Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಕಳ್ಳರು ತಪ್ಪಿಸಿಕೊಂಡ ವಿಡಿಯೋ ವಾಟ್ಸಪ್‌ನಲ್ಲಿ ಹರಿದಾಡುತ್ತಿದೆ
    ವಿಶೇಷ ವರದಿ

    ಕಳ್ಳರು ತಪ್ಪಿಸಿಕೊಂಡ ವಿಡಿಯೋ ವಾಟ್ಸಪ್‌ನಲ್ಲಿ ಹರಿದಾಡುತ್ತಿದೆ

    Updated:29/08/2015No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    ಕುಂದಾಪುರ: ಹಾಡಹಗಲೇ ಕುಂದಾಪುರ ತಾಲೂಕಿನ ತಲ್ಲೂರು ರಾಷ್ಟ್ರೀಯ ಹೆದ್ದಾರಿಯ ಬಳಿ ಬಸ್ಸಿಗಾಗಿ ಕಾಯುತ್ತಿದ್ದ ಮಹಿಳೆಯ ಕುತ್ತಿಗೆಯಿಂದ ಸರ ಹರಿದುಕೊಂಡು ಬೈಕಿನಲ್ಲಿ ಪರಾರಿಯಾದ ಚಾಲಾಕಿ ಕಳ್ಳರನ್ನು ಹಿಡಿಯಲು ಕುಂದಾಪುರದ ಶಾಸ್ತ್ರೀವೃತ್ತದಲ್ಲಿ ಪೊಲೀಸರು ವಿಘಲರಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಭಾರಿ ಚರ್ಚೆಗೆ ಕಾರಣವಾಗಿದೆ. ಒಂದೆಡೆ ವಿಡಿಯೋ ನೋಡಿದ ಜನ ಕಳ್ಳರನ್ನು ಹಿಡಿಯಲಾಗದ ಬಗ್ಗೆ ಪೊಲೀಸರ ಬಗ್ಗೆ ಅಸಮಾಧಾನವನ್ನು ಹೊರಗೆಡವುತ್ತಿದ್ದರೇ, ಇತ್ತ ಇಲಾಖೆಯ ಬಳಿ ಗೌಪ್ಯವಾಗಿರಬೇಕಿದ್ದ ಈ ವಿಡಿಯೋ ಎಲ್ಲರ ಮೊಬೈಲುಗಳಿಗೆ ಬಂದು ಕುಳಿತಿರುವ ಬಗ್ಗೆ ಪೊಲೀಸರು ತಲೆಕೆಡಿಕೊಂಡಿದ್ದರು.

    Click Here

    Call us

    Click Here

    ಆದದ್ದೇನು?

    ಬೈಕಿನಲ್ಲಿ ಹಲ್ಮೆಟ್ ಧರಿಸಿ ಬಂದ ಇಬ್ಬರು ಆಗಂತುಕರು ತಲ್ಲೂರಿನಲ್ಲಿ ಮಹಿಳೆಯ ಕುತ್ತಿಗೆಯಲ್ಲಿದ್ದ ಸರವನ್ನು ಹರಿದುಕೊಂಡು ಬೈಕಿನಲ್ಲಿ ಕೆಲವೇ ನಿಮಿಷಗಳಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿಯೇ ಕುಂದಾಪುರಕ್ಕೆ ಬಂದಿದ್ದಾರೆ. ಅದಕ್ಕೂ ಮೊದಲೇ ಭಟ್ಕಳದಲ್ಲಿ ಸರಗಳ್ಳತನ ಮಾಡಿದ ಇದೇ ಚೋರರು ಕುಂದಾಪುರ ಮಾರ್ಗವಾಗಿ ಬರುತ್ತಿರುವ ಬಗ್ಗೆ ಇಲಾಖೆಗೆ ಮಾಹಿತಿ ಬಂದಿತ್ತು. ಅದನ್ನು ಉಪಅಧೀಕ್ಷಕರ ಕಛೇರಿಯಿಂದ ಎಲ್ಲಾ ಠಾಣೆಗೆ ತಿಳಿಸುವ ಹೊತ್ತಿಗೆ ತಲ್ಲೂರಿನಲ್ಲಿ ಪ್ರಕರಣ ಬೆಳಕಿಗೆ ಬಂದಿತ್ತು. ಕೂಡಲೇ ಎಚ್ಚೇತ್ತ ಅಧಿಕಾರಿಗಳು ಕುಂದಾಪುರದ ಶಾಸ್ತ್ರೀ ವೃತ್ತದಲ್ಲಿ ಬ್ಯಾರಿಕೇಡ್ ಅಡ್ಡಲಾಗಿ ನಿಲ್ಲಿಸಿ ವಾಹನ ಸಂಚಾಯಕ್ಕೆ ಒಂದೇ ಮಾರ್ಗವನ್ನು ತೆರೆದಿಟ್ಟರು. ಅಷ್ಟರಲ್ಲಿ ಅತಿವೇಗದಿಂದ ಬಂದ ಕಳ್ಳರನ್ನು ತಡೆಯಲು ಪೊಲೀಸ್ ಸಿಬ್ಬಂಧಿಗಳು ಪ್ರಯತ್ನಿಸಿದರೂ ಅವರನ್ನೇ ದೂಡಿಕೊಂಡು ಅವರು ಪರಾರಿಯಾಗಿದ್ದರು. ಅವರನ್ನು ಫಾಲೋ ಮಾಡಿಕೊಂಡು ಹೋದರೂ ಕೂಡ ಮುಂದೆ ಯಾವ ಕಡೆ ಸಾಗಿದರೆಂಬ ಮಾಹಿತಿ ಮಾತ್ರ ಇಲಾಖೆಗೆ ಲಭ್ಯವಾಗಲಿಲ್ಲ!

    ಕಳ್ಳರನ್ನು ಹಿಡಿಯಲು ವಿಘಲರಾದರೇ ಪೊಲೀಸರು?

    ಹೌದು ಎನ್ನುತ್ತಾರೆ ಪ್ರಕರಣವನ್ನು ಪ್ರತ್ಯಕ್ಷ ಹಾಗೂ ವೀಡಿಯೋ ಕ್ಲಿಪ್ಪಿಂಗ್ ನಲ್ಲಿ ವೀಕ್ಷಿಸಿದ ಜನರು. ಕಳ್ಳರು ಇದೇ ಮಾರ್ಗವಾಗಿ ಬರುತ್ತಾರೆಂಬ ಸ್ಪಷ್ಟ ಮಾಹಿತಿ ಇತ್ತು. ಕುಂದಾಪುರದ ಸಂಗಮ್ ಬಳಿ ಅವರನ್ನು ನಿಲ್ಲಿಸಲು ಸನ್ನೆ ಮಾಡಿದರೂ ನಿಲ್ಲಿಸಿರಲಿಲ್ಲ ಎಂಬ ಮಾಹಿತಿಯೂ ಲಭಿಸಿತ್ತು. ಆದರೂ ಶಾಸ್ತ್ರೀ ವೃತ್ತದ ಬಳಿ ಪೂರ್ಣ ಬಂದ್ ಮಾಡದೇ ಭಾಗಶಃ ಬಂದ್ ಮಾಡಿದ್ದೇಕೆ ಎಂಬ ಪ್ರಶ್ನೆ ಸಹಜವಾಗಿ ಮೂಡಿತ್ತು. ಸಚಿವರುಗಳು ಬಂದಾಗ ರಸ್ತೆ ಬ್ಲಾಕ್ ಮಾಡುವ ಕರ್ತವ್ಯ ಪ್ರಜ್ಞೆ ಈ ಸಂದರ್ಭದಲ್ಲೇಕೆ ಉಪಯೋಗಕ್ಕೆ ಬರಲಿಲ್ಲ ಎಂಬುದು ಕೆಲವರಲ್ಲಿ ಆಶ್ಚರ್ಯವನ್ನುಂಟುಮಾಡಿತ್ತು. ಇಲಾಖೆಯಲ್ಲಿ ಅಷ್ಟು ಮಂದಿ ಸಿಬ್ಬಂಧಿಗಳಿದ್ದರೂ ಸರ್ಕಲ್ ಬಳಿ 2-3 ಮಂದಿ ಮಾತ್ರ ತಡೆಯಲು ನಿಂತದ್ದೇಕೆ? ಇಲಾಖೆಯ ಬಳಿ ಶಸ್ತ್ರಾಸ್ತ್ರಗಳಿದ್ದರೂ ಬರಿಗೈಯಲ್ಲಿ ಕಳ್ಳನನ್ನು ಹಿಡಿಯಲು ನಿಂತಿದ್ದು ಎಷ್ಟು ಸರಿ? ಸಾರ್ವಜನಿಕರ ಸಹಾಯವನ್ನು ಪಡೆದಿದ್ದರೇ ಸುಲಭವಾಗಿ ಕಳ್ಳನನ್ನು ಹಿಡಿಯಬಹುದಿತ್ತು ಎಂಬುದನ್ನು ಮರೆತಿದ್ದೇಕೆ? ಇಂತಹ ಕೆಲವು ಅಂಶಗಳು ಪ್ರಶ್ನೆಯಾಗಿಯೇ ಘಟನೆಯನ್ನು ನೋಡಿದವರಿಗೆ ಉಳಿದಿದೆ. ಹಗಲಿನಲ್ಲಿ ತಡೆಯಲು ಬಂದ ಪೊಲೀಸರನ್ನೇ ದೂಡಿ ಸಾಗಬೇಕಾದರೇ ಅವರೆಷ್ಟು ಪ್ರೀಪ್ಲಾನ್ಡ್ ಕಳ್ಳರು ಎಂಬುದು ಪೊಲೀಸರಿಗೆ ಮೊದಲೇ ತಿಳಿದಿರಬೇಕಿತ್ತು. ಕೊನೆ ಪಕ್ಷ ಕೋಟೇಶ್ವರ ಜಂಕ್ಷನ್ ಬಳಿ ಕರ್ತವ್ಯ ನಿರ್ವಹಿಸಬೇಕಾಗಿದ್ದ ಪೊಲೀಸರು ಆ ಕ್ಷಣ ಅಲ್ಲಿದ್ದರೇ ಕಳ್ಳರು ಯಾವ ಮಾರ್ಗವಾಗಿ ತೆರಳಿದರು ಎಂಬುದನ್ನಾದರೂ ತಿಳಿಯಬಹುದಾಗಿತ್ತು. ಅಲ್ಲಿಯೂ ಯಾರೂ ಇದ್ದಿರಲಿಲ್ಲ. ಕಳ್ಳರನ್ನು ಫಾಲೋ ಮಾಡಿಕೊಂಡು ಜೀಪು, ಬೈಕುಗಳಲ್ಲಿ ತೆರಳಿದವರಿಗೆ ಕಳ್ಳರು ಎತ್ತ ಹೋದರೂ ಎಂದು ತಿಳಿಯದೇ ಹೊಯಿತು.

    Click here

    Click here

    Click here

    Call us

    Call us

    ವಾಟ್ಸಪ್ ನಲ್ಲಿ ವಿಡಿಯೋ ಬಂದದ್ದು ಹೇಗೆ?

    ತಲ್ಲೂರಿನಲ್ಲಿ ಭಾರಿ ಸಂಚಲನವನ್ನುಂಟುಮಾಡಿದ್ದ ಈ ಘಟನೆ ಬಗ್ಗೆ ವರದಿಯಾಗಿದ್ದರೇ ಪ್ರಕರಣ ಬಗ್ಗೆ ಸ್ಪಷ್ಟವಾಗಿ ಜನರಿಗೆ ತಿಳಿಯುತ್ತಲೇ ಇರಲಿಲ್ಲ. ಯಾವಾಗ ಶಾಸ್ತ್ರೀ ಸರ್ಕಲಿನಲ್ಲಿ ಪೊಲೀಸರ ಕೈಯಿಂದ ಕಳ್ಳರು ತಪ್ಪಿಸಿಕೊಂಡ ವಿಡಿಯೋ ವಾಟ್ಸಪ್ ನಲ್ಲಿ ಹರಿದಾಟತೊಡಗಿತೋ ಆವಾಗಲೇ ಜನ ಆಡಿಕೊಳ್ಳತೊಡಗಿದರು. ಕುಂದಾಪುರದ ಶಾಸ್ತ್ರೀ ವೃತ್ತದಲ್ಲಿರುವ ಸಿಸಿ ಕ್ಯಾಮಾರಾದ ನಿರ್ವಹಿಸುವವರಿಂದಲೇ ಈ ವಿಡಿಯೋ ಹೊರಬಿದ್ದಿರಬಹುದೆಂದು ಶಂಕಿಸಲಾಗಿದೆ. ಈಗಾಗಲೇ ಅದು ಇಲಾಖೆಗೂ ತಿಳಿದಿರುತ್ತದೆ. ಒಟ್ಟಿನಲ್ಲಿ ತಾಲೂಕಿನಲ್ಲಿ ಒಂದೂವರೆ ತಿಂಗಳಿನಲ್ಲಿ 5 ದೇವಾಲಯಗಳ ಕಳ್ಳತನ ಆಗಿರುವ ಬೆನ್ನಲೇ ಪೊಲೀಸರ ಈ ನಿರ್ಲಕ್ಷ್ಯ ಜನರು ಆಡಿಕೊಳ್ಳುವಂತೆ ಮಾಡಿತು. ಸಿಕ್ಕವರನ್ನೇ ಹಿಡಿಯಲಾಗದವರು ಇನ್ನು ಯಾರೆಂದು ತಿಳಿಯದವನನ್ನು ಎಷ್ಟು ಬೇಗನೆ ಹಿಡಿದಾರು ಎಂದು ಇಲಾಖೆಯ ವೈಫಲ್ಯದ ಬಗ್ಗೆ ದೂರಿಕೊಳ್ಳುತ್ತಿದ್ದಾರೆ.

    Like this:

    Like Loading...

    Related

    Share. Facebook Twitter Pinterest LinkedIn Tumblr Telegram Email
    Editor Desk
    • Website
    • Facebook
    • X (Twitter)

    Related Posts

    ಸೈಕಲ್‌ನಲ್ಲಿ 3,300 ಕಿಮೀ ಕ್ರಮಿಸಿ ಲಡಾಕ್ ಯಾತ್ರೆ ಪೂರೈಸಿದ ಹಳ್ಳಿಹೊಳೆಯ ಯುವಕ ದಿನೇಶ್‌ ಬೋವಿ

    30/09/2025

    ಶಿಥಿಲ ಮನೆಯಲ್ಲಿಯೇ 12 ಮಂದಿ ವಾಸ. ಇದು ಅಸಹಾಯಕ ಕುಟುಂಬದ ಕಣ್ಣೀರ ಕಥೆ

    03/08/2024

    ಹುಲ್ಕಡಿಕೆ ಜನರ ಬದುಕಿಗಿಲ್ಲ ಭರವಸೆ! ಅಪಾಯಕಾರಿ ಹೊಳೆದಾಟಿ ಶಿಕ್ಷಣ ಪಡೆಯುತ್ತಿರುವ ವಿಶೇಷ ಚೇತನ ಮಕ್ಕಳು

    02/07/2024

    Leave a ReplyCancel reply

    Call us

    Click Here

    Call us

    Call us

    Call us
    Highest Viewed Recently
    • ಎಸ್‌ಸಿಡಿಸಿಸಿ ಬ್ಯಾಂಕ್ ತೆಕ್ಕಟ್ಟೆ ಶಾಖೆ: ಗ್ರಾಹಕರಿಗೆ ಆರ್ಥಿಕ ಅರಿವು ಜಾಗೃತಿ ಕಾರ್ಯಕ್ರಮ
    • ಬೈಂದೂರು ಉತ್ಸವ: ಜಿಲ್ಲಾಧಿಕಾರಿ ಕಚೇರಿಯಲ್ಲಿ ಶಾಸಕ ಗಂಟಿಹೊಳೆ ನೇತೃತ್ವದಲ್ಲಿ ವಿವಿಧ ಇಲಾಖಾ ಅಧಿಕಾರಿಗಳ ಸಭೆ
    • ರಾಜ್ಯ ಮಟ್ಟದ ಐಡಿಯಾಥಾನ್ ಸ್ಪರ್ಧೆಯಲ್ಲಿ ಎಂಐಟಿ ಕುಂದಾಪುರದ ಅಧ್ಬುತ ಸಾಧನೆ
    • ಕುಂದಾಪುರ: ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಸಂಸ್ಥಾಪಕರ ದಿನಾಚರಣೆ
    • ಡಾ. ಬಿ.ಬಿ. ಹೆಗ್ಡೆ ಕಾಲೇಜು: ವಾರ್ಷಿಕ ಕ್ರೀಡಾಕೂಟ ಉದ್ಘಾಟನೆ

    © 2025 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.

    %d