ಫೇಸ್‌ಬುಕ್‌ನಲ್ಲಿ ನಾರಾಯಣ ಗುರುಗಳ ಬಗ್ಗೆ ಅಸಭ್ಯ ಪೋಸ್ಟ್, ದೂರು ದಾಖಲು

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಸಾಮಾಜಿಕ ಜಾಲತಾಣದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಬಗ್ಗೆ ಅಸಭ್ಯ ಪೋಸ್ಟ್ ಮಾಡಿದ್ದ ವ್ಯಕ್ತಿಯ ವಿರುದ್ದ ಕುಂದಾಫುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Call us

Click Here

ಹರೀಶ್ ಕುಂಭಾಶಿ ಎನ್ನುವವರು ತಮ್ಮ ಫೇಸ್‌ಬುಕ್‌ನಲ್ಲಿ ನಾರಾಯಣ ಗುರುಗಳ ಫೋಟೋ ಹಾಕಿ, ಅವಾಚ್ಯ ಶಬ್ದದಿಂದ ಬರೆದುಕೊಂಡು ನಾರಾಯಣ ಗುರು ಜಯಂತಿಯ ಶುಭಾಶಯ ಕೋರಿದ್ದರು.

ಈ ಬಗ್ಗೆ ದೂರು ದಾಖಲಿಸಿರುವ ಕಿರಣ್ ಪೂಜಾರಿ ಎನ್ನುವವರು, ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎನ್ನುವ ಸಿದ್ದಾಂತವನ್ನು ಜಗತ್ತಿಗೆ ಸಾರಿದ ಜಗದ್ಗುರು ಬ್ರಹ್ಮಶ್ರೀ ನಾರಾಯಣ ಗುರುಗಳ ಬಗೆಗೆ ಇತ್ತೀಚೆಗೆ ಹರೀಶ್ ಕುಂಭಾಶಿ ಎನ್ನುವ ವ್ಯಕ್ತಿಫೇಸ್ ಬುಕ್ನಲ್ಲಿ ಅಸಭ್ಯ ಪೋಸ್ಟ್ ಮಾಡುವ ಮೂಲಕ ನಾರಾಯಣ ಗುರುಗಳ ಅನುಯಾಯಿಗಳಿಗೆ ನೋವನ್ನುಂಟು ಮಾಡಿದೆ. ಇಂತಹ ವ್ಯಕ್ತಿಗಳ ಬಗ್ಗೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಹಾಗೂ ಆ ವ್ಯಕ್ತಿ ನಾರಾಯಣ ಗುರುಗಳ ಪ್ರತಿಮೆಯ ಮುಂದೆ ತನ್ನ ತಪ್ಪನ್ನು ಒಪ್ಪಿಕೊಳ್ಳಬೇಕು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

Leave a Reply