Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಬೋಗಸ್ ದಾಖಲೆಗಳ ಸೃಷ್ಟಿಕರ್ತ- ನಾಗೇಶ್ ಕಾಮತ್ ಬಂಧನ
    ಅಪಘಾತ-ಅಪರಾಧ ಸುದ್ದಿ

    ಬೋಗಸ್ ದಾಖಲೆಗಳ ಸೃಷ್ಟಿಕರ್ತ- ನಾಗೇಶ್ ಕಾಮತ್ ಬಂಧನ

    Updated:08/07/2015No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    ಕುಂದಾಪುರ: ಕುಂದಾಪುರ ತಹಶೀಲ್ದಾರ್ ಸೇರಿದಂತೆ, ಉಪವಿಭಾಗಾಧಿಕಾರಿಗಳ ಸಹಿತ ಇನ್ನಿತರ ಅಧಿಕಾರಿಗಳ ಸಹಿ ಬಳಸಿ ಖೊಟ್ಟಿ ದಾಖಲೆಗಳನ್ನು ತಯಾರಿಸುತ್ತಿದ್ದ ಕೋಡಿ ನಾಗೇಶ್ ಕಾಮತ್ ಎಂಬವನನ್ನು ಕುಂದಾಪುರ ಪೋಲಿಸರು ಬಂಧಿಸಿದ್ದಾರೆ. ಬಂಧಿತ ನಾಗೇಶ್ ಕುಂದಾಪುರ ತಾಲೂಕು ಕಛೇರಿ ಹಾಗೂ ಇನ್ನಿತರ ಕಛೇರಿಗಳ ಖಾಸಗಿ ಡಾಕ್ಯುಮೆಂಟರ್ ರೈಟರ್ ಆಗಿದ್ದು ಹಲವಾರು ವರ್ಷಗಳಿಂದಲೂ ಸಾರ್ವಜನಿಕರಿಗೆ ಸರ್ಕಾರಿ ಕಛೇರಿಗಳಿಂದ ಅಗತ್ಯವಿರುವ ದಾಖಲೆಗಳನ್ನು ಇನ್ನಿತರ ಮದ್ಯ ವರ್ತಿಗಳಂತೆ ಒದಗಿಸಿ ಕೊಡುತ್ತಿದ್ದ ಎನ್ನಲಾಗಿದೆ. ಆದರೆ ಖುದ್ದು ತಹಶೀಲ್ದಾರರೇ ಮಾನ್ಯ ಮಾಡದಿದ್ದ ದಾಖಲೆಗಳನ್ನು ಸಹಾ ಕ್ಷಣಮಾತ್ರದಲ್ಲಿ ಓ.ಕೆ. ಮಾಡಿಸಿಕೊಡುವ ತಾಕತ್ತು ಹೊಂದಿದ್ದ ನಾಗೇಶ್ ಕಾಮತ್ ಸಹಜವಾಗಿ ಸಾರ್ವಜನಿಕ ವಲಯದಲ್ಲಿ ಹೆಸರು ಮಾಡಿದ್ದು ತಾಲೂಕು ಕಛೇರಿ, ಉಪವಿಭಾಗಾಧಿಕಾರಿಗಳ ಕೆಲಸ ಯಾವುದೇ ತಡೆಯಿಲ್ಲದೆ ಆಗ ಬೇಕಾದಲ್ಲಿ ಸಂಬಂಧ ಪಟ್ಟವರು ಇನ್ನಿತರ ಬ್ರೋಕರ್ ಗಳಿಗಿಂತಲೂ ನಾಗೇಶನನ್ನೇ ಅರಸಿ ಬರುವಂತಾಗಿತ್ತು.

    Click Here

    Call us

    Click Here

    ಇತೀಚೆಗಷ್ಟೇ ಕುಂದಾಪುರ ಕಸಬಾ ಕೋಡಿ ಗ್ರಾಮದ ರುಕ್ಸಾನಾ ಬಿನ್ ದಿ. ಆಸಿಯಾ ಯಾ ಐಸಾಬಿ ಎಂಬವರಿಗೆ ಸೇರಿದ ಕುಂದಾಪುರ ಕಸಬ ಗ್ರಾಮದ ಸ.ನ.267/14 ರಲ್ಲಿ 10 ಎಕ್ರೆ ಜಾಗವನ್ನು ಭೂ ಪರಿವರ್ತನೆಗಾಗಿ ತಹಶೀಲ್ದಾರರ ನಕಲಿ ಸಹಿ ಮೂಲಕ ಹಿಂಬರಹದ ನಕಲಿ ಆದೇಶ ಹೊರಡಿಸಿದ್ದು ಅಸಲಿ ತಹಶೀಲ್ದಾರರ ಗಮನಕ್ಕೆ ಬಂದು ತಹಶೀಲ್ದಾರ್ ಗಾಯತ್ರಿ ನಾಯಕ ಅವರು ಕುಂದಾಪುರ ಠಾಣೆಯಲ್ಲಿ ದೂರು ದಾಖಲಿಸಿದ್ದರು.

    ತಹಶೀಲ್ದಾರರ ದೂರನ್ನು ಬೆಂಬತ್ತಿ ಹೊರಟ ಪೋಲಿಸರೇ ಬೆಚ್ಚಿ ಬೀಳುವಂತೆ ಸಾರ್ವಜನಿಕರು ಹಾಗೂ ತಾಲೂಕು ಕಚೇರಿಯ ನಡುವಿನ ಸೇತುವೆ ಆಗಿರುವ ಅಸಂಖ್ಯಾತ ಮದ್ಯವರ್ತಿಗಳು ಗೋಚರಿಸಿದ್ದರು. ಕೊನೆಗೆ ಅವರ ನಡುವೆ ಫಿಲ್ಟರ್ ಮಾಡಿ ಶೋಧಿಸಿದಾಗ ಸಿಕ್ಕಿ ಬಿದ್ದ ಮೂವರಲ್ಲಿ ನಾಗೇಶ್ ಕಾಮತ್ ಅಧಿಕಾರಿಗಳ ಪೋರ್ಜರಿ ಸಹಿಯಂತಹ ಪ್ರಮುಖ ಹುದ್ದೆ ನಿಭಾಯಿಸುತ್ತಿದ್ದ ಎನ್ನಲಾಗಿದೆ. ಸ್ಥಳೀಯ ಮುಖ್ಯ ರಸ್ತೆಯಲ್ಲಿರುವ ಬೆನಕ ಗ್ರಾಫಿಕ್ಸ್ ಸಂಸ್ಥೆಯಲ್ಲಿ ಸರ್ಕಾರಿ ನಕಲಿ ದಾಖಲೆಗಳಿಗೆ ಸಂಬಂಧ ಪಟ್ಟ ಅಧಿಕಾರಿಗಳ ನಕಲಿ ಸಹಿ ಇರುವ ರಬ್ಬರ್ ಸ್ಟಾಂಪ್ ಸೀಲುಗಳನ್ನು ಪೋಲಿಸರು ವಶ ಪಡಿಸಿ ಕೊಂಡಿದ್ದು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

    Aropiya adde

    ಗೂಡಂಗಡಿ ಸಂಘರ್ಷ: ಕೆಲವೇ ಸಮಯದ ಹಿಂದೆಯಷ್ಟೇ ಹೊಸ ಬಸ್ಸು ನಿಲ್ದಾಣದ ಫೆರ್ರಿ ರಸ್ತೆಯ ತಿರುವಿನಲ್ಲಿ ರಾತ್ರಿ ಬೆಳಗಾಗುವುದರೊಳಗೆ ಬೃಹತ್ ಆಕಾರದಲ್ಲಿ ಸ್ಥಾಪಿಸಲ್ಪಟ್ಟ ಗೂಡಂಗಡಿಯನ್ನು ಆಕ್ರಮ ಎಂಬ ನೆಲೆಯಲ್ಲಿ ಪುರಸಭೆಯು ಧ್ವಂಸ ಗೊಳಿಸಿ ಬಿಟ್ಟಿತು ಈ ಸಂದರ್ಭದಲ್ಲಿ ಬಡವನ ಬದುಕನ್ನೇ ನುಂಗಿ ಬಿಟ್ಟಿದ್ದಾರೆ ಎಂದು ಬಿಜೆಪಿಯ ಪುರಸಭಾ ಸದಸ್ಯರು  ಒಂದೇ ಸಮ ಪುರಸಭೆಯ ವಿರುದ್ಧ ಸಮರವನ್ನೇ ಸಾರಿ ಕೊನೆಗೂ ಆ ಬಡವನಿಗೆ ಅದೇ ಜಾಗದಲ್ಲಿ ನಾಲ್ಕು ಕಂಬಗಳ ಮೇಲೆ ಪ್ಲಾಸ್ಟಿಕ್ ಹೊದೆಸಿ ಹೊಟ್ಟೆ ಹೊರೆದು ಕೊಳ್ಳುವ ಮಹಾ ಮಾನವೀಯತೆಯನ್ನು ತೋರಿದ್ದರು.  ವಿಪರ್ಯಾಸವೆಂದರೆ ಇದೀಗ ಅದೇ ಬಡವ ನಕಲಿ ಸಹಿ ಗಳ ಆರೋಪದಲ್ಲಿ ಪೋಲಿಸ್ ವಶವಾಗಿರುವ ಕೋಡಿ ನಾಗೇಶ್ ಕಾಮತ್ ಎನ್ನುವುದು ಬಹು ಚರ್ಚೆಯ ವಿಷಯವಾಗಿದೆ.

    Click here

    Click here

    Click here

    Call us

    Call us

    ಮದ್ಯವರ್ತಿಗಳ ನೆಟ್ ವರ್ಕ್ : ಭೂ ಪರಿವರ್ತನೆ, ಖಾತಾ ಬದಲಾವಣೆ, ನಿರಾಪೇಕ್ಷಣಾ ಪತ್ರ  ಸಹಿತ, ಬ್ಯಾಂಕ್ ಸಾಲ, ಋಣ ಭಾರಗಳಿಗೂ ಬೇಕಾಗುವ ಪ್ರಮುಖ ಅಧಿಕಾರಿಗಳ ಸಹಿಯನ್ನೇ ನಕಲಿ ಮಾಡಿ ಪೋರ್ಜರಿ ದಾಖಲೆಗಳನ್ನು ತಯಾರಿಸುವ ಪ್ರಕರಣ ಬಯಲಾಗುತ್ತಲೇ ಕುಂದಾಪುರ ತತ್ತರಿಸಿ ಹೋಗಿದ್ದು, ಈಗಾಗಲೇ ಊರ್ಜಿತದಲ್ಲಿರುವ ಹಲವು ದಾಖಲೆಗಳ ಬಗ್ಗೆ ತಲಕೆಡಿಸಿಕೊಳ್ಳುವಂತಾಗಿದೆ. ಅಂದ ಹಾಗೆ ಕುಂದಾಪುರದಲ್ಲಿ ಮದ್ಯವರ್ತಿ ಗಳ ಬೃಹತ್ ನೆಟ್ವರ್ಕ್ ಅತ್ಯಂತ ಪಾಂಗಿತವಾಗಿ ಕಾರ್ಯಾಚರಿಸುತ್ತಿದ್ದು, ಇದಕ್ಕೆ ಅಧಿಕಾರಿಗಳ ದುಡ್ಡು ಮಾಡುವ ಲಾಲಸೆಯೇ ಕಾರಣ ವೆನ್ನಲಾಗುತ್ತಿದೆ. ಅಂದ ಹಾಗೆ ತನ್ನ ಈ ಧಂದೆಯಲ್ಲಿ ಗಣಪ, ಸತೀಶ್ ಸೇರಿದಂತೆ ಇನ್ನೂ ಕೆಲವು ಹೆಸರುಗಳನ್ನು ನಾಗೇಶ್ ಪೋಲಿಸರಲ್ಲಿ ಬಾಯ್ಬಿಟ್ಟಿದ್ದಾನೆ ಎಂದು ಕೇಳಿ ಬಂದಿದೆ.

    fraud Sign-forgery
    Share. Facebook Twitter Pinterest LinkedIn Tumblr Telegram Email
    ಸುನಿಲ್ ಹೆಚ್. ಜಿ. ಬೈಂದೂರು
    • Website
    • Facebook
    • X (Twitter)
    • LinkedIn

    ಸುನಿಲ್ ಬೈಂದೂರು ಅವರು 'ಕುಂದಾಪ್ರ ಡಾಟ್ ಕಾಂ' ಅಂತರ್ಜಾಲ ಸುದ್ದಿತಾಣದ ಮುಖ್ಯ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಎಂ.ಕಾಂ ಸ್ನಾತಕೋತ್ತರ ಪದವಿ ಪೂರೈಸಿದ್ದಾರೆ. 2009ರಲ್ಲಿ ಪದವಿ ವಿದ್ಯಾರ್ಥಿಯಾಗಿದ್ದಾಗ ಸಾಹಿತ್ಯ ಕೃಷಿ ಗುರುತಿಸಿ '14ನೇ ಕರಾವಳಿ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ', 2014ರಲ್ಲಿ 'ಆದಿ ಗ್ರಾಮೋತ್ಸವ ಯುವ ಗೌರವ', ಪತ್ರಿಕೋದ್ಯಮ ಕ್ಷೇತ್ರದ ಸಾಧನೆಗಾಗಿ 2016ರಲ್ಲಿ 'ಕರ್ನಾಟಕ ಜ್ಯೋತಿ ರಾಜ್ಯ ಪ್ರಶಸ್ತಿ' ಪ್ರಶಸ್ತಿ'ಗೆ ಭಾಜನರಾಗಿದ್ದಾರೆ. 2012ರಿಂದ ಕುಂದಾಪ್ರ ಡಾಟ್ ಕಾಂ ಸುದ್ದಿತಾಣವನ್ನು ಮುನ್ನಡೆಸುತ್ತಿದ್ದಾರೆ.

    Related Posts

    ಕುಂದಾಪುರ: ಕಾರಿನಲ್ಲಿ ಇರಿಸಿದ್ದ ಹಣವನ್ನು ಹಾಡಹಗಲೇ ಲಪಟಾಯಿಸಿದ ಖದೀಮರು

    06/11/2025

    ರಿಕ್ಷಾಕ್ಕೆ ಪಿಕಪ್ ವಾಹನ ಡಿಕ್ಕಿಯಾಗಿ ರಿಕ್ಷಾ ಚಾಲಕನ ಸಾವು

    18/10/2025

    ಕೊಡೇರಿ: ಈಜಲು ತೆರಳಿದ್ದ ಮೂವರು ವಿದ್ಯಾರ್ಥಿಗಳು ಸಮುದ್ರಪಾಲು, ಓರ್ವ ಪ್ರಾಣಾಪಾಯದಿಂದ ಪಾರು

    14/10/2025
    Leave A Reply Cancel Reply

    Call us

    Click Here

    Call us

    Call us

    Call us
    Highest Viewed Recently
    • ಗಂಗೊಳ್ಳಿ: ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮ
    • ಹಟ್ಟಿಅಂಗಡಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಗೆ ಇಟಿ ಟೆಕ್ ಎಕ್ಸ್ ಸ್ಕೂಲ್ ಎಕ್ಸಿಲೆನ್ಸ್ ಪ್ರಶಸ್ತಿ ಗೌರವ
    • ಮನೆಯಲ್ಲಿ ಪುಸ್ತಕಗಳನ್ನು ಓದುವ ಹವ್ಯಾಸವನ್ನು ರೂಢಿಸಿಕೊಳ್ಳಿ: ಶಿವಾನಂದ ಗಾಣಿಗ
    • ರಾಜ್ಯಮಟ್ಟದ ಸ್ಪರ್ಧಾತ್ಮಕ ಲಿಖಿತ ಪರೀಕ್ಷೆ: ನೇಹ ಸತ್ಯನಾರಾಯಣ ರಾಜ್ಯಮಟ್ಟದಲ್ಲಿ ಐದನೇ ರ‍್ಯಾಂಕ್‌
    • ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿ ರಚನೆ: ಅರ್ಜಿ ಆಹ್ವಾನ

    © 2025 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.