ಬೆಳಗಿನ ಉಪಹಾರ ಸೇವಿಸದಿದ್ರೆ ಈ ಗಂಭೀರ ಸಮಸ್ಯೆ ಕಾಣಿಸಿಕೊಳ್ಳಲಿದೆ ಎಚ್ಚರ!

Call us

Call us

Call us

ಬೆಳಗ್ಗೆ ಉಪಹಾರ ಸೇವನೆ ಮಾಡುವುದು ತುಂಬಾನೆ ಮುಖ್ಯವಾಗಿದೆ. ಆದರೆ ಹೆಚ್ಚಿನ ಜನರು ತಮ್ಮ ಕೆಲಸದ ಒತ್ತಡದ ಜೀವನ ಶೈಲಿ ಹಾಗು ಆಫೀಸ್ಗೆ ಅಥವಾ ಕಾಲೇಜಿಗೆ ತಡವಾಗುವುದರಿಂದ ಬ್ರೇಕ್ ಫಾಸ್ಟ್ ಅರ್ಧದಲ್ಲೇ ಬಿಟ್ಟು ಅಥವಾ ತಿನ್ನದೇ ಹೊರಡುತ್ತಾರೆ. ಇದರಿಂದ ಏನು ಸಮಸ್ಯೆ ಇಲ್ಲ ಎಂದು ಅಂದ್ಕೊತ್ತಾರೆ. ಆದರೆ ಉಪಹಾರ ಸೇವಿಸದಿರುವುದರಿಂದ ಆರೋಗ್ಯದ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ./ಕುಂದಾಪ್ರ ಡಾಟ್ ಕಾಂ/

Call us

Click Here

  •  ಬ್ರೇಕ್ ಫಾಸ್ಟ್ ಮಾಡದೆ ಇದ್ದರೆ ರಕ್ತದಲ್ಲಿರುವ ಸಕ್ಕರೆ ಪ್ರಮಾಣದಲ್ಲಿ ಏರಿಳಿತವಾಗುತ್ತದೆ. ಇದರಿಂದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಬ್ರೇಕ್ ಫಾಸ್ಟ್ ಮಿಸ್ ಮಾಡಿದರೆ ಟೈಪ್ 2 ಮಧುಮೇಹದ ಹೆಚ್ಚಿನ ಅಪಾಯ ಇರುತ್ತದೆ, ಇನ್ಸುಲಿನ್ ಪ್ರತಿರೋಧ ಮತ್ತು ಹಾರ್ಮೋನ್ ನಿಯಂತ್ರಣದಿಂದ ಸ್ಥೂಲಕಾಯದ ಅಪಾಯ, ಮತ್ತು ಹೃದಯಾಘಾತ ಮತ್ತು ಅಧಿಕ ರಕ್ತದೊತ್ತಡದ ಅಪಾಯವು ಹೆಚ್ಚಾಗಿರುತ್ತದೆ ಎಂದು ಕಂಡುಬಂದಿದೆ.
  •  ದಿನವಿಡೀ ಬೇಕಾಗುವ ಫೈಬರ್ ಮತ್ತು ವಿಟಮಿನ್ ಗಳು ಸೇರಿದಂತೆ ಆಹಾರದಲ್ಲಿ ಹೆಚ್ಚಿನ ಪ್ರಮಾಣದ ಪೋಷಕಾಂಶಗಳನ್ನು ಪಡೆಯಲು ಬ್ರೇಕ್ ಫಾಸ್ಟ್ ಉತ್ತಮ ಆಹಾರವಾಗಿದೆ. ಆದ್ದರಿಂದ, ಉಪಾಹಾರವನ್ನು ಬಿಟ್ಟುಬಿಡುವುದರಿಂದ ದೇಹಕ್ಕೆ ಸಾಕಷ್ಟು ನಷ್ಟವಾಗುತ್ತದೆ. ಮತ್ತು ದೀರ್ಘಕಾಲೀನ ಆರೋಗ್ಯ ಪರಿಣಾಮಗಳಿಗೆ ಕಾರಣವಾಗಬಹುದು.
  •  ಚಯಾಪಚಯ ಕ್ರಿಯೆ ಅಸಮತೋಲನಗೊಳ್ಳುತ್ತದೆ. ದೇಹಕ್ಕೆ ಸಾಕಷ್ಟು ಶಕ್ತಿ ಸಿಗುವುದಿಲ್ಲ. ಇದರಿಂದ ನಿಶ್ಶಕ್ತಿ ಉಂಟಾಗುತ್ತದೆ. ಮೆಟಾಬಾಲಿಸಂ ನಿಧಾನಗತಿಯಾಗುತ್ತದೆ. ಬೆಳಗ್ಗೆ ಎದ್ದಾಗಲೇ ಮೆಟಬಾಲಿಸಂ ಕಡಿಮೆಯಾಗಿರುತ್ತದೆ. ಒಂದು ವೇಳೆ ಬ್ರೇಕ್ ಫಾಸ್ಟ್ ಮಿಸ್ ಮಾಡಿದರೆ ದೇಹದಲ್ಲಿ ಶಕ್ತಿ ಕಡಿಮೆಯಾಗುತ್ತದೆ.
  • ಉಪಹಾರ ಬಿಟ್ಟರೆ ಬ್ಲಡ್ ಶುಗರ್ ಲೆವೆಲ್ ಕಡಿಮೆಯಾಗುತ್ತದೆ. ಇದರಿಂದ ಹಸಿವು, ಕೋಪ ಎಲ್ಲವೂ ಜೊತೆಯಾಗಿ ಉಂಟಾಗುತ್ತದೆ. ಅಷ್ಟೇ ಅಲ್ಲ ಮೆದುಳಿನ ಕೆಲಸದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿ ನೆನಪು ಶಕ್ತಿ ಮತ್ತು ಏಕಾಗ್ರತೆಯನ್ನು ಕುಂದಿಸುತ್ತದೆ. ಯಾವುದೇ ಕೆಲಸ ಮಾಡಲು ಆಸಕ್ತಿ ಇರೋದಿಲ್ಲ.
  •  ಬೆಳಗ್ಗೆ ಬ್ರೇಕ್ ಫಾಸ್ಟ್ ಮಾಡಿದರೆ ಮಧ್ಯಾಹ್ನದವರೆಗೆ ಹೊಟ್ಟೆ ಫುಲ್ ಆಗಿರುತ್ತದೆ. ಆದರೆ ಬ್ರೇಕ್ ಫಾಸ್ಟ್ ಮಿಸ್ಮಾಡಿಕೊಂಡರೆ ಹಸಿವು ಹೆಚ್ಚುತ್ತದೆ. ಇದರಿಂದ ಅನಾರೋಗ್ಯಕರ ಆಹಾರ ಸೇವನೆ ಮಾಡು ಚಾನ್ಸಸ್ ಇದೆ. ಜೊತೆಗೆ ಮೆದುಳು ಯೋಚನೆ ಮಾಡುವ ಶಕ್ತಿಯನ್ನು ಕಡಿಮೆ ಮಾಡುತ್ತದೆ.
  • ಉಪಾಹಾರವನ್ನು ಬಿಟ್ಟಾಗ, ರೋಗ ನಿರೋಧಕ ಶಕ್ತಿಯು ಕಡಿಮೆಯಾಗುತ್ತದೆ. “ಉಪವಾಸದ ಅವಧಿಗಳು ಉಪಾಹಾರವನ್ನು ಬಿಟ್ಟಾಗ, ರೋಗ ನಿರೋಧಕ ಶಕ್ತಿಯು ಕಡಿಮೆಯಾಗುತ್ತದೆ. “ಉಪವಾಸದ ಅವಧಿಗಳು ಜೀವಕೋಶಗಳಿಗೆ ಹಾನಿಯನ್ನು ಉಂಟುಮಾಡುತ್ತದೆ ಮತ್ತು ಸೋಂಕುಗಳ ವಿರುದ್ಧ ಹೋರಾಡುವ ಪ್ರತಿರಕ್ಷಣಾ ಜೀವಕೋಶಗಳ ಆರೋಗ್ಯಕರ ಮಟ್ಟವನ್ನು ಕಾಯ್ದುಕೊಳ್ಳಲು ಮತ್ತು ದೇಹದಲ್ಲಿ ಫೈಟರ್ ಸೆಲ್ ಗಳ (ಟಿ-ಸೆಲ್ ಗಳು) ಕ್ರಿಯೆಯನ್ನು ಸುಧಾರಿಸಲು ನಿಯಮಿತವಾಗಿ ಆಹಾರವನ್ನುಸೇವಿಸುತ್ತಿರಬೇಕು” ಎನ್ನಲಾಗಿದೆ.
  • ಬೆಳಗಿನ ಉಪಾಹಾರ ಸೇವಿಸದೇ ಇರುವ ಕಾರಣ ಅಸಿಡಿಟಿ ಹೆಚ್ಚಾಗುವುದು. “ದೇಹಕ್ಕೆ ಹಸಿವಾದಾಗ ಮತ್ತು ಇಂಧನದ ಅವಶ್ಯಕತೆ ಇದ್ದಾಗ ಹೊಟ್ಟೆಯಲ್ಲಿ ಏನು ಇಲ್ಲದೇ ಇರುವಾಗ ಆಮ್ಲವನ್ನು ಬಿಡುಗಡೆಯಾಗುತ್ತವೆ. ಇದರಿಂದ ಆಸಿಡಿಟಿ ಹೆಚ್ಚುವ ಸಾಧ್ಯತೆ ಇದೆ.
  • ಮೆದುಳಿಗೆ ಗ್ಲುಕೋಸ್ ನಂತಹ ಇಂಧನದ ಕೊರತೆಯು ಮೆದುಳಿನ ಜೀವಕೋಶಗಳ ಕಾರ್ಯಚಟುವಟಿಕೆಯ ಕುಸಿತಕ್ಕೆ ಕಾರಣವಾಗುತ್ತದೆ- ಇದೇ ಕಾರಣಕ್ಕೆ ಸ್ವಲ್ಪ ಸಮಯ ಊಟ ಮಾಡದಿದ್ದಾಗ ತಲೆನೋವು ಮತ್ತು ತಲೆಸುತ್ತುವಿಕೆ ಮೊದಲಾದ ಸಮಸ್ಯೆಗಳನ್ನು ಅನುಭವಿಸಬಹುದು.
  •  ಬೆಳಗ್ಗಿನ ಜಾವದಲ್ಲಿ ಆಹಾರ ಮಿಸ್ ಮಾಡಿದರೆ ಒಬಾಸಿಟಿ ಉಂಟಾಗುತ್ತದೆ. ಅಂದರೆ ಬೊಜ್ಜು ಹೆಚ್ಚಾಗುವ ಸಾಧ್ಯತೆ ಹೆಚ್ಚಿದೆ. ಆದುದರಿಂದ ಮಿಸ್ ಮಾಡಲೇಬೇಡಿ./ಕುಂದಾಪ್ರ ಡಾಟ್ ಕಾಂ/

Leave a Reply