ಸಮುದ್ರದಲೆಯ ಹೊಡೆತಕ್ಕೆ ಜಾರಿ ಬಿದ್ದ ಬೈಂದೂರು ಶಾಸಕ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಮಹಾಲಯ ಅಮಾವಾಸ್ಯೆಯಂದು ಸಮುದ್ರ ಸ್ನಾನಕ್ಕೆಂದು ತೆರಳಿದ್ದ ಬೈಂದೂರು ಶಾಸಕ ಬಿ.ಎಂ ಸುಕುಮಾರ ಶೆಟ್ಟಿ ಅವರು ಸಮುದ್ರದಲೆಯ ಹೊಡೆತಕ್ಕೆ ಸಿಲುಕಿ ಅಲ್ಲಿಯೇ ಬಿದ್ದ ಘಟನೆ ವರದಿಯಾಗಿದೆ.

Call us

Click Here

ಬೆಂಬಲಿಗರೊಂದಿಗೆ ಸಮುದ್ರ ಸ್ನಾನಕ್ಕೆ ತೆರಳಿದ್ದ ಶಾಸಕರು, ಸಮುದ್ರದಲ್ಲಿ ಮುಂದೆ ಹೋಗಬೇಡಿ ಎಂದರೂ ಕೇಳಿಸಿಕೊಳ್ಳದೇ, ಸಮುದ್ರದಲ್ಲಿ ಮುಂದೆ ಸಾಗಿದ್ದರು. ಒಮ್ಮೆ ಮುಳುಗೆದ್ದು ಮತ್ತೆ ಮುಳುಗಬೇಕು ಎಂಬಷ್ಟರಲ್ಲಿ ಬಂದ ಬೃಹತ್ ಅಲೆಯಿಂದಾಗಿ ಅವರು ಆಯತಪ್ಪಿ ಅಲ್ಲಿಯೇ ಬಿದ್ದರು. ಅವರು ಜೊತೆಗಿದ್ದ ಬೆಂಬಲಿಗರು ಅವರನ್ನು ಮೇಲಕ್ಕೆತ್ತುವ ಪ್ರಯತ್ನ ಮಾಡಿದರಾದರೂ ಕ್ಷಣಕಾಲ ಬೃಹತ್ ಅಲೆಯಿಂದಾಗಿ ಎತ್ತಲಾಗಲಿಲ್ಲ. ಬಳಿಕ ಎತ್ತಲೂ ಸೇರಿ ಶಾಸಕರನ್ನು ಮೇಲಕ್ಕೆತ್ತಿದರು.

ಶಾಸಕರು ಸಮುದ್ರ ಸ್ನಾನಕ್ಕೆ ತೆರಳುವ ವೀಡಿಯೋ ಮಾಡಲು ಹೊರಟಿದ್ದ ಅವರ ಬೆಂಬಲಿಗನೊಬ್ಬ ಅವರು ಸಮುದ್ರದಲ್ಲಿ ಬಿದ್ದು ಹೊರಳಾಡಿದ ವೀಡಿಯೋವನ್ನೂ ಚಿತ್ರೀಕರಿಸಿದ್ದು ಅದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

 Watch Video

Click here

Click here

Click here

Click Here

Call us

Call us

Leave a Reply