮೀ ಗ್ರೂಪ್ಸ್ ಸಂಸ್ಥಾಪಕ, ಹೆಸರಾಂತ ಉದ್ಯಮಿ ವರದರಾಜ್ ಎಂ. ಶೆಟ್ಟಿ ಅವರ ವಿಶೇಷ ಸಂದರ್ಶನ

    14/12/2023

    Video ಅಪಘಾತಕ್ಕೀಡಾಗುವ ಅನಾಥ ಗೋವುಗಳ ಆಪತ್ಭಾಂದವ ಬೈಕ್ ಮೆಕ್ಯಾನಿಕ್ ಸಂಜೀವ

    14/10/2023

    INTERVIEW ಬಿಜೆಪಿ ಸರಕಾರದ ಅಭಿವೃದ್ಧಿ ಕಾರ್ಯಗಳೇ ನಮಗೆ ಮತವಾಗಲಿದೆ – ಗುರುರಾಜ ಶೆಟ್ಟಿ ಗಂಟಿಹೊಳೆ

    05/05/2023

    Leave a ReplyCancel reply

    Call us

    Click Here

    Call us

    Call us

    Call us
    Highest Viewed Recently
    • ರಾಜ್ಯ ಮಟ್ಟದ ಐಡಿಯಾಥಾನ್ ಸ್ಪರ್ಧೆಯಲ್ಲಿ ಎಂಐಟಿ ಕುಂದಾಪುರದ ಅಧ್ಬುತ ಸಾಧನೆ
    • ಕುಂದಾಪುರ: ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಸಂಸ್ಥಾಪಕರ ದಿನಾಚರಣೆ
    • ಡಾ. ಬಿ.ಬಿ. ಹೆಗ್ಡೆ ಕಾಲೇಜು: ವಾರ್ಷಿಕ ಕ್ರೀಡಾಕೂಟ ಉದ್ಘಾಟನೆ
    • ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನ – ಅರ್ಜಿ ಸಲ್ಲಿಕೆ: ಅವಧಿ ವಿಸ್ತರಣೆ
    • ಹಿರಿಯ ಯಕ್ಷಗಾನ ಕಲಾವಿದ ಆರ್ಗೋಡು ಮೋಹನದಾಸ್ ಶೆಣೈ ಅವರಿಗೆ ಉಪ್ಪಿನಕುದ್ರು ಕೊಗ್ಗ ದೇವಣ್ಣ ಕಾಮತ್ ಪ್ರಶಸ್ತಿ

    © 2025 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.

    %d