ಕೋಡಿಯಲ್ಲಿ ಹೊಡೆದಾಟ: ಕ್ಷಣ ಕಾಲ ಉದ್ವಿಗ್ನ

Click Here

Call us

Call us

Call us

Call us

ಕುಂದಾಪುರ: ರಸ್ತೆ ಬದಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೋರ್ವರಿಗೆ ಕಾರಿನಲ್ಲಿ ಬಂದ ಯುವಕ ಅವಾಚ್ಯವಾಗಿ ಬೈದು ನಿಂದಿಸಿ ಕೊಲೆ ಬೆದರಿಕೆ ಹಾಕಿ ಹೊಡೆದಾಟ ನಡೆದ ಘಟನೆಗೆ ಸಂಬಂಧಿಸಿ ಹಲ್ಲೆಗೊಳಗಾದ ವ್ಯಕ್ತಿ ಆಸ್ಪತ್ರೆಗೆ ದಾಖಲಾದರೆ ಆರೋಪಿ ಯುವಕನ ಕಾರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡ ಘಟನೆ ಶುಕ್ರವಾರ ಸಂಜೆ ಎಂ.ಕೋಡಿಯಲ್ಲಿ ನಡೆದಿದೆ. ಎಂ. ಕೋಡಿ ನಿವಾಸಿ ಮಹಮ್ಮದ್ ಷರೀಫ್(50) ಎಂಬಾತನೇ ಹಲ್ಲೆಗೊಳಗಾದ ವ್ಯಕ್ತಿ.

Click Here

Call us

Click Here

ಮಹಮ್ಮದ್ ಷರೀಪ್ ಎಂ.ಕೋಡಿ ನಿವಾಸಿ ಜಬ್ಬಾರ್ ಎಂಬುವರ ಮನೆ ರಿಪೇರಿಗೆಂದು ತಂದು ರಸ್ತೆ ಬದಿಗೆ ಹಾಕಲಾಗಿದ್ದ ಹೋಲೋ ಬ್ಲಾಕ್‌ಗಳನ್ನು ಕೊಂಡೊಯ್ಯುತ್ತಿದ್ದ ವೇಳೆ ರಂಜಿತ್ ಎಂಬಾತ ಕಾರಿನಲ್ಲಿ ಬಂದು ಅವಾಚ್ಯವಾಗಿ ಬೈದಾಗ ಆಕ್ಷೇಪಿಸಿದ್ದಕ್ಕೆ ಕಾರಿನಿಂದಿಳಿದು ಬಂದು ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ್ದಾನೆ ಎಂಬುದಾಗಿ ಹಲ್ಲೆಗೊಳಗಾದ ಮಹಮ್ಮದ್ ಷರೀಪ್ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾನೆ. ಹಲ್ಲೆ ಪರಿಣಾಮ ತಲೆಗೆ ಗಾಯಗಳಾಗಿದ್ದ ಷರೀಪ್ ಕುಂದಾಪುರ ಸರ್ಕಾರೀ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಬಳಸಿದ್ದ ಕಾರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಕೋಮು ಸೂಕ್ಷ್ಮ ಪ್ರದೇಶವಾದ ಕೋಡಿಯಲ್ಲಿ ಭಿನ್ನ ಕೋಮುಗಳ ನಡುವೆ ನಡೆದ ಈ ಘರ್ಷಣೆಯಿಂದಾಗಿ ಕ್ಷಣಕಾಲ ಕೋಡಿ ಉದ್ವಿಗ್ನಗೊಂಡಿತು.

Leave a Reply