Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಗಾನಯಾನದಲ್ಲಿ ಹಿಂದೂಸ್ತಾನಿ ಸಂಗೀತ ಪರಿಚಯಿಸುವ ಪ್ರಾತ್ಯಕ್ಷಿಕೆ
    ಊರ್ಮನೆ ಸಮಾಚಾರ

    ಗಾನಯಾನದಲ್ಲಿ ಹಿಂದೂಸ್ತಾನಿ ಸಂಗೀತ ಪರಿಚಯಿಸುವ ಪ್ರಾತ್ಯಕ್ಷಿಕೆ

    No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    ಕುಂದಾಪ್ರ ಡಾಟ್ ಕಾಂ ಸುದ್ದಿ.
    ಬೈಂದೂರು : ನಾಗೂರಿನ ಕುಸುಮ ಫೌಂಡೇಶನ್ ನಡೆಸುತ್ತಿರುವ ಬ್ಲಾಸಂ ಸಂಗೀತ ನೃತ್ಯ ಶಾಲೆಯ ಫೆಬ್ರವರಿ ತಿಂಗಳ ’ಗಾನಯಾನ-5’ ಕಾರ್ಯಕ್ರಮದಲ್ಲಿ ಸಂಗೀತದ ಬದಲು ಶ್ರೋತೃಗಳಿಗೆ ಹಿಂದೂಸ್ಥಾನಿ ಸಂಗೀತವನ್ನು ಪರಿಚಯಿಸುವ ಪ್ರಾತ್ಯಕ್ಷಿಕೆ ನಡೆಸಲಾಯಿತು. ಭಾನುವಾರದ ಈ ಕಾರ್ಯಕ್ರಮದಲ್ಲಿ ಹಾಜರಿದ್ದವರು ಹೆಚ್ಚು ಆಸಕ್ತರೂ, ಸಹೃದಯಿ ಶ್ರೋತೃಗಳೂ ಆಗಬೇಕೆನ್ನುವುದು ಅದರ ಉದ್ದೇಶವಾಗಿತ್ತು.

    Click Here

    Call us

    Click Here

    ಗೋಪಾಡಿಯಲ್ಲಿ ನೆಲೆಸಿ ಗುರುಪರಂಪರಾ ಸಂಗೀತ ಪ್ರತಿಷ್ಠಾನದ ಆಶ್ರಯದಲ್ಲಿ ಸಂಗೀತ ಕಲಿಸುತ್ತಿರುವ, ಪಂ. ಗಣಪತಿ ಭಟ್ ಹಾಸಣಗಿ ಅವರ ಶಿಷ್ಯರೂ, ಆಕಾಶವಾಣಿ ಗ್ರೇಡ್ ಕಲಾವಿದರೂ ಆಗಿರುವ ವಿದ್ವಾನ್ ಸತೀಶ ಭಟ್ ಮಾಳಕೊಪ್ಪ-ಪ್ರತಿಮಾ ಭಟ್ ಮಾಳಕೊಪ್ಪ ದಂಪತಿ ತಮ್ಮ ಹಿರಿಯ ಕಿರಿಯ ಶಿಷ್ಯರನ್ನು ಕೂಡಿಕೊಂಡು ಸಂಗೀತದ ವಿವಿಧ ಮಜಲು ಮತ್ತು ಆಯಾಮಗಳನ್ನು ಶ್ರೋತೃಗಳ ಮುಂದೆ ತೆರೆದಿಟ್ಟರು. ಜತೀಂದ್ರ ಮರವಂತೆ ಮತ್ತು ಗುರುದಂಪತಿಯ ನಡುವಿನ ಸಂವಾದ ಮತ್ತು ವಿಷಯಕ್ಕೆ ಪೂರಕವಾಗಿ ವಿದ್ಯಾರ್ಥಿಗಳ ಹಾಡುಗಾರಿಕೆ, ಶಶಿಕಿರಣ ಮಣಿಪಾಲ ಅವರ ತಬಲಾ ವಾದನದ ಮೂಲಕ ನಡೆದ ಕಾರ್ಯಕ್ರಮ ಸೇರಿದ್ದ ಸಂಗೀತಾಸಕ್ತರ ಕುತೂಹಲ ಮತ್ತು ಜಿಜ್ಞಾಸೆ ತಣಿಸಿ ಉದ್ದೇಶಿತ ಗುರಿ ಸಾಧಿಸಿತು.

    ಭಾರತೀಯ ಸಂಗೀತದ ಪ್ರಮುಖ ಪ್ರಕಾರಗಳ ಮಾಹಿತಿಯೊಂದಿಗೆ ಲಘು ಸಂಗೀತ ಮತ್ತು ಶಾಸ್ತ್ರೀಯ ಸಂಗೀತದ ನಡುವಿನ ಅಂತರವನ್ನು ತಿಳಿಸಿಕೊಡಲಾಯಿತು. ಶ್ರುತಿ, ಸ್ವರ, ಲಯ ಸೇರಿ ಆಗುವ ಸಂಗೀತದಲ್ಲಿ ಬಳಕೆಯಾಗುವ ಸ್ವರಗಳನ್ನು, ಅವುಗಳ ಬದಲಾವಣೆ, ಸಂಯೋಗಗಳಿಂದ ಹುಟ್ಟುವ ವಿವಿಧ ರಾಗಗಳನ್ನು, ವಿಲಂಬಿತ್, ಮಧ್ಯ ಮತ್ತು ದೃತ್ ಲಯಗಳನ್ನು ವಿದ್ಯಾರ್ಥಿಗಳು ಹಾಡಿ ತೋರಿಸಿದರು.

    ಹಿಂದುಸ್ಥಾನಿ ಶಾಸ್ತ್ರೀಯ ಗಾಯನದಲ್ಲಿ ಹೆಚ್ಚು ಪ್ರಚಾರದಲ್ಲಿರುವ ಮತ್ತು ಗುರು ದಂಪತಿ ತಮ್ಮ ವಿದ್ಯಾರ್ಥಿಗಳಿಗೆ ಕಲಿಸುತ್ತಿರುವ ಖಯಾಲ್ ಗಾಯಕಿ ಹೇಗೆ ಪ್ರಸ್ತುತಗೊಳ್ಳುತ್ತದೆ ಎನ್ನುವುದನ್ನು ಪ್ರದರ್ಶಿಸಲಾಯಿತು. ಹಿಂದೂಸ್ಥಾನಿ ಸಂಗೀತದ ಅಷ್ಟಾಂಗಗಳಾದ ಮುಖವಿಲಾಸ, ಸ್ಥಾಯಿ, ಅಂತರ, ಆಲಾಪ್, ಬೋಲ್, ತಾನ್, ಸರ್ಗಮ್ ತಾನ್, ತರಾನಾಗಳ ತುಣುಕುಗಳನ್ನು ವಿದ್ಯಾರ್ಥಿಗಳು ಹಾಡಿ ಶ್ರೋತೃಗಳಿಗೆ ಮನದಟ್ಟು ಮಾಡಿದರು. ಖಯಾಲ್‌ನ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಗುರುಗಳು ಹಾಡುಗಾರರು ಒಂದು ರಾಗದ ಚೌಕಟ್ಟಿನಲ್ಲಿ ಹಾಡುವಾಗ ಆ ಕ್ಷಣದ ಮನೋಧರ್ಮಕ್ಕೆ ಅನುಗುಣವಾಗಿ ರಾಗವನ್ನು ವಿಸ್ತರಿಸುತ್ತಾರೆ. ಹಾಗಾಗಿ ಅದು ಹಾಡುಗಾರನಿಂದ ಹಾಡುಗಾರನಿಗೆ ಮತ್ತು ಒಬ್ಬನೇ ಹಾಡುಗಾರ ಇನ್ನೊಮ್ಮ ಹಾಡುವಾಗ ಬದಲಾಗುತ್ತದೆ ಎಂದರು.

    ಪೋಷಕರ ಪರವಾಗಿ ಜಯಲಕ್ಷ್ಮೀ ಹತ್ವಾರ್ ಅನುಭವ ಹಂಚಿಕೊಂಡರೆ, ಉಳಿದವರು ಪ್ರಾತ್ಯಕ್ಷಿಕೆ ಉಪಯುಕ್ತವಾಗಿತ್ತು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳಾದ ವಿಜಯಾ ಪಡಿಯಾರ್, ವೇದಿಕಾ ಪಡಿಯಾರ್, ಜಾನ್ವಿ ಪ್ರಭು, ವಂದನಾ ಪೈ, ವಂದಿತಾ ಪೈ, ಪಲ್ಲವಿ ಪಡಿಯಾರ್, ದೃತಿ, ಜ್ಯೋತಿ ಭಟ್ಟ, ವಿಜಯಾ ಓಂ ಗಣೇಶ್, ಪೂರ್ಣಿಮಾ, ಸಂಕಲ್ಪಕುಮಾರ್, ಈಶ್ವರಿ, ತುಷಾರ, ನಾಗರಾಜ ಭಟ್, ನೇಹಾ ಹೊಳ್ಳ, ಕೇದಾರ ಮರವಂತೆ ಭಾಗಿಗಳಾಗಿದ್ದರು. ಫೌಂಡೇಶನ್ ಆಡಳಿತ ವಿಶ್ವಸ್ಥ ನಳಿನ್‌ಕುಮಾರ ಶೆಟ್ಟಿ ಕಲಾವಿದರನ್ನು ಸನ್ಮಾನಿಸಿದರು.

    Click here

    Click here

    Click here

    Call us

    Call us

    Like this:

    Like Loading...

    Related

    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಕೋಡಿ ಉಂಜಲೋತ್ಸವ, ಪುಷ್ಪಯಾಗ ಮಹೋತ್ಸವ ಚಪ್ಪರ ಮುಹೂರ್ತ

    06/12/2025

    ಶಕ್ತಿ ಮತ್ತು ಸಾಮರ್ಥ್ಯದ ಮೇಲಿನ ನಂಬಿಕೆಯೇ ಗೆಲುವು: ಜೆ.ಪಿ. ಶೆಟ್ಟಿ ಕಟ್ಕೆರೆ

    06/12/2025

    ಶಸ್ತ್ರಚಿಕಿತ್ಸೆಗೆ ನೆರವಾದ ಟೀಮ್ ಊರ್ಮನಿ ಮಕ್ಕಳ್‌ ತಂಡ

    06/12/2025

    Leave a ReplyCancel reply

    Call us

    Click Here

    Call us

    Call us

    Call us
    Highest Viewed Recently
    • ಕೋಡಿ ಉಂಜಲೋತ್ಸವ, ಪುಷ್ಪಯಾಗ ಮಹೋತ್ಸವ ಚಪ್ಪರ ಮುಹೂರ್ತ
    • ಶಕ್ತಿ ಮತ್ತು ಸಾಮರ್ಥ್ಯದ ಮೇಲಿನ ನಂಬಿಕೆಯೇ ಗೆಲುವು: ಜೆ.ಪಿ. ಶೆಟ್ಟಿ ಕಟ್ಕೆರೆ
    • ಶಸ್ತ್ರಚಿಕಿತ್ಸೆಗೆ ನೆರವಾದ ಟೀಮ್ ಊರ್ಮನಿ ಮಕ್ಕಳ್‌ ತಂಡ
    • ಅಂತರಾಷ್ಟ್ರೀಯ ಮಟ್ಟದ ವೇದಿಕ್ ಮಾಥ್ಸ್ ಸ್ಪರ್ಧೆ: ಮದರ್ ತೆರೇಸಾ ಶಾಲೆಯ ವಿದ್ಯಾರ್ಥಿಗಳಿಗೆ ಚಾಂಪಿಯನ್‌ಶಿಪ್ ಗರಿ 
    • ಡಾ. ಬಿ.ಬಿ. ಹೆಗ್ಡೆ ಕಾಲೇಜಿನ ವಾರ್ಷಿಕ ಕ್ರೀಡಾಕೂಟ ಸಂಪನ್ನ

    © 2025 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.

    %d