ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಬಿಜಿ ಮೋಹನದಾಸ್ ಅವರು ಜೀವನ ಪರ್ಯಂತ ಸಾಧನೆ ಮಾಡುತ್ತಾ ಬಂದವರು. ದುಬೈನಲ್ಲಿ ಇದ್ದುಕೊಂಡು ಸತತವಾಗಿ ಕನ್ನಡ ಕಟ್ಟಿ ಬೆಳೆಸುವ ಕಾರ್ಯದಲ್ಲಿ ಭಾಗಿಯಾದವರು. ಸಮುದಾಯದ ಅಭಿವೃದ್ಧಿಗೆ ಅವರ ಶ್ರಮ ದೊಡ್ಡದಿದೆ ಎಂದು ಸಂದೀಪನ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಧ್ಯಾಯ ವಿಶ್ವೇಶ್ವರ ಅಡಿಗ ಹೇಳಿದರು.
ಅವರು ಬುಧವಾರ ಬಿಜೂರು ಶಾಲಾ ಮೈದಾನದಲ್ಲಿ ಬಿಜೂರು ನಂದಿಕೇಶ್ವರ ಫ್ರೆಂಡ್ಸ್ ಆಶ್ರಯದಲ್ಲಿ ಜರುಗಿದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಪುರಸ್ಕೃತ ಬಿಜೂರು ಗೋವಿಂದಪ್ಪ ಮೋಹನ್ದಾಸ್ ಅವರಿಗೆ ಹುಟ್ಟೂರ ಸನ್ಮಾನ ಕಾರ್ಯಕ್ರಮದಲ್ಲಿ ಅಭಿನಂದನಾ ಭಾಷಣ ಮಾಡಿದರು.
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತಪುರಸ್ಕೃತ ಸಾಧಕ ಬಿಜೂರು ಗೋವಿಂದಪ್ಪ ಮೋಹನ್ದಾಸ್, ಉದ್ಯಮ ಕ್ಷೇತ್ರದ ಸಾಧಕ ಗೋವಿಂದ ಬಾಬು ಪೂಜಾರಿ ಮತ್ತು ಕ್ರೀಡಾ ಕ್ಷೇತ್ರದ ಸಾಧಕ ಶಂಕರ ಪೂಜಾರಿ ಕಾಡಿನತಾರು ಅವರುಗಳನ್ನು ಸನ್ಮಾನಿಸಲಾಯಿತು.
ನಿವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಜಗನ್ನಾಥ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶ್ರೀ ಏಕನಾಥೇಶ್ವರಿ ದೇವಸ್ಥಾನದ ಅಧ್ಯಕ್ಷರಾದ ಅಣ್ಣಯ್ಯ ಶೇರುಗಾರ್ ಪುಣೆ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಜಿಪಂ ಮಾಜಿ ಉಪಾಧ್ಯಕ್ಷೆ ಶಾರದಾ ಬಿಜೂರು, ಬಿಜೆಪಿ ಕ್ಷೇತ್ರಾಧ್ಯಕ್ಷ ಸದಾನಂದ ಉಪ್ಪಿನಕುದ್ರು, ಪ್ರಧಾನ ಕಾರ್ಯದರ್ಶಿ ದೀಪಕ್ಕುಮಾರ್ ಶೆಟ್ಟಿ, ಮಾಜಿ ಮಂಡಲ ಪಂಚಾಯತ್ ಸದಸ್ಯೆ ಅನುಸೂಯ ಕೆ. ಬಿಜೂರು, ಶ್ರೀ ಏಕನಾಥೇಶ್ವರಿ ದೇವಸ್ಥಾನದ ವಿಶ್ವಸ್ಥ ಹಿರಿಯಡ್ಕ ಮೋಹನ್ದಾಸ್, ಮುಂಬೈ ದೇವಾಡಿಗರ ಸಂಘದ ರವಿ ಎಸ್. ದೇವಾಡಿಗ, ರಾಜ್ಯ ದೇವಾಡಿಗರ ಸಂಘದ ಅಧ್ಯಕ್ಷ ಡಾ. ದೇವರಾಜ್ ಕೆ, ಉಪ್ಪುಂದ ಶ್ರೀ ಮಾತಾ ಫರ್ನಿಚರ್ಸ್ನ ಆನಂದ ಪೂಜಾರಿ, ಮಾಲತಿ ಗೋವಿಂದ ಪೂಜಾರಿ ಮೊದಲಾದವರು ಇದ್ದರು.
ಲಕ್ಷ್ಮೀಕಾಂತ ಬೆಸ್ಕೂರು ಸ್ವಾಗತಿಸಿ, ಪ್ರಿಯದರ್ಶಿನಿ ಕಮಲೇಶ್ ವಂದಿಸಿದರು. ಶಿಕ್ಷಕ ಸುಬ್ರಹ್ಮಣ್ಯ ಉಪ್ಪುಂದ ಕಾರ್ಯಕ್ರಮ ನಿರೂಪಿಸಿದರು. ರಾಘವೇಂದ್ರ ಆಚಾರ್ಯ ಜನ್ಸಾಲೆ ಅವರ ಸಾರಥ್ಯದಲ್ಲಿ ಪಟ್ಲ ಸತೀಶ್ ಶೆಟ್ಟಿ ಹಾಗೂ ಕಾವ್ಯಶ್ರೀ ಅಜೇರು ಅವರಿಂದ ಯಕ್ಷ ಗಾನ ನಾಟ ವೈಭವ ಜರುಗಿತು. ಶಿರಸಿ ಸ್ಮಾರ್ಟ್ ಗ್ರೂಪ್ ಅವರಿಂದ ಡಾನ್ಸ್ ಧಮಾಕ-2 ಜರುಗಿತು.