ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕೌಟುಂಬಿಕ ವಿಚಾರದಲ್ಲಿ ಸಹೋದರರಿಬ್ಬರ ನಡುವೆ ಉಂಟಾದ ಕಲಹ ಆತ್ಯಹತ್ಯೆಯ ಹಂತಕ್ಕೆ ತಲುಪಿದ ಘಟನೆ ಹೊಸಂಗಡಿಯ ಕೆಪಿಟಿಸಿಎಲ್ ವಸತಿ ಗೃಹದಲ್ಲಿ ನಡೆದಿದೆ. ಸಹೋದರನೊಂದಿಗಿನ ಕಲಹದಿಂದ ಈಶ್ವರ್ ಗೌಡ ಎಂಬಾತ ಮನನೊಂದು ಮನೆಯ ಬಾತ್ ರೂಂನ ಮೆಲ್ಚಾವಣಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ದೃಶ್ಯ ಕಂಡ ಈಶ್ವರ್ ಪತ್ನಿ ವಿನಂತಿ ಆಘಾತಗೊಂಡು ಮಗುವಿನ ಆಟದ ಜೋಕಾಲಿಗೆ ನೇಣು ಬಿಗಿದು ಆತ್ಮಹತ್ಯೆ ಗೆ ಯತ್ನಿಸಿದ್ದಾರೆ. ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ವಿನಂತಿಯನ್ನು ಕಂಡು ಪಕ್ಕದ ಮನೆಯ ಮಹಿಳೆ ರಕ್ಷಿಸಿ, ನೆರೆಹೊರೆಯವರ ಸಹಾಯದಿಂದ ತಕ್ಷಣ ಕುಂದಾಪುರದ ಸರ್ಕಾರಿ ಆಸ್ಪತ್ರೆ ದಾಖಲಿಸಿದ್ದಾರೆ. ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ವಿನಂತಿ ಹಾಗೂ ಮೃತ ಈಶ್ವರ ದಂಪತಿಗೆ 8 ತಿಂಗಳ ಮಗುವಿದೆ. ಅಮಾಸೆಬೈಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.