ಟ್ರಾನ್ಸ್‌ಫಾರ್ಮರ್‌ನಿಂದ ಬಿದ್ದು ಲೈನ್‌ಮೆನ್ ಸಾವು

Call us

Call us

Call us

ಬೈಂದೂರು: ತಾಲೂಕಿನ ಉಪ್ಪುಂದ ಸಮೀಪದ ನಂದನವನ ಎಂಬಲ್ಲಿ ದುರಸ್ತಿಗಾಗಿ ವಿದ್ಯುತ್ ಟ್ರಾನ್ಸ್‌ಫರ್ಮರ್ ಹತ್ತಿದ ಲೈಮ್‌ಮೆನ್ ಒಬ್ಬರು ಆಯತಪ್ಪಿ ಕೆಳಕ್ಕೆ ಬಿದ್ದು ಮೃತಪಟ್ಟ ಘಟನೆ ಇಂದು ಬೆಳಿಗ್ಗೆ ವರದಿಯಾಗಿದೆ. ರವಿರಾಜ್ ದವಾಖಾನೆ(33) ಮೃತ ದುರ್ದೈವಿ.

Call us

Click Here

ಘಟನೆಯ ವಿವರ:

ಉಪ್ಪುಂದ ವ್ಯಾಪ್ತಿಯ ಕಟ್ಕೇರಿ ಎಂಬಲ್ಲಿ ವಿದ್ಯುತ್ ಇಲ್ಲದಿದ್ದುದರಿಂದ ಟ್ರಾನ್ಸ್‌ಫಾರ್ಮರ್‌ಗೆ ದುರಸ್ತಿಗಾಗಿ (ಪ್ಯೂಸ್ ಹಾಕಲು) ಮೇಲೆ ಹತ್ತಿದ್ದ ರವಿರಾಜ್ ದವಾಖಾನೆ ಆಯತಪ್ಪಿ ಒಮ್ಮೆಲೆ ಕೆಳಗೆ ಬಿದ್ದಿದ್ದಾರೆ. ಗಾಯಾಳು ಕೂಗಿಕೊಳ್ಳುವುದನ್ನು ಕೇಳಿ ಘಟನಾ ಸ್ಥಳಕ್ಕೆ ಓಡಿ ಬಂದ ಸ್ಥಳೀಯರೋರ್ವರು, ಕೂಡಲೇ ಅಂಬುಲೆನ್ಸ್ ಮೂಲಕ ಅವರನ್ನು ಬೈಂದೂರಿನ ಖಾಸಗಿ ಆಸ್ವತ್ರೆಯೊಂದಕ್ಕೆ ದಾಖಲಿಸಿದ್ದರು. ಅಲ್ಲಿ ಪ್ರಥಮ ಚಿಕಿತ್ಸೆ ನೀಡದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಕುಂದಾಪುರ ಆಸ್ಪತ್ರೆಗೆ ಕೊಂಡೊಯ್ಯುತ್ತಿರುವಾಗ ರವಿರಾಜ್ ದಾರಿಮಧ್ಯೆ ಕೊನೆಯುಸಿರೆಳೆದರು.

ಬಾಗಲಕೋಟೆ ಮೂಲದವರಾದ ರವಿರಾಜ್ ಕಳೆದ ಎಪ್ರಿಲ್ ತಿಂಗಳಿನಲ್ಲಿ ಬೈಂದೂರು ಮೆಸ್ಕಾಂನಲ್ಲಿ ಲೈನ್‌ಮೆನ್ ಆಗಿ ಹೊಸದಾಗಿ ಕೆಲಸಕ್ಕೆ ಸೇರಿದ್ದರು. ಕೆಲಸಕ್ಕೆ ಸೇರಿದ ಕೆಲವೇ ತಿಂಗಳುಗಳಲ್ಲಿ ಈ ದುರ್ಘಟನೆ ನಡೆದಿರುವುದು ಮನೆಯವರನ್ನು ಕಂಗಾಲಾಗಿಸಿದೆ. ಮೃತರು ಪತ್ನಿ ಹಾಗೂ ಎರಡು ವರ್ಷದ ಮಗುವನ್ನು ಅಗಲಿದ್ದಾರೆ. ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply