ಕುಂದಾಪುರ: ತಾಲೂಕಿನ ಕಂಡ್ಲೂರಿನಲ್ಲಿ ತನ್ನ ಮನೆಯ ಬಾವಿ ಕಟ್ಟೆಯ ಆವರಣ ಮೇಲೆ ಮಗುವನ್ನು ಕುಳ್ಳಿರಿಸಿಕೊಂಡು ಉಟ ಮಾಡಿಸುತ್ತಿದ್ದಾಗ ಆಯತಪ್ಪಿ ಬಾವಿಗೆ ಬಿದ್ದ ಮಗು ಮೃತಪಟ್ಟ ಹೃದಯ ವಿದ್ರಾವಕ ಘಟನೆ ವರದಿಯಾಗಿದೆ. ಮುದ್ದು ಕಂದಮ್ಮ ಶೆಹರಾಝ್(11 ತಿಂಗಳು) ಮೃತ ದುರ್ದೈವಿ
ಘಟನೆಯ ವಿವರ:
ಕಡ್ಲೂರಿನ ರಾಮಮಂದಿರ ರಸ್ತೆಯ ದಾರು ಸ್ಸೂರೂರ್ ಸರ್ಫರಾಜ್ ಅವರ ಪತ್ನಿ ಹೀನಾ ಅವರು ಎಂದಿನಂತೆ ತನ್ನ ಮನೆಯ ಬಳಿ ಇರುವ ಬಾವಿ ಕಟ್ಟೆಯ ಮೇಲೆ ಮಗುವನ್ನು ಹಿಡಿದು ಕೂರಿಸಿಕೊಂಡು ಊಟ ಮಾಡಿಸುತ್ತಿದ್ದರು. ಊಟ ಮಾಡುತ್ತಿದ್ದ ಮಗು ಕೊಸರಿಕೊಂಡಗ ಒಮ್ಮೆಲೆ ಆಯತಪ್ಪಿ ಬಾವಿಗೆ ಬಿದ್ದಿತ್ತು. ಮಗುವನ್ನು ರಕ್ಷಿಸಲು ತಾಯಿಯೂ ಬೊಬ್ಬೆ ಹಾಕುತ್ತಾ ತಕ್ಷಣ ಬಾವಿಗೆ ಹಾರಿದ್ದಳು.
ತಾಯಿಯ ಬೊಬ್ಬೆ ಕೇಳಿದ ನೆರೆಹೊರೆಯವರು ಅಲ್ಲಿಗೆ ಧಾವಿಸಿ ಬಂದು ತಾಯಿ ಮಗುವನ್ನು ರಕ್ಷಿಸಲು ಬಾವಿಗಿಳಿದರಾದರೂ ಅದಾಗಲೇ ಮಗುವಿನ ಪ್ರಾಣಪಕ್ಷಿ ಹಾರಿಹೋಗಿತ್ತು. ತಾಯಿ ಜೀವನ್ಮರಣದ ಮಧ್ಯೆ ಹೋರಾಟುತ್ತಿದ್ದಳು. ತಕ್ಷಣ ತಾಯಿ ಮಗುವನ್ನು ಕುಂದಾಪುರದ ಆಸ್ಪತ್ರೆಗೆ ಸಾಗಿಸಿದರಾದರೂ ವೈದ್ಯರು ಮಗು ಮೃತ ಪಟ್ಟಿರುವುದನ್ನು ದೃಢಪಡಿಸಿದರು.
ದುಬೈನಲ್ಲಿ ಉದ್ಯೋಗಿಯಾಗಿರುವ ಸರ್ಫರಾಜ್ ಅವರ ಪತ್ನಿ ಹೀನಾ, ಕಂಡ್ಲೂರಿನ ಮನೆಯಲ್ಲಿ ಸರ್ಫರಾಜ ಅವರ ತಂದೆ ತಾಯಿಯೊಂದಿಗೆ ವಾಸವಿದ್ದರು. ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.