Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಗ್ರಾಮ ಸರಕಾರಕ್ಕೆ ಆಯ್ಕೆಯಾದರು ಪ್ರತಿನಿಧಿಗಳು
    ಕುಂದಾಪ್ರದ್ ಸುದ್ಧಿ

    ಗ್ರಾಮ ಸರಕಾರಕ್ಕೆ ಆಯ್ಕೆಯಾದರು ಪ್ರತಿನಿಧಿಗಳು

    Updated:18/03/2017No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    ಕುಂದಾಪುರ: ಗ್ರಾಮ ಸರಕಾರವನ್ನು ಆಯ್ಕೆ ಮಾಡಲು ರಾಜ್ಯದಲ್ಲಿ ನಡೆದ ಎರಡು ಹಂತತದ ಚುನಾವಣೆಯ ಫಲಿತಾಂಶ ಇಂದು( ಜೂ.5) ಹೊರಬಿದ್ದಿದ್ದು, ಕುಂದಾಪುರ ತಾಲೂಕಿನ 62 ಗ್ರಾಮ ಪಂಚಾಯತಿಗಳ ಪೈಕಿ 58 ಪಂಚಾಯತಿಗಳ ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರವಾಯಿತು.

    Click Here

    Call us

    Click Here

    ಕಂದಾಯ ಉಪವಿಭಾಗದ ಸಹಾಯಕ ಆಯುಕ್ತೆ ಚಾರುಲತಾ ಸೋಮಲ್ ಹಾಗೂ ತಹಶೀಲ್ದಾರ್ ಗಾಯತ್ರಿ ನಾಯಕ್ ಮಾರ್ಗದರ್ಶನದಲ್ಲಿ ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಬೆಳಿಗ್ಗೆ 8 ಗಂಟೆಗೆ ಬೀಗು ಬಂದೋವಸ್ತಿನಲ್ಲಿ ಆರಂಭಗೊಂಡ ಮತ ಎಣಿಕೆ ರಾತ್ರಿ 8 ಗಂಟೆಯ ತನಕ ಸಾಗಿತ್ತು. ತಾಲೂಕಿನ 58 ಪಂಚಾಯತಿಗಳ 283 ಕ್ಷೇತ್ರಗಳಲ್ಲಿ ಚಲಾವಣೆಯಾದ 1,75,015 ಮತಗಳನ್ನು 125 ಟೇಬಲುಗಳಲ್ಲಿ 552 ಸಿಬ್ಬಂದಿಗಳ ಮೂಲಕ ಏಣಿಕೆ ಮಾಡಲಾಗಿತ್ತು. ಮತ ಎಣಿಕೆ ಕೇಂದ್ರ ಸುತ್ತಲೂ 200 ಮೀಟರ್ ವ್ಯಾಪ್ತಿಯಲ್ಲಿ 144 ಸೆಕ್ಷನ್ ಜಾರಿಗೊಳಿಸಲಾಗಿತ್ತು. ಕುಂದಾಪುರದ ಡಿವೈಎಸ್ಪಿ ಎಂ. ಮಂಜುನಾಥ ಶೆಟ್ಟಿ ಹಾಗೂ ವೃತ್ತ ನಿರೀಕ್ಷಕ ಪಿ. ಎಂ. ದಿವಾಕರ ಅವರ ನೇತೃತ್ವದಲ್ಲಿ ಆಯೋಜಿಸಲಾಗ ಬಂದೋವಸ್ತಿನಲ್ಲಿ ಪೊಲೀಸ್ ಸಿಬ್ಬಂದಿ ಹಾಗೂ ಗೃಹರಕ್ಷಕ ದಳದ ಭಾಗವಹಿಸಿದ್ದರು.

    ತಾಲೂಕಿನಲ್ಲಿ ಕಾಂಗ್ರೆಸ್ ಮೈಲುಗೈ, 24 ಪಂಚಾಯತಿಗಳು ಬಿಜೆಪಿ ತೆಕ್ಕೆಗೆ
    ಕುಂದಾಪುರ ತಾಲೂಕಿನ ಕುಂದಾಪುರ ಹಾಗೂ ಬೈಂದೂರು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು 29 ಪಂಚಾಯತಿಗಳನ್ನು ತಮ್ಮ ತೆಕ್ಕೆಗೆ ಸೇರಿಸಿಕೊಂಡೇ, ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು 24 ಪಂಚಾಯತಿಗಳನ್ನು ಪಡೆದಿದ್ದಾರೆ. ಉಳಿದ 5 ಗ್ರಾಮ ಪಂಚಾಯತಿಗಳಲ್ಲಿ ತ್ರಿಶಂಕು ಸ್ಥಿತಿ ನಿರ್ಮಾಣವಾಗಿದೆ.

    ತಾಲೂಕಿನ ಬೇಳೂರು, ತೆಕ್ಕಟ್ಟೆ, ಹೆಂಗವಳ್ಳಿ, ಶಿರೂರು, ಉಪ್ಪುಂದ, ಹೇರೂರು, ಕೊಲ್ಲೂರು, ವಂಡ್ಸೆ, ಯೆಡಮೊಗೆ, ಇಡೂರು ಕುಜ್ಞಾಡಿ, ಕಟ್ಬೆಲ್ತೂರು, ಹೆಮ್ಮಾಡಿ, ತ್ರಾಸಿ, ಹೊಸಾಡು, ಶಂಕರನಾರಾಯಣ, ಅಂಪಾರು, ಕಾವ್ರಾಡಿ, ನಾವುಂದ, ಕೆರ್ಗಾಲು, ಉಳ್ಳುರು 74, ಆಲೂರು, ಕಂಬದಕೋಣೆ, ಕರ್ಕುಂಜೆ, ಕಾಲ್ತೋಡು, ನಾಡಾ, ಆಲೂರು, ಹಕ್ಲಾಡಿ ಹಾಗೂ ಗುಲ್ವಾಡಿ ಗ್ರಾಮ ಪಂಚಾಯತಿಗಳು ಕಾಂಗ್ರೆಸ್ ಅಭ್ಯರ್ಥಿಗಳ ವಶವಾದರೇ, ಕುಂಭಾಶಿ, ಗೋಪಾಡಿ, ಕೋಟೇಶ್ವರ, ಹಂಗಳೂರು, ಕೋಣೆ, ಹಾಲಾಡಿ, ಹೊಂಬಾಡಿ-ಮಂಡಾಡಿ, ಪಡುವರಿ, ಅಮಾಸೆಬೈಲು, ಮಡಾಮಕ್ಕಿ, ಜಡ್ಕಲ್, ಹೊಸಂಗಡಿ, ಹಳ್ಳಿಹೊಳೆ, ಆಜ್ರಿ, ಕೆರಾಡಿ, ಗೋಳಿಹೊಳೆ, ಕಿರಿಮಂಜೇಶ್ವರ, ಮರವಂತೆ, ಬಸ್ರೂರು, ಬಳ್ಕೂರು, ಗುಜ್ಜಾಡಿ, ಹಟ್ಟಿಯಂಗಡಿ, ಕಂದಾವರ ಹಾಗೂ ಬೆಳ್ವೆ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ವಶವಾಗಿದೆ.

    ಉಳಿದ ಬಿಜೂರು ಹಾಗೂ ಬಿಜಾಡಿ ಗ್ರಾಮ ಪಂಚಾಯತಿಗಳಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಸಮಬಲ ಸಾಧಿಸಿದರೆ, ಕಾಳವಾರ ಪಂಚಾಯತಿಯಲ್ಲಿ ನಾಗರೀಕ ವೇದಿಕ ಸದಸ್ಯರು ಹೆಚ್ಚಿನ ಸ್ಥಾನ ಪಡೆದುಕೊಂಡಿದ್ದಾರೆ.

    Click here

    Click here

    Click here

    Call us

    Call us

    ಲಾಟರಿ ಅದೃಷ್ಟಶಾಲಿಗಳು
    ಕುಂದಾಪುರ ತಾಲೂಕಿನ 3 ಗ್ರಾಮ ಪಂಚಾಯತಿಗಳ ಅದೃಷ್ಟಶಾಲಿ ಸದಸ್ಯರುಗಳು, ಲಾಟರಿ ಮೂಲಕ ವಿಜೇತರಾಗಿ ಫಲಿತಾಂಶದಲ್ಲಿ ದಾಖಲೆ ಮೂಡಿಸಿದ್ದಾರೆ. ಕೋಟೇಶ್ವರ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಗಣೇಶ್ ಹಾಗೂ ಬಿಜೆಪಿಯ ಚಂದ್ರ ದೇವಾಡಿಗ 179 ಮತ, ಕಟ್ಬೆಲ್ತೂರಿನ ಕಾಂಗ್ರೆಸ್ ಬೆಂಬಲಿತ ಅಶೋಕ್ ಹಾಗೂ ಬಿಜೆಪಿ ಬೆಂಬಲಿತ ನಾಗರಾಜ ಪುತ್ರನ್ 280 ಮತಗಳು ಹಾಗೂ ನಾಡ ಗ್ರಾಮ ಪಂಚಾಯತಿಯ ಸಿಪಿಎಂ ಬೆಂಬಲಿತ ನಾಗರತ್ನ ಹಾಗೂ ಬಿಜೆಪಿ ಬೆಂಬಲಿತ ಯಶೋಧ 249 ಮತಗಳನ್ನು ಪಡೆದಿದ್ದರು. ಲಾಟರಿ ಮೂಲಕ ಆಭ್ಯರ್ಥಿಗಳನ್ನು ಪರೀಕ್ಷೆಗೊಡ್ಡಿದಾಗ ಗಣೇಶ್, ಅಶೋಕ್ ಹಾಗೂ ನಾಗರತ್ನ ಅವರಿಗೆ ಅದೃಷ್ಟ ಒಲಿಯಿತು.

    ಬೆಂಬಲಿಗರ ವಿಜಯೋತ್ಸವ

    ಬೆಳಿಗೆನಿಂದಲೂ ಅಬ್ಯರ್ಥಿಗಳ ಜಯದ ಬಗ್ಗೆ ಘೋಷಣೆಯಾಗುತ್ತಿದ್ದಂತೇ ಅವರವರ ಬೆಂಬಲಿಗರ ವಿಜಯೋತ್ಸವ ಮುಗಿಲುಮುಟ್ಟಿತ್ತು. ವಿಜಯರಾದ ಅಭ್ಯರ್ಥಿಗಳಿಗೆ ಹಾರ ತುರಾಯಿ ಹಾಕಿ, ಸಿಹಿ ಹಂಚಿ ಸಂಭ್ರಮಿಸಿದ್ದು ಅಲ್ಲದೇ ಅಭ್ಯರ್ಥಿಗಳಿಗೆ ಜೈಕಾರ ಹಾಕುವ ಮೂಲಕ ಸಂಭ್ರಮಾಚಿಸಿದರು. ಸ್ಥಳದಲ್ಲಿ ಹಾರಗಳ ವ್ಯಾಪಾರವೂ ಭರ್ಜರಿಯಾಗಿತ್ತು.

    ಇದನ್ನೂ ಓದಿ – ಕುಂದಾಪುರ ತಾಲೂಕಿನ ಗ್ರಾ.ಪಂ ಚುನಾಯಿತ ಅಭ್ಯರ್ಥಿಗಳು

    – ಕುಂದಾಪುರದಲ್ಲಿ ಚುರುಕುಗೊಂಡ ಮತ ಏಣಿಕೆ: ನಿರ್ಧಾರಗೊಳ್ಳಿತ್ತಿದೆ ಅಭ್ಯರ್ಥಿಗಳ ಭವಿಷ್ಯ 

    Like this:

    Like Loading...

    Related

    Share. Facebook Twitter Pinterest LinkedIn Tumblr Telegram Email
    Editor Desk
    • Website
    • Facebook
    • X (Twitter)

    Related Posts

    ಸೈಕಲ್‌ನಲ್ಲಿ 3,300 ಕಿಮೀ ಕ್ರಮಿಸಿ ಲಡಾಕ್ ಯಾತ್ರೆ ಪೂರೈಸಿದ ಹಳ್ಳಿಹೊಳೆಯ ಯುವಕ ದಿನೇಶ್‌ ಬೋವಿ

    30/09/2025

    ಕುಂದಾಪುರವನ್ನು ಪ್ರವಾಸಿ ಕೇಂದ್ರವಾಗಿಸುವುದಕ್ಕೆ ಮೊದಲ ಆದ್ಯತೆ: ಕುಂದಾಪ್ರ ಕನ್ನಡ ಹಬ್ಬ ಸಮಾರೋಪದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಭರವಸೆ

    28/07/2025

    ಫೋರ್ತ್‌ಫೋಕಸ್‌ಗೆ ʼ2025ರ ಗಮನಾರ್ಹ ಸಂಸ್ಥೆʼ ಪ್ರಶಸ್ತಿ – ಬಿಸಿನೆಸ್ ಔಟ್‌ಲೈನ್‌ನ ಬಿಸಿನೆಸ್ ಎಲೈಟ್ ಅವಾರ್ಡ್‌ನಲ್ಲಿ ಗೌರವ

    18/06/2025

    Leave a ReplyCancel reply

    Call us

    Click Here

    Call us

    Call us

    Call us
    Highest Viewed Recently
    • ಎಸ್‌ಸಿಡಿಸಿಸಿ ಬ್ಯಾಂಕ್ ತೆಕ್ಕಟ್ಟೆ ಶಾಖೆ: ಗ್ರಾಹಕರಿಗೆ ಆರ್ಥಿಕ ಅರಿವು ಜಾಗೃತಿ ಕಾರ್ಯಕ್ರಮ
    • ಬೈಂದೂರು ಉತ್ಸವ: ಜಿಲ್ಲಾಧಿಕಾರಿ ಕಚೇರಿಯಲ್ಲಿ ಶಾಸಕ ಗಂಟಿಹೊಳೆ ನೇತೃತ್ವದಲ್ಲಿ ವಿವಿಧ ಇಲಾಖಾ ಅಧಿಕಾರಿಗಳ ಸಭೆ
    • ರಾಜ್ಯ ಮಟ್ಟದ ಐಡಿಯಾಥಾನ್ ಸ್ಪರ್ಧೆಯಲ್ಲಿ ಎಂಐಟಿ ಕುಂದಾಪುರದ ಅಧ್ಬುತ ಸಾಧನೆ
    • ಕುಂದಾಪುರ: ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಸಂಸ್ಥಾಪಕರ ದಿನಾಚರಣೆ
    • ಡಾ. ಬಿ.ಬಿ. ಹೆಗ್ಡೆ ಕಾಲೇಜು: ವಾರ್ಷಿಕ ಕ್ರೀಡಾಕೂಟ ಉದ್ಘಾಟನೆ

    © 2025 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.

    %d